Wednesday, September 9, 2026

BDA Apartments

Home Front Page ಡಿಕೆ ಶಿವಕುಮಾರ್ ಗಿಂತ ಅಪ್ಪಟ ಹಿಂದೂ ಯಾರೂ ಇಲ್ಲ- ಹಾಡಿಹೊಗಳಿದ ಸಚಿವ ದಿನೇಶ್ ಗುಂಡೂರಾವ್

ಡಿಕೆ ಶಿವಕುಮಾರ್ ಗಿಂತ ಅಪ್ಪಟ ಹಿಂದೂ ಯಾರೂ ಇಲ್ಲ- ಹಾಡಿಹೊಗಳಿದ ಸಚಿವ ದಿನೇಶ್ ಗುಂಡೂರಾವ್

ರಾಮನಗರ,ಆಗಸ್ಟ್,29,2025 (www.justkannada.in):  ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹಾಡಿ ಹೊಗಳಿದ್ದಾರೆ.

ರಾಮನಗರದ ಮಾಗಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸಚಿವ ದಿನೇಶ್ ಗುಂಡೂರಾವ್,  ಡಿಸಿಎಂ ಡಿಕೆ ಶಿವಕುಮಾರ್ ರವರಿಗಿಂತ ಅಪ್ಪಟ ಹಿಂದೂ ಯಾರೂ ಇಲ್ಲ. ಬಿಜೆಪಿಗರಿಗೆ ಕೆಲಸ ಇಲ್ಲ. ಅವರಿಗೆ ನಾಯಕತ್ವ ಇಲ್ಲ.   ಡಿಕೆ ಶಿವಕುಮಾರ್ ರಾಷ್ಟ್ರದ ನಾಯಕರಾಗಿದ್ದಾರೆ. ಅವರು ಯಾವುದೇ ರಾಜ್ಯಕ್ಕೆ ಹೋದರೂ ಅಭಿಮಾನಿಗಳಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಚಾಮುಂಡಿ ಬೆಟ್ಟ ಕೇವಲ ಹಿಂದೂಗಳ ಆಸ್ತಿಯಲ್ಲ ಎಲ್ಲಾ ಧರ್ಮದವರ ಆಸ್ತಿ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಬಿಜೆಪಿ ನಾಯಕರು ಸೇರಿ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

Key words: Minister, Dinesh Gundu Rao, praised, DK Shivakumar