<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>m.lakshman Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/m-lakshman/feed/" rel="self" type="application/rss+xml" />
	<link>https://www.justkannada.in/tag/m-lakshman/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Wed, 08 Apr 2026 08:37:27 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>m.lakshman Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/m-lakshman/</link>
	<width>32</width>
	<height>32</height>
</image> 
	<item>
		<title>MYSORE: ನೀರಿನ ದರ ಏರಿಕೆ ವಿವಾದ – “ಅರ್ಧ ಪೈಸೆಗೆ ರಾಜಕೀಯ ಬೇಡ” ಎಂದು ಎಂ. ಲಕ್ಷ್ಮಣ್ ಕಿಡಿ</title>
		<link>https://www.justkannada.in/m-lakshman-2/</link>
		
		<dc:creator><![CDATA[mahesh]]></dc:creator>
		<pubDate>Wed, 08 Apr 2026 08:37:27 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[a half-paisa hike]]></category>
		<category><![CDATA[don’t politicize]]></category>
		<category><![CDATA[m.lakshman]]></category>
		<category><![CDATA[mysuru]]></category>
		<category><![CDATA[Water Tariff Row]]></category>
		<guid isPermaLink="false">https://www.justkannada.in/?p=153470</guid>

					<description><![CDATA[<p>&#160; ಮೈಸೂರು, April.08,2026: ನಗರ ಪಾಲಿಕೆ ನೀರಿನ ದರ ಏರಿಕೆ ವಿಚಾರದಲ್ಲಿ ಅನಗತ್ಯ ರಾಜಕೀಯ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ M. Lakshman ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಒಂದು ಲೀಟರ್ ಬಾಟಲಿ ನೀರಿಗೆ ಜನರು ₹20 ಕೊಡುತ್ತಾರೆ. ಆದರೆ ಮನೆಗೆ ಬರುತ್ತಿರುವ ಟ್ರೀಟೆಡ್ ನೀರಿನ ವೆಚ್ಚ ಸಾವಿರ ಲೀಟರ್‌ಗೆ ಕೇವಲ ₹5 ಮಾತ್ರ. ಅಂದರೆ ಒಂದು ಲೀಟರ್‌ಗೆ ಅರ್ಧ ಪೈಸೆಯಷ್ಟೇ ವೆಚ್ಚ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ 0.15 ಪೈಸೆ ಹೆಚ್ಚಳ ಮಾಡಿರುವುದನ್ನು ದೊಡ್ಡ ವಿಷಯವಾಗಿ ತೋರಿಸುವುದು [&#8230;]</p>
<p>The post <a href="https://www.justkannada.in/m-lakshman-2/">MYSORE: ನೀರಿನ ದರ ಏರಿಕೆ ವಿವಾದ – “ಅರ್ಧ ಪೈಸೆಗೆ ರಾಜಕೀಯ ಬೇಡ” ಎಂದು ಎಂ. ಲಕ್ಷ್ಮಣ್ ಕಿಡಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಮೈಸೂರು, April.08,2026: ನಗರ ಪಾಲಿಕೆ ನೀರಿನ ದರ ಏರಿಕೆ ವಿಚಾರದಲ್ಲಿ ಅನಗತ್ಯ ರಾಜಕೀಯ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ M. Lakshman ತೀವ್ರ ಆಕ್ರೋಶ ವ್ಯಕ್ತಪಡಿಸಿದರು.</p>
<p>ಒಂದು ಲೀಟರ್ ಬಾಟಲಿ ನೀರಿಗೆ ಜನರು ₹20 ಕೊಡುತ್ತಾರೆ. ಆದರೆ ಮನೆಗೆ ಬರುತ್ತಿರುವ ಟ್ರೀಟೆಡ್ ನೀರಿನ ವೆಚ್ಚ ಸಾವಿರ ಲೀಟರ್‌ಗೆ ಕೇವಲ ₹5 ಮಾತ್ರ. ಅಂದರೆ ಒಂದು ಲೀಟರ್‌ಗೆ ಅರ್ಧ ಪೈಸೆಯಷ್ಟೇ ವೆಚ್ಚ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ 0.15 ಪೈಸೆ ಹೆಚ್ಚಳ ಮಾಡಿರುವುದನ್ನು ದೊಡ್ಡ ವಿಷಯವಾಗಿ ತೋರಿಸುವುದು ತಪ್ಪು ಎಂದು ಅವರು ಹೇಳಿದರು.</p>
<p>ಕಳೆದ 15 ವರ್ಷಗಳಿಂದ ನೀರಿನ ದರ ಹೆಚ್ಚಳ ಮಾಡಿರಲಿಲ್ಲ. ಇದೀಗ ಮಾಡಿದ ಏರಿಕೆಯಿಂದ ಕಾರ್ಪೋರೇಷನ್‌ಗೆ ಬರೋದು ಕೇವಲ ₹35 ಲಕ್ಷ ಮಾತ್ರ. ಆದರೆ ಇದನ್ನು ಶೇ.30ರಷ್ಟು ಏರಿಕೆ ಎಂದು ಹೇಳುವುದು ಸಂಪೂರ್ಣ ತಪ್ಪು ಮಾಹಿತಿ ಎಂದು ಸ್ಪಷ್ಟಪಡಿಸಿದರು.</p>
<p><img fetchpriority="high" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಟೋಲ್ ದರವನ್ನು ಪ್ರತಿವರ್ಷ ಹೆಚ್ಚಿಸಲಾಗುತ್ತದೆ. ಅದಕ್ಕೆ ವಿರೋಧವಾಗಿ ಯಾರು ಧ್ವನಿ ಎತ್ತುವುದಿಲ್ಲ. ಆದರೆ ನೀರಿನ ದರದಲ್ಲಿ ಅಲ್ಪ ಪ್ರಮಾಣದ ಏರಿಕೆಗೆ ಮಾತ್ರ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಅವರು ಟೀಕಿಸಿದರು.</p>
<p>ಬಿಜೆಪಿ ನಾಯಕರು ರೈತರ ಸಮಸ್ಯೆಗಳು, ತಂಬಾಕು ಬೆಳೆಗಾರರ ಕಷ್ಟಗಳ ಬಗ್ಗೆ ಮಾತಾಡುವುದಿಲ್ಲ. ಆದರೆ ಅರ್ಧ ಪೈಸೆ ಏರಿಕೆಗೆ ಮಾತ್ರ ಹೋರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.</p>
<p><img decoding="async" class="alignnone size-full wp-image-138771" src="https://www.justkannada.in/wp-content/uploads/2025/04/water-2.jpg" alt="" width="500" height="286" srcset="https://www.justkannada.in/wp-content/uploads/2025/04/water-2.jpg 500w, https://www.justkannada.in/wp-content/uploads/2025/04/water-2-300x172.jpg 300w, https://www.justkannada.in/wp-content/uploads/2025/04/water-2-150x86.jpg 150w" sizes="(max-width: 500px) 100vw, 500px" /></p>
<p>ಇನ್ನೂ, ಕೇಂದ್ರ ಸಚಿವ Piyush Goyal ಅವರನ್ನು ಭೇಟಿ ಮಾಡಿ ಫೋಟೋ ತೆಗೆಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಾಗಿಲ್ಲ. ಆ ಭೇಟಿಯ ಬಳಿಕವೂ ಪರಿಸ್ಥಿತಿ ಇನ್ನಷ್ಟು ಕೆಡುತ್ತಿದೆ. ಅವರು ಭೇಟಿ ವೇಳೆ ಏನು ಚರ್ಚಿಸಿದರು ಎಂಬುದೇ ಸ್ಪಷ್ಟವಾಗಿಲ್ಲ ಎಂದು ಜೆಡಿಎಸ್ ನಾಯಕರನ್ನೂ ಲಕ್ಷ್ಮಣ್ ಟೀಕಿಸಿದರು.</p>
<p>ಒಟ್ಟಿನಲ್ಲಿ, “ಜನರ ಗಮನ ಬೇರೆಡೆಗೆ ತಿರುಗಿಸಲು ನೀರಿನ ದರ ಏರಿಕೆ ವಿಷಯವನ್ನು ರಾಜಕೀಯವಾಗಿ ಬಳಸಲಾಗುತ್ತಿದೆ” ಎಂದು ಲಕ್ಷ್ಮಣ್ ಕಿಡಿಕಾರಿದರು.</p>
<p>Key words: Mysuru, Water Tariff Row, don’t politicize, a half-paisa hike, M. Lakshman</p>
<p><img decoding="async" class="alignnone size-large wp-image-146126" src="https://www.justkannada.in/wp-content/uploads/2025/10/jk02-1024x126.jpg" alt="" width="696" height="86" srcset="https://www.justkannada.in/wp-content/uploads/2025/10/jk02-1024x126.jpg 1024w, https://www.justkannada.in/wp-content/uploads/2025/10/jk02-300x37.jpg 300w, https://www.justkannada.in/wp-content/uploads/2025/10/jk02-768x95.jpg 768w, https://www.justkannada.in/wp-content/uploads/2025/10/jk02-1536x189.jpg 1536w, https://www.justkannada.in/wp-content/uploads/2025/10/jk02-150x18.jpg 150w, https://www.justkannada.in/wp-content/uploads/2025/10/jk02-696x86.jpg 696w, https://www.justkannada.in/wp-content/uploads/2025/10/jk02-1068x131.jpg 1068w, https://www.justkannada.in/wp-content/uploads/2025/10/jk02-600x74.jpg 600w, https://www.justkannada.in/wp-content/uploads/2025/10/jk02.jpg 1600w" sizes="(max-width: 696px) 100vw, 696px" /></p>
<p><strong>SUMMARY:</strong></p>
<p><strong><em>Mysuru Water Tariff Row: “Don’t politicize a half-paisa hike” — M. Lakshman</em></strong></p>
<p>Mysuru: Congress leader M. Lakshman slammed the opposition for politicizing the recent water tariff hike.</p>
<p>He said people pay ₹20 for a litre of bottled water, while treated tap water costs just ₹5 per 1,000 litres — about half a paisa per litre. The current hike is only 0.15 paisa per litre, after 15 years without revision, bringing just ₹35 lakh in revenue.</p>
<p><img loading="lazy" decoding="async" class="alignnone size-full wp-image-153471" src="https://www.justkannada.in/wp-content/uploads/2026/04/lakshman.jpg" alt="" width="500" height="333" srcset="https://www.justkannada.in/wp-content/uploads/2026/04/lakshman.jpg 500w, https://www.justkannada.in/wp-content/uploads/2026/04/lakshman-300x200.jpg 300w, https://www.justkannada.in/wp-content/uploads/2026/04/lakshman-150x100.jpg 150w" sizes="auto, (max-width: 500px) 100vw, 500px" /></p>
<p>Calling claims of a 30% hike “misleading,” he accused BJP leaders of ignoring real issues like farmers’ and tobacco growers’ distress, while protesting a minimal increase.</p>
<p>He also criticized JDS leaders for meeting Union Minister Piyush Goyal, saying the visit yielded no results.</p>
<p><img decoding="async" class="alignnone size-large wp-image-146126" src="https://www.justkannada.in/wp-content/uploads/2025/10/jk02-1024x126.jpg" alt="" width="696" height="86" srcset="https://www.justkannada.in/wp-content/uploads/2025/10/jk02-1024x126.jpg 1024w, https://www.justkannada.in/wp-content/uploads/2025/10/jk02-300x37.jpg 300w, https://www.justkannada.in/wp-content/uploads/2025/10/jk02-768x95.jpg 768w, https://www.justkannada.in/wp-content/uploads/2025/10/jk02-1536x189.jpg 1536w, https://www.justkannada.in/wp-content/uploads/2025/10/jk02-150x18.jpg 150w, https://www.justkannada.in/wp-content/uploads/2025/10/jk02-696x86.jpg 696w, https://www.justkannada.in/wp-content/uploads/2025/10/jk02-1068x131.jpg 1068w, https://www.justkannada.in/wp-content/uploads/2025/10/jk02-600x74.jpg 600w, https://www.justkannada.in/wp-content/uploads/2025/10/jk02.jpg 1600w" sizes="(max-width: 696px) 100vw, 696px" /></p>
<p>#Mysuru #WaterTariff #KarnatakaPolitics</p>
<p>The post <a href="https://www.justkannada.in/m-lakshman-2/">MYSORE: ನೀರಿನ ದರ ಏರಿಕೆ ವಿವಾದ – “ಅರ್ಧ ಪೈಸೆಗೆ ರಾಜಕೀಯ ಬೇಡ” ಎಂದು ಎಂ. ಲಕ್ಷ್ಮಣ್ ಕಿಡಿ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೈಸೂರು ನಗರ ಹೊರವಲಯದ ನಿವಾಸಿಗಳನ್ನೂ ಪಾಲಿಕೆ ವ್ಯಾಪ್ತಿಗೆ ತನ್ನಿ, ಮೂಲಭೂತ ಸೌಕರ್ಯ ಒದಗಿಸಿ- ಎಂ.ಲಕ್ಷ್ಮಣ್</title>
		<link>https://www.justkannada.in/mysore-city-corporation-m-lakshman/</link>
		
		<dc:creator><![CDATA[prashanth]]></dc:creator>
		<pubDate>Sat, 15 Nov 2025 12:57:06 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[m.lakshman]]></category>
		<category><![CDATA[mysore-city-corporation]]></category>
		<category><![CDATA[upgradation]]></category>
		<guid isPermaLink="false">https://www.justkannada.in/?p=147828</guid>

					<description><![CDATA[<p>ಮೈಸೂರು,ನವೆಂಬರ್,15,2025 (www.justkannada.in): ಮೈಸೂರು ನಗರ ದೊಡ್ಡದಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಮಹಾ ನಗರ ಪಾಲಿಕೆ ವ್ಯಾಪ್ತಿ ವಿಸ್ತರಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತ. ನಗರದ ಹೊರವಲಯದಲ್ಲಿ ನಿವೇಶನ ಖರೀದಿಸಿ ಅಲ್ಲಿ ವಾಸಿಸುತ್ತಿರುವ ಎಲ್ಲರನ್ನೂ ಮೈಸೂರು ಮಹಾ ನಗರ ಪಾಲಿಕೆ ವ್ಯಾಪ್ತಿಗೆ ತರಬೇಕು. ಅವರಿಗೂ ಎಲ್ಲಾ ಮೂಲಭೂತ ಸೌಕರ್ಯಗಳನ್ನ ಒದಗಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದರು. ಪ್ರಸ್ತುತ ಮೈಸೂರು ನಗರಪಾಲಿಕೆಯನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ಉನ್ನತೀಕರಣಗೊಳಿಸುವ ಬಗ್ಗೆ ಸರ್ಕಾರದ ನಿರ್ಧಾರ ಕುರಿತು ಮೈಸೂರು ಜಿಲ್ಲಾಧಿಕಾರಿ [&#8230;]</p>
<p>The post <a href="https://www.justkannada.in/mysore-city-corporation-m-lakshman/">ಮೈಸೂರು ನಗರ ಹೊರವಲಯದ ನಿವಾಸಿಗಳನ್ನೂ ಪಾಲಿಕೆ ವ್ಯಾಪ್ತಿಗೆ ತನ್ನಿ, ಮೂಲಭೂತ ಸೌಕರ್ಯ ಒದಗಿಸಿ- ಎಂ.ಲಕ್ಷ್ಮಣ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ನವೆಂಬರ್,15,2025 (<a href="http://www.justkannada.in">www.justkannada.in</a>):</strong> ಮೈಸೂರು ನಗರ ದೊಡ್ಡದಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಮಹಾ ನಗರ ಪಾಲಿಕೆ ವ್ಯಾಪ್ತಿ ವಿಸ್ತರಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತ. ನಗರದ ಹೊರವಲಯದಲ್ಲಿ ನಿವೇಶನ ಖರೀದಿಸಿ ಅಲ್ಲಿ ವಾಸಿಸುತ್ತಿರುವ ಎಲ್ಲರನ್ನೂ ಮೈಸೂರು ಮಹಾ ನಗರ ಪಾಲಿಕೆ ವ್ಯಾಪ್ತಿಗೆ ತರಬೇಕು. ಅವರಿಗೂ ಎಲ್ಲಾ ಮೂಲಭೂತ ಸೌಕರ್ಯಗಳನ್ನ ಒದಗಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದರು.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಪ್ರಸ್ತುತ ಮೈಸೂರು ನಗರಪಾಲಿಕೆಯನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ಉನ್ನತೀಕರಣಗೊಳಿಸುವ ಬಗ್ಗೆ ಸರ್ಕಾರದ ನಿರ್ಧಾರ ಕುರಿತು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರ ಜೊತೆ ಸಭೆಯಲ್ಲಿ ಎಂ.ಲಕ್ಷ್ಮಣ್ ಮಾತನಾಡಿದರು.</p>
<p>ಮೈಸೂರು ನಗರ ದೊಡ್ಡದಾಗಿ ಬೆಳೆಯುತ್ತಿರುವುದರಿಂದ ಪಾಲಿಕೆ ವ್ಯಾಪ್ತಿಯ ವಿಸ್ತರಣೆ ಮಾಡಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ತೀರ್ಮಾನವನ್ನ ಸ್ವಾಗತಿಸುತ್ತೇವೆ. ಇದು ಮುಖ್ಯವಾಗಿ ಅಧಿಸೂಚನೆಯಾಗಬೇಕು.  ಮೈಸೂರು ನಗರ ವ್ಯಾಪ್ತಿ ಹಾಲಿ 86 ಚ.ಕಿ.ಮೀ ಇದ್ದು,  ಅದನ್ನ 332 ಚ.ಕಿ.ಮೀ ವಿಸ್ತರರಣೆಗೆ ಪ್ಲಾನ್ ರೂಪಿಸಿದ್ದಾರೆ.  ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಅವಶ್ಯಕತೆಗಳ ಅನುಗುಣವಾಗಿ ಮೈಸೂರು ನಗರದ ಹೊಸ ಬಡಾವಣೆಗಳಲ್ಲಿ ನಿವೇಶನಗಳನ್ನು ಖರೀದಿ ಮಾಡಿ ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಂಡು ಅಲ್ಲಿ ವಾಸ ಮಾಡುತ್ತಿದ್ದಾರೆ ಹಾಗೂ ಹಾಗೂ ಮೈಸೂರು ನಗರಕ್ಕೆ ಹೊಂದಿಕೊಂಡಿರುವ ಪಟ್ಟಣಗಳಿಂದ ಬಂದು ಮೈಸೂರು ನಗರದ ಪರಿಸರವನ್ನು ಇಷ್ಟಪಟ್ಟು ಮೈಸೂರು ನಗರದ ಹೊರವಲಯದಲ್ಲಿ ವಾಸಿಸುತ್ತಿದ್ದಾರೆ.</p>
<p>ಮೈಸೂರು ನಗರ ಹಾಗೂ ಹೊರವಲಯದಲ್ಲಿ ವಾಸಿಸುತ್ತಿರುವ ಎಲ್ಲರಿಗೂ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ವಿದ್ಯುಚ್ಚಕ್ತಿ, ಸಂಚಾರ ವ್ಯವಸ್ಥೆ ಮುಂತಾದ ಸೌಲಭ್ಯಗಳನ್ನು ಒದಗಿಸುವುದು ಪ್ರಮುಖವಾಗಿರುತ್ತದೆ. ಈ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಆದ್ದರಿಂದ ಇದೆಲ್ಲವನ್ನೂ ಸಮರ್ಪಕವಾಗಿ ನಿರ್ವಹಣೆ ಮಾಡಬೇಕೆಂದರೆ ಕೇಂದ್ರಿಕೃತ ಆಡಳಿತದ ವ್ಯವಸ್ಥೆಯಿಂದ ಮಾತ್ರ ಸಾಧ್ಯ. ಪ್ರಸ್ತುತ ಈ ಕಾರ್ಯವು ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಪ್ರಸ್ತುತ ಇರುವ ಪಾಲಿಕೆಯನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ಉನ್ನತೀಕರಣಗೊಳಿಸುವುದರಿಂದ ಸರ್ವ ರೀತಿಯಲ್ಲೂ ಮೈಸೂರು ನಗರವನ್ನು ಅಭಿವೃದ್ಧಿಯನ್ನು ಪಡಿಸಲು ಸಾಧ್ಯವಾಗುತ್ತದೆ ಎಂದು ಎಂ.ಲಕ್ಷ್ಮಣ್ ಸಭೆಯಲ್ಲಿ ತಿಳಿಸಿದರು.</p>
<p>ಹಾಗೆಯೇ ನಗರದ ಹೊರವಲಯಗಳಲ್ಲಿ ವಾಸಿಸುತ್ತಿರುವವರಿಗೂ ಮೂಲಭೂತ ಸೌಕರ್ಯಕೊಡಲು ಸರ್ಕಾರ ಬದ್ದವಾಗಿದೆ. ನಗರ ವ್ಯಾಪ್ತಿಯಲ್ಲಿರುವರು ಮಾತ್ರ ಎಲ್ಲಾ ಮೂಲಭೂತ ಸೌಕರ್ಯ ಅನುಭವಿಸುವಂತಹದಲ್ಲ . ನಗರದ ಹೊರವಲಯದಲ್ಲಿರುವವರೂ ಸಹ ನಗರ ಪ್ರದೇಶ ವ್ಯಾಪ್ತಿಯಲ್ಲಿ ಬೆಳೆಯುತ್ತಿದ್ದಾರೆ.  ಆದರೆ ಅವರು ನಗರಪಾಲಿಕೆ ವ್ಯಾಪ್ತಿಯಲ್ಲಿ ಬರುತ್ತಿಲ್ಲ , ಹೀಗಾಗಿ ಅವರನ್ನೂ ಮೈಸೂರು ಮಹಾ ನಗರ ಪಾಲಿಕೆ ವ್ಯಾಪ್ತಿಗೆ ಪರಿಗಣಿಸಬೇಕು. ಈ ಮೂಲಕ ಬೃಹತ್ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ಉನ್ನತೀಕರಣಗೊಳಿಸಲು ತ್ವರಿತವಾಗಿ ಕಾರ್ಯರೂಪಕ್ಕೆ ತರಬೇಕು  ಎಂದು ಒತ್ತಾಯಸುತ್ತೇವೆ ಎಂದು ಎಂ.ಲಕ್ಷ್ಮಣ್ ಹೇಳಿದ್ದಾರೆ.</p>
<p>Key words: Mysore City Corporation, Upgradation, M. Lakshman</p>
<p>The post <a href="https://www.justkannada.in/mysore-city-corporation-m-lakshman/">ಮೈಸೂರು ನಗರ ಹೊರವಲಯದ ನಿವಾಸಿಗಳನ್ನೂ ಪಾಲಿಕೆ ವ್ಯಾಪ್ತಿಗೆ ತನ್ನಿ, ಮೂಲಭೂತ ಸೌಕರ್ಯ ಒದಗಿಸಿ- ಎಂ.ಲಕ್ಷ್ಮಣ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ನಿರ್ದೇಶಿಸಿ- ಎಂ.ಲಕ್ಷ್ಮಣ್</title>
		<link>https://www.justkannada.in/mysore-tobacco-growers/</link>
		
		<dc:creator><![CDATA[prashanth]]></dc:creator>
		<pubDate>Mon, 10 Nov 2025 12:46:31 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[m.lakshman]]></category>
		<category><![CDATA[Mysore.]]></category>
		<category><![CDATA[resolve  problems]]></category>
		<category><![CDATA[tobacco growers]]></category>
		<guid isPermaLink="false">https://www.justkannada.in/?p=147569</guid>

					<description><![CDATA[<p>ಮೈಸೂರು,ನವೆಂಬರ್,10,2025 (www.justkannada.in):  ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಬಗೆಯರಿಸಲು ನಿರ್ದೇಶಿಸುವಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು. ಪಿರಿಯಾಪಟ್ಟಣದಲ್ಲಿರುವ ತಂಬಾಕು ಮಂಡಳಿಗೆ ಭೇಟಿ ನೀಡಿ ನಂತರ ಅಲ್ಲಿ ಪ್ರತಿಭಟಿಸುತ್ತಿದ್ದ ರೈತರ ಮನವಿ ಸ್ವೀಕರಿಸಿದ ಎಂ.ಲಕ್ಷ್ಮಣ್ ಬಳಿಕ ಮಾತನಾಡಿ, ನಾನು ಪಿರಿಯಾಪಟ್ಟಣದಲ್ಲಿರುವ ತಂಬಾಕು ಮಂಡಳಿಗೆ ಭೇಟಿ ನೀಡಿದ್ದೆ. ತಂಬಾಕು ಹರಾಜು ಪ್ರಕ್ರಿಯೆ ಕಳೆದ ಒಂದು ತಿಂಗಳಿಂದ ಚಾಲ್ತಿಯಲ್ಲಿದ್ದು ರೈತರು ಪ್ರಮುಖವಾದ ಕೆಲ ಸಮಸ್ಯೆಗಳನ್ನು  ಎದುರಿಸುತ್ತಿದ್ದಾರೆ. ಇಂದು ಸುಮಾರು 200ಕ್ಕೂ ಮೇಲ್ಪಟ್ಟ ರೈತರು ಪ್ರತಿಭಟಸುತ್ತಿರುವದನ್ನ ತಿಳಿದು ನಾನು ತಂಬಾಕು ಮಂಡಳಿಗೆ ಭೇಟಿ ನೀಡಿ [&#8230;]</p>
<p>The post <a href="https://www.justkannada.in/mysore-tobacco-growers/">ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ನಿರ್ದೇಶಿಸಿ- ಎಂ.ಲಕ್ಷ್ಮಣ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ನವೆಂಬರ್,10,2025 (<a href="http://www.justkannada.in">www.justkannada.in</a>): </strong> ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಬಗೆಯರಿಸಲು ನಿರ್ದೇಶಿಸುವಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಪಿರಿಯಾಪಟ್ಟಣದಲ್ಲಿರುವ ತಂಬಾಕು ಮಂಡಳಿಗೆ ಭೇಟಿ ನೀಡಿ ನಂತರ ಅಲ್ಲಿ ಪ್ರತಿಭಟಿಸುತ್ತಿದ್ದ ರೈತರ ಮನವಿ ಸ್ವೀಕರಿಸಿದ ಎಂ.ಲಕ್ಷ್ಮಣ್ ಬಳಿಕ ಮಾತನಾಡಿ, ನಾನು ಪಿರಿಯಾಪಟ್ಟಣದಲ್ಲಿರುವ ತಂಬಾಕು ಮಂಡಳಿಗೆ ಭೇಟಿ ನೀಡಿದ್ದೆ. ತಂಬಾಕು ಹರಾಜು ಪ್ರಕ್ರಿಯೆ ಕಳೆದ ಒಂದು ತಿಂಗಳಿಂದ ಚಾಲ್ತಿಯಲ್ಲಿದ್ದು ರೈತರು ಪ್ರಮುಖವಾದ ಕೆಲ ಸಮಸ್ಯೆಗಳನ್ನು  ಎದುರಿಸುತ್ತಿದ್ದಾರೆ. ಇಂದು ಸುಮಾರು 200ಕ್ಕೂ ಮೇಲ್ಪಟ್ಟ ರೈತರು ಪ್ರತಿಭಟಸುತ್ತಿರುವದನ್ನ ತಿಳಿದು ನಾನು ತಂಬಾಕು ಮಂಡಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ್ದೇನೆ.  ರೈತರ ಈ ಸಮಸ್ಯೆಗಳು ನಿಜವಾದ ಸಮಸ್ಯೆಗಳು ಎಂದು ತಿಳಿದುಬಂದಿದ್ದು ಆದ್ದರಿಂದ ದಯಮಾಡಿ ಸಂಬಂಧ ಪಟ್ಟವರಿಗೆ ತುರ್ತಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ನಿರ್ದೇಶಸಬೇಕು ಎಂದು ಮನವಿ ಮಾಡುವುದಾಗಿ ತಿಳಿಸಿದರು.</p>
<p><strong>ತಂಬಾಕು ಬೆಳೆಗಾರರ ಸಮಸ್ಯೆಗಳು ಹೀಗಿವೆ..</strong></p>
<p>ಮೈಸೂರು ಭಾಗದಲ್ಲಿ ಬೆಳೆಯುವ ಹೊಗೆಸೊಪ್ಪು ದೇಶದಲ್ಲೇ ಉತ್ತಮವಾದ ಹಾಗೂ ಮೊದಲನೇ ದರ್ಜೆಯ ಹೊಗೆಸೊಪ್ಪು ಆಗಿರುತ್ತದೆ.   ಆದರೆ ಒಂದು ಕೆಜಿ ಹೊಗೆಸೊಪ್ಪುನ್ನು 260 ರೂ ಇಂದ 300 ರೂ ಗಳಿಗೆ ಖರೀದಿಸುತ್ತಾರೆ.  ಇದಕ್ಕಿಂತ ಕಡಿಮೆ ದರ್ಜೆಯ ಹೊಗೆಸೊಪ್ಪುನ್ನು ಆಂಧ್ರಪ್ರದೇಶದಲ್ಲಿ 450 ರಿಂದ 460 ರೂ ಕೊಟ್ಟು ಖರೀದಿಸುತ್ತಿದ್ದಾರೆ.  ಇದು ಕರ್ನಾಟಕ ರೈತರಿಗೆ ಮಾಡುವ ದೊಡ್ಡ ದ್ರೋಹ.</p>
<p>ಉತ್ತಮ ದರ್ಜೆಯ ಹೊಗೆಸೊಪ್ಪನ್ನು ವಿವಿಧ ದರ್ಜೆಗಳ ಮೂಲಕ ಗುರುತಿಸಲಾಗುತ್ತದೆ. ಆದರೆ ಕೆಲ ಅಧಿಕಾರಿಗಳು ಉತ್ತಮ ದರ್ಜೆಯ ಹೊಗೆಸೊಪ್ಪನ್ನು 3 ಮತ್ತು 4ನೇ ದರ್ಜೆ ಎಂದು ಗುರುತಿಸಿ ಅದರ ಬೆಲೆ ಕೇವಲ 260 ರಿಂದ 290 ರೂ ಗಳಿಗೆ ಕಂಪನಿಗಳಿಗೆ ಮಾರಾಟ ಮಾಡುವ ಮೂಲಕ ರೈತರಿಗೆ ಅನ್ಯಾಯ ಎಸಗುತ್ತಿದ್ದಾರೆ.</p>
<p>ವಿವಿಧ ದರ್ಜೆಯ ಹೊಗೆಸೊಪ್ಪನ್ನು X1, X2, X3, X4, X5 ಎಂದು ಗುರುತಿಸುವುದರಿಂದ ಎಲ್ಲವು ಉತ್ತಮ ದರ್ಜೆಯ ಹೊಗೆಸೊಪ್ಪು ಆಗಿದ್ದರೂ ಬೇರೆ ಬೇರೆ ಬೆಲೆಗಳಿಗೆ ಮಾರಾಟ ಮಾಡುತ್ತಿದ್ದಾರೆ.</p>
<p>ಕೆಲವು ಹೊಗೆಸೊಪ್ಪುಗಳನ್ನು ಕೀಳಮಟ್ಟದ ಹೊಗೆಸೊಪ್ಪು ಎಂದು NOG, NDG, BPL ಎಂದು ಗುರುತಿಸಿ ಇವುಗಳನ್ನು ಬಿಡ್ ಮಾಡದೆ ತಿರಸ್ಕರಿಸಲಾಗುತ್ತಿದೆ.</p>
<p>ಹರಾಜು ಮಾಡುವ ಸಂದರ್ಭದಲ್ಲಿ ಪಾರದರ್ಶಕವಿಲ್ಲದೆ ರೈತರನ್ನು ಹೊರಗಿಟ್ಟು ಅಧಿಕಾರಿಗಳು ಮತ್ತು ಕಂಪನಿಗಳ ಪ್ರತಿನಿಧಿಗಳು ಬೆಲೆ ನಿರ್ಧಾರವನ್ನು ಮಾಡುತ್ತಿದ್ದಾರೆ.  ಅಧಿಕಾರಿಗಳ ವರ್ಗ ಸಂಪೂರ್ಣವಾಗಿ ಕಂಪನಿಗಳ ಮುಖ್ಯಸ್ಥರ ಜೊತೆ ಶಾಮೀಲಾಗಿ ಮೋಸವೆಸಗುತ್ತಿದ್ದಾರೆ.</p>
<p>ರೈತರಿಂದ ಮುಂಗಡವಾಗಿ ತಂಬಾಕು ಮಂಡಳಿಯವರು ಹಣವನ್ನು ಪಾವತಿಸಿಕೊಂಡಿರುವ ಸುಮಾರು 7 ಕೋಟಿ ರೈತರ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.</p>
<p>ರೈತರು ಹರಾಜು ಪ್ರಕ್ರಿಯೆ ಯಲ್ಲಿ ಭಾಗವಹಿಸಲು ರಹದರಿ ಪುಸ್ತಕ ವನ್ನು ಪ್ರತಿ ವರ್ಷ ನವೀಕರಿಸಬೇಕಾಗಿರುತ್ತದೆ.  ಆದರೆ ಈ ರಹಾದರಿ ಪುಸ್ತಕ ವನ್ನು ನವೀಕರಿಸದೆ ರೈತರನ್ನು ಅಲೆದಾಡಿಸುತ್ತಿದ್ದಾರೆ.</p>
<p>ತಂಬಾಕು ಮಂಡಳಿಯವರು ರೈತರಿಗೆ ರಸಗೊಬ್ಬರವನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ ಹಾಗೂ ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ.  ಒಂದು ಕೆಜಿ ಹೊಗೆಸೊಪ್ಪು ಬೆಳೆಯಲು ರೈತನಿಗೆ 300 ರೂಪಾಯಿ ವೆಚ್ಚ ತಗಲುತ್ತಿದೆ.   ಆದರೆ ರೈತ ಒಂದು ಕೆಜಿ ಹೊಗೆಸೊಪ್ಪನ್ನು 260 ರೂ 290 ರೂಪಾಯಿ ಗಳಿಗೆ ಮಾರಾಟ ಮಾಡುತ್ತಿದ್ದಾನೆ.</p>
<p>ಈ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಲು ಸೂಕ್ತ ನಿರ್ದೇಶನವನ್ನು ತಂಬಾಕು ಮಂಡಳಿಯ ಮುಖ್ಯಸ್ಥರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.</p>
<p>Key words: Mysore, resolve  problems, tobacco growers,  M. Lakshman</p>
<p>The post <a href="https://www.justkannada.in/mysore-tobacco-growers/">ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ನಿರ್ದೇಶಿಸಿ- ಎಂ.ಲಕ್ಷ್ಮಣ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಗುಪ್ತಚರ ಎಂ.ಲಕ್ಷ್ಮಣ ಮತ್ತು ಭಾರತೀಯ ನ್ಯಾಯಸಂಹಿತೆ..!</title>
		<link>https://www.justkannada.in/intelligence-m-lakshman/</link>
		
		<dc:creator><![CDATA[prashanth]]></dc:creator>
		<pubDate>Thu, 13 Feb 2025 07:22:43 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Indian Penal Code]]></category>
		<category><![CDATA[intelligence]]></category>
		<category><![CDATA[m.lakshman]]></category>
		<category><![CDATA[Mysore.]]></category>
		<guid isPermaLink="false">https://www.justkannada.in/?p=136333</guid>

					<description><![CDATA[<p>ಮೈಸೂರು,ಫೆಬ್ರವರಿ,13,2025 (www.justkannada.in): ವ್ಯಕ್ತಿಯೊಬ್ಬನ ಅವಹೇಳನಕಾರಿ ಪೋಸ್ಟ್ ವಿಚಾರವಾಗಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಬಳಿ ಪ್ರತಿಭಟಿಸಿ ಕಲ್ಲುತೂರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಕೆ ಪಿ ಸಿ ಸಿ ವಕ್ತಾರ ಎಂ.ಲಕ್ಷ್ಮಣ ಮಾಡಿರುವ ಆರೋಪ ಗಂಭೀರವಾಗಿದೆ! 300ಕ್ಕೂ ಹೆಚ್ಚು ಆರ್ ಎಸ್ ಎಸ್ ಕಾರ್ಯಕರ್ತರು ಮೈಸೂರಿಗೆ ಬಂದಿದ್ದು ಅದರಲ್ಲಿ 50 ಕಾರ್ಯಕರ್ತರು ಉದಯಗಿರಿಗೆ ಬಂದು ತಮ್ಮ ವೇಷ ಮರೆಸಿಕೊಂಡು ಮುಸ್ಲಿಮರಂತೆ ವೇಷ ಧರಿಸಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಎಂ.ಲಕ್ಷ್ಮಣ ಆರೋಪಿಸಿದ್ದಾರೆ. ಈ ಮಾಹಿತಿ ಎಂ ಲಕ್ಷ್ಮಣ ಅವರಿಗೆ [&#8230;]</p>
<p>The post <a href="https://www.justkannada.in/intelligence-m-lakshman/">ಗುಪ್ತಚರ ಎಂ.ಲಕ್ಷ್ಮಣ ಮತ್ತು ಭಾರತೀಯ ನ್ಯಾಯಸಂಹಿತೆ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಫೆಬ್ರವರಿ,13,2025 (<a href="http://www.justkannada.in">www.justkannada.in</a>):</strong> ವ್ಯಕ್ತಿಯೊಬ್ಬನ ಅವಹೇಳನಕಾರಿ ಪೋಸ್ಟ್ ವಿಚಾರವಾಗಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಬಳಿ ಪ್ರತಿಭಟಿಸಿ ಕಲ್ಲುತೂರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಕೆ ಪಿ ಸಿ ಸಿ ವಕ್ತಾರ ಎಂ.ಲಕ್ಷ್ಮಣ ಮಾಡಿರುವ ಆರೋಪ ಗಂಭೀರವಾಗಿದೆ!<img loading="lazy" decoding="async" class="aligncenter size-full wp-image-135204" src="https://www.justkannada.in/wp-content/uploads/2025/01/nypunya1.jpg" alt="" width="500" height="97" srcset="https://www.justkannada.in/wp-content/uploads/2025/01/nypunya1.jpg 500w, https://www.justkannada.in/wp-content/uploads/2025/01/nypunya1-300x58.jpg 300w, https://www.justkannada.in/wp-content/uploads/2025/01/nypunya1-150x29.jpg 150w" sizes="auto, (max-width: 500px) 100vw, 500px" /></p>
<p>300ಕ್ಕೂ ಹೆಚ್ಚು ಆರ್ ಎಸ್ ಎಸ್ ಕಾರ್ಯಕರ್ತರು ಮೈಸೂರಿಗೆ ಬಂದಿದ್ದು ಅದರಲ್ಲಿ 50 ಕಾರ್ಯಕರ್ತರು ಉದಯಗಿರಿಗೆ ಬಂದು ತಮ್ಮ ವೇಷ ಮರೆಸಿಕೊಂಡು ಮುಸ್ಲಿಮರಂತೆ ವೇಷ ಧರಿಸಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಎಂ.ಲಕ್ಷ್ಮಣ ಆರೋಪಿಸಿದ್ದಾರೆ.</p>
<p>ಈ ಮಾಹಿತಿ ಎಂ ಲಕ್ಷ್ಮಣ ಅವರಿಗೆ ಯಾವಾಗ ದೊರಕಿತು?</p>
<p>ಕಲ್ಲು ತೂರಾಟ ನಡೆಯುವ ಮುನ್ನವೇ ತಿಳಿಯಿತೇ?</p>
<p>ಅಥವಾ ಕಲ್ಲು ತೂರಾಟ ನಡೆಯುವಾಗ ತಿಳಿಯಿತೇ?ಅಥವಾ ಕಲ್ಲು ತೂರಾಟ ನಡೆದ ನಂತರ ತಿಳಿಯಿತೇ?</p>
<p>ಘಟನೆ ನಡೆಯುವ ಮುನ್ನವೇ ಈ ವಿಚಾರ ತಿಳಿದಿದ್ದರೆ ಲಕ್ಷ್ಮಣರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಿಲ್ಲವೇಕೆ?</p>
<p>ಆರ್ ಎಸ್ ಎಸ್ ಕಾರ್ಯಕರ್ತರು ವೇಷ ಮರೆಸಿ ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಮಾಹಿತಿಯು ಲಕ್ಷ್ಮಣರಿಗೆ ಲಭಿಸಿದ್ದಾದರೂ ಹೇಗೆ?</p>
<p>ಪೊಲೀಸ್ ಗುಪ್ತಚರ ಇಲಾಖೆಗೆ ಸಿಗದ ಮಾಹಿತಿ ಲಕ್ಷ್ಮಣರಿಗೆ ಸಿಕ್ಕಿದೆ ಎಂದರೆ ಲಕ್ಷ್ಮಣರು ಪೊಲೀಸ್ ಗುಪ್ತಚರ ಇಲಾಖೆಗಿಂತಲೂ ಮಿಗಿಲು ಎಂದರ್ಥವಾಗುತ್ತದೆ.</p>
<p>ಪೊಲೀಸ್ ಆಯುಕ್ತರು, ಗೃಹ ಸಚಿವರು, ಅಷ್ಟೇಕೆ? ಮುಖ್ಯಮಂತ್ರಿಗಳಿಗೂ ಸಿಗದ ಈ ವಿಶೇಷ ಗುಪ್ತಚರ ಮಾಹಿತಿಯು ಲಕ್ಷ್ಮಣ ಅವರಿಗೆ ದೊರಕಿದೆಯೆಂದರೆ ಲಕ್ಷ್ಮಣರು ಸೂಪರ್ ಸಿಎಂ ಆಗಿರಲೇಬೇಕು!</p>
<p>ಆರ್ ಎಸ್ ಎಸ್ ಕಾರ್ಯಕರ್ತರು ಮುಸ್ಲಿಮರಂತೆ ವೇಷ ಮರೆಸಿ ಕಲ್ಲು ತೂರಾಟ ನಡೆಸಿದ್ದಾರೆಂಬ ಮಾಹಿತಿ ಲಕ್ಷ್ಮಣರಿಗೆ ತಿಳಿದಿದೆ ಎಂದರೆ ಈ ಘಟನೆಯ ಸಂಪೂರ್ಣ ಮಾಹಿತಿ ಅವರಿಗೆ ತಿಳಿದಿದೆ ಎಂದರ್ಥ!</p>
<p>ತೂರಾಟ ನಡೆಸಲು ಬಳಸಿದ ಕಲ್ಲುಗಳನ್ನು ಎಲ್ಲಿಂದ ತರಲಾಗಿದೆ ಎಂಬ ಮಾಹಿತಿಯೂ ಕೂಡಾ ಲಕ್ಷ್ಮಣರಿಗೆ ತಿಳಿದಿರಲೇಬೇಕು. ಹಾಗಾಗಿ ಲಕ್ಷ್ಮಣರು ಕಲ್ಲು ತೂರಾಟದ ಘಟನೆಯ ವಿಚಾರವಾಗಿ ಮಾಡಿರುವ ಆರೋಪವನ್ನು ಪೊಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿ ಲಕ್ಷ್ಮಣರನ್ನು ಈ ಘಟನೆಯ ಪ್ರಮುಖ ಸಾಕ್ಷಿಯನ್ನಾಗಿ ಪರಿಗಣಿಸಿ ಗಂಭೀರವಾಗಿ ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳಬಹುದು!</p>
<p>ಯಾವುದೇ ಕ್ರಿಮಿನಲ್ ಪ್ರಕರಣದ ವಿಚಾರವಾಗಿ ಪೊಲೀಸರು ನಡೆಸುವ ತನಿಖೆಯ ದಾರಿ ತಪ್ಪಿಸಲು ಸುಳ್ಳು ಮಾಹಿತಿ ನೀಡಿ ಹಾನಿ ಉಂಟು ಮಾಡಲು ಯತ್ನಿಸುವುದು ಭಾರತೀಯ ನ್ಯಾಯ ಸಂಹಿತೆ,2023 ರ ಸೆಕ್ಷನ್ 217 ರ ಅನ್ವಯ ಶಿಕ್ಷಾರ್ಹ ಅಪರಾಧ. ಇಂತಹ ಅಪರಾಧಕ್ಕೆ ಒಂದು ವರ್ಷ ಸೆರೆವಾಸ ಅಥವಾ 10 ಸಾವಿರ ರೂಪಾಯಿ ದಂಡ ಅಥವಾ ಇವೆರಡನ್ನೂ ವಿಧಿಸಬಹುದು..</p>
<p>ಒಂದು ವೇಳೆ ಲಕ್ಷ್ಮಣ ಅವರು ನೀಡಿದ್ದ ಮಾಹಿತಿ ಸುಳ್ಳೆಂದು ಪೊಲೀಸರಿಗೆ ತಿಳಿದ ತಕ್ಷಣ ಪೊಲೀಸರು ಲಕ್ಷ್ಮಣರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ,2023 ರ ಸೆಕ್ಷನ್ 217ರ ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಲಿ.</p>
<p><strong>-ಪಿ.ಜೆ.ರಾಘವೇಂದ್ರ </strong></p>
<p><strong>ನ್ಯಾಯವಾದಿ</strong></p>
<p><strong>ಮೈಸೂರು</strong></p>
<p><img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>Key words: Intelligence, M. Lakshman, Indian Penal Code, mysore</p>
<p>The post <a href="https://www.justkannada.in/intelligence-m-lakshman/">ಗುಪ್ತಚರ ಎಂ.ಲಕ್ಷ್ಮಣ ಮತ್ತು ಭಾರತೀಯ ನ್ಯಾಯಸಂಹಿತೆ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಬೇರೆ ಬೇರೆ ಸರ್ಕಾರದಲ್ಲೂ ಸುಗ್ರೀವಾಜ್ಞೆ: ಸಿದ್ದರಾಮಯ್ಯ ಆಡಳಿತದಲ್ಲಿ ಅರಮನೆ ವಿಚಾರ ಟಾರ್ಗೆಟ್ ಮಾಡಿಲ್ಲ- ಎಂ.ಲಕ್ಷ್ಮಣ್</title>
		<link>https://www.justkannada.in/m-lakshman/</link>
		
		<dc:creator><![CDATA[prashanth]]></dc:creator>
		<pubDate>Mon, 27 Jan 2025 07:29:10 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Bangalore Palace]]></category>
		<category><![CDATA[government's]]></category>
		<category><![CDATA[m.lakshman]]></category>
		<category><![CDATA[Ordinances]]></category>
		<guid isPermaLink="false">https://www.justkannada.in/?p=135424</guid>

					<description><![CDATA[<p>ಮೈಸೂರು,ಜನವರಿ,27,2025 (www.justkannada.in): ಸಿದ್ದರಾಮಯ್ಯ ಆಡಳಿತದಲ್ಲಿ ಅರಮನೆ ವಿಚಾರದಲ್ಲಿ ಟಾರ್ಗೆಟ್ ಮಾಡಿಲ್ಲ. ಬೇರೆ ಬೇರೆ ಸರ್ಕಾರದ ಆಡಳಿತದಲ್ಲೂ ಸುಗ್ರೀವಾಜ್ಞೆ ತಂದಿದ್ದಾರೆ ಎಂದು ಕೆಪಿಸಿಸಿ ವಕ್ತಾರ  ಎಂ.ಲಕ್ಷ್ಮಣ್ ತಿಳಿಸಿದರು. ಬೆಂಗಳೂರು ಅರಮನೆ ಆಸ್ತಿಗೆ ಸರ್ಕಾರದಿಂದ ಸುಗ್ರೀವಾಜ್ಞೆ ತರುವ ವಿಚಾರ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಲಕ್ಷ್ಮಣ್,  ಈ ಬಗ್ಗೆ ಇನ್ನೂ ಸುಗ್ರೀವಾಜ್ಞೆ ಆದೇಶವಾಗಿಲ್ಲ. ಸುಗ್ರೀವಾಜ್ಞೆ ತೀರ್ಮಾನ ತೆಗೆದುಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಅರಮನೆ ಆಸ್ತಿ ವಿಚಾರವಾಗಿ ಬೇರೆ ಬೇರೆ ಸರ್ಕಾರಗಳ ಆಡಳಿತದಲ್ಲೂ ಸುಗ್ರೀವಾಜ್ಞೆ ತಂದಿದ್ದಾರೆ. 1996 ರಲ್ಲಿ ಹೆಚ್ ಡಿ ದೇವೇಗೌಡರು ಸುಗ್ರೀವಾಜ್ಞೆ [&#8230;]</p>
<p>The post <a href="https://www.justkannada.in/m-lakshman/">ಬೇರೆ ಬೇರೆ ಸರ್ಕಾರದಲ್ಲೂ ಸುಗ್ರೀವಾಜ್ಞೆ: ಸಿದ್ದರಾಮಯ್ಯ ಆಡಳಿತದಲ್ಲಿ ಅರಮನೆ ವಿಚಾರ ಟಾರ್ಗೆಟ್ ಮಾಡಿಲ್ಲ- ಎಂ.ಲಕ್ಷ್ಮಣ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜನವರಿ,27,2025 (<a href="http://www.justkannada.in">www.justkannada.in</a>):</strong> ಸಿದ್ದರಾಮಯ್ಯ ಆಡಳಿತದಲ್ಲಿ ಅರಮನೆ ವಿಚಾರದಲ್ಲಿ ಟಾರ್ಗೆಟ್ ಮಾಡಿಲ್ಲ. ಬೇರೆ ಬೇರೆ ಸರ್ಕಾರದ ಆಡಳಿತದಲ್ಲೂ ಸುಗ್ರೀವಾಜ್ಞೆ ತಂದಿದ್ದಾರೆ ಎಂದು ಕೆಪಿಸಿಸಿ ವಕ್ತಾರ  ಎಂ.ಲಕ್ಷ್ಮಣ್ ತಿಳಿಸಿದರು.<img loading="lazy" decoding="async" class="aligncenter size-full wp-image-135204" src="https://www.justkannada.in/wp-content/uploads/2025/01/nypunya1.jpg" alt="" width="500" height="97" srcset="https://www.justkannada.in/wp-content/uploads/2025/01/nypunya1.jpg 500w, https://www.justkannada.in/wp-content/uploads/2025/01/nypunya1-300x58.jpg 300w, https://www.justkannada.in/wp-content/uploads/2025/01/nypunya1-150x29.jpg 150w" sizes="auto, (max-width: 500px) 100vw, 500px" /></p>
<p>ಬೆಂಗಳೂರು ಅರಮನೆ ಆಸ್ತಿಗೆ ಸರ್ಕಾರದಿಂದ ಸುಗ್ರೀವಾಜ್ಞೆ ತರುವ ವಿಚಾರ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಲಕ್ಷ್ಮಣ್,  ಈ ಬಗ್ಗೆ ಇನ್ನೂ ಸುಗ್ರೀವಾಜ್ಞೆ ಆದೇಶವಾಗಿಲ್ಲ. ಸುಗ್ರೀವಾಜ್ಞೆ ತೀರ್ಮಾನ ತೆಗೆದುಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಅರಮನೆ ಆಸ್ತಿ ವಿಚಾರವಾಗಿ ಬೇರೆ ಬೇರೆ ಸರ್ಕಾರಗಳ ಆಡಳಿತದಲ್ಲೂ ಸುಗ್ರೀವಾಜ್ಞೆ ತಂದಿದ್ದಾರೆ. 1996 ರಲ್ಲಿ ಹೆಚ್ ಡಿ ದೇವೇಗೌಡರು ಸುಗ್ರೀವಾಜ್ಞೆ ತಂದಿದ್ದರು. ಬೆಂಗಳೂರು ಅರಮನೆ ಸುತ್ತಲಿನ ಜಾಗ ಬೃಂದಾವನ ಅಭಿವೃದ್ಧಿಗಾಗಿ ಸುಗ್ರೀವಾಜ್ಞೆ ಹೊರಡಿಸಿದ್ದರು. ಇದನ್ನು  ಚಾಲೆಂಜ್ ಮಾಡಿ ಜಯಚಾಮರಾಜೇಂದ್ರರ ವಾರಸುದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಂದು ಹೈ ಕೋರ್ಟ್ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು. ಬಳಿಕ ರಾಜವಂಶಸ್ಥರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆಗ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಪಾಡಿಕೊಂಡು ಹೋಗಲು ಆದೇಶ ನೀಡಿತು.</p>
<p>ಹಾಗೆಯೇ 2011ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಇಂಟೆರೆಮ್ ಅಪ್ಲಿಕೇಶನ್ ಹಾಕುತ್ತಾರೆ. ರಸ್ತೆ ಟ್ರಾಫಿಕ್ ಜಾಸ್ತಿ ಆಗುತ್ತಿದೆ. ರಸ್ತೆ ಅಗಲೀಕರಣ ಆಗಬೇಕೆಂದು ಅಪ್ಲಿಕೇಶನ್ ಹಾಕುತ್ತಾರೆ. ಸಾರ್ವಜನಿಕರ ಬಳಕೆಗಾಗಿ ಜಾಗ ನೀಡಿದ್ರೆ ತಪ್ಪೇನಿದೆ.? ಮೂರು ಸಾವಿರ ಕೋಟಿ ಹಣ ಕೇಳಿದರೆ ಹೇಗೆ ಕೊಡಲು ಸಾಧ್ಯ. ಸರ್ಕಾರದಿಂದ ಅಷ್ಟು ಪ್ರಮಾಣದ ಹಣ ನೀಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಆಡಳಿತದಲ್ಲಿ ಅರಮನೆ ವಿಚಾರ ಟಾರ್ಗೆಟ್ ಮಾಡಿಲ್ಲ. ಈ ಬಗ್ಗೆ ಪ್ರಮೋದ ದೇವಿ ಒಡೆಯರ್ ಕಿರುಕುಳ ಆಗುತ್ತಿದೆ ಎಂದು ಹೇಳಿಲ್ಲ. ಅನವಶ್ಯಕವಾಗಿ ಸಿಎಂ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಎಲ್ಲ ಸರ್ಕಾರದ ಅವಧಿಯಲ್ಲೂ ಸುಗ್ರೀವಾಜ್ಞೆ ತರಲಾಗಿದೆ. ಬಿಜೆಪಿಯವರು ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗ ಮೈಸೂರು ಅರಸರ ಮೇಲೆ ದ್ವೇಷ ಸಾಧಿಸುತ್ತಾರೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಎಂ.ಲಕ್ಷ್ಮಣ್ ತಿರುಗೇಟು ನೀಡಿದರು.</p>
<p><strong>ಶ್ರೀರಾಮಲುಗೆ  ಮುಖಭಂಗ ಮಾಡುವ ಕೆಲಸವನ್ನ ಬಿಜೆಪಿಯೇ ಮಾಡುತ್ತಿದೆ.</strong></p>
<p>ಬಿಜೆಪಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು  ನಡುವಿನ ವೈಮನಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್,  ಶ್ರೀರಾಮಲುಗೆ  ಮುಖಭಂಗ ಮಾಡುವ ಕೆಲಸವನ್ನ ಬಿಜೆಪಿಯೇ ಮಾಡುತ್ತಿದೆ. ಅವರನ್ನ ಹೊರಗಡೆ ಕಳಿಸುವ ಕೆಲಸ ಮಾಡುತ್ತಿದೆ. ಶ್ರೀ ರಾಮುಲು ಕಾಂಗ್ರೆಸ್ ಸಿದ್ದಾಂತ ಒಪ್ಪಿ ಬರುವುದಾದರೇ ಸ್ವಾಗತ. ಅವರ ಸಮುದಾಯವನ್ನು ಬಿಜೆಪಿಯವರು ಕೇವಲ ವೋಟಿಗಾಗಿ ಬಳಸಿಕೊಂಡಿದ್ದಾರೆ. ಅವರು ಅಲ್ಲೇ ಇದ್ದರೆ ತುಳಿದು ಬಿಡ್ತಾರೆ, ಅವರಿಗೆ ಅಲ್ಲಿ ಉಳಿಗಾಲ ಇಲ್ಲ. ಬಿಜೆಪಿಗೆ ಅಹಿಂದ ಸಮುದಾಯ ಕಂಡರೆ ಆಗಲ್ಲ ಎಂದು ವಾಗ್ದಾಳಿ ನಡೆಸಿದರು.</p>
<p>ಲೋಕಾಸಭಾ ಚುನಾವಣೆ ಸಂದರ್ಭದಲ್ಲಿ ಬಿಎಸ್ಪಿ ಅಭ್ಯರ್ಥಿ ರೇವತಿ ರಾಜ್ ನಾಮಪತ್ರ ಅಸಿಂಧುಗೊಳಿಸಿದ್ದ ಸಂಬಂಧ ಕೋರ್ಟ್ ಮೆಟ್ಟಿಲೇರಿ ಮರುಚುನಾವಣೆಗೆ ಆಗ್ರಹಿಸಿರುವ ವಿಚಾರ, ಸಂಸದ ಯದುವೀರ್ ಒಡೆಯರ್ ಗೆ ಹೈ ಕೋರ್ಟ್ ನೋಟೀಸ್ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್,  ನಾಮಪತ್ರ ತಿರಸ್ಕೃತ ಬಿಎಸ್ಪಿ ಅಭ್ಯರ್ಥಿಗೆ ನ್ಯಾಯ ಸಿಗಬೇಕು. ಅಭ್ಯರ್ಥಿ ರೇವತಿ ರಾಜ್  ಪರ ನನ್ನ ಬೆಂಬಲವಿದೆ. ಮತ್ತೆ ಚುನಾವಣೆ ನಡೆಸಿ ನ್ಯಾಯ ಒದಗಿಸಬೇಕು. ಈ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆದಿದೆ. ಆಕೆಯ ಪರ ನ್ಯಾಯಾಲಯದಲ್ಲೂ ನಾನು ಹೊರಡಲು ಸಿದ್ಧ. ದಲಿತ ಮಹಿಳಾ ಅಭ್ಯರ್ಥಿಗೆ ನ್ಯಾಯ ದೊರಕಬೇಕು. ಆಕೆಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಮತ್ತೆ ಚುನಾವಣೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು. ಆಕೆ ಒಬ್ಬ ಮಹಿಳೆ ಎಂದು ಜನರು ಆಶಿರ್ವಾದ ಮಾಡಬಹುದು. ಅಥವಾ ಗೆಲ್ಲುವ ಅಭ್ಯರ್ಥಿಯ ಮತಗಳನ್ನು ಪಡೆದು ಪರಿಣಾಮ ಬೀರಬಹುದು. ನಾಮಪತ್ರ ತಿರುಸ್ಕೃತಗೊಂಡು ಚುನಾವಣೆಯಲ್ಲಿ ಸ್ಪರ್ಧಿಸಲಾಗಲಿಲ್ಲ. ಸಂಪೂರ್ಣ ವಾಗಿ ಭೀಮಪುತ್ರಿಗೆ ನಾನು ಬೆಂಬಲ ನೀಡುತ್ತೇನೆ. ನ್ಯಾಯಾಲಯದಲ್ಲಿ ಅವರ ಪರ  ನಿಲ್ಲುತ್ತೇನೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>Key words: Ordinances, governments, Bangalore Palace, M. Lakshman</p>
<p>The post <a href="https://www.justkannada.in/m-lakshman/">ಬೇರೆ ಬೇರೆ ಸರ್ಕಾರದಲ್ಲೂ ಸುಗ್ರೀವಾಜ್ಞೆ: ಸಿದ್ದರಾಮಯ್ಯ ಆಡಳಿತದಲ್ಲಿ ಅರಮನೆ ವಿಚಾರ ಟಾರ್ಗೆಟ್ ಮಾಡಿಲ್ಲ- ಎಂ.ಲಕ್ಷ್ಮಣ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡ್ತಿರುವರು ಯಾರು ಅನ್ನೋದು ಗೊತ್ತಿದೆ; ಎಂ.ಲಕ್ಷ್ಮಣ್.</title>
		<link>https://www.justkannada.in/snehamayi-krishna-m-lakshman/</link>
		
		<dc:creator><![CDATA[prashanth]]></dc:creator>
		<pubDate>Thu, 19 Dec 2024 08:55:21 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[funding]]></category>
		<category><![CDATA[m.lakshman]]></category>
		<category><![CDATA[Mysore.]]></category>
		<category><![CDATA[Snehamayi Krishna]]></category>
		<guid isPermaLink="false">https://www.justkannada.in/?p=133645</guid>

					<description><![CDATA[<p>ಮೈಸೂರು,ಡಿಸೆಂಬರ್,19,2024 (www.justkannada.in): ಸ್ನೇಹಮಯಿ ಕೃಷ್ಣ ನಿನ್ನೆ ಗಂಭೀರ ಆರೋಪ‌ ಮಾಡಿದ್ದಾರೆ. ಇಬ್ಬರು ವ್ಯಕ್ತಿಗಳು ಆಮಿಷ ಒಡ್ಡಲು ಬಂದಿದ್ದರು ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಆದರೆ ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡ್ತಿರುವರು ಯಾರು ಅನ್ನೋದು ಗೊತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ತಿಳಿಸಿದ್ದಾರೆ. ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಸ್ನೇಹಮಯಿ ಕೃಷ್ಣ ಅವರು ಇಬ್ಬರು ಹಣದ ಆಮಿಷ ಒಡ್ಡಲು ಬಂದಿದ್ದರು ಎಂದು ಆರೋಪಿಸಿದ್ದಾರೆ. ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ [&#8230;]</p>
<p>The post <a href="https://www.justkannada.in/snehamayi-krishna-m-lakshman/">ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡ್ತಿರುವರು ಯಾರು ಅನ್ನೋದು ಗೊತ್ತಿದೆ; ಎಂ.ಲಕ್ಷ್ಮಣ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಡಿಸೆಂಬರ್,19,2024 (<a href="http://www.justkannada.in">www.justkannada.in</a>):</strong> ಸ್ನೇಹಮಯಿ ಕೃಷ್ಣ ನಿನ್ನೆ ಗಂಭೀರ ಆರೋಪ‌ ಮಾಡಿದ್ದಾರೆ. ಇಬ್ಬರು ವ್ಯಕ್ತಿಗಳು ಆಮಿಷ ಒಡ್ಡಲು ಬಂದಿದ್ದರು ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಆದರೆ ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡ್ತಿರುವರು ಯಾರು ಅನ್ನೋದು ಗೊತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ತಿಳಿಸಿದ್ದಾರೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಸ್ನೇಹಮಯಿ ಕೃಷ್ಣ ಅವರು ಇಬ್ಬರು ಹಣದ ಆಮಿಷ ಒಡ್ಡಲು ಬಂದಿದ್ದರು ಎಂದು ಆರೋಪಿಸಿದ್ದಾರೆ. ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒಂದು ಹಸಿ ಸುಳ್ಳಿನ ಪತ್ರ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಅವರ ಪತ್ನಿ ಯಾವುದೇ ಕಾರಣಕ್ಕೂ ಅಂತಹ ಮಟ್ಟಕ್ಕೆ ಇಳಿಯುವವರಲ್ಲ. ಆಮಿಷಕ್ಕೆ ಒಳಗಾಗದಿದ್ದರೇ ಸ್ನೇಹಮಯಿ ಕೃಷ್ಣ ಪುತ್ರ ಏಕೆ ಹರ್ಷ ಮತ್ತು ಶ್ರೀನಿಧಿ ಜೊತೆ ಹೋದರು. ಅವರು ಕೊಟ್ಟಿರುವುದು ಬೆಳಿಗ್ಗೆ 10:30ರ ಫುಟೇಜ್ ಮಾತ್ರ. ಅಂದಿನ ಇಡೀ ದಿನದ ಫುಟೇಜ್ ಕೊಡಬೇಕು. ನಮ್ಮ ಬಳಿಯೂ ಕೆಲವು ಫುಟೇಜ್ ಗಳಿವೆ. ಅವನ್ನು ನಾವು ಪೊಲೀಸರಿಗೆ ಕೊಡುತ್ತೇವೆ ಎಂದರು.</p>
<p>ನೀವು ಯಾರ ಬಳಿಯೂ, ಯಾರ ಆಮೀಷಕ್ಕೆ ಒಳಗಾಗಿಲ್ವಾ? ನಿಮ್ಮ ಕೋರ್ಟ್ ಹೋರಾಟಕ್ಕೆ ಹಣ ಎಲ್ಲಿಂದ ಬರುತ್ತೆ.? ಬೆಂಗಳೂರಿನಲ್ಲಿ ನಿಮಗೆ ಪ್ರತ್ಯೇಕ ರೂಂ ಒದಗಿಸಿಕೊಟ್ಟಿಲ್ವಾ.? ನಿಮಗೆ ದೊಡ್ಡ ಹೋಟೆಲ್ ನಲ್ಲಿ ಉಳಿದುಕೊಳ್ಳಲು ರೂಂ ವ್ಯವಸ್ಥೆ ಮಾಡಿರುವರು ಯಾರು ಅಂತ ಗೊತ್ತು. ನೀವು ಯಾವಾಗ ದೆಹಲಿಗೆ ಹೋಗಿದ್ದು ಎಲ್ಲ ಗೊತ್ತು. ಸ್ನೇಹಮಯಿ ಕೃಷ್ಣ ಈ ಸಿನಿಮಾದಲ್ಲಿ ಕೇವಲ ಸೈಡ್ ಆಕ್ಟರ್ ಅಷ್ಟೇ. ಡೈರೆಕ್ಟರ್, ನಿರ್ಮಾಪಕರೇ ಬೇರೆ ಇದಾರೆ ಎಂದು  ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.</p>
<p><strong>ಅಮಿತ್ ಶಾ, ನರೇಂದ್ರ ಮೋದಿಯವರ ದುರಹಂಕಾರದ ಪರಮಾವಧಿ ಇದು</strong></p>
<p>ಬಿಆರ್  ಅಂಬೇಡ್ಕರ್ ಕುರಿತು ಕೇಂದ್ರ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ವಿರುದ್ಧ ಕಿಡಿಕಾರಿದ  ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್, ಅಮಿತ್ ಶಾ, ನರೇಂದ್ರ ಮೋದಿಯವರ ದುರಹಂಕಾರದ ಪರಮಾವಧಿ ಇದು. ನೀವು ಕೊಟ್ಟಿರುವ ಹೇಳಿಕೆ ಸರ್ಕಾರಿ ಚಾನೆಲ್ ನಲ್ಲೇ ಪ್ರಚಾರವಾಗಿರುವುದು ಬೇರೆ ಖಾಸಗಿ ಚಾನೆಲ್ ಪ್ರಸಾರ ಮಾಡಿಲ್ಲ. ಅಂಬೇಡ್ಕರ್ ಯಾವುದೇ ಒಂದು ಜಾತಿ, ಸಮುದಾಯಕ್ಕೆ ಸೇರಿದವರಲ್ಲ. ಅಂಬೇಡ್ಕರ್ ಸಂವಿಧಾನ ಇಲ್ಲ ಅಂದಿದ್ರೆ ಅಮಿತ್ ಶಾ ಗುಜರಿ ವ್ಯಾಪಾರ ಮಾಡುತ್ತಿದ್ದರು. ಮೋದಿ ಎಲ್ಲೋ ಟೀ ಮಾಡಿಕೊಂಡಿರುತ್ತಿದ್ದರು ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಸತ್ಯಾವಾಗಿದೆ. ಇದೆಲ್ಲ ಬಿಜೆಪಿ ಅವರ ಮನಸ್ಥಿತಿ ಏನು ಎಂಬುದನ್ನು ತಿಳಿಯುತ್ತದೆ.400 ಸೀಟು ಬಂದರೆ ಇಡೀ ಸಂವಿಧಾನವನ್ನೇ ಬದಲಾವಣೆ ತರುತ್ತೇವೆ ಎನ್ನುತ್ತಾರೆ. ಅಂಬೇಡ್ಕರ್ ಅವರು ನಮ್ಮ ಫ್ಯಾಷನ್, ಅಂಬೇಡ್ಕರ್ ಅವರು ನಮ್ಮ ಮೋಟಿವೇಷನ್ ಎಂದು ಹರಿಹಾಯ್ದರು.</p>
<p>Key words: funding, Snehamayi Krishna,  M. Lakshman, Mysore</p>
<p>The post <a href="https://www.justkannada.in/snehamayi-krishna-m-lakshman/">ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡ್ತಿರುವರು ಯಾರು ಅನ್ನೋದು ಗೊತ್ತಿದೆ; ಎಂ.ಲಕ್ಷ್ಮಣ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಸಿಎಂ ಸಿದ್ದರಾಮಯ್ಯ ವಿರುದ್ದ ಹೆಚ್.ಡಿಕೆ ಆರೋಪ: ಮನೆ ಮುಂಭಾಗವೇ ದಾಖಲೆ ರಿಲೀಸ್ ಮಾಡಿ ತಿರುಗೇಟು ಕೊಟ್ಟ ಎಂ. ಲಕ್ಷ್ಮಣ್</title>
		<link>https://www.justkannada.in/hdk-allegation-cm-siddaramaiah-m-lakshman/</link>
		
		<dc:creator><![CDATA[prashanth]]></dc:creator>
		<pubDate>Tue, 17 Sep 2024 10:54:28 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Allegation]]></category>
		<category><![CDATA[CM Siddaramaiah]]></category>
		<category><![CDATA[HDK]]></category>
		<category><![CDATA[m.lakshman]]></category>
		<guid isPermaLink="false">https://www.justkannada.in/?p=129377</guid>

					<description><![CDATA[<p>ಮೈಸೂರು,ಸೆಪ್ಟಂಬರ್,17,2024 (www.justkannada.in): ದಲಿತರನ್ನ ಒಕ್ಕಲೆಬ್ಬಿಸಿ ಸಿದ್ದರಾಮಯ್ಯ ಮನೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಕೆಲ ದಾಖಲೆ ಬಿಡುಗಡೆ ಮಾಡುವ ಮೂಲಕ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದ ಮೈಸೂರಿನ ವಿಜಯನಗರಲ್ಲಿರುವ ಮನೆ ಬಳಿಗೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಭೇಟಿ ನೀಡಿ ಸಿದ್ದರಾಮಯ್ಯ ನಿರ್ಮಾಣ ಮಾಡಿದ್ದ ಮನೆ ಮುಂಭಾಗವೇ ಎಂ.ಲಕ್ಷ್ಮಣ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಹೆಚ್.ಡಿ ಕುಮಾರಸ್ವಾಮಿ ಆರೋಪಕ್ಕೆ [&#8230;]</p>
<p>The post <a href="https://www.justkannada.in/hdk-allegation-cm-siddaramaiah-m-lakshman/">ಸಿಎಂ ಸಿದ್ದರಾಮಯ್ಯ ವಿರುದ್ದ ಹೆಚ್.ಡಿಕೆ ಆರೋಪ: ಮನೆ ಮುಂಭಾಗವೇ ದಾಖಲೆ ರಿಲೀಸ್ ಮಾಡಿ ತಿರುಗೇಟು ಕೊಟ್ಟ ಎಂ. ಲಕ್ಷ್ಮಣ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಸೆಪ್ಟಂಬರ್,17,2024 (<a href="http://www.justkannada.in">www.justkannada.in</a>):</strong> ದಲಿತರನ್ನ ಒಕ್ಕಲೆಬ್ಬಿಸಿ ಸಿದ್ದರಾಮಯ್ಯ ಮನೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಕೆಲ ದಾಖಲೆ ಬಿಡುಗಡೆ ಮಾಡುವ ಮೂಲಕ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದ ಮೈಸೂರಿನ ವಿಜಯನಗರಲ್ಲಿರುವ ಮನೆ ಬಳಿಗೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಭೇಟಿ ನೀಡಿ ಸಿದ್ದರಾಮಯ್ಯ ನಿರ್ಮಾಣ ಮಾಡಿದ್ದ ಮನೆ ಮುಂಭಾಗವೇ ಎಂ.ಲಕ್ಷ್ಮಣ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಹೆಚ್.ಡಿ ಕುಮಾರಸ್ವಾಮಿ ಆರೋಪಕ್ಕೆ ಕೆಲ ದಾಖಲೆ ಬಿಡುಗಡೆ ಮಾಡಿ ದೂರು ದಾಖಲಿಸುವ ಎಚ್ಚರಿಕೆ ನೀಡಿದರು.</p>
<p>ಈ ವೇಳೆ ಮಾತನಾಡಿದ ಎಂ.ಲಕ್ಷ್ಮಣ್, ಸಿದ್ದರಾಮಯ್ಯ ಸಾಲ ಮಾಡಿ ಮನೆ ಕಟ್ಟಿದ್ದರು. ಮಾಡಿದ ಸಾಲ ತೀರಿಸಲು ಮನೆ ಮಾರಿದ್ದರು. 25 ವರ್ಷದ ಹಿಂದಿನ ವಿಚಾರವನ್ನು ಈಗ ಯಾಕೆ ವಿವಾದ ಮಾಡುತ್ತಿದ್ದೀರಿ? ಎಂದು ಹೆಚ್.ಡಿಕೆಗೆ ಪ್ರಶ್ನಿಸಿದರು.</p>
<p>1950ರಲ್ಲಿ ಸಾಕಮ್ಮ ಅವರ ತಂದೆ ಹೆಸರಲ್ಲಿ 1.20 ಎಕರೆ ಜಾಗ ಇತ್ತು.  ಈ ಪೈಕಿ ಸಾಕಮ್ಮ ಅವರಿಗೆ ಸರ್ವೇ ನಂ 70/4ಎ ನಲ್ಲಿ 30 ಗುಂಟೆ ಜಮೀನು ಬಂತು.  ಇದು ನೋಟಿಫೈ ಆಗಿರಲಿಲ್ಲ. ಈ ಜಾಗವನ್ನು ಸಿದ್ದರಾಮಯ್ಯ ಖರೀದಿ ಮಾಡಿ 1997ರಲ್ಲಿ 120× 80 ಅಳತೆಯ ಮನೆ ನಿರ್ಮಿಸಿದರು. ಆರ್‌ಟಿಐ ಕಾರ್ಯಕರ್ತ ಗಂಗರಾಜು ಮುಡಾಕ್ಕೆ ಆರ್‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು.  ಮುಡಾದವರು 70/4ಎ ಬದಲು ನೋಟಿಫೈ ಆಗಿದ್ದ 70/4ಬಿ ಮಾಹಿತಿ ನೀಡಿದರು.  ಆ ಮಾಹಿತಿಯ ಆಧಾರದ ಮೇಲೆ 2018ರಲ್ಲಿ ಲಕ್ಷ್ಮಿಪುರಂ ಠಾಣೆಯಲ್ಲಿ ದೂರು ಸಲ್ಲಿಸಿದ್ರು.  ಸಿವಿಲ್ ಕೋರ್ಟ್‌ನಲ್ಲಿ ವಿಚಾರಣೆ ನಡೆದು ಸಿದ್ದರಾಮಯ್ಯ ತಪ್ಪು ಇಲ್ಲ ಅಂತ ತೀರ್ಪು ಬಂತು.  ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.  2019ರಲ್ಲಿ ಹೈಕೋರ್ಟ್ ಕೂಡ ಪ್ರಕರಣವನ್ನು ರದ್ದು ಮಾಡಿದೆ. ಸುಪ್ರೀಂಕೋರ್ಟ್‌ನಲ್ಲೂ ಪ್ರಕರಣ ಅಡ್ಮಿಟ್ ಆಗಿಲ್ಲ.  ಇಷ್ಟೆಲ್ಲ ಮುಗಿದ ಮೇಲೂ ದಲಿತರ ಜಾಗವನ್ನು ಒಕ್ಕಲೆಬ್ಬಿಸಿ ಸಿದ್ದರಾಮಯ್ಯ ಮನೆ ಕಟ್ಟಿಕೊಂಡಿದ್ದಾರೆ ಅಂತ ಆರೋಪ ಮಾಡುತ್ತಿದ್ದಾರೆ.</p>
<p>1998ರಲ್ಲೇ ಸಿದ್ದರಾಮಯ್ಯ ತಮ್ಮ ಮನೆಯನ್ನು ಖೋಡೆ ಅವರಿಗೆ ಮಾರಾಟ ಮಾಡಿದ್ದಾರೆ. ಸಿದ್ದರಾಮಯ್ಯ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಸಾಲ ಮಾಡಿ ಮನೆ ಕಟ್ಟಿದ್ದರು.  ಸಾಲ ಪಾವತಿ ಮಾಡುತ್ತಿಲ್ಲ ಅಂತ ಪೇಪರ್ ನೋಟಿಫಿಕೇಷನ್ ಬಂದ ಮೇಲೆ ಬೇಸರದಿಂದ ಮನೆ ಮಾರಾಟ ಮಾಡಿ ಸಾಲ ತೀರಿಸಿದರು. ಈಗ ಸಿದ್ದರಾಮಯ್ಯ ಹೆಸರಲ್ಲಿ ಮನೆ ಇಲ್ಲ.  ಆರೋಪ ಮಾಡುವ ಮುನ್ನ ಸರಿಯಾದ ಮಾಹಿತಿ ತಿಳಿದುಕೊಳ್ಳಬೇಕು.  ಇಲ್ಲವಾದರೆ ಕುಮಾರಸ್ವಾಮಿ ವಿರುದ್ಧ ನಾವು ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಎಚ್ಚರಿಕೆ ಕೊಟ್ಟರು.</p>
<p>Key words: HDK, allegation, CM Siddaramaiah, M. Lakshman</p>
<p>The post <a href="https://www.justkannada.in/hdk-allegation-cm-siddaramaiah-m-lakshman/">ಸಿಎಂ ಸಿದ್ದರಾಮಯ್ಯ ವಿರುದ್ದ ಹೆಚ್.ಡಿಕೆ ಆರೋಪ: ಮನೆ ಮುಂಭಾಗವೇ ದಾಖಲೆ ರಿಲೀಸ್ ಮಾಡಿ ತಿರುಗೇಟು ಕೊಟ್ಟ ಎಂ. ಲಕ್ಷ್ಮಣ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಸಿಎಂ ಪತ್ನಿ ಅನ್ಯಾಯವಾಗಿ ನಿವೇಶನ ಪಡೆದಿರುವ ಒಂದು ದಾಖಲೆ ಇದ್ದರೆ ಮಾಧ್ಯಮಗಳ ಮುಂದಿಡಿ- ಬಿಜೆಪಿಗೆ ಎಂ.ಲಕ್ಷ್ಮಣ್ ಸವಾಲು</title>
		<link>https://www.justkannada.in/muda-scma-m-lakshman-challenge-bjp/</link>
		
		<dc:creator><![CDATA[prashanth]]></dc:creator>
		<pubDate>Thu, 04 Jul 2024 12:22:53 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[BJP]]></category>
		<category><![CDATA[challenge]]></category>
		<category><![CDATA[m.lakshman]]></category>
		<category><![CDATA[MUDA]]></category>
		<category><![CDATA[scma]]></category>
		<guid isPermaLink="false">https://www.justkannada.in/?p=125899</guid>

					<description><![CDATA[<p>ಬೆಂಗಳೂರು,ಜುಲೈ,4,2024 (www.justkannada.in):  ಸಿದ್ದರಾಮಯ್ಯನವರು ಅಧಿಕಾರ ದುರುಪಯೋಗ ಮಾಡಿಕೊಂಡು ಈ ನಿವೇಶನ ಕೊಡಿಸಿದ್ದರೆ ಅದಕ್ಕೆ ಪೂರಕವಾಗಿರು ದಾಖಲೆಯನ್ನು ಮುಂದಿಟ್ಟು ಮಾತನಾಡಲಿ.  ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮ ಅವರು ಅನ್ಯಾಯವಾಗಿ ನಿವೇಶನ ಪಡೆದಿರುವ ಒಂದು ದಾಖಲೆ ಇದ್ದರೆ ಅದನ್ನು ಮಾಧ್ಯಮಗಳ ಮುಂದೆ ಇಡಿ ಎಂದು ಬಿಜೆಪಿ ನಾಯಕರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್  ಸವಾಲು ಹಾಕಿದರು. ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಎಂ.ಲಕ್ಷ್ಮಣ್ ಹೇಳಿದ್ದಿಷ್ಟು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮವಾಗಿದೆ ಎಂದು ಬಿಜೆಪಿ ನಾಯಕರಾದ ಆರ್ ಅಶೋಕ್ ಹಾಗೂ ವಿಜಯೇಂದ್ರ [&#8230;]</p>
<p>The post <a href="https://www.justkannada.in/muda-scma-m-lakshman-challenge-bjp/">ಸಿಎಂ ಪತ್ನಿ ಅನ್ಯಾಯವಾಗಿ ನಿವೇಶನ ಪಡೆದಿರುವ ಒಂದು ದಾಖಲೆ ಇದ್ದರೆ ಮಾಧ್ಯಮಗಳ ಮುಂದಿಡಿ- ಬಿಜೆಪಿಗೆ ಎಂ.ಲಕ್ಷ್ಮಣ್ ಸವಾಲು</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಜುಲೈ,4,2024 (<a href="http://www.justkannada.in">www.justkannada.in</a>): </strong> ಸಿದ್ದರಾಮಯ್ಯನವರು ಅಧಿಕಾರ ದುರುಪಯೋಗ ಮಾಡಿಕೊಂಡು ಈ ನಿವೇಶನ ಕೊಡಿಸಿದ್ದರೆ ಅದಕ್ಕೆ ಪೂರಕವಾಗಿರು ದಾಖಲೆಯನ್ನು ಮುಂದಿಟ್ಟು ಮಾತನಾಡಲಿ.  ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮ ಅವರು ಅನ್ಯಾಯವಾಗಿ ನಿವೇಶನ ಪಡೆದಿರುವ ಒಂದು ದಾಖಲೆ ಇದ್ದರೆ ಅದನ್ನು ಮಾಧ್ಯಮಗಳ ಮುಂದೆ ಇಡಿ ಎಂದು ಬಿಜೆಪಿ ನಾಯಕರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್  ಸವಾಲು ಹಾಕಿದರು.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಎಂ.ಲಕ್ಷ್ಮಣ್ ಹೇಳಿದ್ದಿಷ್ಟು</p>
<p>ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮವಾಗಿದೆ ಎಂದು ಬಿಜೆಪಿ ನಾಯಕರಾದ ಆರ್ ಅಶೋಕ್ ಹಾಗೂ ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಮ್ಮ ಅವರ ಹೆಸರನ್ನು ಮಾಧ್ಯಮಗಳ ಮುಂದೆ ತಂದು ತೇಜೋವಧೆ ಮಾಡುತ್ತಿದ್ದಾರೆ. ಅವರ ಸುಳ್ಳು ಆರೋಪಗಳಿಗೆ ಸ್ಪಷ್ಟನೆ ನೀಡುತ್ತಿದ್ದೇನೆ.</p>
<p>ಸರ್ವೇ ಸಂಖ್ಯೆ 464 ಕೆಸರೆ ಗ್ರಾಮದಲ್ಲಿ ಲೇಔಟ್ ಮಾಡಿ ನಿವೇಶನ ಹಂಚಿ ಜನ ಮನೆ ನಿರ್ಮಿಸಿ ವಾಸ ಮಾಡುತ್ತಿದ್ದಾರೆ. 31-10-1992ರಲ್ಲಿ ಈ ಗ್ರಾಮದಲ್ಲಿ 3 ಎಕರೆ 16 ಗುಂಟೆ ಜಾಗದ ಮಾಲೀಕರು ಜವರಯ್ಯ. ಇವರ ಜಮೀನನ್ನು ಮೈಸೂರು ನಗರಾಭಿದ್ಧಿ ಪ್ರಾಧಿಕಾರ ನೋಟಿಫೈ ಮಾಡಿ ವಶಪಡಿಸಿಕೊಳ್ಳುತ್ತಾರೆ. 18-05-1998ರಲ್ಲಿ ಈ ಜಮೀನನ್ನು ಡಿನೋಟಿಫಿಕೇಷನ್ ಆದಾಗ ಈ ಜಾಗ ಜವರಯ್ಯ ಅವರ ಹೆಸರಿನಲ್ಲೇ ಇರುತ್ತದೆ.</p>
<p>ನಂತರ 2005ರಲ್ಲಿ ಬಿ.ಎಂ ಮಲ್ಲಿಕಾರ್ಜುನಸ್ವಾಮಿ ಎಂಬುವವರು ಈ ಜಾಗವನ್ನು ಖರೀದಿ ಮಾಡುತ್ತಾರೆ. ಮಲ್ಲಿಕಾರ್ಜುನ ಸ್ವಾಮಿ ಅವರು ಸಿದ್ದರಾಮಯ್ಯ ಅವರ ಬಾಮೈದ. ಅಂದರೆ ಧರ್ಮಪತ್ನಿಯ ಅಣ್ಣ. ನಂತರ 3ಎಕರೆ 16 ಗುಂಟೆ ಜಾಗವನ್ನು ದಾನಪತ್ರದ ಮೂಲಕ ಶ್ರೀಮತಿ ಪಾರ್ವತಮ್ಮ ಅವರಿಗೆ ದಾನಪತ್ರದ ಮೂಲಕ 2010ರಲ್ಲಿ ಈ ಜಮೀನನ್ನು ನೀಡುತ್ತಾರೆ. 2015ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮರುನೋಟಿಫೈ ಮಾಡದೆ ಈ ಜಾಗ ಹಾಗೂ ಅದರ ಸುತ್ತಮುತ್ತಲ ಜಾಗಗಳಲ್ಲಿ ನಿವೇಶನ ಮಾಡಿ ಹಂಚಿಕೆ ಮಾಡುತ್ತಾರೆ.<img loading="lazy" decoding="async" class="aligncenter size-full wp-image-96744" src="https://www.justkannada.in/wp-content/uploads/2022/09/laxman.jpg" alt="" width="500" height="281" srcset="https://www.justkannada.in/wp-content/uploads/2022/09/laxman.jpg 500w, https://www.justkannada.in/wp-content/uploads/2022/09/laxman-300x169.jpg 300w" sizes="auto, (max-width: 500px) 100vw, 500px" /></p>
<p>2017ರಲ್ಲಿ ಪಾರ್ವತಿ ಅವರು ಮುಡಾಗೆ ಪತ್ರ ಬರೆದು ನಮ್ಮ ಗಮನಕ್ಕೆ ಬಾರದೆ ನಮ್ಮ ಜಮೀನನ್ನು ನಿವೇಶನ ಮಾಡಿ ಹಂಚಿಕೆ ಮಾಡಿದ್ದೀರಿ ಎಂದು ದೂರು ದಾಖಲಿಸುತ್ತಾರೆ. ನಂತರ ಅವರು 27 ದೂರು ನೀಡಿದ್ದಾರೆ. ಇವರ 3 ಎಕರೆ 16 ಗುಂಟೆ ಜಾಗದಲ್ಲಿ ಮುಡಾ ಅವರು 59 ನಿವೇಶನಗಳನ್ನು ಮಾಡಿ ಹಂಚಿದ್ದಾರೆ.</p>
<p>30-11-2021ರಲ್ಲಿ ಮುಡಾ ಒಂದು ನಿರ್ಣಯಕ್ಕೆ ಬಂದು ಇವರಿಗೆ ಪರ್ಯಾಯವಾಗಿ ಜಾಗ ನೀಡಲು ತೀರ್ಮಾನಿಸುತ್ತದೆ. ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹೊಸ ನೋಟಿಫಿಕೇಶನ್ ಮಾಡಿ ಜಮೀನು ವಶಪಡಿಸಿಕೊಂಡವರಿಗೆ 40:60ರ ಅನುಪಾತದಲ್ಲಿ ಭೂಮಿ ನೀಡಲು ತೀರ್ಮಾನಿಸುತ್ತದೆ. ಅಂದರೆ ರೈತನಿಂದ 10 ಎಕರೆ ಭೂಮಿ ವಶಪಡಿಸಿಕೊಂಡರೆ 60% ರೈತರಿಗೆ 40% ಪ್ರಾಧಿಕಾರಕ್ಕೆ ಹೋಗುವಂತೆ ಮಾಡಲಾಗುತ್ತದೆ. ಬಿಡಿಎ ವ್ಯಾಪ್ತಿಯಲ್ಲಿ ಈ ನಿಯಮದ ವಿರುದ್ಧ ರೈತರು ನ್ಯಾಯಾಲಯದ ಮೆಟ್ಟಿಲೇರಿದಾಗ 50:50 ಅನುಪಾತದ ಸೂತ್ರವನ್ನು 2020ರಲ್ಲಿ ಬೆಂಗಳೂರಿಗೆ ಅನ್ವಯಿಸುವಂತೆ ಮಾತ್ರ ತರಲಾಗುತ್ತದೆ. 2021ರಲ್ಲಿ ಮುಡಾ ಸಂಸ್ಥೆ ಕೂಡ ಇದೇ ರೀತಿ 50:50 ಅನುಪಾತದಲ್ಲಿ ಭೂಮಿ ಹಂಚಿಕೆಗೆ ನಿರ್ಣಯ ಹೊರಡಿಸಲಾಗುತ್ತದೆ. ರಾಜ್ಯ ಸರ್ಕಾರದ ಆದೇಶದ ಮೇರೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳದೇ 3 ಎಕರೆ 26 ಗುಂಟೆ ಜಾಗವನ್ನು ಉಪಯೋಗಿಸಿಕೊಂಡಿರುವ ಅನ್ವಯ 50:50 ಅನುಪಾತದಲ್ಲಿ ನಿವೇಶನ ಪರಿಹಾರ ರೂಪದಲ್ಲಿ ಮಂಜೂರು ಮಾಡಲಾಗಿದೆ ಎಂದು ಮುಡಾ ವತಿಯಿಂದ ಪಾರ್ವತಮ್ಮ ಅವರಿಗೆ ಪತ್ರ ನೀಡಲಾಗಿದೆ. ಪ್ರಾಧಿಕಾರಕ್ಕೆ ಇದೇ ಜಾಗದಲ್ಲಿ ನಿವೇಶನ ನೀಡಿ ಎಂದು ಕೇಳಿಲ್ಲ. ಪ್ರಾಧಿಕಾರವೇ ತನ್ನ ಸ್ವಂತ ನಿರ್ಧಾರದ ಮೇಲೆ 14 ನಿವೇಶನಗಳನ್ನು ವಿಜಯನಗರ ಮೂರು ಹಾಗೂ ನಾಲ್ಕನೇ ಹಂತದಲ್ಲಿ ನೀಡಿದ್ದಾರೆ.</p>
<p>ಕಾನೂನಿನಲ್ಲಿ ಭೂಸ್ವಾಧೀನ ಮಾಡಿದ ಜಾಗದಲ್ಲೇ ಬದಲಿ ಜಾಗ ನೀಡಬೇಕು ಎಂದು ಇದೆ. ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ ಪ್ರಕಾರ ಬೇರೆ ಜಾಗದಲ್ಲೂ ನಿವೇಶನ ಹಂಚಲು ಅವಕಾಶವಿದೆ. ಅದರ ಪ್ರಕಾರ ಪಾರ್ವತಮ್ಮ ಅವರಿಗೆ ನಿವೇಶನ ನೀಡಿದ್ದಾರೆ. ಪಾರ್ವತಮ್ಮನವರು ಇಂತಹುದೇ ಜಾಗದಲ್ಲಿ ನಿವೇಶನ ಬೇಕು ಎಂದು ಅರ್ಜಿ ಹಾಕಿಲ್ಲ ಎಂದು ಎಂ.ಲಕ್ಷ್ಮಣ್ ಸ್ಪಷ್ಟಪಡಿಸಿದರು.</p>
<p>ವಿಜಯೇಂದ್ರ ಹಾಗೂ ಅಶೋಕ್ ಅವರಿಗೆ ಮಾನ ಮರ್ಯಾದೆ ಇದ್ದರೆ, ಸಿದ್ದರಾಮಯ್ಯನವರು ಅಧಿಕಾರ ದುರುಪಯೋಗ ಮಾಡಿಕೊಂಡು ಈ ನಿವೇಶನ ಕೊಡಿಸಿದ್ದರೆ ಅದಕ್ಕೆ ಪೂರಕವಾಗಿರು ದಾಖಲೆಯನ್ನು ಮುಂದಿಟ್ಟು ಮಾತನಾಡಲಿ. ಈ ಮುಡಾ ಕರ್ಮಾಕಾಂಡ ಬಿಜೆಪಿ ಸರ್ಕಾರದ್ದು. ಅಶೋಕ್ ಅವರೇ ನೀವು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಅನರ್ಹರು. ನೀವು ಹೇಳಿದಂತೆ 60 ನಿವೇಶನ ಎಲ್ಲಿ ಕೊಟ್ಟಿದ್ದಾರೆ.</p>
<p>ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಟೀಕೆ ಮಾಡಲು ಸಿಎಂ ನಿವಾಸ ಮುತ್ತಿಗೆ ಹಾಕುತ್ತಿದ್ದಾರೆ. ವಿಜಯೇಂದ್ರ ಅವರೇ ನಿಮ್ಮ ತಂದೆ ಸಿಎಂ ಆಗಿದ್ದಾಗ ನೀವು ಪರ್ಯಾಯ ಸರ್ಕಾರ ನಡೆಸುತ್ತಿದ್ದಿರಿ. ಸಂಪುಟದಲ್ಲಿ 34 ಸಚಿವರೂ ನಿಮ್ಮವರನ್ನೇ ಇಟ್ಟುಕೊಂಡು ಗೋಲ್ಡ್ ಫಿಂಚ್ ಹೊಟೇಲ್ ನಲ್ಲಿ ಸರ್ಕಾರ ನಡೆಸುತ್ತಿದ್ದವರು ನೀವು. ಮಾರಿಷಿಯಸ್ ನ ಬ್ಯಾಂಕ್ ಗಳಲ್ಲಿರುವ ಖಾತೆಗಳಲ್ಲಿ ಎಷ್ಟೆಷ್ಟು ಹಣ ಇದೆ ಎಂದು ಹೇಳಿ. ಗಾಜಿನ ಮನೆಯಲ್ಲಿ ಕೂತು ಸಿದ್ದರಾಮಯ್ಯ ಹಾಗೂ ಅವರ ಧರ್ಮಪತ್ನಿ ಬಗ್ಗೆ ಮಾತನಾಡುತ್ತೀರಾ? ಎಂದು ಎಂ.ಲಕ್ಷ್ಮಣ್ ಗುಡುಗಿದರು.</p>
<p>ಇನ್ನು ಮೈಸೂರು ಉಪಆಯುಕ್ತರು 16 ಪತ್ರ ಬರೆದಿದ್ದರೂ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ಅವರು ಯಾರ ವಿರುದ್ಧ ಪತ್ರ ಬರೆದಿದ್ದರು? ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 2020, 2021, 2022ರಲ್ಲಿ ಆಗಿರುವ ಅಕ್ರಮದ ಬಗ್ಗೆ ತನಿಖೆ ಮಾಡುವಂತೆ ಪತ್ರ ಬರೆದಿದ್ದಾರೆ. ಅವರ ಪತ್ರದಲ್ಲಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಆರೋಪ ಮಾಡಿದ್ದರು. ಈ ಪತ್ರದ ಆಧಾರದ ಮೇಲೆ ಸಿದ್ದರಾಮಯ್ಯ ಅವರು ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದ ಸಮಿತಿ ಮಾಡಿ ತನಿಖೆ ನಡೆಸಲಾಗುತ್ತಿದೆ.</p>
<p>ಮೂಡಾದಲ್ಲಿ 5 ಸಾವಿರ ಕೋಟಿಯಷ್ಟು ಅಕ್ರಮ ನಡೆದಿದ್ದರೆ ಅದೆಲ್ಲವೂ ಬಿಜೆಪಿ ಆಡಳಿತ ಅವಧಿಯಲ್ಲಿ ಆಗಿರುವ ಅಕ್ರಮ. ಪಾರ್ವತಮ್ಮ ಅವರು ಅನ್ಯಾಯವಾಗಿ ನಿವೇಶನ ಪಡೆದಿರುವ ಒಂದು ದಾಖಲೆ ಇದ್ದರೆ ಅದನ್ನು ಮಾಧ್ಯಮಗಳ ಮುಂದೆ ಇಡಿ. ಇಲ್ಲದಿದ್ದರೆ ನೀವು ಸಾರ್ವಜನಿಕವಾಗಿ ಇರಲು ನೈತಿಕತೆ ಇರುವುದಿಲ್ಲ. ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ಅಶೋಕ್ ಅವರೇ ನೀವು ರಾಜಕೀಯಕ್ಕೆ ಬರುವ ಮುನ್ನ ಇದ್ದ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಎಂದು ಹೇಳುತ್ತೀರಾ? ಈಗ ಅದು ಎಷ್ಟಾಗಿದೆ? ನಿಮ್ಮ ಬೇನಾಮಿ ಆಸ್ತಿ ಎಷ್ಟಿದೆ ಎಂದು ಮುಂದಿನ ದಿನಗಳಲ್ಲಿ ಒಂದೊಂದಾಗಿ ಬಿಚ್ಚಿಡುತ್ತೇವೆ. ಇವುಗಳ ಬಗ್ಗೆ ತನಿಖೆ ಮಾಡಿಸಿ ಮುಟ್ಟುಗೋಲು ಹಾಕಿಸುತ್ತೇವೆ. ವಿರೋಧ ಪಕ್ಷ ನಾಯಕನಾಗಿ ನಿಮ್ಮ ಮಾತಿನಲ್ಲಿ ನಿಜ ಇರಬೇಕಲ್ಲವೇ? ವಿರೋಧ ಪಕ್ಷದ ನಾಯಕ ಎಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ಸರಿಸಮನಾದ ಸ್ಥಾನ. ಸಿದ್ದರಾಮಯ್ಯ ಅವರೂ ಕೂಡ ವಿರೋಧ ಪಕ್ಷದ ನಾಯಕರಾಗಿದ್ದರು. ನಿಮ್ಮಂತೆ ಹುಚ್ಚನ ರೀತಿ ಮಾತನಾಡುತ್ತಿರಲಿಲ್ಲ. ನೀವು ಮಾತೆತ್ತಿದರೆ ಸುಳ್ಳನ್ನೇ ಆಡುತ್ತೀರಿ. ವಿರೋಧ ಪಕ್ಷದ ನಾಯಕ ಸ್ಥಾನದಿಂದ ನಿಮ್ಮನ್ನು ತೆಗೆಯುತ್ತಾರೆ ಎಂಬ ಭಯದಲ್ಲಿ ದಿನಬೆಳಗಾದರೆ ಸುಳ್ಳು ಆರೋಪ ಮಾಡುತ್ತಿದ್ದೀರಿ. ನೀವು ಆರೋಪ ಮಾಡುವುದಲ್ಲ, ದಾಖಲೆ ಸಮೇತ ಮಾತನಾಡಬೇಕು ಎಂದು ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.</p>
<p>ಮುಂಬರುವ ಅಧಿವೇಶನದಲ್ಲಿ ನೀವು ಈ ವಿಚಾರವಾಗಿ ಮಾತನಾಡಿ. ಸಿದ್ದರಾಮಯ್ಯನವರು ಕೇವಲ ಒಂದೇ ಒಂದು ಸಾಲಿನಲ್ಲಿ ಉತ್ತರ ನೀಡುತ್ತಾರೆ. ಬಿಜೆಪಿ ಕಾರ್ಯಕರ್ತನೇ ಅಶೋಕ್ ಅವರು 2010ರಲ್ಲಿ ನನ್ನನ್ನು ಮೇಯರ್ ಮಾಡುವುದಾಗಿ ಹೇಳಿ 10 ಕೋಟಿ ಹಣ ಪಡೆದಿದ್ದರು. ಆದರೆ ಹಣವೂ ವಾಪಸ್ ನೀಡಲಿಲ್ಲ, ಮೇಯರ್ ಸ್ಥಾನವನ್ನು ನೀಡಲಿಲ್ಲ ಎಂದು ಹೇಳಿಕೆ ನೀಡಿರುವ ದಾಖಲೆ ನಮ್ಮ ಬಳಿ ಇವೆ.  ಈ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಜರುಗಿಸುವಂತೆ ನಾವು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು.</p>
<p>Key words: muda, scma, M.Lakshman, Challenge, bjp</p>
<p>The post <a href="https://www.justkannada.in/muda-scma-m-lakshman-challenge-bjp/">ಸಿಎಂ ಪತ್ನಿ ಅನ್ಯಾಯವಾಗಿ ನಿವೇಶನ ಪಡೆದಿರುವ ಒಂದು ದಾಖಲೆ ಇದ್ದರೆ ಮಾಧ್ಯಮಗಳ ಮುಂದಿಡಿ- ಬಿಜೆಪಿಗೆ ಎಂ.ಲಕ್ಷ್ಮಣ್ ಸವಾಲು</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಸ್ಯಾಂಟ್ರೋ ರವಿ ಒಬ್ಬ ಬಿಜೆಪಿಯ ಪ್ರಾಡಕ್ಟ್: ಸರ್ಕಾರ ತರಲು ಸಪ್ಲೆ ಗಿರಾಕಿ ಆಗಿ ಕೆಲಸ- ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್.</title>
		<link>https://www.justkannada.in/santro-ravi-product-bjp-kpcc-spokesperson-m-lakshman/</link>
		
		<dc:creator><![CDATA[JK Desk]]></dc:creator>
		<pubDate>Sat, 07 Jan 2023 09:27:56 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[BJP]]></category>
		<category><![CDATA[KPCC spokesperson]]></category>
		<category><![CDATA[m.lakshman]]></category>
		<category><![CDATA[Product]]></category>
		<category><![CDATA[Santro Ravi]]></category>
		<guid isPermaLink="false">https://www.justkannada.in/?p=102100</guid>

					<description><![CDATA[<p>ಮೈಸೂರು,ಜನವರಿ,7,2023(www.justkannada.in): ಸ್ಯಾಂಟ್ರೋ ರವಿ ಒಬ್ಬ ಬಿಜೆಪಿಯ ಪ್ರಾಡಕ್ಟ್.  ಬಿಜೆಪಿ ಸರ್ಕಾರ ತರಲು ಸ್ಯಾಂಟ್ರೋ ರವಿ ಸಪ್ಲೆ ಗಿರಾಕಿ ಕೆಲಸ ಮಾಡಿದ್ದಾನೆ. ಈ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ ಎಂದು  ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು. ಮೈಸೂರಿನಲ್ಲಿ ಇಂದು ಮಾತನಾಡಿದ ಎಂ. ಲಕ್ಷ್ಮಣ್,  ಎಂಎಲ್ ಸಿ ವಿಶ್ವನಾಥ್ ಬಾಂಬೆ ಡೇಸ್ ಪುಸ್ತಕದಲ್ಲಿ ಈತನ ಬಗ್ಗೆ ಬರೆದಿದ್ದೇನೆ  ಎಂದಿದ್ದಾರೆ. ಇತನ ಪಾತ್ರ ಏನು. ಈತನನ್ನು ಬಳಸಿಕೊಂಡು ಯಾರ್ಯಾರ ಸಿಡಿ ಮಾಡಿದ್ದಾರೆ . ಇವೆಲ್ಲ ತನಿಖೆಯಿಂದ ಹೊರಬರಬೇಕು . [&#8230;]</p>
<p>The post <a href="https://www.justkannada.in/santro-ravi-product-bjp-kpcc-spokesperson-m-lakshman/">ಸ್ಯಾಂಟ್ರೋ ರವಿ ಒಬ್ಬ ಬಿಜೆಪಿಯ ಪ್ರಾಡಕ್ಟ್: ಸರ್ಕಾರ ತರಲು ಸಪ್ಲೆ ಗಿರಾಕಿ ಆಗಿ ಕೆಲಸ- ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜನವರಿ,7,2023(<a href="http://www.justkannada.in">www.justkannada.in</a>)</strong>: ಸ್ಯಾಂಟ್ರೋ ರವಿ ಒಬ್ಬ ಬಿಜೆಪಿಯ ಪ್ರಾಡಕ್ಟ್.  ಬಿಜೆಪಿ ಸರ್ಕಾರ ತರಲು ಸ್ಯಾಂಟ್ರೋ ರವಿ ಸಪ್ಲೆ ಗಿರಾಕಿ ಕೆಲಸ ಮಾಡಿದ್ದಾನೆ. ಈ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ ಎಂದು  ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.<img loading="lazy" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಮೈಸೂರಿನಲ್ಲಿ ಇಂದು ಮಾತನಾಡಿದ ಎಂ. ಲಕ್ಷ್ಮಣ್,  ಎಂಎಲ್ ಸಿ ವಿಶ್ವನಾಥ್ ಬಾಂಬೆ ಡೇಸ್ ಪುಸ್ತಕದಲ್ಲಿ ಈತನ ಬಗ್ಗೆ ಬರೆದಿದ್ದೇನೆ  ಎಂದಿದ್ದಾರೆ. ಇತನ ಪಾತ್ರ ಏನು. ಈತನನ್ನು ಬಳಸಿಕೊಂಡು ಯಾರ್ಯಾರ ಸಿಡಿ ಮಾಡಿದ್ದಾರೆ . ಇವೆಲ್ಲ ತನಿಖೆಯಿಂದ ಹೊರಬರಬೇಕು . ಸಂತ್ರಸ್ತ ಮಹಿಳೆ ಆತನ ಚರಿತ್ರೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಬಿಜೆಪಿ 60 ಜನ ರೌಡಿ ಶೀಟರ್  ಗಳನ್ನು ಪಕ್ಷಕ್ಕೆ ಸೆರ್ಪಡೆ ಮಾಡಿಕೊಳ್ಳುತ್ತಿದೆ. ಬಿಜೆಪಿಗೆ  ಸ್ಯಾಂಟ್ರೋ ರವಿಯಂತವರದ್ದೆ  ಹೆಚ್ಚಿನ ಒಡನಾಟ. ಎಂದು ಕಿಡಿಕಾರಿದರು.<img loading="lazy" decoding="async" class="aligncenter size-full wp-image-96744" src="https://www.justkannada.in/wp-content/uploads/2022/09/laxman.jpg" alt="" width="500" height="281" srcset="https://www.justkannada.in/wp-content/uploads/2022/09/laxman.jpg 500w, https://www.justkannada.in/wp-content/uploads/2022/09/laxman-300x169.jpg 300w" sizes="auto, (max-width: 500px) 100vw, 500px" /></p>
<p>ಸ್ಯಾಂಟ್ರೋ ರವಿ ಒಡನಾಟ ಅರೋಪ ಬಿಜೆಪಿ ತಳ್ಳಿಹಾಕಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್, ನಿಜಕ್ಕೂ ಬಿಜೆಪಿಯ ತತ್ವ ಸಿದ್ದಾಂತಕ್ಕೂ ಎಣ್ಣೆ ಸೀಗೆಕಾಯಿ ಸಂಬಂಧ. ಬಿಜೆಪಿಯದ್ದು ಏನಿದ್ದರೂ ಸುಳ್ಳಿನ ರಾಜಕಾರಣ. ಬಿಜೆಪಿಯ ಯಾವ ನಾಯಕರು ಸತ್ಯ ಹೇಳುತ್ತಾರೆ  ಎಂದು ವಾಗ್ದಾಳಿ ನಡೆಸಿದರು.</p>
<p>Key words: Santro Ravi &#8211; product &#8211; BJP- KPCC spokesperson -M. Lakshman.</p>
<p>The post <a href="https://www.justkannada.in/santro-ravi-product-bjp-kpcc-spokesperson-m-lakshman/">ಸ್ಯಾಂಟ್ರೋ ರವಿ ಒಬ್ಬ ಬಿಜೆಪಿಯ ಪ್ರಾಡಕ್ಟ್: ಸರ್ಕಾರ ತರಲು ಸಪ್ಲೆ ಗಿರಾಕಿ ಆಗಿ ಕೆಲಸ- ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ತಾಕತ್ತಿದ್ದರೇ ಸಿಎಂ ಮತ್ತು ವಿಶ್ವಗುರು ಸೇರಿಸಿಕೊಂಡು ಪಾದಯಾತ್ರೆ ಮಾಡಲಿ-ಬಿಜೆಪಿ ನಾಯಕರಿಗೆ ಎಂ. ಲಕ್ಷ್ಮಣ್  ತಿರುಗೇಟು.</title>
		<link>https://www.justkannada.in/bjp-critisize-barath-jodo-kpcc-spokesperson-m-lakshman-tong/</link>
		
		<dc:creator><![CDATA[JK Desk]]></dc:creator>
		<pubDate>Fri, 07 Oct 2022 08:47:12 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[bjp-critisize- Barath jodo]]></category>
		<category><![CDATA[KPCC .]]></category>
		<category><![CDATA[m.lakshman]]></category>
		<category><![CDATA[spokesperson]]></category>
		<category><![CDATA[tong]]></category>
		<guid isPermaLink="false">https://www.justkannada.in/?p=97705</guid>

					<description><![CDATA[<p>ಮೈಸೂರು,ಅಕ್ಟೋಬರ್,7,2022(www.justkannada.in) ಪಿಎಫ್‌ ಐ ಸಂಘಟನೆ ನಿಷೇಧಿಸಿರುವ ಬಿಜೆಪಿ ಎಸ್‌ ಡಿಪಿಐ ಸಂಘಟನೆಗೆ ಫಂಡಿಂಗ್ ಮಾಡುತ್ತಿದ್ದಾರೆ. ಧೈರ್ಯವಿದ್ದಲ್ಲಿ ಎಸ್‌ಡಿಪಿಐ ನಿಷೇಧ ಮಾಡಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಸವಾಲು ಹಾಕಿದರು. ಮೈಸೂರು ನಗರದ ಕಾಂಗ್ರೆಸ್ ಭವನದಲ್ಲಿ ಮಾತನಾಡಿ ಭಾರತ್ ಜೋಡೋ ಯಾತ್ರೆ ಟೀಕಿಸಿದ ಬಿಜೆಪಿಗೆ ತಿರುಗೇಟು ನೀಡಿದ ಎಂ.ಲಕ್ಷ್ಮಣ್, ಭಾರತ್ ಜೋಡೋ ಯಾತ್ರೆ ಟೀಕಿಸುತ್ತಿರುವ ಬಿಜೆಪಿ ನಾಯಕರಿಗೆ ತಾಕತ್ತು,ಧಮ್ ಇದ್ದಲ್ಲಿ ಮುಖ್ಯಮಂತ್ರಿ,ವಿಶ್ವಗುರು ಸೇರಿಕೊಂಡು ಪಾದಯಾತ್ರೆ ಮಾಡಲಿ. , ೬೩೦ ಕಿ.ಮೀ ಯಾತ್ರೆ ನಡೆದಿರುವುದಕ್ಕೆ ಸಹಿಸದ ಬಿಜೆಪಿ ನಾಯಕರು [&#8230;]</p>
<p>The post <a href="https://www.justkannada.in/bjp-critisize-barath-jodo-kpcc-spokesperson-m-lakshman-tong/">ತಾಕತ್ತಿದ್ದರೇ ಸಿಎಂ ಮತ್ತು ವಿಶ್ವಗುರು ಸೇರಿಸಿಕೊಂಡು ಪಾದಯಾತ್ರೆ ಮಾಡಲಿ-ಬಿಜೆಪಿ ನಾಯಕರಿಗೆ ಎಂ. ಲಕ್ಷ್ಮಣ್  ತಿರುಗೇಟು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಅಕ್ಟೋಬರ್,7,2022(www.justkannada.in)</strong> ಪಿಎಫ್‌ ಐ ಸಂಘಟನೆ ನಿಷೇಧಿಸಿರುವ ಬಿಜೆಪಿ ಎಸ್‌ ಡಿಪಿಐ ಸಂಘಟನೆಗೆ ಫಂಡಿಂಗ್ ಮಾಡುತ್ತಿದ್ದಾರೆ. ಧೈರ್ಯವಿದ್ದಲ್ಲಿ ಎಸ್‌ಡಿಪಿಐ ನಿಷೇಧ ಮಾಡಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಸವಾಲು ಹಾಕಿದರು.<img loading="lazy" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಮೈಸೂರು ನಗರದ ಕಾಂಗ್ರೆಸ್ ಭವನದಲ್ಲಿ ಮಾತನಾಡಿ ಭಾರತ್ ಜೋಡೋ ಯಾತ್ರೆ ಟೀಕಿಸಿದ ಬಿಜೆಪಿಗೆ ತಿರುಗೇಟು ನೀಡಿದ ಎಂ.ಲಕ್ಷ್ಮಣ್, ಭಾರತ್ ಜೋಡೋ ಯಾತ್ರೆ ಟೀಕಿಸುತ್ತಿರುವ ಬಿಜೆಪಿ ನಾಯಕರಿಗೆ ತಾಕತ್ತು,ಧಮ್ ಇದ್ದಲ್ಲಿ ಮುಖ್ಯಮಂತ್ರಿ,ವಿಶ್ವಗುರು ಸೇರಿಕೊಂಡು ಪಾದಯಾತ್ರೆ ಮಾಡಲಿ. , ೬೩೦ ಕಿ.ಮೀ ಯಾತ್ರೆ ನಡೆದಿರುವುದಕ್ಕೆ ಸಹಿಸದ ಬಿಜೆಪಿ ನಾಯಕರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಗುಜರಾತ್‌ನಲ್ಲಿ ಲಕ್ಷಾಂತರ ಜನರು ಕಾದು ನಿಂತಿದ್ದರೂ ದರ್ಶನ ಕೊಡದೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದ ವಿಶ್ವಗುರು ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಪಾದಯಾತ್ರೆ ಮಾಡಿಸಲಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಧಮ್,ಶಕ್ತಿ ಇದ್ದರೆ ಹತ್ತು ಕಿ.ಮೀ ಪಾದಯಾತ್ರೆ ಮಾಡಲಿ ನೋಡೋಣ ಎಂದು ಹೇಳಿದರು.</p>
<p>ಧರ್ಮಸಿಂಗ್ ಸರ್ಕಾರ ಇದ್ದಾಗ ಪಿಎಫ್‌ ಐಗೆ ಅನುಮತಿ ನೀಡಿರಲಿಲ್ಲ. ಆದರೆ, ಎಚ್.ಡಿ.ಕುಮಾರಸ್ವಾಮಿ- ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅನುಮತಿ ಕೊಟ್ಟಿತು. ಅಂದು ರಹಮತುಲ್ಲಾ ಅಸ್ರತ್ ಆಗಿದ್ದ ಆರ್.ಅಶೋಕ್ ಈಗ ಪಿಎಫ್‌ಐ ಭಾಗ್ಯ ಸಿದ್ದರಾಮಯ್ಯ ಅಂತ ಹೇಳಿರುವುದು ನಾಚಿಕೆಗೇಡು. ಬಿಜೆಪಿಯವರು ಅನುಮತಿ ನೀಡಿದಲ್ಲದೆ, ಅವರಿಗೆ ಹಣ ಕೊಟ್ಟು ಬೆಳೆಸಿದ್ದಾರೆ. ಪಿಎಫ್‌ಐ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ವಾದಿಸುತ್ತಿರುವ ವಕೀಲರು ಬಿಜೆಪಿಗೆ ಸೇರಿದ್ದವರಾಗಿದ್ದಾರೆ ಎಂದು ಕಿಡಿಕಾರಿದರು. ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್,ಜಗದೀಶ್ ಶೆಟ್ಟರ್ ಪಿಎಫ್‌ಐ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ ಪರವಾಗಿ ಮುಸ್ಲಿಮರು ನಿಲ್ಲಬಾರದೆಂದು ಎಸ್‌ಡಿಪಿಐ ಬೆಳೆಯಲು ಕಾರಣವಾಗಿದ್ದಾರೆ. ಈಗ ಕಾಂಗ್ರೆಸ್ ಮೇಲೆಗೂಬೆ ಕೂರಿಸುವಂತೆ ಮಾಡಿ,ಮುಂದೆ ಅವರನ್ನೇ ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಲಿದ್ದಾರೆ ಎಂದು ಹರಿಹಾಯ್ದರು.</p>
<p>ಚುನಾವಣೆ,ರಾಜಕೀಯ ಲಾಭಕ್ಕಾಗಿ ಯಾತ್ರೆ ಮಾಡುತ್ತಿಲ್ಲ.ತಮಿಳುನಾಡು,ಕೇರಳದಲ್ಲಿ ಚುನಾವಣೆ ನಡೆಯಲ್ಲ. ಗುಜರಾತ್‌ನಲ್ಲಿ ಚುನಾವಣೆ ನಡೆಯುವ ವರ್ಷವಾಗಿರುವ ಕಾರಣ ಅಲ್ಲಿ ಯಾತ್ರೆ ಮಾಡಬಹುದಾಗಿತ್ತು. ಈ ಯಾತ್ರೆ ಜನರ ಸಂಕಷ್ಟವನ್ನು ಕೇಳುವ ಜತೆಗೆ ಎಲ್ಲರನ್ನೂ ಒಂದು ಮಾಡಿಸಲು ನಡೆಯುತ್ತಿದೆಯೇ ಹೊರತು ಬಿಜೆಪಿಯವರಂತೆ ಎಲ್ಲದಕ್ಕೂ ಚುನಾವಣೆಯಿಂದ ನೋಡಲ್ಲ ಎಂದು  ವಾಗ್ದಾಳಿ ನಡೆಸಿದರು.<img loading="lazy" decoding="async" class="aligncenter size-full wp-image-97706" src="https://www.justkannada.in/wp-content/uploads/2022/10/LAKSHMAN.jpg" alt="" width="500" height="375" srcset="https://www.justkannada.in/wp-content/uploads/2022/10/LAKSHMAN.jpg 500w, https://www.justkannada.in/wp-content/uploads/2022/10/LAKSHMAN-300x225.jpg 300w, https://www.justkannada.in/wp-content/uploads/2022/10/LAKSHMAN-265x198.jpg 265w" sizes="auto, (max-width: 500px) 100vw, 500px" /></p>
<p>ಎಸ್‌ ಡಿಪಿಐ ಸೇರಿದಂತೆ ಹಲವು ಸಂಘಟನೆಗಳು,ಪಕ್ಷಗಳು ಬಿಜೆಪಿ ಬೆನ್ನಿಗೆ ನಿಂತಿವೆ. ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಚದುರುವಂತೆ ನೋಡಿಕೊಳ್ಳಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಹಣಕಾಸಿನ ನೆರವು ನೀಡುತ್ತಿದೆ. ಇಲ್ಲದಿದ್ದರೆ ಎಸ್‌ ಡಿಪಿಐ ನಿಷೇಧ ಮಾಡಿ ಎಂದರು. ಭಾರತ್ ಜೋಡೋ ಯಾತ್ರೆಯಿಂದ ಯಾವುದೇ ಪ್ರಯೋಜನವಿಲ್ಲ.ಮಂಡ್ಯ ಬದಲಾವಣೆ ಆಗಲಿದೆಯೇ ಎಂದಿರುವ ಎಚ್.ಡಿ.ಕುಮಾರಸ್ವಾಮಿ ಅವರು ಮೈ ಮೇಲೆ ಚೇಳು ಬಿಟ್ಟಿಕೊಂಡಂತೆ ಮಾತನಾಡಿದ್ದಾರೆ. ಮಂಡ್ಯ ಬದಲಾವಣೆಯಾಗಲ್ಲ. ಮಂಡ್ಯವನ್ನು ಬರೆಸಿಕೊಂಡಿಲ್ಲ. ಒಕ್ಕಲಿಗರು ಅವರ ಪ್ಯಾಕೇಟ್‌ನಲ್ಲಿ ಇಲ್ಲ. ಒಕ್ಕಲಿಗರು ನಿಮ್ಮ ಜೇಬಿನಲ್ಲಿ ಇದ್ದರೆ ನಿಮ್ಮ ಪುತ್ರ ಚುನಾವಣೆಯಲ್ಲಿ ಸೋಲುತ್ತಿರಲಿಲ್ಲ ಎಂದು ಟಾಂಗ್ ನೀಡಿದರು.</p>
<p>Key words: bjp-critisize- Barath jodo-kpcc-spokesperson-M.Lakshman-tong</p>
<p>The post <a href="https://www.justkannada.in/bjp-critisize-barath-jodo-kpcc-spokesperson-m-lakshman-tong/">ತಾಕತ್ತಿದ್ದರೇ ಸಿಎಂ ಮತ್ತು ವಿಶ್ವಗುರು ಸೇರಿಸಿಕೊಂಡು ಪಾದಯಾತ್ರೆ ಮಾಡಲಿ-ಬಿಜೆಪಿ ನಾಯಕರಿಗೆ ಎಂ. ಲಕ್ಷ್ಮಣ್  ತಿರುಗೇಟು.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
