ಸಾಮಾಜಿಕ ಬಹಿಷ್ಕಾರ, ಮಾನಕ್ಕೆ ಅಂಜಿ ಗ್ರಾ. ಪಂ ಸದಸ್ಯ ಆತ್ಮಹತ್ಯೆ

ಮೈಸೂರು,ಆಗಸ್ಟ್,2,2025 (www.justkannada.in): ಸಾಮಾಜಿಕ ಬಹಿಷ್ಕಾರ ಮತ್ತು ಮಾನಕ್ಕೆ ಅಂಜಿ ಗ್ರಾಮ ಪಂಚಾಯತಿ  ಸದಸ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅಡಕನಹಳ್ಳಿ ಹುಂಡಿಯಲ್ಲಿ ಈ ಘಟನೆ ನಡೆದಿದೆ. 60 ವರ್ಷದ ಮಾದಪ್ಪ ಆತ್ಮಹತ್ಯೆ ಮಾಡಿಕೊಂಡ ಗ್ರಾಮ ಪಂಚಾಯತಿ ಸದಸ್ಯ. ಘಟನೆಗೆ ಸಂಬಂಧಿಸಿದಂತೆ 6 ಜನರ ವಿರುದ್ಧ ದೂರು ದಾಖಲಾಗಿದೆ.

ಜಮೀನು ವಿಚಾರದಲ್ಲಿ ಪಕ್ಕದ ಮನೆಯವರು ಬೆದರಿಕೆ  ಹಾಕಿದ್ದಾರೆ ಎಂಬ ಆರೋಪ,  ಸಮುದಾಯದಿಂದ ಬಹಿಷ್ಕಾರ ಹಿನ್ನಲೆಯಲ್ಲಿ ಮಾನಕ್ಕೆ ಅಂಜಿ ಮಾದಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ನ್ಯಾಯಕ್ಕಾಗಿ ಹೆಂಡತಿ ಅಂಗಲಾಚಿದ್ದು,  ಆಕ್ರಂದನ‌ ಮುಗಿಲು ಮುಟ್ಟಿದೆ.

ಈ ಕುರಿತು ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ  ಡಿವೈಎಸ್‌ಪಿ ರಘು, ಇನ್ಸ್‌ಪೆಕ್ಟರ್‌ ಸುನಿಲ್ ಸೇರಿದಂತೆ ಇತರೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.vtu

Key words: Gram panchayath, member, suicide