<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>donation Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/donation/feed/" rel="self" type="application/rss+xml" />
	<link>https://www.justkannada.in/tag/donation/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Fri, 26 Jun 2026 11:39:31 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>donation Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/donation/</link>
	<width>32</width>
	<height>32</height>
</image> 
	<item>
		<title>ಅಯೋಧ್ಯೆ ರಾಮಮಂದಿರ ಕಾಣಿಕೆ ದುರುಪಯೋಗ: ಇಬ್ಬರು ಅರೆಸ್ಟ್</title>
		<link>https://www.justkannada.in/ayodhya-ram-mandir-two-arrested/</link>
		
		<dc:creator><![CDATA[prashanth]]></dc:creator>
		<pubDate>Fri, 26 Jun 2026 11:39:31 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Ayodhya]]></category>
		<category><![CDATA[donation]]></category>
		<category><![CDATA[Misappropriation]]></category>
		<category><![CDATA[Ram Mandir]]></category>
		<category><![CDATA[two arrested]]></category>
		<guid isPermaLink="false">https://www.justkannada.in/?p=156587</guid>

					<description><![CDATA[<p>ನವದೆಹಲಿ,ಜೂನ್,26,2026 (www.justkannada.in): ಅಯೋಧ್ಯೆಯ ರಾಮಮಂದಿರದ ಕಾಣಿಕೆ ದುರುಪಯೋಗ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿದ ಪ್ರಾಥಮಿಕ ವರದಿಯ ಶಿಫಾರಸಿನ ಮೇರೆಗೆ ಎಂಟು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ ಬೆನ್ನಲ್ಲೇ ಬಂಧನ ಕ್ರಮ ಕೈಗೊಳ್ಳಲಾಗಿದೆ. ಬಂಧಿತರನ್ನು ಅನುಕಲ್ಸ್ ಮಿಶ್ರಾ ಮತ್ತು ಲವಕುಶ್ ಮಿಶ್ರಾ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಎಂಟು ಆರೋಪಿಗಳ ಪೈಕಿ ಆರು ಮಂದಿ ರಾಮಮಂದಿರದ ಸಿಬ್ಬಂದಿಯಾಗಿದ್ದಾರೆ ಎನ್ನಲಾಗಿದೆ. ರಮಾಶಂಕರ್ ಮಿಶ್ರಾ, ಅವಿನಾಶ್ ಶುಕ್ಲಾ, ಮನೀಶ್ [&#8230;]</p>
<p>The post <a href="https://www.justkannada.in/ayodhya-ram-mandir-two-arrested/">ಅಯೋಧ್ಯೆ ರಾಮಮಂದಿರ ಕಾಣಿಕೆ ದುರುಪಯೋಗ: ಇಬ್ಬರು ಅರೆಸ್ಟ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ನವದೆಹಲಿ,ಜೂನ್,26,2026 (www.justkannada.in):</strong> ಅಯೋಧ್ಯೆಯ ರಾಮಮಂದಿರದ ಕಾಣಿಕೆ ದುರುಪಯೋಗ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿದ ಪ್ರಾಥಮಿಕ ವರದಿಯ ಶಿಫಾರಸಿನ ಮೇರೆಗೆ ಎಂಟು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ ಬೆನ್ನಲ್ಲೇ ಬಂಧನ ಕ್ರಮ ಕೈಗೊಳ್ಳಲಾಗಿದೆ.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಬಂಧಿತರನ್ನು ಅನುಕಲ್ಸ್ ಮಿಶ್ರಾ ಮತ್ತು ಲವಕುಶ್ ಮಿಶ್ರಾ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಎಂಟು ಆರೋಪಿಗಳ ಪೈಕಿ ಆರು ಮಂದಿ ರಾಮಮಂದಿರದ ಸಿಬ್ಬಂದಿಯಾಗಿದ್ದಾರೆ ಎನ್ನಲಾಗಿದೆ.<img decoding="async" class="aligncenter size-full wp-image-118142" src="https://www.justkannada.in/wp-content/uploads/2024/01/ayodye.jpg" alt="" width="500" height="375" srcset="https://www.justkannada.in/wp-content/uploads/2024/01/ayodye.jpg 500w, https://www.justkannada.in/wp-content/uploads/2024/01/ayodye-300x225.jpg 300w, https://www.justkannada.in/wp-content/uploads/2024/01/ayodye-265x198.jpg 265w" sizes="(max-width: 500px) 100vw, 500px" /></p>
<p>ರಮಾಶಂಕರ್ ಮಿಶ್ರಾ, ಅವಿನಾಶ್ ಶುಕ್ಲಾ, ಮನೀಶ್ ಯಾದವ್, ಸುಭಾಷ್‌ಚಂದ್ರ ಶ್ರೀವಾತ್ಸವ ಹಾಗೂ ಕರುಣೇಶ್ ಪಾಂಡೆ ಸೇರಿದಂತೆ ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಪೈಕಿ ರಾಮ ಜನ್ಮಭೂಮಿ ಟ್ರಸ್ಟ್‌ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಚಾಲಕರಾಗಿದ್ದ ರಮಾಶಂಕರ್ ಮಿಶ್ರಾ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.<img decoding="async" class="aligncenter size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="(max-width: 1000px) 100vw, 1000px" /></p>
<p>Key words: Ayodhya, Ram Mandir, Donation, Misappropriation, Two Arrested</p>
<p>The post <a href="https://www.justkannada.in/ayodhya-ram-mandir-two-arrested/">ಅಯೋಧ್ಯೆ ರಾಮಮಂದಿರ ಕಾಣಿಕೆ ದುರುಪಯೋಗ: ಇಬ್ಬರು ಅರೆಸ್ಟ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಬಸವಾದಿ ಶರಣರ ಕುರಿತ ಕೃತಿಗಳಿಗೆ 5 ಕೋಟಿ ರೂ. ದೇಣಿಗೆ-ಸಚಿವ ಎಂ‌.ಬಿ ಪಾಟೀಲ್</title>
		<link>https://www.justkannada.in/minister-m-b-patil-65/</link>
		
		<dc:creator><![CDATA[prashanth]]></dc:creator>
		<pubDate>Mon, 17 Nov 2025 11:02:07 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Basavadi Sharanaru]]></category>
		<category><![CDATA[donation]]></category>
		<category><![CDATA[M.B. Patil]]></category>
		<category><![CDATA[minister]]></category>
		<category><![CDATA[Rs 5 crore]]></category>
		<category><![CDATA[works]]></category>
		<guid isPermaLink="false">https://www.justkannada.in/?p=147877</guid>

					<description><![CDATA[<p>ಬೆಂಗಳೂರು, ನವೆಂಬರ್,17,2025 (www.justkannada.in):   ಬಸವಾದಿ ಶರಣರು ಮತ್ತು ಅನುಭವ ಮಂಟಪದಲ್ಲಿನ ಚಿಂತನೆಗಳನ್ನು ಕುರಿತು ಇಂಗ್ಲೀಷಿನಲ್ಲಿ ಜಾಗತಿಕ ಮಟ್ಟದ ಪುಸ್ತಕಗಳು ಹೊರಬರಬೇಕಾಗಿದೆ. ಇದಕ್ಕಾಗಿ ತಾವು 5 ಕೋಟಿ ರೂಪಾಯಿ ದೇಣಿಗೆ ಕೊಡಲಿದ್ದೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ‌ ಸೋಮವಾರ ಏರ್ಪಡಿಸಿದ್ದ &#8216;ರಮಣಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ  ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ ಪಾಟೀಲ್ ಅವರು ಮಾತನಾಡಿದರು. ಉತ್ತರ [&#8230;]</p>
<p>The post <a href="https://www.justkannada.in/minister-m-b-patil-65/">ಬಸವಾದಿ ಶರಣರ ಕುರಿತ ಕೃತಿಗಳಿಗೆ 5 ಕೋಟಿ ರೂ. ದೇಣಿಗೆ-ಸಚಿವ ಎಂ‌.ಬಿ ಪಾಟೀಲ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು, ನವೆಂಬರ್,17,2025 (<a href="http://www.justkannada.in">www.justkannada.in</a>):</strong>   ಬಸವಾದಿ ಶರಣರು ಮತ್ತು ಅನುಭವ ಮಂಟಪದಲ್ಲಿನ ಚಿಂತನೆಗಳನ್ನು ಕುರಿತು ಇಂಗ್ಲೀಷಿನಲ್ಲಿ ಜಾಗತಿಕ ಮಟ್ಟದ ಪುಸ್ತಕಗಳು ಹೊರಬರಬೇಕಾಗಿದೆ. ಇದಕ್ಕಾಗಿ ತಾವು 5 ಕೋಟಿ ರೂಪಾಯಿ ದೇಣಿಗೆ ಕೊಡಲಿದ್ದೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ‌ ಸೋಮವಾರ ಏರ್ಪಡಿಸಿದ್ದ &#8216;ರಮಣಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ  ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ ಪಾಟೀಲ್ ಅವರು ಮಾತನಾಡಿದರು.</p>
<p>ಉತ್ತರ ಕರ್ನಾಟಕದ ಸಾಧಕರಾದ ಫ.ಗು.ಹಳಕಟ್ಟಿ, ಸರ್ ಸಿದ್ದಪ್ಪ ಕಂಬಳಿ, ಲಿಂಗರಾಜ ದೇಸಾಯಿ, ಬಂತನಾಳದ ಪೂಜ್ಯರು, ಶ್ರೀ ಸಿದ್ಧೇಶ್ವರ ಸ್ವಾಮೀಜಿ ಮುಂತಾದವರ ಬಗ್ಗೆ ಕೂಡ ನಮ್ಮಲ್ಲಿ ಪುಸ್ತಕಗಳು ಪ್ರಕಟವಾಗಬೇಕು. ಹಾಗೆಯೇ ಬೆಂಗಳೂರು ಭಾಗದ ಸರ್ ಪುಟ್ಟಣ್ಣ ಚೆಟ್ಟಿ ಅಂಥವರ ಬಗ್ಗೆಯೂ ತಿಳಿಯಬೇಕು. ಈ ಮೂಲಕ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎನ್ನುವ ಭೇದ ಅಳಿಯಬೇಕು ಎಂದು ಅವರು ಸಲಹೆ ನೀಡಿದ್ದಾರೆ.</p>
<p>ಫ.ಗು.ಹಳಕಟ್ಟಿ ಅವರು ಇಲ್ಲದೆ ಹೋಗಿದ್ದರೆ ಬಸವ ಧರ್ಮವಾಗಲಿ, ವಚನ ಸಾಹಿತ್ಯವಾಗಲಿ, ನೂರಾರು ವಚನಕಾರರಾಗಲಿ ಬೆಳಕಿಗೆ ಬರುತ್ತಿರಲಿಲ್ಲ. ಅವರು ಮತ್ತು ಬಂತನಾಳದ ಪೂಜ್ಯರು ಸರ್ವಸ್ವವನ್ನೂ ತ್ಯಾಗ ಮಾಡಿ ವಚನ ಯುಗದ ಬಗ್ಗೆ ಬೆಳಕು ಚೆಲ್ಲುವ ಮಹಾನ್ ಕೆಲಸ ಮಾಡಿಹೋಗಿದ್ದಾರೆ. ಹಳಕಟ್ಟಿ ಅವರು ಆರಂಭಿಸಿದ್ದ &#8216;ಶಿವಾನುಭವ&#8217; ಪತ್ರಿಕೆಯನ್ನು ಸದ್ಯದಲ್ಲೇ ಪುನಾರಂಭ ಮಾಡಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ ಅವರು ನುಡಿದಿದ್ದಾರೆ.</p>
<p>ವಿಜಯಪುರದ ಬಿ ಎಲ್ ಡಿ ಇ ಸಂಸ್ಥೆಯಲ್ಲಿನ‌ ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ವಚನ ಸಾಹಿತ್ಯ, ದಾಸ ಸಾಹಿತ್ಯ, ಆದಿಲ್ ಶಾಹಿ ಸಾಹಿತ್ಯ ಮತ್ತು ಎಂ ಎಂ‌ ಕಲ್ಬುರ್ಗಿ ಅವರ ಸಾಹಿತ್ಯ ಸಂಪುಟಗಳನ್ನು ಈಗಾಗಲೇ ಹೊರ ತರಲಾಗಿದೆ. ಇವುಗಳನ್ನು ನಮ್ಮ ಯುವಜನ ಓದಬೇಕು ಎಂದು ಎಂ.ಬಿ ಪಾಟೀಲ ಹೇಳಿದ್ದಾರೆ.</p>
<p>ಲೇಖಕ ಎಸ್.ಷಡಕ್ಷರಿ ಅವರ ಕ್ಷಣ ಹೊತ್ತು ಆಣಿಮುತ್ತು- ಭಾಗ 15 ಪುಸಕ್ತ ಕೂಡ ಬಿಡುಗಡೆ ಮಾಡಲಾಯಿತು.</p>
<p>ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು. ಸಾಹಿತಿ ಗೊ ರು ಚನ್ನಬಸಪ್ಪ, ಲೇಖಕ ಎಸ್ ಷಡಕ್ಷರಿ, ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್, ಶರಣ ಸಾಹಿತ್ಯ ಪರಿಷತ್ತಿನ ಸಿ.ಸೋಮಶೇಖರ್ ಉಪಸ್ಥಿತರಿದ್ದರು.</p>
<p>Key words: Rs 5 crore, donation , works , Basavadi Sharanaru, Minister, M.B. Patil</p>
<p>The post <a href="https://www.justkannada.in/minister-m-b-patil-65/">ಬಸವಾದಿ ಶರಣರ ಕುರಿತ ಕೃತಿಗಳಿಗೆ 5 ಕೋಟಿ ರೂ. ದೇಣಿಗೆ-ಸಚಿವ ಎಂ‌.ಬಿ ಪಾಟೀಲ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕಾಲು ಜಾರಿ ಬಿದ್ದು ಮೃತಪಟ್ಟ ವ್ಯಕ್ತಿಯ ಅಂಗಾಗ ದಾನ: ಆಸ್ಪತ್ರೆಗಳಿಗೆ ರವಾನೆ</title>
		<link>https://www.justkannada.in/deceased-organ-donation-hospitals/</link>
		
		<dc:creator><![CDATA[prashanth]]></dc:creator>
		<pubDate>Wed, 16 Oct 2024 12:48:13 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[deceased]]></category>
		<category><![CDATA[donation]]></category>
		<category><![CDATA[hospitals]]></category>
		<category><![CDATA[organ]]></category>
		<guid isPermaLink="false">https://www.justkannada.in/?p=130835</guid>

					<description><![CDATA[<p>ಬೆಂಗಳೂರು,ಅಕ್ಟೋಬರ್,16,2024 (www.justkannada.in):  ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ವ್ಯಕ್ತಿಯೊಬ್ಬರ ಕಣ್ಣು, ಹೃದಯ, ಕಿಡ್ನಿ, ಲಿವರ್ ಗಳನ್ನು ನಗರದ 8 ನೇ ಮೈಲಿ ಬಳಿಯ ಪ್ರಕ್ರಿಯ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯ ಹಾಗೂ ಅಪೊಲೋ ಆಸ್ಪತ್ರೆಗಳಿಗೆ ನೂತನ ತಂತ್ರಜ್ಞಾನದ ಮೂಲಕ ರವಾನಿಸಲಾಯಿತು. ಮಾಗಡಿ ರಸ್ತೆಯ ಕೆ. ಪಿ ಅಗ್ರಹಾರದ ನಿವಾಸಿ ಕುಮರೇಶ್(57) ಎಂಬುವರೇ ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತಲೆಗೆ ಪೆಟ್ಟಾಗಿದ್ದ ಕುಮರೇಶ್ ಅವರನ್ನು ಪ್ರಕ್ರಿಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ವೈದ್ಯರು ಮೆದುಳು ನಿಷ್ಕ್ರಿಯವಾಗಿರುವುದನ್ನು [&#8230;]</p>
<p>The post <a href="https://www.justkannada.in/deceased-organ-donation-hospitals/">ಕಾಲು ಜಾರಿ ಬಿದ್ದು ಮೃತಪಟ್ಟ ವ್ಯಕ್ತಿಯ ಅಂಗಾಗ ದಾನ: ಆಸ್ಪತ್ರೆಗಳಿಗೆ ರವಾನೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಅಕ್ಟೋಬರ್,16,2024 (<a href="http://www.justkannada.in">www.justkannada.in</a>):</strong>  ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ವ್ಯಕ್ತಿಯೊಬ್ಬರ ಕಣ್ಣು, ಹೃದಯ, ಕಿಡ್ನಿ, ಲಿವರ್ ಗಳನ್ನು ನಗರದ 8 ನೇ ಮೈಲಿ ಬಳಿಯ ಪ್ರಕ್ರಿಯ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯ ಹಾಗೂ ಅಪೊಲೋ ಆಸ್ಪತ್ರೆಗಳಿಗೆ ನೂತನ ತಂತ್ರಜ್ಞಾನದ ಮೂಲಕ ರವಾನಿಸಲಾಯಿತು.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಮಾಗಡಿ ರಸ್ತೆಯ ಕೆ. ಪಿ ಅಗ್ರಹಾರದ ನಿವಾಸಿ ಕುಮರೇಶ್(57) ಎಂಬುವರೇ ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತಲೆಗೆ ಪೆಟ್ಟಾಗಿದ್ದ ಕುಮರೇಶ್ ಅವರನ್ನು ಪ್ರಕ್ರಿಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ವೈದ್ಯರು ಮೆದುಳು ನಿಷ್ಕ್ರಿಯವಾಗಿರುವುದನ್ನು ಕುಟುಂಬದವರಿಗೆ ತಿಳಿಸಿದರು. ಹಾಗೆಯೇ ಉಳಿದ ಅಂಗಾಂಗಗಳನ್ನು ದಾನ ಮಾಡಿದರೆ ಇನ್ನು ಹತ್ತಾರು ಜನರಿಗೆ ಜೀವ ಉಳಿಸಬಹುದು ಎಂದು ಕುಟುಂಬದವರಿಗೆ ಮನವರಿಕೆ ಮಾಡಿಕೊಟ್ಟರು.</p>
<p>ಈ ವೇಳೆ ಕುಟುಂಬಸ್ಥರು ಮೃತ ಕುಮರೇಶ್ ಕಣ್ಣು, ಹೃದಯ, ಕಿಡ್ನಿ, ಲಿವರ್ ಸೇರಿದಂತೆ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದ್ದು, ಕುಟುಂಬದ ಒಪ್ಪಿಗೆ ಮೇರೆಗೆ ತಕ್ಷಣ ಪ್ರಕ್ರಿಯ ಆಸ್ಪತ್ರೆ ವೈದ್ಯರು ಅಂಗಾಂಗಗಳನ್ನು ಬೇರ್ಪಡಿಸಿದರು. ನಾರಾಯಣ ಹೃದಯಾಲಯಕ್ಕೆ ಹೃದಯ ಹಾಗೂ ಇತರೆ ಅಂಗಾಂಗಗಳನ್ನು ಮಲ್ಲೇಶ್ವರಂನ ಅಪೊಲೊ ಆಸ್ಪತ್ರೆಗೆ ನೂತನ ತಂತ್ರಜ್ಞಾನದೊಂದಿಗೆ ಆಂಬ್ಯುಲೆನ್ಸ್ ಮೂಲಕ ರವಾನಿಸಲಾಯಿತು.</p>
<p>ಅಂಗಾಂಗ ದಾನದ ಬಗ್ಗೆ ಮಾತನಾಡಿದ ಮೃತ ಕುಮರೇಶ್ ಪತ್ನಿ ಸೆಲ್ವಿ ಅವರು, ನಮ್ಮ ಪತಿ ಅವರಂತೂ ಉಳಿಯಲಿಲ್ಲ, ಅಂಗಾಂಗಗಳ ದಾನದಿಂದ ಬೇರೆ ಜೀವಗಳು ಉಳಿಯುತ್ತವೆ ಅಂದರೆ ಈ ಕಾರ್ಯ ಪುಣ್ಯ ಎಂದರು.</p>
<p>ಪ್ರಕ್ರಿಯ ಆಸ್ಪತ್ರೆ ಸಿಇಒ ಶ್ರೀನಿವಾಸ್ ಸಿ ಹೆಚ್ ಮಾತನಾಡಿ, ಮೆದುಳು ನಿಷ್ಕ್ರಿಯವಾಗಿ ಮೃತಪಟ್ಟವರ ಎಲ್ಲಾ ಕುಟುಂಬದವರು ಅಂಗಾಂಗಗಳ ದಾನಕ್ಕೆ ಒಪ್ಪುವುದಿಲ್ಲ, ಮೃತ ವ್ಯಕ್ತಿಯ ಅಂಗಾಂಗಳಿಂದ ಬೇರೆಯವರ ಜೀವ ಉಳಿಸಬಹುದು ಎಂಬ ಜಾಗೃತಿಯನ್ನು ಎಲ್ಲರೂ ಅರಿಯಬೇಕು ಎಂದು ಮನವಿ ಮಾಡಿದರು.</p>
<p>ನಾರಾಯಣ ಹೃದಯಾಲಯ ಹಾಗೂ ಅಪೊಲೋ ಆಸ್ಪತ್ರೆಗಳಿಗೆ ಪ್ರತ್ಯೇಕ ಆಂಬುಲೆನ್ಸ್ ಗಳಲ್ಲಿ ಅಂಗಾಂಗಗಳನ್ನು ರವಾನಿಸಲಾಯಿತು.</p>
<p>Key words: Deceased, Organ, Donation, Hospitals</p>
<p>The post <a href="https://www.justkannada.in/deceased-organ-donation-hospitals/">ಕಾಲು ಜಾರಿ ಬಿದ್ದು ಮೃತಪಟ್ಟ ವ್ಯಕ್ತಿಯ ಅಂಗಾಗ ದಾನ: ಆಸ್ಪತ್ರೆಗಳಿಗೆ ರವಾನೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಬೇರೊಬ್ಬರ ಜೀವ ಉಳಿಸಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡ ಕಾಲೇಜು ಉಪನ್ಯಾಸಕಿ</title>
		<link>https://www.justkannada.in/college-lecturer-death-liver-donation-udupi/</link>
		
		<dc:creator><![CDATA[prashanth]]></dc:creator>
		<pubDate>Tue, 17 Sep 2024 06:06:39 +0000</pubDate>
				<category><![CDATA[Crime]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[college lecturer]]></category>
		<category><![CDATA[death]]></category>
		<category><![CDATA[donation]]></category>
		<category><![CDATA[Liver]]></category>
		<category><![CDATA[udupi]]></category>
		<guid isPermaLink="false">https://www.justkannada.in/?p=129352</guid>

					<description><![CDATA[<p>ಉಡುಪಿ, ಸೆಪ್ಟಂಬರ್, 17,2024 (www.justkannada.in): ತನ್ನ ಪತಿಯ ಸಂಬಂಧಿ ಮಹಿಳೆಯೊಬ್ಬರಿಗೆ ಲಿವರ್‌ ನ(ಯಕೃತ್ತು) ಭಾಗವನ್ನು ದಾನ ಮಾಡಿ ಅವರ ಜೀವ ಉಳಿಸಿದ್ದ  ಉಪನ್ಯಾಸಕಿಯೊಬ್ಬರು ತಾವೇ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಟೇಶ್ವರದಲ್ಲಿ ಈ ಘಟನೆ ನಡೆದಿದೆ. ಅರ್ಚನಾ ಕಾಮತ್ (34) ಮೃತಪಟ್ಟವರು. ಅರ್ಚನಾ ಕಾಮತ್ ಅವರು ನಗರದ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದರು. ಈ ನಡುವೆ ತನ್ನ ಪತಿಯ ಸಂಬಂಧಿ  69 ವರ್ಷ ಹಿರಿಯ ಸಂಬಂಧಿಕ ಮಹಿಳೆಗೆ ಯಕೃತ್ತಿನ (Liver) ಕಸಿಗೆ ದಾನಿಯಾಗಲು ಬಯಸಿದ್ದ [&#8230;]</p>
<p>The post <a href="https://www.justkannada.in/college-lecturer-death-liver-donation-udupi/">ಬೇರೊಬ್ಬರ ಜೀವ ಉಳಿಸಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡ ಕಾಲೇಜು ಉಪನ್ಯಾಸಕಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಉಡುಪಿ, ಸೆಪ್ಟಂಬರ್, 17,2024 (<a href="http://www.justkannada.in">www.justkannada.in</a>): </strong>ತನ್ನ ಪತಿಯ ಸಂಬಂಧಿ ಮಹಿಳೆಯೊಬ್ಬರಿಗೆ ಲಿವರ್‌ ನ(ಯಕೃತ್ತು) ಭಾಗವನ್ನು ದಾನ ಮಾಡಿ ಅವರ ಜೀವ ಉಳಿಸಿದ್ದ  ಉಪನ್ಯಾಸಕಿಯೊಬ್ಬರು ತಾವೇ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಟೇಶ್ವರದಲ್ಲಿ ಈ ಘಟನೆ ನಡೆದಿದೆ. ಅರ್ಚನಾ ಕಾಮತ್ (34) ಮೃತಪಟ್ಟವರು. ಅರ್ಚನಾ ಕಾಮತ್ ಅವರು ನಗರದ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದರು.</p>
<p>ಈ ನಡುವೆ ತನ್ನ ಪತಿಯ ಸಂಬಂಧಿ  69 ವರ್ಷ ಹಿರಿಯ ಸಂಬಂಧಿಕ ಮಹಿಳೆಗೆ ಯಕೃತ್ತಿನ (Liver) ಕಸಿಗೆ ದಾನಿಯಾಗಲು ಬಯಸಿದ್ದ 34 ವರ್ಷದ ಅರ್ಚನಾ ಕಾಮತ್ ಅವರು ಯಕೃತ್ ದಾನ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಸೋಂಕಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತ ಅರ್ಚನಾ ಕಾಮತ್ ಅವರು  ಪತಿ ಸಿಎ ಚೇತನ ಕಾಮತ್, 4 ವರ್ಷದ ಮಗು, ತಂದೆ, ತಾಯಿಯನ್ನು ಅಗಲಿದ್ದಾರೆ.</p>
<p>ಚೇತನ್ ಕಾಮತ್ ಅವರ ಪತಿಯ ಸಂಬಂಧಿ ಮಹಿಳೆಯೋರ್ವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಲಿವರ್‌ ನ ಅಗತ್ಯವಿತ್ತು. ಹಲವರನ್ನು ತಪಾಸಣೆ ಮಾಡಿದ್ದರೂ ರಕ್ತದ ಗುಂಪು ಹೊಂದಾಣಿಕೆಯಾಗಿರಲಿಲ್ಲ. ಆದರೆ ಅರ್ಚನಾ ರಕ್ತದ ಗುಂಪು ಹೊಂದಾಣಿಕೆಯಾಗಿತ್ತು. ಹೀಗಾಗಿ ಅರ್ಚನಾ ಅವರೇ ಲಿವರ್‌ ನ ಭಾಗದ ದಾನಕ್ಕೆ ಮುಂದೆ ಬಂದಿದ್ದಾರೆ.</p>
<p>ಅದರಂತೆ 12 ದಿನಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಅರ್ಚನಾ ಅವರ ಲಿವರ್‌ ನ ಸ್ವಲ್ಪ ಅಂಶವನ್ನು ತೆಗೆದು ಸಂಬಂಧಿ ಮಹಿಳೆಗೆ ಜೋಡಿಸುವ ಶಸ್ತಚಿಕಿತ್ಸೆ ನಡೆದಿತ್ತು. ಆ ಬಳಿಕ ಅರ್ಚನಾ ಅವರು ಆರೋಗ್ಯದಿಂದ ಇದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.</p>
<p>ಇದಾದ ಬಳಿಕ ಕೆಲ ದಿನಗಳ ನಂತರ ಅರ್ಚನಾ ಕಾಮತ್ ಅವರಿಗೆ ಜ್ವರ ಕಾಣಿಸಿಕೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರು ಮೃತಪಟ್ಟದ್ದಾರೆ.</p>
<p>Key words:  college lecturer, death, Liver, donation, udupi</p>
<p>The post <a href="https://www.justkannada.in/college-lecturer-death-liver-donation-udupi/">ಬೇರೊಬ್ಬರ ಜೀವ ಉಳಿಸಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡ ಕಾಲೇಜು ಉಪನ್ಯಾಸಕಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ರಕ್ತದಾನದ ಹಗರಣಗಳು.</title>
		<link>https://www.justkannada.in/increasing-blood-donation-scandals-bangalore/</link>
		
		<dc:creator><![CDATA[JK Desk]]></dc:creator>
		<pubDate>Wed, 09 Feb 2022 09:10:00 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Bangalore]]></category>
		<category><![CDATA[blood]]></category>
		<category><![CDATA[donation]]></category>
		<category><![CDATA[Increasing]]></category>
		<category><![CDATA[scandals]]></category>
		<guid isPermaLink="false">https://www.justkannada.in/?p=86151</guid>

					<description><![CDATA[<p>ಬೆಂಗಳೂರು, ಫೆಬ್ರವರಿ,9, 2022 (www.justkannada.in): ಬೆಂಗಳೂರಿನಲ್ಲಿ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿ ರಕ್ತದ ಅವಶ್ಯಕತೆ ಇರುವ, ಮತ್ತು ರಕ್ತದಾನಿಗಳಿಗಾಗಿ ಹುಡುಕುತ್ತಿದ್ದು, ಮೋಸ ಹೋಗಿರುವ ಕುಟುಂಬಗಳ ಸದಸ್ಯರು ಇಂತಹ ಮೋಸಗಾರರಿಂದ ಎಚ್ಚರವಹಿಸುವಂತೆ ಕೋರಿದ್ದಾರೆ. ರಕ್ತದ ಅವಶ್ಯತೆಯಿಂದ ದಾನಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸುವ ಕುಟುಂಬಗಳ ಸದಸ್ಯರಿಗೆ ತಾವು ರಕ್ತ ನೀಡುವುದಾಗಿ ತಿಳಿಸಿ ಅಲ್ಲಿಗೆ ತೆರಳಲು ಪ್ರಯಾಣ ವೆಚ್ಚಗಳನ್ನು ನೀಡುವಂತೆ ತಿಳಿಸಿ, ದುಡ್ಡು ಪಡೆದ ನಂತರ ರಕ್ತದಾನ ಮಾಡಲು ಬರದೆ ಮರೆಯಾಗುತ್ತಿರುವ ಪ್ರಕರಣಗಳು ವರದಿಯಾಗಿವೆ. ರಕ್ತದ ತುರ್ತು ಅವಶ್ಯಕತೆ ಇದ್ದು ಸಾಮಾಜಿಕ ಜಾಲತಾಣಗಳಲ್ಲಿ [&#8230;]</p>
<p>The post <a href="https://www.justkannada.in/increasing-blood-donation-scandals-bangalore/">ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ರಕ್ತದಾನದ ಹಗರಣಗಳು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು, ಫೆಬ್ರವರಿ,9, 2022 (www.justkannada.in): </strong>ಬೆಂಗಳೂರಿನಲ್ಲಿ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿ ರಕ್ತದ ಅವಶ್ಯಕತೆ ಇರುವ, ಮತ್ತು ರಕ್ತದಾನಿಗಳಿಗಾಗಿ ಹುಡುಕುತ್ತಿದ್ದು, ಮೋಸ ಹೋಗಿರುವ ಕುಟುಂಬಗಳ ಸದಸ್ಯರು ಇಂತಹ ಮೋಸಗಾರರಿಂದ ಎಚ್ಚರವಹಿಸುವಂತೆ ಕೋರಿದ್ದಾರೆ. ರಕ್ತದ ಅವಶ್ಯತೆಯಿಂದ ದಾನಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸುವ ಕುಟುಂಬಗಳ ಸದಸ್ಯರಿಗೆ ತಾವು ರಕ್ತ ನೀಡುವುದಾಗಿ ತಿಳಿಸಿ ಅಲ್ಲಿಗೆ ತೆರಳಲು ಪ್ರಯಾಣ ವೆಚ್ಚಗಳನ್ನು ನೀಡುವಂತೆ ತಿಳಿಸಿ, ದುಡ್ಡು ಪಡೆದ ನಂತರ ರಕ್ತದಾನ ಮಾಡಲು ಬರದೆ ಮರೆಯಾಗುತ್ತಿರುವ ಪ್ರಕರಣಗಳು ವರದಿಯಾಗಿವೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ರಕ್ತದ ತುರ್ತು ಅವಶ್ಯಕತೆ ಇದ್ದು ಸಾಮಾಜಿಕ ಜಾಲತಾಣಗಳಲ್ಲಿ ಬೇಡಿಕೆಗಳನ್ನು ಪೋಸ್ಟ್ ಮಾಡುವವರು ಇಂತಹ ವಂಚಕರ ಮೋಸಕ್ಕೆ ಬಲಿಯಾಗುತ್ತಿದ್ದಾರೆ. ರಕ್ತ ಒಂದು ತುರ್ತು ಅಗತ್ಯವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಕುಟುಂಬಸ್ಥರು ಹಣದ ಮುಖ ನೋಡುವುದಿಲ್ಲ. ಹಿಂದೆ ಮುಂದೆ ನೋಡದೆ ರಕ್ತದಾನ ಮಾಡುತ್ತೇನೆ, ಅಲ್ಲಿಗೆ ಬರಲು ಪ್ರಯಾಣ ವೆಚ್ಚಗಳನ್ನು ಆನ್‌ ಲೈನ್ ಮೂಲಕ ವರ್ಗಾಯಿಸಿ ಎಂದೊಡನೆ ಹಣ ವರ್ಗಾಯಿಸುತ್ತಾರೆ.<img loading="lazy" decoding="async" class="aligncenter size-full wp-image-86152" src="https://www.justkannada.in/wp-content/uploads/2022/02/blood.jpg" alt="" width="650" height="485" srcset="https://www.justkannada.in/wp-content/uploads/2022/02/blood.jpg 650w, https://www.justkannada.in/wp-content/uploads/2022/02/blood-600x448.jpg 600w, https://www.justkannada.in/wp-content/uploads/2022/02/blood-300x224.jpg 300w, https://www.justkannada.in/wp-content/uploads/2022/02/blood-265x198.jpg 265w" sizes="auto, (max-width: 650px) 100vw, 650px" /></p>
<p>ಇತ್ತೀಚಿನ ಇಂತಹ ಒಂದು ಪ್ರಕರಣದಲ್ಲಿ, ತಮ್ಮ ತಂದೆಗೆ ಎರಡು ಯೂನಿಟ್‌ ಗಳಷ್ಟು ರಕ್ತದ ಅಗತ್ಯವಿದ್ದಂತಹ ಓರ್ವ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ರಕ್ತದ ಅಗತ್ಯದ ಕುರಿತು ಪೋಸ್ಟ್ ಪ್ರಕಟಿಸಿದ್ದರು. ಈ ಪೋಸ್ಟ್ ಗೆ ಸಂಬಂಧಿಸಿದಂತೆ ಆಕೆಗೆ ಅನಾಮಧೇಯ ವ್ಯಕ್ತಿಯಿಂದ ಒಂದು ದೂರವಾಣಿ ಕರೆ ಬಂತು. ಆತ ರಕ್ತದಾನ ಮಾಡಲು ಒಪ್ಪಿಕೊಂಡ. &#8220;ನಮಗೆ ತುರ್ತಾಗಿ ರಕ್ತ ಬೇಕಾಗಿತ್ತು. ಆತ ತನ್ನ ಹೆಸರು ಸಂದೀಪ್ ಎಂದು ಹೇಳಿಕೊಂಡು ಶನಿವಾರ ಬೆಳಿಗ್ಗೆ ಕರೆ ಮಾಡಿದ್ದ. ರಕ್ತ ನೀಡಲು ತನ್ನ ಸ್ನೇಹಿತನೊಬ್ಬ ಬರುವುದಾಗಿ ತಿಳಿಸಿದ. ನಾನು ಆಸ್ಪತ್ರೆಯ ವಿವರಗಳು ಮತ್ತು ಲೊಕೇಷನ್ ಶೇರ್ ಮಾಡಿದೆ. ಸಂದೀಪ್ ತನ್ನ ಓರ್ವ ಸ್ನೇಹಿತ ಮಾರತಹಳ್ಳಿಯಿಂದ ಹಾಗೂ ಮತ್ತೋರ್ವ ಸಿಲ್ಕ್ ಬೋರ್ಡ್ ಕಡೆಯಿಂದ ಬರುತ್ತಿದ್ದು, ಅದಕ್ಕೆ ಪ್ರಯಾಣ ದರ ರೂ.೭೦೦ ಒದಗಿಸುವುದಾಗಿ ಕೋರಿದ. ನಾನು ಒಪ್ಪಿಕೊಂಡು ಹಣ ವರ್ಗಾಯಿಸಿದೆ. ಹಣ ವರ್ಗಾಯಿಸಿದ ನಂತರ ಸುಮಾರು ಗಂಟೆಗಳವರೆಗೂ ಕಾದರೂ ಯಾರೂ ಬರಲಿಲ್ಲ. ನಾನು ಕರೆ ಮಾಡಲಾರಂಭಿಸಿದಾಗ ಆತ ನನ್ನ ಕರೆಗೆ ಉತ್ತರಿಸುವುದನ್ನೇ ನಿಲ್ಲಿಸಿದ, ಸ್ವಲ್ಪ ಸಮಯದ ನಂತರ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು,&#8221; ಎಂದು ತಿಳಿಸಿದರು.</p>
<p>ಆಗ ಆಕೆಗೆ ಕೊನೆಯ ಕ್ಷಣದಲ್ಲಿ ಇತರೆ ರಕ್ತದಾನಿಗಳನ್ನು ಹುಡುಕುವುದು ಬಹಳ ಕಷ್ಟವಾಯಿತಂತೆ. &#8220;ಅಂತಿಮವಾಗಿ ಮತ್ತೋರ್ವ ರಕ್ತ ದಾನಿಯನ್ನು ಹುಡುಕುವಲ್ಲಿ ಯಶಸ್ವಿಯಾದೆ. ಆದರೆ ಅದರ ಹಿಂದಿನ ಅನುಭವ ಮಾತ್ರ ತುಂಬಾ ಬೇಸರ ತಂದಿತು,&#8221; ಎಂದು ವಿವರಿಸಿದರು.</p>
<p>ರಕ್ತದಾನವನ್ನು ಸಂಯೋಜಿಸುವ ಒಂದು ಸಂಸ್ಥೆ ತಿಳಿಸಿದಂತೆ ಪ್ರಸ್ತುತ ಬಹುಪಾಲು ಬ್ಲಡ್ ಬ್ಯಾಂಕ್‌ ಗಳಲ್ಲಿ ರಕ್ತ ಖಾಲಿಯಾಗಿದ್ದು, ರಕ್ತ ದಾನಿಗಳನ್ನು ಹುಡುಕುವುದು ಬಹಳ ಕಷ್ಟವಾಗಿದೆಯಂತೆ. &#8220;ಆಗಾಗ ರಕ್ತದಾನ ಮಾಡುವುದನ್ನು ವಾಡಿಕೆ ಮಾಡಿಕೊಂಡಿರುವ ಕೆಲವೇ ಕೆಲವರು ಮಾತ್ರ ರಕ್ತದಾನ ಮಾಡಲು ಮುಂದಕ್ಕೆ ಬರುತ್ತಿದ್ದಾರೆ. ಆದರೆ ಅನೇಕ ಪ್ರಕರಣಗಳಲ್ಲಿ ಒಮ್ಮೆ ಓರ್ವ ರಕ್ತದಾನಿ ರಕ್ತದ ಅಗತ್ಯವಿರುವ ಕುಟುಂಬಸ್ಥರಿಗೆ ರಕ್ತದಾನ ಮಾಡುವುದಾಗಿ ವಾಗ್ದಾನ ನೀಡಿದ ನಂತರ ನಾವು ಆ ಕರೆಯನ್ನು ಮುಗಿಸುತ್ತೇವೆ, ಕೆಲವು ತಾಸುಗಳ ನಂತರ ಅದೊಂದು ಮೋಸ ಎಂದು ಗೊತ್ತಾಗುತ್ತದೆ. ಆಗ ಪುನಃ ಕೋರಿಕೆಯನ್ನು ಮುಂದುವರೆಸುತ್ತೇವೆ. ಇಂತಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಲೂ ಆಗುವುದಿಲ್ಲ,&#8221; ಎಂದು ವಿವರಿಸಿದ್ದಾರೆ.</p>
<p>ಪೊಲೀಸರು ಇಂತಹ ಪ್ರಕರಣಗಳಲ್ಲಿ ಸ್ವಯಂಪ್ರೇರಣೆಯಾಗಿ ಪ್ರಕರಣ ದಾಖಲಿಸಿಕೊಂಡು ಇಂತಹ ವಂಚಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆ ಮೂಲಕ ರಕ್ತದ ಅಗತ್ಯವಿದ್ದು, ರಕ್ತ ನೀಡುವುದಾಗಿ ನಂಬಿಸಿ ಮೋಸ ಮಾಡಿ, ಆ ಮೂಲಕ ಪ್ರಾಣ ಕಳೆದುಕೊಳ್ಳುವ ಪ್ರಕರಣಗಳನ್ನು ತಡೆಗಟ್ಟಬೇಕಿದೆ, ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. &#8220;ಈ ಹಿನ್ನೆಲೆಯಲ್ಲಿ ಯಾರಾದರೂ ರಕ್ತ ನೀಡುವುದಾಗಿ ತಿಳಿಸಿ ಪ್ರಯಾಣ ವೆಚ್ಚಗಳನ್ನು ಭರಿಸಲು ಹಣ ಕೇಳಿದರೆ ದಯಮಾಡಿ ಯಾರೂ ಆ ವ್ಯಕ್ತಿ ರಕ್ತದಾನ ಮಾಡಲು ಸ್ಥಳಕ್ಕೆ ಬರುವವರೆಗೂ ಹಣ ನೀಡಬೇಡಿ ಎಂದು ಕುಟುಂಬಸ್ಥರಿಗೆ ತಿಳಿಸುತ್ತಿದ್ದೇವೆ. ರಕ್ತದಾನ ಪೂರ್ಣಗೊಂಡ ನಂತರ ಮಾತ್ರ ಮುಂದಿನ ಕೆಲಸಗಳನ್ನು ಮುಂದುವರೆಸುವಂತೆ ಅರಿವು ಮೂಡಿಸುತ್ತಿದ್ದೇವೆ,&#8221; ಎಂದು ವಿವರಿಸಿದ್ದಾರೆ.</p>
<p>ಸುದ್ದಿ ಮೂಲ: ಬೆಂಗಳೂರು ಮಿರರ್</p>
<p><img loading="lazy" decoding="async" class="aligncenter size-large wp-image-85007" src="https://www.justkannada.in/wp-content/uploads/2022/01/shepav-logo-1024x284.jpg" alt="" width="696" height="193" srcset="https://www.justkannada.in/wp-content/uploads/2022/01/shepav-logo-1024x284.jpg 1024w, https://www.justkannada.in/wp-content/uploads/2022/01/shepav-logo-600x166.jpg 600w, https://www.justkannada.in/wp-content/uploads/2022/01/shepav-logo-300x83.jpg 300w, https://www.justkannada.in/wp-content/uploads/2022/01/shepav-logo-768x213.jpg 768w, https://www.justkannada.in/wp-content/uploads/2022/01/shepav-logo-1536x426.jpg 1536w, https://www.justkannada.in/wp-content/uploads/2022/01/shepav-logo-2048x568.jpg 2048w, https://www.justkannada.in/wp-content/uploads/2022/01/shepav-logo-696x193.jpg 696w" sizes="auto, (max-width: 696px) 100vw, 696px" /></p>
<p>Key words: Increasing-blood -donation -scandals -Bangalore</p>
<p>The post <a href="https://www.justkannada.in/increasing-blood-donation-scandals-bangalore/">ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ರಕ್ತದಾನದ ಹಗರಣಗಳು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ನಾಲ್ವರ ಜೀವ ಉಳಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ.</title>
		<link>https://www.justkannada.in/mandya-young-man-death-organ-donation/</link>
		
		<dc:creator><![CDATA[JK Desk]]></dc:creator>
		<pubDate>Thu, 11 Nov 2021 06:05:51 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[death]]></category>
		<category><![CDATA[donation]]></category>
		<category><![CDATA[mandya]]></category>
		<category><![CDATA[organ]]></category>
		<category><![CDATA[young man]]></category>
		<guid isPermaLink="false">https://www.justkannada.in/?p=79915</guid>

					<description><![CDATA[<p>ಮಂಡ್ಯ,ನವೆಂಬರ್,11,2021(www.justkannada.in): ತೆಂಗಿನ ಮರದಿಂದ ಕೆಳಗೆ ಬಿದ್ದು ಗಾಯಗೊಂಡು ಮೆದುಳು ನಿಷ್ಕ್ರಿಯವಾದ ಹಿನ್ನೆಲೆ ಅಂಗಾಗ ದಾನ ಮಾಡುವ ಮೂಲಕ  ಯುವಕನೊಬ್ಬ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮಂಡ್ಯ ಜಿಲ್ಲೆ ತೂಬಿನಕೆರೆಯ ಹನುಮಂತು ಪೂರ್ಣಿಮಾ ದಂಪತಿ ಪುತ್ರ ಹೇಮಂತ ಕುಮಾರ್ (27)  ತೆಂಗಿನ ಮರದಿಂದ ಬಿದ್ದು ಗಾಯಗೊಂಡಿದ್ದ ಯುವಕ. ರೈತರಾಗಿದ್ದ ಹೇಮಂತ್ ಕುಮಾರ್ ಕಳೆದ ಗುರುವಾರ ಮರದಿಂದ ಬಿದ್ದಿದ್ದರು. ಹೇಮಂತ್ ಕುಮಾರ್ ರನ್ನ ಖಾಸಗಿ ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಆದರೆ ಹೇಮಂತ್ ಕುಮಾರ್  ಮೆದಳು ನಿಷ್ಕ್ರಿಯವಾಗಿದ್ದು ಈ ಹಿನ್ನೆಲೆಯಲ್ಲಿ ಯುವಕನ ಅಂಗಾಗ ದಾನ [&#8230;]</p>
<p>The post <a href="https://www.justkannada.in/mandya-young-man-death-organ-donation/">ನಾಲ್ವರ ಜೀವ ಉಳಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮಂಡ್ಯ,ನವೆಂಬರ್,11,2021(<a href="https://www.justkannada.in">www.justkannada.in</a>):</strong> ತೆಂಗಿನ ಮರದಿಂದ ಕೆಳಗೆ ಬಿದ್ದು ಗಾಯಗೊಂಡು ಮೆದುಳು ನಿಷ್ಕ್ರಿಯವಾದ ಹಿನ್ನೆಲೆ ಅಂಗಾಗ ದಾನ ಮಾಡುವ ಮೂಲಕ  ಯುವಕನೊಬ್ಬ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಮಂಡ್ಯ ಜಿಲ್ಲೆ ತೂಬಿನಕೆರೆಯ ಹನುಮಂತು ಪೂರ್ಣಿಮಾ ದಂಪತಿ ಪುತ್ರ ಹೇಮಂತ ಕುಮಾರ್ (27)  ತೆಂಗಿನ ಮರದಿಂದ ಬಿದ್ದು ಗಾಯಗೊಂಡಿದ್ದ ಯುವಕ. ರೈತರಾಗಿದ್ದ ಹೇಮಂತ್ ಕುಮಾರ್ ಕಳೆದ ಗುರುವಾರ ಮರದಿಂದ ಬಿದ್ದಿದ್ದರು. ಹೇಮಂತ್ ಕುಮಾರ್ ರನ್ನ ಖಾಸಗಿ ಆಸ್ಪತ್ರೆಗೆ  ದಾಖಲಿಸಲಾಗಿತ್ತು.<img loading="lazy" decoding="async" class="aligncenter size-full wp-image-69086" src="https://www.justkannada.in/wp-content/uploads/2021/06/ramesh-jarkiholi.jpg" alt="" width="552" height="366" /></p>
<p>ಆದರೆ ಹೇಮಂತ್ ಕುಮಾರ್  ಮೆದಳು ನಿಷ್ಕ್ರಿಯವಾಗಿದ್ದು ಈ ಹಿನ್ನೆಲೆಯಲ್ಲಿ ಯುವಕನ ಅಂಗಾಗ ದಾನ ಮಾಡಲಾಗಿದೆ. ಹೃದಯದ ಕವಾಟ, 2 ಕಿಡ್ನಿ, 1 ಲಿವರ್ ದಾನ ಮಾಡಲಾಗಿದ್ದು ಈ ಮೂಲಕ ಯುವಕ ಹೇಮಂತ್ ಕುಮಾರ್ ನಾಲ್ವರ ಜೀವ ಉಳಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>Key words: mandya- young man –death- Organ -donation</p>
<p>ENGLISH SUMMARY&#8230;</p>
<p>A youth sets example for others by donating organs post death<br />
Mandya, November 11, 2021 (www.justkannada.in): A youth lost his life after falling from a coconut tree. His family members have set an example by donating his organs as per his wish.<br />
The incident took place at Toobinakere Village, in Mandya District. The deceased is identified as Hemanth Kumar (27), son of Hanumanthu and Poornima couple. On Thursday, he fell from the coconut tree and was hospitalized.<img loading="lazy" decoding="async" class="aligncenter size-full wp-image-71213" src="https://www.justkannada.in/wp-content/uploads/2021/07/death-1.jpg" alt="" width="650" height="431" /><br />
Following confirmation by the doctors about his brain dysfunction, the family members decided to donate his organs. Accordingly, the heart, two kidneys and a liver were donated. Thus the deceased Hemanth Kumar has given life to four people and has set an example for all others to follow.<br />
Keywords: Organ donation/ Mandya District/ example/ youth falls from coconut tree</p>
<p>The post <a href="https://www.justkannada.in/mandya-young-man-death-organ-donation/">ನಾಲ್ವರ ಜೀವ ಉಳಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಅಂಗಾಂಗ ದಾನಕ್ಕೆ ನಾನು ಸಹಿ ಹಾಕುತ್ತಿದ್ದೇನೆ. ನೀವೂ ಹಾಕಿ-ಸಿಎಂ ಬಸವರಾಜ ಬೊಮ್ಮಾಯಿ ಕರೆ.</title>
		<link>https://www.justkannada.in/cm-basavaraj-bommai-udupi-organ-donation/</link>
		
		<dc:creator><![CDATA[JK Desk]]></dc:creator>
		<pubDate>Fri, 13 Aug 2021 06:10:34 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[CM –Basavaraj bommai]]></category>
		<category><![CDATA[donation]]></category>
		<category><![CDATA[organ]]></category>
		<category><![CDATA[udupi]]></category>
		<guid isPermaLink="false">https://www.justkannada.in/?p=72933</guid>

					<description><![CDATA[<p>ಉಡುಪಿ,ಆಗಸ್ಟ್,13,2021(www.justkannada.in) ಇಂದು  ವಿಶ್ವ ಅಂಗಾಂಗ ದಾನ ದಿನ ಹಿನ್ನೆಲೆ ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ. ಇತರರೂ ಸಹಿ ಹಾಕಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದರು. ಉಡುಪಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹೆಚ್ಚಿನ ಜನರು ಅಂಗಾಂಗ ದಾನಕ್ಕೆ ಮುಂದಾಗಬೇಕು. ಇದರಿಂದಾಗಿ ಸಾವಿರಾರು ಜನರ ಜೀವ ಉಳಿಸಬಹುದು. ಇತ್ತೀಚಿಗೆ ಅಂಗಾಂಗ ಕಸಿ ಮಾಡುವ ತಂತ್ರಜ್ಞಾನ ಬಂದಿದೆ. ಅದು ಯಶಸ್ವಿಯಾಗುತ್ತಿದೆ. ನಮ್ಮಿಂದ ಇನ್ನೊಂದು ಜೀವ ಉಳಿಸಲು ಸಾಧ್ಯವಿದ್ದರೆ ಅದನ್ನು ಯಾಕೆ ಮಾಡಬಾರದು. ಎಲ್ಲರೂ ಕೂಡ [&#8230;]</p>
<p>The post <a href="https://www.justkannada.in/cm-basavaraj-bommai-udupi-organ-donation/">ಅಂಗಾಂಗ ದಾನಕ್ಕೆ ನಾನು ಸಹಿ ಹಾಕುತ್ತಿದ್ದೇನೆ. ನೀವೂ ಹಾಕಿ-ಸಿಎಂ ಬಸವರಾಜ ಬೊಮ್ಮಾಯಿ ಕರೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಉಡುಪಿ,ಆಗಸ್ಟ್,13,2021(www.justkannada.in)</strong><strong> </strong>ಇಂದು  ವಿಶ್ವ ಅಂಗಾಂಗ ದಾನ ದಿನ ಹಿನ್ನೆಲೆ ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ. ಇತರರೂ ಸಹಿ ಹಾಕಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದರು.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಉಡುಪಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹೆಚ್ಚಿನ ಜನರು ಅಂಗಾಂಗ ದಾನಕ್ಕೆ ಮುಂದಾಗಬೇಕು. ಇದರಿಂದಾಗಿ ಸಾವಿರಾರು ಜನರ ಜೀವ ಉಳಿಸಬಹುದು. ಇತ್ತೀಚಿಗೆ ಅಂಗಾಂಗ ಕಸಿ ಮಾಡುವ ತಂತ್ರಜ್ಞಾನ ಬಂದಿದೆ. ಅದು ಯಶಸ್ವಿಯಾಗುತ್ತಿದೆ. ನಮ್ಮಿಂದ ಇನ್ನೊಂದು ಜೀವ ಉಳಿಸಲು ಸಾಧ್ಯವಿದ್ದರೆ ಅದನ್ನು ಯಾಕೆ ಮಾಡಬಾರದು. ಎಲ್ಲರೂ ಕೂಡ ಈ ಕುರಿತು ಸಂಕಲ್ಪ ಮಾಡೋಣ. ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ. ಇತರರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಹಿ ಹಾಕಬೇಕೆಂದು ಕರೆ ಕೊಡುತ್ತೇನೆ ಎಂದು ಹೇಳಿದ್ದಾರೆ.</p>
<p>ರಾಜ್ಯದಲ್ಲಿ ಕೊರೋನಾ 3ನೇ ಭೀತಿ ಅಲೆ ಹಿನ್ನೆಲೆ  ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬೆಂಗಳೂರಿಗೆ ಹೋದ ನಂತರ ಇಂದೇ ತಜ್ಞರ ತುರ್ತು ಸಭೆ ಕರೆಯುತ್ತೇನೆ.  ತಜ್ಞರು ನೀಡುವ ವರದಿ ಆಧಾರಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ನಿಯಂತ್ರಣಕ್ಕೆ ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.</p>
<p>ENGLISH SUMMARY&#8230;</p>
<p>&#8220;I promise to donate my organs, you also do so: CM Bommai<br />
Udupi, August 13, 2021 (www.justkannada.in): Chief Minister Basavaraj Bommai announced that he has signed a document to donate his organs and called the citizens also to do so.<img loading="lazy" decoding="async" class="aligncenter size-full wp-image-72253" src="https://www.justkannada.in/wp-content/uploads/2021/08/mekedatu-plan-work-start-cm-basavaraja-bommai-tong-annamalai.jpg" alt="" width="696" height="391" /><br />
Speaking to the media persons in Udupi today on the occasion of &#8216;World Organs Day,&#8217; he said that more people should come forward to donate organs. &#8220;It can save thousands of people. Organ transplant technology has developed a lot these days and the majority of the cases are successful. If some other&#8217;s life could be saved by us why shouldn&#8217;t we step forward? Let us all pledge to donate organs. I have signed the document today and request all others to do so,&#8221; he said.<br />
In his reply about the COVID-19 Pandemic 3rd wave, the Chief Minister informed that he would conduct an emergency meeting as soon as he returns to Bengaluru. &#8220;We will take measures as per the expert&#8217;s opinion,&#8221; he added.<br />
Keywords: Chief Minister Basavaraj Bommai/ World Organ Day/ donate</p>
<p>Key words: cm basavaraj bommai-udupi- organ –donation</p>
<p>&nbsp;</p>
<p>The post <a href="https://www.justkannada.in/cm-basavaraj-bommai-udupi-organ-donation/">ಅಂಗಾಂಗ ದಾನಕ್ಕೆ ನಾನು ಸಹಿ ಹಾಕುತ್ತಿದ್ದೇನೆ. ನೀವೂ ಹಾಕಿ-ಸಿಎಂ ಬಸವರಾಜ ಬೊಮ್ಮಾಯಿ ಕರೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>“ನಾಳೆ ಬಹು ನಿರೀಕ್ಷಿತ ರಾಜ್ಯ ಬಜೆಟ್ ಮಂಡನೆ” : ಮೈಸೂರಿನ ಅಭಿವೃದ್ಧಿಗೆ ಸಿಗಲಿದೆಯ ಬಂಪರ್ ಕೊಡುಗೆ</title>
		<link>https://www.justkannada.in/tomorrow-multiple-prospects-state-management-budget-presentation-mysore-development-get-it-bumper-donation/</link>
		
		<dc:creator><![CDATA[JK Desk]]></dc:creator>
		<pubDate>Sun, 07 Mar 2021 05:26:27 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA["bumper"]]></category>
		<category><![CDATA[budget]]></category>
		<category><![CDATA[development]]></category>
		<category><![CDATA[donation]]></category>
		<category><![CDATA[get it]]></category>
		<category><![CDATA[Management]]></category>
		<category><![CDATA[Multiple]]></category>
		<category><![CDATA[Mysore.]]></category>
		<category><![CDATA[Presentation.]]></category>
		<category><![CDATA[prospects]]></category>
		<category><![CDATA[State]]></category>
		<category><![CDATA[Tomorrow]]></category>
		<guid isPermaLink="false">https://www.justkannada.in/?p=58399</guid>

					<description><![CDATA[<p>ಮೈಸೂರು,ಮಾರ್ಚ್,07,2021(www.justkannada.in) : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ 12ಗಂಟೆಗೆ ಆಯವ್ಯಯ ಮಂಡಿಸಲಿದ್ದು, ಸಿಎಂ ಬಿ.ಎಸ್.ವೈ ಅಧಿಕಾರಕ್ಕೆ ಬಂದ ಬಳಿಕ ಎರಡನೇ ಬಜೆಟ್ ಆಗಿದೆ. ಈ ಬಾರಿ ಬಜೆಟ್ ನಲ್ಲಿ ಆದಾಯ ಕೊರತೆ ಸಾಧ್ಯತೆಯಿದೆ.ರೈತರ ಹೋರಾಟ ಹಿನ್ನಲೆ, ಕೃಷಿ ಮಾರುಕಟ್ಟೆಗೆ ನೂತನ ಯೋಜನೆ ಸಾಧ್ಯತೆ. ಕೃಷಿ ಮೂಲಸೌಕರ್ಯ ವೃದ್ಧಿಗೆ ಈ ಬಾರಿ ಬಜೆಟ್ ನಲ್ಲಿ ಹೆಚ್ಚು ಒತ್ತು. ಪ್ರತಿ ತಾಲೂಕಿನಲ್ಲಿ ಗೋ ಶಾಲೆ ಆರಂಭಿಸಲು ಆರ್ಥಿಕ ನೆರವು. ಪೆಟ್ರೋಲ್ ಡೀಸೆಲ್ ಮೇಲಿನ ಸುಂಕ ಇಳಿಕೆ ಡೌಟ್?, ಜನರ ನಿರೀಕ್ಷೆ ತಕ್ಕ [&#8230;]</p>
<p>The post <a href="https://www.justkannada.in/tomorrow-multiple-prospects-state-management-budget-presentation-mysore-development-get-it-bumper-donation/">“ನಾಳೆ ಬಹು ನಿರೀಕ್ಷಿತ ರಾಜ್ಯ ಬಜೆಟ್ ಮಂಡನೆ” : ಮೈಸೂರಿನ ಅಭಿವೃದ್ಧಿಗೆ ಸಿಗಲಿದೆಯ ಬಂಪರ್ ಕೊಡುಗೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಮಾರ್ಚ್,07,2021(www.justkannada.in)</strong> : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ 12ಗಂಟೆಗೆ ಆಯವ್ಯಯ ಮಂಡಿಸಲಿದ್ದು, ಸಿಎಂ ಬಿ.ಎಸ್.ವೈ ಅಧಿಕಾರಕ್ಕೆ ಬಂದ ಬಳಿಕ ಎರಡನೇ ಬಜೆಟ್ ಆಗಿದೆ. ಈ ಬಾರಿ ಬಜೆಟ್ ನಲ್ಲಿ ಆದಾಯ ಕೊರತೆ ಸಾಧ್ಯತೆಯಿದೆ.<img loading="lazy" decoding="async" class="aligncenter  wp-image-53142" src="https://www.justkannada.in/wp-content/uploads/2021/01/jk.jpg" alt="jk" width="321" height="321" />ರೈತರ ಹೋರಾಟ ಹಿನ್ನಲೆ, ಕೃಷಿ ಮಾರುಕಟ್ಟೆಗೆ ನೂತನ ಯೋಜನೆ ಸಾಧ್ಯತೆ. ಕೃಷಿ ಮೂಲಸೌಕರ್ಯ ವೃದ್ಧಿಗೆ ಈ ಬಾರಿ ಬಜೆಟ್ ನಲ್ಲಿ ಹೆಚ್ಚು ಒತ್ತು. ಪ್ರತಿ ತಾಲೂಕಿನಲ್ಲಿ ಗೋ ಶಾಲೆ ಆರಂಭಿಸಲು ಆರ್ಥಿಕ ನೆರವು. ಪೆಟ್ರೋಲ್ ಡೀಸೆಲ್ ಮೇಲಿನ ಸುಂಕ ಇಳಿಕೆ ಡೌಟ್?, ಜನರ ನಿರೀಕ್ಷೆ ತಕ್ಕ ಬಜೆಟ್ ಸಿಎಂ ನೀಡಲಿದ್ದಾರೆ.</p>
<p><img loading="lazy" decoding="async" class="aligncenter  wp-image-54204" src="https://www.justkannada.in/wp-content/uploads/2021/01/64900aca-935c-4921-be56-507baad156bd-10-244x300.jpg" alt="Tomorrow-Multiple-prospects-State-Management-Budget-Presentation-Mysore-Development-get it-Bumper-Donation " width="395" height="486" /></p>
<p>ಕಳೆಗುಂದಿರುವ  ಪ್ರವಾಸೋದ್ಯಮಕ್ಕೆ ನೀಡುತ್ತಾರ ಟಾನಿಕ್. ಮೈಸೂರಿನ  ಶಾಸಕರು, ಸಂಸದರ ಒತ್ತಾಯದಂತೆ ನೀರು ಸರಬರಾಜು ಮತ್ತು ಜಲ ಮಂಡಳಿ ನಿರ್ಮಾಣಕ್ಕೆ ಬಜೆಟ್ ನಲ್ಲಿ ಉತ್ತರ ಸಿಗಲಿದೆಯೇ?, ಈ ಬಾರಿಯ ರಾಜ್ಯ ಬಜೆಟ್ ಕುತೂಹಲಕ್ಕೆ ಕಾರಣವಾಗಿದೆ.</p>
<p>key words : Tomorrow-Multiple-prospects-State-Management-Budget-Presentation-Mysore-Development-get it-Bumper-Donation</p>
<p>The post <a href="https://www.justkannada.in/tomorrow-multiple-prospects-state-management-budget-presentation-mysore-development-get-it-bumper-donation/">“ನಾಳೆ ಬಹು ನಿರೀಕ್ಷಿತ ರಾಜ್ಯ ಬಜೆಟ್ ಮಂಡನೆ” : ಮೈಸೂರಿನ ಅಭಿವೃದ್ಧಿಗೆ ಸಿಗಲಿದೆಯ ಬಂಪರ್ ಕೊಡುಗೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>“ಚಾಲೆಂಜಿಂಗ್ ಸ್ಟಾರ್ ದರ್ಶನ್ ಜನ್ಮದಿನ ; ಅಭಿಮಾನಿಗಳಿಂದ ರಕ್ತದಾನ”</title>
		<link>https://www.justkannada.in/challengingstardarshanbirthdayblooddonationfans/</link>
		
		<dc:creator><![CDATA[JK Desk]]></dc:creator>
		<pubDate>Tue, 16 Feb 2021 10:35:58 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[birthday]]></category>
		<category><![CDATA[blood]]></category>
		<category><![CDATA[Challenging]]></category>
		<category><![CDATA[darshan]]></category>
		<category><![CDATA[donation]]></category>
		<category><![CDATA[Fans]]></category>
		<category><![CDATA[Star]]></category>
		<guid isPermaLink="false">https://www.justkannada.in/?p=56576</guid>

					<description><![CDATA[<p>ಮೈಸೂರು,ಫೆಬ್ರವರಿ,16,2021(www.justkannada.in) : ಚಲನಚಿತ್ರನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 44ನೇ ಜನ್ಮದಿನದ ಪ್ರಯುಕ್ತ ದರ್ಶನ್ ಅಭಿಮಾನಿಗಳು ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡುವ ಮುಖಾಂತರ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಇದೇ ಸಂಧರ್ಭದಲ್ಲಿ ಸಿದ್ದಾರ್ಥ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಸವರಾಜು  ಮಾತನಾಡಿ, ಹಾರ, ಶಾಲು ಹಾಗೂ ಕೇಕಿಗೆ  ಹಣವನ್ನು ದುಂದು ವೆಚ್ಚ ಮಾಡಿ ಹಣವನ್ನು ಪೋಲು ಮಾಡುವುದರ ಬದಲು ರಕ್ತ ಧಾನ ಮಾಡುವ ಮುಖಾಂತರ ಅನೇಕ ಜನರಿಗೆ ಜೀವ ಉಳಿಸುವ ಕಾರ್ಯವನ್ನು ದರ್ಶನ್ ಅಭಿಮಾನಿ [&#8230;]</p>
<p>The post <a href="https://www.justkannada.in/challengingstardarshanbirthdayblooddonationfans/">“ಚಾಲೆಂಜಿಂಗ್ ಸ್ಟಾರ್ ದರ್ಶನ್ ಜನ್ಮದಿನ ; ಅಭಿಮಾನಿಗಳಿಂದ ರಕ್ತದಾನ”</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಫೆಬ್ರವರಿ,16,2021(www.justkannada.in)</strong> : ಚಲನಚಿತ್ರನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 44ನೇ ಜನ್ಮದಿನದ ಪ್ರಯುಕ್ತ ದರ್ಶನ್ ಅಭಿಮಾನಿಗಳು ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡುವ ಮುಖಾಂತರ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.<img loading="lazy" decoding="async" class="aligncenter  wp-image-53142" src="https://www.justkannada.in/wp-content/uploads/2021/01/jk.jpg" alt="jk" width="369" height="369" />ಇದೇ ಸಂಧರ್ಭದಲ್ಲಿ ಸಿದ್ದಾರ್ಥ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಸವರಾಜು  ಮಾತನಾಡಿ, ಹಾರ, ಶಾಲು ಹಾಗೂ ಕೇಕಿಗೆ  ಹಣವನ್ನು ದುಂದು ವೆಚ್ಚ ಮಾಡಿ ಹಣವನ್ನು ಪೋಲು ಮಾಡುವುದರ ಬದಲು ರಕ್ತ ಧಾನ ಮಾಡುವ ಮುಖಾಂತರ ಅನೇಕ ಜನರಿಗೆ ಜೀವ ಉಳಿಸುವ ಕಾರ್ಯವನ್ನು ದರ್ಶನ್ ಅಭಿಮಾನಿ ಬಳಗದವರು ಅರ್ಥಪೂರ್ಣವಾಗಿ ಮಾಡುತ್ತಿದ್ದಾರೆ. ರಕ್ತದಾನ ಮಾಡಿ ಅನೇಕ ಜನರಿಗೆ ಜೀವ ಉಳಿಸುವ ಕಾರ್ಯ ಮುಂದುವರೆಯಲಿ ಎಂದರು.</p>
<p>ಲಯನ್ಸ್ ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಲಯನ್ ಗಿರೀಶ್ ಮಾತನಾಡಿ, ಯುವಕರು ಹೆಚ್ಚಾಗಿ ರಕ್ತ ನೀಡಿದರೆ ಅನೇಕ ಜೀವಗಳು ಉಳಿಯುತ್ತವೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಜೀವ ಉಳಿಸುವುದಕ್ಕಿಂದ ಬೇರೆ ಇನ್ನು ಯಾವ ಕೆಲಸವು ಒಳ್ಳೆಯದಲ್ಲ ಎಂದು ಹೇಳಿದರು.</p>
<p><img loading="lazy" decoding="async" class="aligncenter  wp-image-56580" src="https://www.justkannada.in/wp-content/uploads/2021/02/16-300x167.jpg" alt="" width="467" height="260" />ಈ ಕಾರ್ಯಕ್ರಮದಲ್ಲಿ ಬಿಜೆಪಿ ಎನ್.ಆರ್.ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ.ಲೋಹಿತ್, ಬಿಜೆಪಿ ಮುಖಂಡ ಜೆ.ಪಿ.ಜಯಪ್ರಕಾಶ್, ಸಮಾಜ ಸೇವಕ ಸುಚಿಂದ್ರ, ಅಭಿಮಾನಿ ಬಳಗದ ಅಧ್ಯಕ್ಷ ನವೀನ್, ರಾಘವೇಂದ್ರ, ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದ ವ್ಯವಸ್ಥಾಪಕ ಸ್ಯಾಮ್ಯುವೆಲ್ ವಿಲ್ಸನ್, ಮಮತಾ ಮುಂತಾದವರು ಭಾಗವಹಿಸಿದ್ದರು.</p>
<p>key words :  <span lang="en">Challenging-Star-Darshan-Birthday-Blood-donation-fans </span></p>
<p>The post <a href="https://www.justkannada.in/challengingstardarshanbirthdayblooddonationfans/">“ಚಾಲೆಂಜಿಂಗ್ ಸ್ಟಾರ್ ದರ್ಶನ್ ಜನ್ಮದಿನ ; ಅಭಿಮಾನಿಗಳಿಂದ ರಕ್ತದಾನ”</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಪ್ರವಾಹ ಪೀಡಿತ ಸ್ಥಳಗಳಲ್ಲಿ ಗೋವುಗಳನ್ನು ಪೋಷಿಸಲು ಮುಂದಾದ ಸಮಾನ ಮನಸ್ಕರು: ಆಸಕ್ತರು ಕೈ ಜೋಡಿಸಲು ಮನವಿ</title>
		<link>https://www.justkannada.in/care-for-cows-donation-flood-areas/</link>
		
		<dc:creator><![CDATA[JK Desk]]></dc:creator>
		<pubDate>Thu, 22 Aug 2019 14:06:28 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[care for cows]]></category>
		<category><![CDATA[donation]]></category>
		<category><![CDATA[flood-areas]]></category>
		<guid isPermaLink="false">https://www.justkannada.in/?p=10342</guid>

					<description><![CDATA[<p>&#160; ಬೆಂಗಳೂರು, ಆ.22, 2019 : (www.justkannada.in news) : ಉತ್ತರ ಕರ್ನಾಟಕದಲ್ಲಿ ಇತ್ತೀಚಿನ ಪ್ರವಾಹದಿಂದ ಜನಗಳಷ್ಟೇ ಅಲ್ಲಾ ಪ್ರಾಣಿಗಳು ಸಹ ಪರಿತಪಿಸುತ್ತಿವೆ. ಈ ಪ್ರವಾಹದಿಂದ ತೊಂದರೆಗೆ ಒಳಗಾದ ಗೋವುಗಳ ಹಾರೈಕೆಗೆ ಕೆಲ ಸಮಾನ ಮನಸ್ಕರು ಮುಂದಾಗಿದ್ದಾರೆ. ಪರಿಹಾರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಈ ಸಮಾನ ಮನಸ್ಕರು, ಮುಂದಿನ ಒಂದು ತಿಂಗಳು 200 ಗೋವುಗಳನ್ನು ಪೋಷಿಸಲು ಅವರು ಯೋಜಿಸುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಸುಮಾರು ರೂ .2,00,000 / &#8211; ಅಗತ್ಯವಿದೆ. 50 ಕೆಜಿ ಆಹಾರದ ಒಂದು ಚೀಲಕ್ಕೆ ರೂ [&#8230;]</p>
<p>The post <a href="https://www.justkannada.in/care-for-cows-donation-flood-areas/">ಪ್ರವಾಹ ಪೀಡಿತ ಸ್ಥಳಗಳಲ್ಲಿ ಗೋವುಗಳನ್ನು ಪೋಷಿಸಲು ಮುಂದಾದ ಸಮಾನ ಮನಸ್ಕರು: ಆಸಕ್ತರು ಕೈ ಜೋಡಿಸಲು ಮನವಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಬೆಂಗಳೂರು, ಆ.22, 2019 : (www.justkannada.in news) : ಉತ್ತರ ಕರ್ನಾಟಕದಲ್ಲಿ ಇತ್ತೀಚಿನ ಪ್ರವಾಹದಿಂದ ಜನಗಳಷ್ಟೇ ಅಲ್ಲಾ ಪ್ರಾಣಿಗಳು ಸಹ ಪರಿತಪಿಸುತ್ತಿವೆ. ಈ ಪ್ರವಾಹದಿಂದ ತೊಂದರೆಗೆ ಒಳಗಾದ ಗೋವುಗಳ ಹಾರೈಕೆಗೆ ಕೆಲ ಸಮಾನ ಮನಸ್ಕರು ಮುಂದಾಗಿದ್ದಾರೆ.</p>
<p>ಪರಿಹಾರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಈ ಸಮಾನ ಮನಸ್ಕರು, ಮುಂದಿನ ಒಂದು ತಿಂಗಳು 200 ಗೋವುಗಳನ್ನು ಪೋಷಿಸಲು ಅವರು ಯೋಜಿಸುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಸುಮಾರು ರೂ .2,00,000 / &#8211; ಅಗತ್ಯವಿದೆ. 50 ಕೆಜಿ ಆಹಾರದ ಒಂದು ಚೀಲಕ್ಕೆ ರೂ .1000 / &#8211; ವೆಚ್ಚವಾಗಲಿದೆ . ಈ ಒಂದು ಚೀಲವು ಒಂದು ಗೋವಿನ ತಿಂಗಳ ಆಹಾರದ ಅವಶ್ಯಕತೆಯನ್ನು ಪೂರೈಸುತ್ತದೆ.</p>
<p>ಪರಿಹಾರ ಕಾರ್ಯಗಳಿಗಾಗಿ ನಿಮ್ಮಲ್ಲಿ ಅನೇಕರು ಈಗಾಗಲೇ ಕೊಡುಗೆ ನೀಡಿದ್ದೀರ. ಆದರೆ ಈ ಮುಗ್ಧ ಪ್ರಾಣಿಗಳ ಬಗ್ಗೆ ನಿಮ್ಮ ಔದಾರ್ಯವನ್ನು ತೋರಿಸಲು ವಿನಂತಿಸಿದ್ದಾರೆ. ಪ್ರತಿಯೊಂದು ರೂಪಾಯಿಗೂ ಲೆಕ್ಕ ಇಡಲಾಗುವುದು ಮತ್ತು ಪರಿಹಾರದ ಚಿತ್ರಗಳನ್ನು/ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.</p>
<p>ಈ ಸಂಖ್ಯೆಗೆ ನೀವು PayTM ಅಥವಾ GPay ಮೂಲಕ ಕೊಡುಗೆ ನೀಡಬಹುದು: 9972744113. ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ &#8220;care for cows&#8221; ಅನ್ನು ನಮೂದಿಸಿ, ಇದರಿಂದ ಕೊಡುಗೆಯನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು.<br />
ಆಗಸ್ಟ್ 25 ರವರೆಗೆ ಈ ದೇಣಿಗೆ ಡ್ರೈವ್ ಅನ್ನು ನಡೆಸಲಾಗುತ್ತದೆ. ಆದ್ದರಿಂದ ನೀವು ಕೊಡುಗೆ ನೀಡಲು ಯೋಜಿಸುತ್ತಿದ್ದರೆ, ದಯವಿಟ್ಟು ಅದಕ್ಕೆ ಅನುಗುಣವಾಗಿ ಯೋಜಿಸಿ. ನೀವು ಕೊಡುಗೆಯ ನಂತರ ದಯವಿಟ್ಟು ತಿಳಿಸಿ.</p>
<p>ಸ್ಥಳ: ಜೀರಗಿವಾಡ ಗ್ರಾಮ, ಧಾರವಾಡ ಜಿಲ್ಲೆ.<br />
ಆಹಾರ: ೫೦ ಕೆ ಜಿ ಚೀಲ , ಗೋದ್ರೆಜ್ ಕಂಪನಿಯದ್ದು.<br />
ಧನ್ಯವಾದಗಳು,<br />
ಚಂದನ್</p>
<p>key words : care for cows-donation-flood-areas</p>
<p>The post <a href="https://www.justkannada.in/care-for-cows-donation-flood-areas/">ಪ್ರವಾಹ ಪೀಡಿತ ಸ್ಥಳಗಳಲ್ಲಿ ಗೋವುಗಳನ್ನು ಪೋಷಿಸಲು ಮುಂದಾದ ಸಮಾನ ಮನಸ್ಕರು: ಆಸಕ್ತರು ಕೈ ಜೋಡಿಸಲು ಮನವಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
