<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Meeting of Nodal Officers on allocation of SCP/ TSP grant under the leadership of Minister Dr. HC Mahadevappa Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/meeting-of-nodal-officers-on-allocation-of-scp-tsp-grant-under-the-leadership-of-minister-dr-hc-mahadevappa/feed/" rel="self" type="application/rss+xml" />
	<link>https://www.justkannada.in/tag/meeting-of-nodal-officers-on-allocation-of-scp-tsp-grant-under-the-leadership-of-minister-dr-hc-mahadevappa/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Wed, 26 Jul 2023 07:52:10 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Meeting of Nodal Officers on allocation of SCP/ TSP grant under the leadership of Minister Dr. HC Mahadevappa Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/meeting-of-nodal-officers-on-allocation-of-scp-tsp-grant-under-the-leadership-of-minister-dr-hc-mahadevappa/</link>
	<width>32</width>
	<height>32</height>
</image> 
	<item>
		<title>ಸಚಿವ ಡಾ.ಹೆಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ SCP/ TSP ಅನುದಾನದ ಹಂಚಿಕೆ ಕುರಿತ ನೋಡಲ್ ಅಧಿಕಾರಿಗಳ ಸಭೆ</title>
		<link>https://www.justkannada.in/meeting-of-nodal-officers-on-allocation-of-scp-tsp-grant-under-the-leadership-of-minister-dr-hc-mahadevappa/</link>
		
		<dc:creator><![CDATA[JK Desk]]></dc:creator>
		<pubDate>Wed, 26 Jul 2023 07:52:10 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Meeting of Nodal Officers on allocation of SCP/ TSP grant under the leadership of Minister Dr. HC Mahadevappa]]></category>
		<guid isPermaLink="false">https://www.justkannada.in/?p=110120</guid>

					<description><![CDATA[<p>ಬೆಂಗಳೂರು, ಜುಲೈ 26, 2023 (www.justkannada.in): ಬೆಂಗಳೂರಿನ ವಿಕಾಸಸೌಧದಲ್ಲಿ ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪನವರ ನೇತೃತ್ವದಲ್ಲಿ ಇಲಾಖೆಯ ಅಡಿಯಲ್ಲಿ ಬರುವ SCP/ TSP ಅನುದಾನದ ಹಂಚಿಕೆಯ ಕುರಿತಂತೆ ಜರುಗಿದ ನೋಡಲ್ ಅಧಿಕಾರಿಗಳ ಸಭೆಯು ಜರುಗಿತು. ಈ ಹಿಂದಿನ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ರೂಪಿಸಲಾದ SCP/TSP ಕಾಯ್ದೆಯ ಉದ್ದೇಶಕ್ಕೆ ಅನುಗುಣವಾಗಿ ಎಲ್ಲಾ ಇಲಾಖೆಗಳಲ್ಲಿ ಯಾವ ರೀತಿ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರಗತಿಯ ಸ್ಥಿತಿಗತಿ ಏನಾಗಿದೆ ಮತ್ತು ಪ್ರಗತಿಯ ಹಾದಿಯಲ್ಲಿ ಇಲಾಖೆಗಳು ಏನಾದರೂ ಕೊರತೆಗಳನ್ನು ಎದುರಿಸುತ್ತಿವೆಯೇ? ಎಂಬ ವಿಷಯಗಳ [&#8230;]</p>
<p>The post <a href="https://www.justkannada.in/meeting-of-nodal-officers-on-allocation-of-scp-tsp-grant-under-the-leadership-of-minister-dr-hc-mahadevappa/">ಸಚಿವ ಡಾ.ಹೆಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ SCP/ TSP ಅನುದಾನದ ಹಂಚಿಕೆ ಕುರಿತ ನೋಡಲ್ ಅಧಿಕಾರಿಗಳ ಸಭೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು, ಜುಲೈ 26, 2023 (www.justkannada.in):</strong> ಬೆಂಗಳೂರಿನ ವಿಕಾಸಸೌಧದಲ್ಲಿ ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪನವರ ನೇತೃತ್ವದಲ್ಲಿ ಇಲಾಖೆಯ ಅಡಿಯಲ್ಲಿ ಬರುವ SCP/ TSP ಅನುದಾನದ ಹಂಚಿಕೆಯ ಕುರಿತಂತೆ ಜರುಗಿದ ನೋಡಲ್ ಅಧಿಕಾರಿಗಳ ಸಭೆಯು ಜರುಗಿತು.</p>
<p>ಈ ಹಿಂದಿನ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ರೂಪಿಸಲಾದ SCP/TSP ಕಾಯ್ದೆಯ ಉದ್ದೇಶಕ್ಕೆ ಅನುಗುಣವಾಗಿ ಎಲ್ಲಾ ಇಲಾಖೆಗಳಲ್ಲಿ ಯಾವ ರೀತಿ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರಗತಿಯ ಸ್ಥಿತಿಗತಿ ಏನಾಗಿದೆ ಮತ್ತು ಪ್ರಗತಿಯ ಹಾದಿಯಲ್ಲಿ ಇಲಾಖೆಗಳು ಏನಾದರೂ ಕೊರತೆಗಳನ್ನು ಎದುರಿಸುತ್ತಿವೆಯೇ? ಎಂಬ ವಿಷಯಗಳ ಕುರಿತು ಮಾನ್ಯ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿದರು</p>
<p>ಸಭೆಯ ಆರಂಭದಲ್ಲೇ 7ಡಿ ಅನ್ನು ರದ್ದುಪಡಿಸಿರುವ ಸಂಗತಿಯನ್ನು ಎಲ್ಲಾ ಅಧಿಕಾರಿಗಳೂ ಗಮನದಲ್ಲಿ ಇಟ್ಟುಕೊಳ್ಳಬೇಕು, ಎಂದು ತಿಳಿಸಿದ ಸಚಿವರು ಇಲಾಖಾವಾರು ಉಪಸ್ಥಿತರಿದ್ದ ಅಧಿಕಾರಿಗಳಿಗೆ SCP/ TSP ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸದೇ ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡದ ಏಳಿಗೆಗೆ ಮಾತ್ರ ಬಳಸಬೇಕು ಎಂದು ತಿಳಿಸಿದರು.</p>
<p>ಜಲಜೀವನ್ ಮಿಷನ್ ನಲ್ಲಿ ಸಾಮಾನ್ಯವಾಗಿ  ಕೇಂದ್ರ ಸರ್ಕಾರದ 50% ಹಣ ಮತ್ತು ರಾಜ್ಯ ಸರ್ಕಾರದ 50% ಹಣ ಇದ್ದು ಈ ಪೈಕಿ ಜಲಜೀವನ್ ಮಿಷನ್ ನಲ್ಲಿ ರಾಜ್ಯದ ಹಣದ ಪಾಲು ಹೆಚ್ಚಾಗಿದ್ದು,  ಜನವರಿ ವೇಳೆಗೆ ಕೇಂದ್ರದಿಂದ ಅಗತ್ಯ ಅನುದಾನ ಪಡೆಯಬೇಕು. ಇಲ್ಲವಾದಲ್ಲಿ ಹೆಚ್ಚುವರಿಯಾಗಿ ನೀಡಲಾಗುತ್ತಿರುವ ಹಣವನ್ನು ಹಿಂಪಡೆಯಲಾಗುವುದು ಎಂದು ಸಚಿವರು ತಿಳಿಸಿದರು.</p>
<p>ಮೂಲಭೂತ ಸೌಕರ್ಯಗಳಾದ ರಸ್ತೆಗಳ ವಿಷಯದಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅದರ  ಗುಣಮಟ್ಟದ ಅವಧಿ 50 ವರ್ಷ ಇರಬೇಕು. ಹಾಗಿದ್ದಾಗ ಮಾತ್ರ ಪದೇ ಪದೇ ರಸ್ತೆಗಳ ಮೇಲೆ ಅನುದಾನವನ್ನು ಬಳಸುವುದು ತಪ್ಪುತ್ತದೆ ಮತ್ತು ಆ ಅನುದಾನವನ್ನು ಇತರೆ ಕೆಲಸಗಳಿಗೆ ಬಳಸಬಹುದು ಎಂದು ಸಚಿವರು ಅಭಿಪ್ರಾಯಪಟ್ಟರು.</p>
<p>ರಾಜ್ಯದ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಕಡ್ಡಾಯವಾಗಿ 100 ದಿನಗಳ ನರೇಗಾ ಕೆಲಸವನ್ನು ನೀಡಬೇಕು . ಆಗ ಅವರ ಬದುಕಲ್ಲಿ ಒಂದಷ್ಟು ಧನಾತ್ಮಕ ಬದಲಾವಣೆ ತರಬಹುದು ಎಂದರು.</p>
<p>ಇದೇ ವೇಳೆ ಉನ್ನತ ಶಿಕ್ಷಣ ಇಲಾಖೆಯಲ್ಲಿ  SCP/TSP ಕಾಯ್ದೆಯಡಿ ಬಳಸದೇ ಇರುವ ಅನುದಾನದ ಬಳಕೆಗೆ ಸೂಕ್ತ ಪ್ರಾಶಸ್ತ್ಯ ನೀಡಬೇಕು ಮತ್ತು ಹಾಸ್ಟೆಲ್ ಕಾಲೇಜುಗಳ ಮೂಲಸೌಕರ್ಯದ ಅಭಿವೃದ್ದಿಗೆ ಒತ್ತು ನೀಡಿ ಶಿಕ್ಷಣ ಕ್ಷೇತ್ರವನ್ನು ಬಲಪಡಿಸಬೇಕು ಎಂದು ಸಚಿವರು ಕಟ್ಟುನಿಟ್ಟಾಗಿ ಸೂಚಿಸಿದರು.</p>
<p>ಇನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳ ಶಾಲಾ ನೊಂದಣಿ ಪ್ರಮಾಣವು ನೆರೆಯ ರಾಜ್ಯಗಳಿಗಿಂತ ಕಡಿಮೆ ಇದ್ದು ನೊಂದಣಿಯ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.</p>
<p>ಇದೇ ವೇಳೆ ಆರ್ ಟಿ ಇ ಶಿಕ್ಷಣ ಕಾಯ್ದೆ ಅಡಿಯಲ್ಲಿ ಈಗ ಇರುವ 1 ರಿಂದ 8 ನೇ ತರಗತಿ ಶಿಕ್ಷಣದ ಪ್ರಮಾಣವನ್ನು 9 ರಿಂದ 10 ನೇ ತರಗತಿಗೆ ಏರಿಸಲು ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.</p>
<p>ಇದರ ಜೊತೆ ಕೃಷಿ, ಸಾರಿಗೆ, ಆಹಾರ ಮತ್ತು ನಾಗರೀಕ ಪೂರೈಕೆ ಹಾಗೂ ಇನ್ನೂ ಹಲವು ಇಲಾಖೆಗಳಲ್ಲಿ ಆಗುತ್ತಿರುವ ಪ್ರಗತಿಯ ಮಟ್ಟವನ್ನು ಪರಿಶೀಲಿಸಿದ ಸಚಿವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ  ಅನುದಾನದ ಹಂಚಿಕೆಯು ಸಮರ್ಪಕವಾಗಿ ಬಳಕೆಯಾಗಬೇಕು, ಇಲ್ಲದೇ ಹೋದಲ್ಲಿ ಆ ಅನುದಾನವನ್ನು ಹಿಂಪಡೆಯಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.</p>
<p>The post <a href="https://www.justkannada.in/meeting-of-nodal-officers-on-allocation-of-scp-tsp-grant-under-the-leadership-of-minister-dr-hc-mahadevappa/">ಸಚಿವ ಡಾ.ಹೆಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ SCP/ TSP ಅನುದಾನದ ಹಂಚಿಕೆ ಕುರಿತ ನೋಡಲ್ ಅಧಿಕಾರಿಗಳ ಸಭೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
