ಡಿಕೆ ಶಿವಕುಮಾರ್  ರಾಜ್ಯದ ಮುಂದಿನ ಸಿಎಂ ಆಗೋದು ಖಚಿತ – ಶಾಸಕ  ರಂಗನಾಥ್

ತುಮಕೂರು,ಜೂನ್,1,2022(www.justkannada.in):  ಡಿ.ಕೆ.ಶಿವಕುಮಾರ್ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗೋದು ಖಚಿತ. ಕುಣಿಗಲ್ ಕ್ಷೇತ್ರದ ಶಾಸಕ ಡಾ.ಎಚ್​.ಡಿ.ರಂಗನಾಥ್ ಹೇಳಿಕೆ ನೀಡಿದ್ದಾರೆ.

ಕುಣಿಗಲ್ ಕ್ಷೇತ್ರದಲ್ಲಿ ರಸ್ತೆ ಸಮಸ್ಯೆ  ಬಗ್ಗೆ ಹೇಳಿಕೊಂಡ ಜನರಿಗೆ ಸಮಸ್ಯೆ ಬಗೆಹರಿಸುವೆ ಎಂದ ಅಭಯ ನೀಡಿದ ಶಾಸಕ ರಂಗನಾಥ್,  ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವಂತೆ ನಿವೆಲ್ಲಾ ಕಾಂಗ್ರೆಸ್ ​ಗೆ ಮತ ಹಾಕಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ​ಗೆ ಸಪೋರ್ಟ್ ಮಾಡಿ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದನಂತರ ಕ್ಷೇತ್ರದ ಅಭಿವೃದ್ಧಿ ಖಂಡಿತಾ ಆಗುತ್ತೆ. ಅವರು ಸಿಎಂ ಆದ್ರೆ ಕುಣಿಗಲ್ ​ಗೆ ನಾನೇ ಮುಖ್ಯಮಂತ್ರಿ ಆದಂತೆ. ಎಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದಿದ್ದಾರೆ.

ನಿಮ್ಮೂರಿಗೆ ರಸ್ತೆ ಸೇರಿದಂತೆ ಅಭಿವೃದ್ಧಿ ಕೆಲಸ ಮಾಡಲು ಕ್ರಮ ಕೈಗೊಳ್ಳುವೆ ಎಂದು ಎಂದ ಶಾಸಕ ರಂಗನಾಥ್ ಅವರ  ದೃಶ್ಯ ವಿಡಿಯೋ ವೈರಲ್ ಆಗಿದೆ.

Key words: DK Sivakumar – sure -become – chief minister-MLA-Ranganath