ಬೆಂಗಳೂರು,ಜನವರಿ,25,2023(www.justkannada.in): ಕಾಂಗ್ರೆಸ್ ಮತದಾರರಿಗೆ 2 ಸಾವಿರ ರೂ. ನೀಡುವುದಾಗಿ ಓಪನ್ ಘೋಷಣೆ ಮಾಡಿದ್ದಾರೆ. ಕುಣಿಗಲ್ ನಲ್ಲಿ ಕುಕ್ಕರ್ ಹಂಚುವ ವೇಳೆ ಸಿಕ್ಕಿಬಿದ್ದಿದ್ದು ಕಮರ್ಷಿಯಲ್ ಟ್ಯಾಕ್ಸ್ ನವರು ದಂಡ ವಿಧಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.![]()
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಫ್ರಿ ಕರೇಂಟ್, 2 ಸಾವಿರ ರೂ. ನೀಡುವುದಾಗಿ ಘೋಷಣೆ ಮಾಡಿದೆ. ಇದೆಲ್ಲಾ ನೋಡಿದ್ರೆ ಅವರು ಅಪರಾಧಿಗಳೇ. ಕಾಂಗ್ರೆಸ್ ಆಮಿಷ ತೋರಿಸದಂತೆ ಅಲ್ವಾ ಎಂದು ಪ್ರಶ್ನಿಸಿದರು.
ಕುಣಿಗಲ್ ನಲ್ಲಿ ತಮ್ಮ ಫೋಟೊ ಇರುವ ಕುಕ್ಕರ್ ನೀಡಿದ್ದಾರೆ. ಈ ವೇಳೆ ವಾಣಿಜ್ಯ ತೆರಿಗೆ ಇಲಾಖೆಯವರು ನಾಲ್ವರಿಗೆ ದಂಡ ಹಾಕಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಸೋಲುತ್ತೇವೆ ಅಂತಾ ಗೊತ್ತಾಗಿದೆ. ಕಾಂಗ್ರೆಸ್ ಕೆಳಮಟ್ಟದ ರಾಜಕಾರಣ ಮಾಡುತ್ತಿದೆ. ನಾವು ಕಾಂಗ್ರೆಸ್ ನಿಂದ ಪಾಠ ಕಲಿಯಬೇಕಿಲ್ಲ. ಈ ರೀತಿ ನಾವು ನೂರು ಕಂಪ್ಲೆಂಟ್ ಕೊಡಹುದು ಆದರೆ ಜನ ತೀರ್ಮಾನ ಮಾಡುತ್ತಾರೆ ಎಂದರು.
Key words: 2 thousand -. Congress-open -declaration – CM Basavaraja Bommai







