Monday, August 3, 2026

BDA Apartments

Home Front Page ಕೆಎಸ್ ಒಯುನಲ್ಲಿ ಭ್ರಷ್ಟಾಚಾರ ಆರೋಪ:  ಮಾಹಿತಿ ಕಲೆ ಹಾಕಿದ ತನಿಖಾಧಿಕಾರಿಗಳು

ಕೆಎಸ್ ಒಯುನಲ್ಲಿ ಭ್ರಷ್ಟಾಚಾರ ಆರೋಪ:  ಮಾಹಿತಿ ಕಲೆ ಹಾಕಿದ ತನಿಖಾಧಿಕಾರಿಗಳು

ಮೈಸೂರು,ಮಾರ್ಚ್,25,2025 (www.justkannada.in): ಇತ್ತೀಚೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರವು  ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ  ಹಾಗೂ ವಿಶ್ರಾಂತ ಕುಲಪತಿ  ನಿರಂಜನ್ ಅವರಿ ಸೂಚನೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿ ನಿರಂಜನ್ ಅವರು ಮೈಸೂರಿಗೆ ಆಗಮಿಸಿ ಕೆಎಸ್ ಒಯುನಲ್ಲಿ  ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಮಾಹಿತಿ ಮತ್ತು ದಾಖಲೆಯನ್ನ ಕಲೆ ಹಾಕಿದರು.  ಡಿ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ  ಸೇರಿದಂತೆ ಹಲವರು ಇದಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಇದ್ದ ದಾಖಲೆಗಳನ್ನ ನಿರಂಜನ್ ಅವರಿಗೆ ಒದಗಿಸಿದರು.

ಕೆಎಸ್ ಒಯುವ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಡಿ. ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ರಾಜ್ಯಾಧ್ಯಕ್ಷ ಜಾಕಿರ್ ಹುಸೇನ್ ಪತ್ರಚಳವಳಿ ನಡೆಸಿದ್ದರು. ಈ ಮಧ್ಯೆ  ಮುಕ್ತ ವಿವಿಯ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ  ತನಿಖೆ ನಡೆಸುವ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಡಾ. ಎನ್ಆರ್ ನಿರಂಜನ್  ಅವರಿಗೆ ವಹಿಸಿತ್ತು.

ಹೀಗಾಗಿ ನಿರಂಜನ್ ಅವರು ಮೈಸೂರಿಗೆ ಆಗಮಿಸಿ ಡಿ. ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ರಾಜ್ಯಾಧ್ಯಕ್ಷ ಜಾಕಿರ್ ಹುಸೇನ್ ಸೇರಿ ಹಲವರ ಬಳಿ ದಾಖಲೆಗಳನ್ನ ಕಲೆ ಹಾಕಿದ್ದಾರೆ ಎನ್ನಲಾಗಿದೆ.

Key words:  Corruption, allegations, KSOU, Investigators, information