Sunday, September 6, 2026

BDA Apartments

Home Front Page ಪೊಲೀಸ್ ಇಲಾಖೆಯಿಂದಲೇ ರಾಮಚಂದ್ರರಾವ್ ತೆಗೆಯಿರಿ- ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ

ಪೊಲೀಸ್ ಇಲಾಖೆಯಿಂದಲೇ ರಾಮಚಂದ್ರರಾವ್ ತೆಗೆಯಿರಿ- ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು,ಜನವರಿ,19,2026 (www.justkannada.in): ಕಚೇರಿಯಲ್ಲೇ ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಅರಗ ಜ್ಞಾನೇಂದ್ರ, ರಾಮಚಂದ್ರರಾವ್ ಮಾಡಿರೋದು ನಾಚಿಕೆಗೇಡಿನ ಕೆಲಸ. ಪೊಲೀಸ್ ಇಲಾಖೆ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ. ರಾಮಚಂದ್ರರಾವ್ ಇಂಥ ನೀಚ ಕೃತ್ಯಕ್ಕೆ ಇಳಿಯುತ್ತಾರೆ ಎಂದು ತಿಳಿದಿರಲಿಲ್ಲ. ಅವರನ್ನ ಪೊಲೀಸ ಇಲಾಖೆಯಿಂದಲೇ ತೆಗೆಯಬೇಕು ಎಂದು ಆಗ್ರಹಿಸಿದರು.

ಕಚೇರಿಯಲ್ಲೇ ಡಿಜಿಪಿ ರಾಮಚಂದ್ರರಾವ್ ಮಹಿಳೆಯ ಜೊತೆ ರಾಸಲೀಲೆ ನಡೆಸಿದ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು  ಐಪಿಎಸ್ ಅಧಿಕಾರಿಯ ಕೃತ್ಯಕ್ಕೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Key words: Remove, Ramachandra Rao, Police Department, Araga Jnanendra