ಗೃಹ ಇಲಾಖೆಯಲ್ಲಿ ಈಗ ನಾನು ಎಕ್ಸ್ ಪರ್ಟ್- ಗೃಹ ಸಚಿವ ಅರಗ ಜ್ಞಾನೇಂದ್ರ.

ಬೆಂಗಳೂರು,ಮೇ,11,2022(www.justkannada.in):  ರಾಜ್ಯ ಸಚಿವ ಸಂಪುಟ ಸೆರಲು ಜಾತಕ ಪಕ್ಷಿಯಂತೆ ಕಾದುಕುಳಿತಿರುವ ಸಚಿವಾಕಾಂಕ್ಷಿಗಳಿಗೆ ಶೀಘ್ರವೇ ಸಿಹಿಸುದ್ಧಿ ಸಿಗುವ ಸಾಧ್ಯತೆ ಇದೆ. ಹೌದು, ನವದೆಹಲಿಗೆ ತೆರಳಿ ವರಷ್ಠರನ್ನ ಭೇಟಿ ಮಾಡುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆಯುವ ಬಗ್ಗೆ ಚರ್ಚಿಸುತ್ತಿದ್ದಾರೆ.

ಈ ಮಧ್ಯೆ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಈಗ ಗೃಹ ಖಾತೆಯಲ್ಲಿ ನಾನು ಎಕ್ಸಪರ್ಟ್  ಆಗಿದ್ದೇನೆ.  ನನಗೆ ಗೃಹ ಖಾತೆ ಸಾಕು ಅಂತ ಅನಿಸಿಲ್ಲ. ಹೀಗಾಗಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಿದ್ದೇನೆ ಎಂದಿದ್ದಾರೆ.

ಇನ್ನು ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ ತನಿಖೆ ನಡೆಯುತ್ತಿದೆ. ಸಿಐಡಿ ಸಾಕ್ಷಿ ಸಮೇತ ಎಲ್ಲಾ ಆರೋಪಿಗಳನ್ನ ಹಿಡಿಯುತ್ತಿದ್ದಾರೆ.  ಕಿಂಗ್ ಪಿನ್ ಗಳನ್ನ ಈಗಾಗಲೇ ಬಂಧಿಸಿದ್ದಾರೆ.  ಪಕ್ಷ ಪಂಗಡಕ್ಕಿಂತ  ಯಾರೇ ಆದರೂ ಕ್ರಮ ಕೈಗೊಳ್ಳುತ್ತೇವೆ. ಕಾಂಗ್ರೆಸ್ ನ ಇಬ್ಬರು ಕಿಂಗ್ ಪಿನ್ ಗಳು ಅರೆಸ್ಟ್ ಆಗಿದ್ದಾರೆ ಎಂದರು.

Key words: now – expert – home minister-position-Araga Jnanendra.