Saturday, September 19, 2026

BDA Apartments

ಪ್ರಜ್ವಲ್ ಬಂಧನಕ್ಕೆ ವಾರೆಂಟ್ ಜಾರಿ: ಪಾಸ್ ಪೋರ್ಟ್ ರದ್ದಿಗೆ ಕೇಂದ್ರಕ್ಕೆ ಪತ...
Home Front Page ಪ್ರಜ್ವಲ್ ಬಂಧನಕ್ಕೆ ವಾರೆಂಟ್ ಜಾರಿ: ಪಾಸ್ ಪೋರ್ಟ್ ರದ್ದಿಗೆ ಕೇಂದ್ರಕ್ಕೆ ಪತ್ರ- ಗೃಹ ಸಚಿವ ಪರಮೇಶ್ವರ್.

ಪ್ರಜ್ವಲ್ ಬಂಧನಕ್ಕೆ ವಾರೆಂಟ್ ಜಾರಿ: ಪಾಸ್ ಪೋರ್ಟ್ ರದ್ದಿಗೆ ಕೇಂದ್ರಕ್ಕೆ ಪತ್ರ- ಗೃಹ ಸಚಿವ ಪರಮೇಶ್ವರ್.

ಬೆಂಗಳೂರು,ಮೇ,21,2024 (www.justkannada.in):   ಪ್ರಜ್ವಲ್ ರೇವಣ್ಣ ಬಂಧನಕ್ಕೆ ಈಗಾಗಲೇ ವಾರೆಂಟ್ ಜಾರಿಯಾಗಿದೆ. ಈ ಆಧಾರದ ಮೇಲೆ ಪಾಸ್ ಪೋರ್ಟ್ ರದ್ದು ಮಾಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ವಿಚಾರ  ಸಂಬಂಧ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.  ಈಗಾಗಲೇ ಪ್ರಜ್ವಲ್ ಬಂಧನಕ್ಕೆ ವಾರಂಟ್ ಜಾರಿಯಾಗಿದೆ ಆದರ ಆಧಾರದ ಮೇಲೆ ಪಾಸ್ ಪೋರ್ಟ್ ರದ್ದು ಕೋರಿ ಪತ್ರ ಬರೆಯಲಾಗಿದೆ.  ಪಾಸ್ ಪೋರ್ಟ್ ರದ್ದು ಮಾಡಿದರೇ ಪ್ರಜ್ವಲ್ ಬರಬೇಕಾಗುತ್ತೆ. ಹೀಗಾಗಿ ತಕ್ಷಣ ಪಾಸ್ ಪೋರ್ಟ್ ರದ್ದು ಮಾಡಬೇಕಾಗುತ್ತೆ ರದ್ದು ಮಾಡುವ ಅಧಿಕಾರ ಕೇಂದ್ರಕ್ಕಿದೆ. ಅದ್ದರಿಂದ ಎಸ್ ಐಟಿ ತನಿಖೆಗೆ ಕೇಂದ್ರ ಸಹಕರಿಸಬೇಕು ಎಂದು ಮನವಿ ಮಾಡಿದರು.ಪ್ರಜ್ವಲ್ ಬಂಧನಕ್ಕೆ ವಾರೆಂಟ್ ಜಾರಿ parameshwar

ಇನ್ನು ಸಂಪುಟ ಪುನರಚನೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಸಂಪುಟ ಪುನರಚನೆ ಸಿಎಂ ವಿವೇಚನೆಗೆ ಬಿಟ್ಟಿದ್ದು ಸಂಪುಟ ಬದಲಾವಣೆ  ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದರು.

Key words: Prajwal, passport, Minister, Parameshwar