Sunday, August 16, 2026

BDA Apartments

Home Front Page ಪಾಳೇಗಾರಿಕೆ ಹಂಗಿಸುವ ರೀತಿ ಸರ್ಕಾರದ ಆಡಳಿತ: ನಾವು ಕೈ ಕಟ್ಟಿ ಕೂರಲ್ಲ- ಬಿವೈ ವಿಜಯೇಂದ್ರ

ಪಾಳೇಗಾರಿಕೆ ಹಂಗಿಸುವ ರೀತಿ ಸರ್ಕಾರದ ಆಡಳಿತ: ನಾವು ಕೈ ಕಟ್ಟಿ ಕೂರಲ್ಲ- ಬಿವೈ ವಿಜಯೇಂದ್ರ

ಬೆಂಗಳೂರು,ಜೂನ್,3,2025 (www.justkannada.in): ಆರ್ ಎಸ್ ಎಸ್ ಮುಖಂಡರ ವಿರುದ್ದ ಎಫ್ ಐಆರ್ ಮತ್ತು ಬಿಜೆಪಿ ಹಿಂದೂ ಮುಖಂಡರ ಗಡಿಪಾರು ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹರಿಹಾಯ್ದಿದ್ದಾರೆ.

ಈ ಕುರಿತು ಮಾತನಾಡಿರುವ ಬಿವೈ ವಿಜಯೇಂದ್ರ, ಪಾಳೇಗಾರಿಕೆ ಹಂಗಿಸುವ ರೀತಿ ಸರ್ಕಾರದ ಆಡಳಿತ ನಡೆಯುತ್ತಿದೆ. ಸರ್ಕಾರದಿಂದ ನಮ್ಮ ಕಾರ್ಯಕರ್ತರನ್ನ ಅಪಮಾನ ಮಾಡಲಾಗುತ್ತಿದೆ. ಸುಹಾಸ್  ಶೆಟ್ಟಿ ಹತ್ಯೆ ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ.  ಇದೇ ರೀತಿ ಮುಂದುವರೆದರೇ ಮುಂದಿನ ಬೆಳವಣಿಗೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚಿಸಿದ್ದೇವೆ. ನಾವು ಕೈಕಟ್ಟಿ ಕೂರಲ್ಲ. ಸರ್ಕಾರದ  ಬೆದರಿಕೆಗೆ ಹೆದರಲ್ಲ. ಬಿಜೆಪಿ ಆರ್ ಎಸ್ ಎಸ್ ಕಾರ್ಯಕರ್ತರ ವಿರುದ್ದ ಹಾಕಿರುವ ಕೇಸ್ ವಾಪಾಸ್ ತೆಗೆದುಕೊಳ್ಳಬೇಕು. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಸುಮ್ಮನಿರಲ್ಲ ಎಂದು ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.vtu

Key words: BJP, BY Vijayendra, Congress, government