ಎನ್ ಆರ್ ಕ್ಷೇತ್ರಕ್ಕೆ ಬಿಜೆಪಿ ಎಂಎಲ್ ಎ ನೀಡುವುದೇ ನನ್ನ ಗುರಿ- ಸಂಸದ ಪ್ರತಾಪ್ ಸಿಂಹ..

ಮೈಸೂರು,ಮೇ,24,2019(www.justkannada.in): ಮುಂದಿನ ದಿನಗಳಲ್ಲಿ ನರಸಿಂಹರಾಜ ಕ್ಷೇತ್ರಕ್ಕೆ ಬಿಜೆಪಿ ಎಂಎಲ್ ಎ ನೀಡುವುದೇ ನನ್ನ ಗುರಿ. ಇದಕ್ಕಾಗಿ ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡುತೇನೆ ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಇಡೀ ಲೋಕಸಭಾ ಕ್ಷೇತ್ರಕ್ಕಿಂತ ಹೆಚ್ಚಿನ ಆದ್ಯತೆಯನ್ನ ಎನ್ ಆರ್ ಕ್ಷೇತ್ರಕ್ಕೆ ನೀಡುತ್ತೇನೆ. ಎನ್.ಆರ್ ಕ್ಷೇತ್ರದ ಯಾವುದೇ ಸಮಸ್ಯೆಗಳಿದ್ದರೂ ಕರೆ ಮಾಡಿ ಕ್ಷಣಾರ್ಧದಲ್ಲೇ ಬರುತ್ತೇನೆ ಎಂದು ಭರವಸೆ ನೀಡಿದರು.

ಹಾಗೆಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಫೆಬ್ರವರಿಯಲ್ಲಿ ಸಭೆ ನಡೆಸಿ ಕನರ್ಾಟಕದಲ್ಲಿ 25 ಕ್ಷೇತ್ರ ಗೆಲ್ಲುತ್ತೆ ಕೆಲಸ ಮಾಡಿ ಎಂದಿದ್ರು. ಅದರಂತೆ ಇಂದು 25 ಸ್ಥಾನವನ್ನ ಗೆದ್ದಿದ್ದೇವೆ. ಅಮಿತ್ ಶಾ ಮತ್ತು ಮೋದಿ ಅವರ ಚುನಾವಣಾ ಸ್ಟ್ಯಾಟರ್ಜಿ ಭಾರತದ ಇತಿಹಾಸದಲ್ಲೇ ಯಶಸ್ವಿಯಾಗಿದೆ. ಇವರ ಜೋಡಿಯನ್ನ ಅಟಲ್ ಬಿಹಾರಿ ವಾಜಿಪೇಯಿ ಮತ್ತು ಎಲ್ ಕೆ ಅಡ್ವಾಣಿ ಅವರಿ ಹೋಲಿಸಬಹುದು. ಇದನ್ನ ಜಗದೇಕವೀರ ಜೋಡಿ ಎನ್ನಬಹುದು ಎಂದು ಗುಣಗಾನ ಮಾಡಿದರು.

ಇನ್ನು ಹಾಸನದಲ್ಲಿ ಪ್ರಜ್ವಲ್ ರೇವಣ್ಣ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ನಾವು ಜಗದೇಕವೀರರ ಕೆಳಗೆ ಕೆಲಸ ಮಾಡುವವರು. ಇಂತಹ ಕ್ಷುಲ್ಲಕ ವಿಚಾರಗಳ ಬಗ್ಗೆ ಮಾತನಾಡಲ್ಲ ಎಂದರು.

key words: #mysore #prathapsimha #narendramodi #amithsha