Wednesday, August 5, 2026

BDA Apartments

Home Front Page ಕಾಲ್ತುಳಿತ ಕೇಸ್: ಬಿಜೆಪಿ ‘ಯೂ ಟರ್ನ್’ ಮಾಡುವುದು ಹೊಸದೇನಲ್ಲ- ಡಿಕೆ ಸುರೇಶ್ ಟೀಕೆ

ಕಾಲ್ತುಳಿತ ಕೇಸ್: ಬಿಜೆಪಿ ‘ಯೂ ಟರ್ನ್’ ಮಾಡುವುದು ಹೊಸದೇನಲ್ಲ- ಡಿಕೆ ಸುರೇಶ್ ಟೀಕೆ

ಬೆಂಗಳೂರು,ಜೂನ್,9,2025 (www.justkannada.in):  ಆರ್ ಸಿಬಿ ಟ್ರೋಫಿ  ಗೆದ್ದ ಬಳಿಕ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತಂಡದ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಟ್ವೀಟ್ ಮಾಡಿದ್ದರು. ಆದರೆ ಈಗ ತಮ್ಮ ವರಸೆ ಬದಲಾಯಿಸಿದ್ದು ಇವರಿಗೆ ಯೂಟರ್ನ್ ಹೊಡೆಯುವುದು ಹೊಸದೇನಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ  ಡಿ.ಕೆ.ಸುರೇಶ್, ಆರ್ ಸಿಬಿ ಗೆದ್ದ ಬಳಿಕ ಬಿಜೆಪಿ ಜೆಡಿಎಸ್ ನಾಯಕರೇ ಮೆರವಣಿಗೆಗೆ ಒತ್ತಾಯಿಸಿದ್ದರು . ಕ್ರೀಡಾ ಅಭಿಮಾನಿಗಳಿಗೆ ಅವಮಾನ ಮಾಡುತ್ತಿದ್ದೀರಿ, ನಿಮಗೆ ಮೆರವಣಿಗೆ ನಡೆಸಲು ಆಗುವುದಿಲ್ಲವೇ ಎಂದು ಬಿಜೆಪಿ-ಜೆಡಿಎಸ್ ಎರಡೂ ಪಕ್ಷಗಳು ಕೇಳಿದ್ದರು. ಬಿಜೆಪಿ ಆಡಳಿತದಲ್ಲಿ ಇರುವ ರಾಜ್ಯಗಳಲ್ಲಿ ಆಗಿರುವ ಘೋರ ದುರಂತಗಳ ಪಟ್ಟಿ ನೀಡುತ್ತೇವೆ. ಬಿಜೆಪಿ ನಾಯುಕರಿಗೆ ನೈತಿಕತೆ ಇದ್ದರೆ ಅವರು ಮೊದಲು ರಾಜಿನಾಮೆ ನೀಡಲಿ ಎಂದು ತಿರುಗೇಟು ನೀಡಿದರು.

ಹಾಗೆಯೇ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಗುಡುಗಿದ ಡಿಕೆ ಸುರೇಶ್, ಹೆಚ್ ಡಿ ಕುಮಾರಸ್ವಾಮಿಗೆ ಡಿ.ಕೆ.ಶಿವಕುಮಾರ್ ಅವರನ್ನು ನೆನಪಿಸಿಕೊಳ್ಳದೆ ಊಟ, ನಿದ್ದೆ ಏನೂ ಆಗುವುದಿಲ್ಲ. ಹೆಚ್ ಡಿಕೆ ಮೊದಲು ಆರೋಗ್ಯದ ಬಗ್ಗೆ ಗಮನ ಕೊಡಲಿ . ಈ ರಾಷ್ಟ್ರದ ಜನರ ಸೇವೆ ಮಾಡಲಿ ಎಂದು ಮನವಿ ಮಾಡುತ್ತೇನೆ ಎಂದರು.vtu

Key words: Stampede case,  BJP, U turn,  DK Suresh