<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Utility Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/utility/feed/" rel="self" type="application/rss+xml" />
	<link>https://www.justkannada.in/tag/utility/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Fri, 25 Dec 2020 10:24:27 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Utility Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/utility/</link>
	<width>32</width>
	<height>32</height>
</image> 
	<item>
		<title>ಅಮೃತ ಸಿಂಚನ &#8211; 8: &#8220;ಉಪಕರಿಸಲು ಅವಕಾಶ ಮಾಡಿಕೊಟ್ಟಿರಲ್ಲ!&#8221;</title>
		<link>https://www.justkannada.in/amrita-sinchana-8utilityopportunity/</link>
		
		<dc:creator><![CDATA[JK Desk]]></dc:creator>
		<pubDate>Fri, 25 Dec 2020 10:24:27 +0000</pubDate>
				<category><![CDATA[ರಂಜ - ಸುರಗಿ]]></category>
		<category><![CDATA[Amrita sinchana- 8]]></category>
		<category><![CDATA[opportunity]]></category>
		<category><![CDATA[Utility]]></category>
		<guid isPermaLink="false">https://www.justkannada.in/?p=50290</guid>

					<description><![CDATA[<p>&#160; ಅಮೃತ ಸಿಂಚನ &#8211; 8 &#8220;ಉಪಕರಿಸಲು ಅವಕಾಶ ಮಾಡಿಕೊಟ್ಟಿರಲ್ಲ!&#8221; ಮೈಸೂರು,ಡಿಸೆಂಬರ್,25,2020(www.justkannada.in):  ಆ ಗೃಹಸ್ಥರು ಮೈಸೂರಿನ ಸರಸ್ವತಿಪುರಂನ ರಸ್ತೆಯೊಂದರಲ್ಲಿ ತನ್ನ ಸ್ಕೂಟರಿನ ಮೇಲೆ ಹೋಗುತ್ತಿದ್ದರು. ದೂರದಲ್ಲಿ ಒಬ್ಬ ವಯೋವೃದ್ಧರು ಕೈಯಲ್ಲಿ ಊರುಗೋಲು ಹಿಡಿದು ನಿಂತಿರುವುದು ಇವರ ಕಣ್ಣಿಗೆ ಬಿತ್ತು. ಆ ವೃದ್ಧರು ಒಂದು ದಿಕ್ಕಿಗೆ ಹೋಗುತ್ತಿದ್ದ ದ್ವಿಚಕ್ರ ವಾಹನಗಳಿಗೆಲ್ಲಾ ಕೈ ತೋರಿಸುತ್ತಿದ್ದರು. ಆದರೆ ಯಾರೂ ನಿಲ್ಲಿಸುವ ಔದಾರ್ಯ ತೋರಲಿಲ್ಲ.ಈ ಗೃಹಸ್ಥರು ಆ ವಯೋವೃದ್ಧರನ್ನು ಸಮೀಪಿಸಿದಾಗಲೂ ಆತ ಕೈ ಅಡ್ಡ ಹಿಡಿದರು. ಗೃಹಸ್ಥರು ವಾಹನವನ್ನು ನಿಲ್ಲಿಸಿ, &#8220;ಯಾವ ಕಡೆಗೆ [&#8230;]</p>
<p>The post <a href="https://www.justkannada.in/amrita-sinchana-8utilityopportunity/">ಅಮೃತ ಸಿಂಚನ &#8211; 8: &#8220;ಉಪಕರಿಸಲು ಅವಕಾಶ ಮಾಡಿಕೊಟ್ಟಿರಲ್ಲ!&#8221;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>&nbsp;</p>
<p>ಅಮೃತ ಸಿಂಚನ &#8211; 8</p>
<p>&#8220;ಉಪಕರಿಸಲು ಅವಕಾಶ ಮಾಡಿಕೊಟ್ಟಿರಲ್ಲ!&#8221;</p>
<p>ಮೈಸೂರು,ಡಿಸೆಂಬರ್,25,2020(www.justkannada.in):  ಆ ಗೃಹಸ್ಥರು ಮೈಸೂರಿನ ಸರಸ್ವತಿಪುರಂನ ರಸ್ತೆಯೊಂದರಲ್ಲಿ ತನ್ನ ಸ್ಕೂಟರಿನ ಮೇಲೆ ಹೋಗುತ್ತಿದ್ದರು. ದೂರದಲ್ಲಿ ಒಬ್ಬ ವಯೋವೃದ್ಧರು ಕೈಯಲ್ಲಿ ಊರುಗೋಲು ಹಿಡಿದು ನಿಂತಿರುವುದು ಇವರ ಕಣ್ಣಿಗೆ ಬಿತ್ತು. ಆ ವೃದ್ಧರು ಒಂದು ದಿಕ್ಕಿಗೆ ಹೋಗುತ್ತಿದ್ದ ದ್ವಿಚಕ್ರ ವಾಹನಗಳಿಗೆಲ್ಲಾ ಕೈ ತೋರಿಸುತ್ತಿದ್ದರು. ಆದರೆ ಯಾರೂ ನಿಲ್ಲಿಸುವ ಔದಾರ್ಯ ತೋರಲಿಲ್ಲ.ಈ ಗೃಹಸ್ಥರು ಆ ವಯೋವೃದ್ಧರನ್ನು ಸಮೀಪಿಸಿದಾಗಲೂ ಆತ ಕೈ ಅಡ್ಡ ಹಿಡಿದರು. ಗೃಹಸ್ಥರು ವಾಹನವನ್ನು ನಿಲ್ಲಿಸಿ, &#8220;ಯಾವ ಕಡೆಗೆ ಹೋಗಬೇಕಾಗಿತ್ತು ಸ್ವಾಮೀ?&#8221; ಅಂತ ಕೇಳಿದರು.<img fetchpriority="high" decoding="async" class="aligncenter size-full wp-image-46356" src="https://www.justkannada.in/wp-content/uploads/2020/11/jk.jpg" alt="Teachers,solve,problems,Government,bound,Minister,R.Ashok" width="640" height="640" /></p>
<p>&#8220;ಕಾಮಾಕ್ಷಿ ಆಸ್ಪತ್ರೆಗೆ ಹೋಗಬೇಕಾಗಿತ್ತು&#8221; ಅಂತಂದರು ಆ ವಯೋವೃದ್ಧರು.</p>
<p>ವಾಸ್ತವವಾಗಿ ಸ್ಕೂಟರಿನ ಗೃಸ್ಥರು ಕಾಮಾಕ್ಷಿ ಆಸ್ಪತ್ರೆಯ ವಿರುದ್ಧ ದಿಕ್ಕಿಗೆ ಹೋಗಬೇಕಾಗಿತ್ತು. ಆದರೂ &#8220;ಸ್ಕೂಟರು ಹತ್ತಿ&#8221; ಅಂತಂದು ವೃದ್ಧರನ್ನು ಕಾಮಾಕ್ಷಿ ಆಸ್ಪತ್ರೆಯ ಎದುರಿಗೆ ಕರೆದೊಯ್ದು ಇಳಿಸಿದರು.</p>
<p>&#8220;ತುಂಬಾ ಉಪಕಾರವಾಯಿತು ಸರ್, ಇಷ್ಟು ದೂರ ನಡೆಯೋದು ತಪ್ಪಿಸಿದರಿ&#8221; ಅಂತ ಕೃತಜ್ಞತೆಯಿಂದ ಆ ವೃದ್ಧರೆಂದಾಗ ಆ ಗೃಹಸ್ಥರು, &#8220;ಉಪಕಾರವೇನು ಬಂತು ಬಿಡಿ, ನೀವು ಹಲವರಿಗೆ ಕೈ ಅಡ್ಡ ಹಿಡಿದಿರಿ. ಆದರೆ ಅವರ್ಯಾರೂ ಸ್ಕೂಟರು ನಿಲ್ಲಿಸಿ ನಿಮ್ಮನ್ನು ಕರೆದೊಯ್ಯಲಿಲ್ಲ. ಹಾಗಾಗಿ ಆ ಭಾಗ್ಯ ನನ್ನ ಪಾಲಿಗೆ ದಕ್ಕಿತು. ಅದಕ್ಕಾಗಿ ನಾನು ನಿಮಗೆ ಕೃತಜ್ಞ.&#8221; ಎಂದಂದು ಸ್ಕೂಟರನ್ನು ಮುಂದಕ್ಕೆ ಚಲಾಯಿಸಿ ಬಿಟ್ಟರು.</p>
<p>ವೃದ್ಧರು &#8220;ಈ ಕಾಲದಲ್ಲಿ ಇಂಥವರೂ ಪುಣ್ಯಕ್ಕೆ ಇದ್ದಾರಲ್ಲ&#8221; ಅಂತ ಅಚ್ಚರಿ ಪಟ್ಟುಕೊಂಡು ಆಸ್ಪತ್ರೆಯೊಳಗೆ ಕಾಲಿರಿಸಿದರು</p>
<p>ಹೌದು, ಉಪಕಾರ ಮಾಡಿಸಿಕೊಳ್ಳುವವರು ಇಲ್ಲದೆ ಹೋದರೆ ಉಪಕರಿಸಿ ಪುಣ್ಯ ಕಟ್ಟಿಕೊಳ್ಳುವ ಜನರಿಗೆ ಉಪಕರಿಸುವ ಅವಕಾಶವೇ ಇಲ್ಲವಾಗಿಬಿಡುತ್ತದೆ. ಆದಕಾರಣ ಉಪಕರಿಸಲು ಅವಕಾಶ ಮಾಡಿಕೊಡುವ ವ್ಯಕ್ತಿಗಳಿಗೆ ನಾವು ಕೃತಜ್ಞರಾಗಿರಬೇಕಲ್ಲವೇ?<img decoding="async" class="aligncenter size-full wp-image-50292" src="https://www.justkannada.in/wp-content/uploads/2020/12/oldage.jpg" alt="amrita-sinchana-8utilityopportunity" width="576" height="350" /></p>
<p>ಅಷ್ಟೇ ಅಲ್ಲ, ನಾವು ಯಾರಿಗೂ ಉಚಿತವಾಗಿ ಉಪಕಾರ ಮಾಡುವುದಿಲ್ಲ. ಅಂದರೆ, ನಾವು ಮಾಡಿದ ಉಪಕಾರಕ್ಕೆ ಹಣ ತೆಗೆದುಕೊಳ್ಳುತ್ತೇವೆ ಅಂತಲ್ಲ.ನಾವು ಮಾಡಿದ ಸಣ್ಣ ಒಂದು ಉಪಕಾರಕ್ಕೂ ಪುಣ್ಯವಂತೂ ಸಿಗುತ್ತದೆ. ಇದು ನಾವು ಮಾಡಿದ ಉಪಕಾರಕ್ಕೆ ಸಿಕ್ಕ ಪ್ರತಿಫಲ ತಾನೇ? ಈ ಪುಣ್ಯದಲ್ಲಿ ನಾವು ಪುಣ್ಯ ಗಳಿಸಲು ಕಾರಣರಾದವರಿಗೆ ಪಾಲು ಕೊಡುತ್ತೇವಾ? ಇಲ್ಲ ಅಲ್ಲವೇ?</p>
<p>&#8211; ಜಿ. ವಿ. ಗಣೇಶಯ್ಯ.</p>
<p>&nbsp;</p>
<p>&nbsp;</p>
<p>The post <a href="https://www.justkannada.in/amrita-sinchana-8utilityopportunity/">ಅಮೃತ ಸಿಂಚನ &#8211; 8: &#8220;ಉಪಕರಿಸಲು ಅವಕಾಶ ಮಾಡಿಕೊಟ್ಟಿರಲ್ಲ!&#8221;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
