ಬೆಂಗಳೂರು, ಮೇ.೦೮,೨೦೨೫: ಇತ್ತೀಚೆಗೆ ರಾಜಧಾನಿಯ ನಡೆದ ಸಂಗೀತ ಕಾರ್ಯಕ್ರಮದಲ್ಲಿ ನಡೆದ ಘಟನೆ ಕಾರಣದಿಂದ ಹಿನ್ನೆಲೆ ಗಾಯಕ ಸೋನು ನಿಗಮ್ ಗೆ ಕನ್ನಡ ಚಿತ್ರರಂಗದಿಂದ ಭಾರಿ ಹಿನ್ನಡೆ ಅನುಭವಿಸುವಂತಾಗಿದೆ.
ಕನ್ನಡದಲ್ಲಿ ಹಾಡುವಂತೆ ಸಭಿಕರು ಪದೇ ಪದೇ ವಿನಂತಿಸಿದಾಗ ತಾಳ್ಮೆ ಕಳೆದುಕೊಂಡ ಸೋನು ನಿಗಮ್, ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ ವಿವಾದ ಮೈಮೇಲೆ ಎಳೆದುಕೊಂಡರು. ಇದು ಈಗ ಅವರನ್ನು ಮುಂಬರುವ ಕನ್ನಡ ಚಿತ್ರ “ ಕುಲದಲ್ಲಿ ಕೀಳ್ಯಾವುದೋ “ ಚಿತ್ರದಿಂದ ತೆಗೆದುಹಾಕಲು ಕಾರಣವಾಗಿದೆ.
ನಿಗಮ್ ಅವರು ದನಿ ನೀಡಿದ್ದ ಹಾಡನ್ನು ಚಿತ್ರದಿಂದ ತೆಗೆದುಹಾಕಲಾಗಿದೆ ಎಂದು ಚಿತ್ರದ ನಿರ್ಮಾಪಕರು ಮಾಧ್ಯಮಕ್ಕೆ ದೃಢಪಡಿಸಿದ್ದಾರೆ. ಕೆ.ರಾಮನಾರಾಯಣ್ ನಿರ್ದೇಶನದ ಈ ಹಾಡನ್ನು ಮನೋಮೂರ್ತಿ ಸಂಯೋಜಿಸಿದ್ದು, ಯೋಗರಾಜ್ ಭಟ್ ಬರೆದಿದ್ದಾರೆ.
ಚಿತ್ರದ ತಯಾರಕರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, “ಸೋನು ನಿಗಮ್ ಉತ್ತಮ ಗಾಯಕ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಇತ್ತೀಚೆಗೆ ಅವರು ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡದ ಬಗ್ಗೆ ಮಾತನಾಡಿದ ರೀತಿಯಿಂದ ನಮಗೆ ತುಂಬಾ ಬೇಸರವಾಗಿದೆ. ಸೋನು ನಿಗಮ್ ಕನ್ನಡಕ್ಕೆ ಮಾಡಿದ ಅವಮಾನವನ್ನು ನಾವು ಸಹಿಸುವುದಿಲ್ಲ, ಆದ್ದರಿಂದ ನಾವು ಸೋನು ಹಾಡಿದ ಹಾಡನ್ನು ತೆಗೆದುಹಾಕಿದ್ದೇವೆ” ಎಂದು ತಿಳಿಸಿದ್ದಾರೆ.
ಹಾಡನ್ನು ಮರು ರೆಕಾರ್ಡ್ ಮಾಡಲು ಕನ್ನಡ ಗಾಯಕ ಚೇತನ್ ಅವರನ್ನು ಕರೆತರಲಾಗಿದೆ. ಚಿತ್ರದ ನಿರ್ಮಾಪಕ ಸಂತೋಷ್ ಕುಮಾರ್ ಅವರು ಭವಿಷ್ಯದಲ್ಲಿ ಸೋನು ನಿಗಮ್ ಅವರೊಂದಿಗೆ ವ್ಯವಹರಿಸುವುದಿಲ್ಲ ಎಂದು ಘೋಷಿಸಿದರು.
key words: ‘Pahalgam’, Kannadigas, Sonu Nigam, song kicked out,
‘Pahalgam’ attack on Kannadigas: Sonu’s song kicked out