Sunday, August 2, 2026

BDA Apartments

Home Front Page ಗೃಹಲಕ್ಷ್ಮಿ ಹಣದಲ್ಲಿ ರಾಜ್ಯದ ಮಹಿಳೆಯರಿಗೆ ಮೋಸ: ಸರ್ಕಾರದ ವಿರುದ್ದ ಆರ್.ಅಶೋಕ್ ಗಂಭೀರ ಆರೋಪ

ಗೃಹಲಕ್ಷ್ಮಿ ಹಣದಲ್ಲಿ ರಾಜ್ಯದ ಮಹಿಳೆಯರಿಗೆ ಮೋಸ: ಸರ್ಕಾರದ ವಿರುದ್ದ ಆರ್.ಅಶೋಕ್ ಗಂಭೀರ ಆರೋಪ

ಬೆಳಗಾವಿ ,ಡಿಸೆಂಬರ್,15,2025 (www.justkannada.in): ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬಾಕಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಮಹಿಳೆಯರಿಗೆ ನೀಡಬೇಕಿದ್ದ 5000 ಕೋಟಿ ರೂ. ಹಣ ಮುಚ್ಚಿಟ್ಟಿದ್ದಾರೆ.  ಈ ಮೂಲಕ ಮಹಿಳೆಯರಿಗೆ ಮೋಸ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಆರ್.ಅಶೋಕ್, ಗೃಹಲಕ್ಷ್ಮಿ ಯೋಜನೆ ಯೋಜನೆ ಹಣದಲ್ಲಿ ಮಹಿಳೆಯರಿಗೆ ಮೋಸ ಮಾಡಿದ್ದಾರೆ.  ಸಿಎಂ ಸಿದ್ದರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸದನಕ್ಕೆ ತಪ್ಪು ಮಾಹಿತಿ ಕೊಟ್ಟದ್ದಾರೆ.  ಫಲಾನುಭವಿಗಳಿಗೆ ಪ್ರತಿ ತಿಂಗಳು 2 ಸಾವಿರ ರೂ. ಕೊಡಬೇಕಿದ್ದು ರಾಜ್ಯದ ಲೆಕ್ಕಾಚಾರದ ಪ್ರಕಾರ ಪ್ರತಿ ತಿಂಗಳಿಗೆ 2500 ಕೋಟಿ ನೀಡಬೇಕಿತ್ತು.  ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ನೀಡಬೇಕಿದ್ದ 5000 ಕೋಟಿ ರೂ.ಅನ್ನು ಮುಚ್ಚಿಟ್ಟಿದ್ದಾರೆ. ರಾಜ್ಯದ  1.24 ಕೋಟಿ ಮಹಿಳೆಯರಿಗೆ ದ್ರೋಹ ಬಗೆದಿದ್ದಾರೆ ಎಂದು ಕಿಡಿಕಾರಿದರು.

ಸ್ವತಃ ಸಿಎಂ ಸಿದ್ದರಾಮಯ್ಯನವರೇ ಗೊಂದಲಕ್ಕೆ ಸಿಲುಕಿದ್ದಾರೆ.  ಸದನಕ್ಕೆ ತಪ್ಪು ಮಾಹಿತಿ ಕೊಟ್ಟ ಅಧಿಕಾರಿಗಳ ವಿರುದ್ದ ಕ್ರಮ ಆಗಬೇಕು. 5 ಸಾವಿರ ಕೋಟಿ ರೂ. ಹಣ ಎಲ್ಲಿಗೆ ಹೊಗಿದೆ ಅಂತಾ ಲೆಕ್ಕ ಕೊಡಿ ಜಿಲ್ಲಾದಿಕಾರಿಗಳನ್ನ ಕೇಳಿದರೆ ಹಣ ಬಂದಿಲ್ಲ ಅಂತಾರೆ.  ಹಾಗಾದರೆ ಯಾರ ಜೇಬಿಗೆ ಹೋಯಿತು ನಾಳೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತೇವೆ.  ಮಂತ್ರಿಗಳು ರಾಜೀನಾಮೆ ನೀಡಲಿ ಅಥವಾ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು ಎಂದು

Key words: Grihalakshmi scheme, money, cheat, government, R. Ashok