Tuesday, September 15, 2026

BDA Apartments

ಸಿ.ಟಿ ರವಿ ವಿರುದ್ದ FIR: ಸಮರ್ಥಿಸಿಕೊಂಡ ಸಚಿವ ರಾಮಲಿಂಗರೆಡ್ಡಿ BDA JK_Adv BDA Adv
Home Front Page ಸಿ.ಟಿ ರವಿ ವಿರುದ್ದ FIR: ಸಮರ್ಥಿಸಿಕೊಂಡ ಸಚಿವ ರಾಮಲಿಂಗರೆಡ್ಡಿ

ಸಿ.ಟಿ ರವಿ ವಿರುದ್ದ FIR: ಸಮರ್ಥಿಸಿಕೊಂಡ ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಸೆಪ್ಟಂಬರ್,11,2025 (www.justkannada.in): ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕೆ ಎಂಎಲ್ ಸಿ ಸಿ.ಟಿ ರವಿ ವಿರುದ್ದ ಎಫ್ ಐಆರ್ ದಾಖಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ರಾಮಲಿಂಗರೆಡ್ಡಿ,  ಬಿಜೆಪಿಯ ಮುಖಂಡ ಸಿ.ಟಿ ರವಿ ದ್ವೇಷ ಭಾಷಣ ಮಾಡಿದ್ದಕ್ಕೆ ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ನಾನು ಸಿ.ಟಿ ರವಿ ಅವರ ಮಾತು ಕೇಳಿದ್ದೇನೆ. ತಲೆ ತೆಗೆಯೋದು ತೊಡೆ ಮುರಿಯೋದು ಅಂತೆಲ್ಲ ಮಾತನಾಡಿದ್ದಾರೆ. ಸಿ.ಟಿ ರವಿ ಅವರು ಸಚಿವರಾಗಿದ್ದವರು, ಶಾಸಕರು. ಅಂತವರ ಬಾಯಿಯಲ್ಲಿ ಇಂತಹ ಪದ ಬಳಕೆ ಸರಿಯೇ ಎಂದು ಕುಟುಕಿದರು.

ಸಿ.ಟಿ ರವಿ ಅವರು ದ್ವೇಷ ಭಾಷಣ ಮಾಡಿದ್ದಕ್ಕೆ ಪ್ರಕರಣ ದಾಖಲಿಸಿದ್ದಾರೆ. ಅದರಲ್ಲಿ ತಪ್ಪೇನು? ಅವರ ಮಾತುಗಳ ಬಗ್ಗೆ ಜನರೇ ತೀರ್ಮಾನ ಮಾಡಲಿ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

Key words: FIR, against, CT Ravi, Minister, Ramalinga Reddy