Sunday, September 20, 2026

BDA Apartments

ಇಬ್ಬರು ಡಿಸಿಗಳು ಸೇರಿ ಐವರು IAS ಅಧಿಕಾರಿಗಳ ವರ್ಗಾವಣೆ BDA JK_Adv BDA Adv
Home Front Page ಇಬ್ಬರು ಡಿಸಿಗಳು ಸೇರಿ ಐವರು IAS  ಅಧಿಕಾರಿಗಳ ವರ್ಗಾವಣೆ

ಇಬ್ಬರು ಡಿಸಿಗಳು ಸೇರಿ ಐವರು IAS  ಅಧಿಕಾರಿಗಳ ವರ್ಗಾವಣೆ

ಬೆಂಗಳೂರು,ಸೆಪ್ಟಂಬರ್,9,2025 (www.justkannada.in): ಇಬ್ಬರು ಡಿಸಿಗಳು ಸೇರಿ ಐವರು ಐಎಎಸ್  ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಐವರು ಐಎಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ವಿಜಯನಗರ ಜಿಲ್ಲಾಧಿಕಾರಿಯಾಗಿ ಕವಿತಾ ಎಸ್. ಮನ್ನಿಕೇರಿ, ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕೆ.ನಾಗೇಂದ್ರ ಪ್ರಸಾದ್ ಅವರನ್ನ ವರ್ಗಾವಣೆ ಮಾಡಲಾಗಿದೆ.

ಇನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತರಾಗಿ ಡಿ.ರಂದೀಪ್, ಬೆಂಗಳೂರು ದಕ್ಷಿಣ ಪಾಲಿಕೆ ಹೆಚ್ಚುವರಿ ಆಯುಕ್ತರಾಗಿ ನವೀನ್ ಕುಮಾರ್ ರಾಜು, ಬೆಂಗಳೂರು ಕೇಂದ್ರ ಪಾಲಿಕೆ ಹೆಚ್ಚುವರಿ ಆಯುಕ್ತರನ್ನಾಗಿ ದಲ್ಜಿತ್ ಕುಮಾರ್ ಅವರನ್ನ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Five, IAS officers, transferred