ಮೈಸೂರು,ಸೆಪ್ಟಂಬರ್,3,2025 (www.justkannada.in): ನಿನ್ನೆ ಮೈಸೂರು ದಸರಾ ಕಾರ್ಯಕ್ರಮದ ಸಿಎಂ, ಸಚಿವರ ಪರೇಡ್ ವೇಳೆ ಬಾಲಕನೋರ್ವ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಲಕನ ಬಗ್ಗೆ ಮಾಹಿತಿ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.
ನಿನ್ನೆ ದಸರಾ ಕಾರ್ಯಕ್ರಮದಲ್ಲಿ ತೆರದ ವಾಹನದಲ್ಲಿ ಸಿಎಂ, ಡಿಸಿಎಂ ಸಚಿವರು ಪರೇಡ್ ನಡೆಸಿದ್ದರು. ಈ ವೇಳೆ ನಾಯಕರ ಮಧ್ಯೆ ಕಪ್ಪು ಕನ್ನಡಕ ಹಾಕಿದ್ದ ಬಾಲಕ ಕಾಣಿಸಿಕೊಂಡಿದ್ದನು. ಈ ಬಾಲಕ ಸಚಿವ ಹೆಚ್ ಸಿ ಮಹದೇವಪ್ಪಅವರ ಮೊಮ್ಮಗ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ದಸರಾ ಸರ್ಕಾರಿ ಕಾರ್ಯಕ್ರಮದಲ್ಲಿ ಸಾಂವಿಧಾಣಿಕ ಹುದ್ದೆಯಲ್ಲಿ ಇಲ್ಲದವರ ಭಾಗಿಗೆ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದ್ದು, ಸರ್ಕಾರಿ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದು ಯಾಕೆ? ಬಾಗಿಯಾಗಿದ್ದವರ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
Key words: Mysore Dasara, parade, boy , congress, high command