FRAUD CASE: ರಿಜಿಸ್ಟಾರ್ ಹುದ್ದೆ ಕೊಡಿಸುವುದಾಗಿ 35 ಲಕ್ಷ ರೂ. ವಂಚನೆ, ಪೊಲೀಸರಿಗೆ ದೂರು.

He was duped of Rs 35 lakh on the pretext of getting a registrar's post in Jnanabharathi University in Bengaluru. A professor of environmental science at the university has lodged a complaint with the police alleging that he was threatened with death when he was asked to return the money.

vtu

ಬೆಂಗಳೂರು, ಮೇ.೦೮,೨೦೨೫: ಇಲ್ಲಿನ ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟಾರ್‌ ಹುದ್ದೆ ಕೊಡಿಸುವುದಾಗಿ 35 ಲಕ್ಷ ರೂಪಾಯಿ  ವಂಚಿಸಿದ್ದಾರೆ. ಹಣ ಹಿಂದಿರುಗಿಸುವಂತೆ ಕೇಳಿದಾಗ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿವಿಯ ಪರಿಸರ‌ ವಿಜ್ಞಾನ ವಿಭಾಗದ ಪ್ರೋಫೆಸರ್‌‌ ಪೊಲೀಸರಿಗೆ ದೂರು ನೀಡಿದ್ದಾರೆ.

ಈ‌ ಸಂಬಂಧ ಗೋವಿಂದರಾಜ್ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯಡಿ‌ U/s 318 (4) 316(2) 352, 351 (2) , 351 ( 3) ಅಡಿ‌ ವಂಚನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಘಟನೆ ವಿವರ:

ದೂರದಾರರಾದ ಪ್ರೊ. ಆರ್.ಕೆ.ಸೋಮಶೇಖರ್ ಅವರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ಪರಿಸರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸ್ನೇಹಿತರ‌ ಮೂಲಕ 2015 ರಂದು  ಬಿ.ಜಿ.ರವಿಕುಮಾರ್‌ ಎಂಬಾತನ ಪರಿಚಯವಾಗುತ್ತದೆ.

ಈ, ಬಿ.ಜಿ‌. ರವಿಕುಮಾರ್  ನನಗೆ ಸರ್ಕಾರದಲ್ಲಿ  ಹಲವಾರು ಪ್ರಭಾವಿ ಸಚಿವರ ಪರಿಚಯ ವಿದೆ. ಈ ಪರಿಚಯದ ಮೂಲಕ ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ನಂಬಿಕೆ ಹುಟ್ಟಿಸುತ್ತಾರೆ. ಅದಕ್ಕೆ 50 ಲಕ್ಷ ರೂಪಾಯಿ ನೀಡಬೇಕಾಗುತ್ತದೆ ಎಂದು ಕಂಡಿಷನ್‌ ಹಾಕುತ್ತಾರೆ.

ಬಿ.ಜಿ.ರವಿಕುಮಾರ್ ಮಾತು ನಂಬಿದ ಪ್ರೊ. ಆರ್.ಕೆ.ಸೋಮಶೇಖರ್, ಮೊದಲ ಕಂತಿನಲ್ಲಿ 20 ಲಕ್ಷ ರೂಪಾಯಿ ಹಾಗೂ ಬಂಗಾರಪೇಟೆ ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಪೂರ್ಣಿಮಾ ಅವರ ಮುಖಾಂತರ 15 ಲಕ್ಷ ರೂಪಾಯಿ ಪಾವತಿಸುತ್ತಾರೆ. ಆದರೆ ಬಿ.ಜಿ.ರವಿಕುಮಾರ್ ಭರವಸೆ ನೀಡಿದಂತೆ ರಿಜಿಸ್ಟಾರ್ ಹುದ್ದೆ ಕೊಡಿಸುವುದಿಲ್ಲ, 2019 ರಂದು ಆರ್.ಕೆ. ಸೋಮಶೇಖರ್  ಸೇವೆಯಿಂದ ನಿವೃತ್ತರಾಗುತ್ತಾರೆ.

ಬಿ.ಜಿ.ರವಿಕುಮಾರ್ 35 ಲಕ್ಷ ರೂಪಾಯಿ ವಾಪಾಸ್ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿ  05-05-2025 ರಂದು‌ ಆರ್.ಕೆ‌. ಸೋಮಶೇಖರ್ ಅವರು ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಬಿ.ಜಿ.ರವಿಕುಮಾರ್ ವಿರುದ್ದ ದೂರು ದಾಖಲಿಸಿದ್ದಾರೆ.

key words:  Rs 35 lakh, registrar, Fraud, complaint to police. Jnanabharathi University, Bengaluru.

vtu

SUMMARY:

Rs 35 lakh for the post of registrar. Fraud, complaint to police. He was duped of Rs 35 lakh on the pretext of getting a registrar’s post in Jnanabharathi University in Bengaluru. A professor of environmental science at the university has lodged a complaint with the police alleging that he was threatened with death when he was asked to return the money.