<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Plans Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/plans/feed/" rel="self" type="application/rss+xml" />
	<link>https://www.justkannada.in/tag/plans/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Thu, 25 May 2023 06:30:36 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.3</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Plans Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/plans/</link>
	<width>32</width>
	<height>32</height>
</image> 
	<item>
		<title>ಗ್ಯಾರಂಟಿ ಯೋಜನೆಗಳಿಂದ ಹಿಂದೆ ಸರಿಯಲ್ಲ: ವಿಪಕ್ಷಗಳ ಟೀಕೆಗೆ ಟಾಂಗ್ ಕೊಟ್ಟ ಸಚಿವ ಪರಮೇಶ್ವರ್.</title>
		<link>https://www.justkannada.in/no-withdrawal-guarantee-plans-minister-parameshwar-tongue-opposition/</link>
		
		<dc:creator><![CDATA[JK Desk]]></dc:creator>
		<pubDate>Thu, 25 May 2023 06:30:36 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[guarantee]]></category>
		<category><![CDATA[minister]]></category>
		<category><![CDATA[No withdrawal]]></category>
		<category><![CDATA[opposition.]]></category>
		<category><![CDATA[Parameshwar]]></category>
		<category><![CDATA[Plans]]></category>
		<category><![CDATA[tongue]]></category>
		<guid isPermaLink="false">https://www.justkannada.in/?p=107692</guid>

					<description><![CDATA[<p>ಬೆಂಗಳೂರು,ಮೇ,25,2023(www.justkannada.in):  ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಟೀಕಿಸಿದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಸಚಿವ ಡಾ.ಜಿ.ಪರಮೇಶ್ವರ್ ಟಾಂಗ್ ನೀಡಿದ್ದಾರೆ. ಈ ಕುರಿತು ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್,  ಗ್ಯಾರಂಟಿ ಯೋಜನೆಗಳ ಬಗ್ಗೆ ವಿಪಕ್ಷಗಳು ಮಾತನಾಡುವುದನ್ನ ಗಮನಿಸಿದ್ಣೇನೆ. ಮೊದಲ ಸಂಪುಟದಲ್ಲೇ ಆದೇಶ ಹೊರಡಿಸಲಾಗುತ್ತದೆ . ಸಂಬಂಧ ಪಟ್ಟ ಇಲಾಖೆಗಳಲ್ಲಿ ಪ್ರಕ್ರಿಯೆ ನಡೆಯುತ್ತಿದೆ. 2ನೇ ಸಂಪುಟದಲ್ಲಿ ಸ್ಪಷ್ಟವಾಗಿ ಘೋಷಣೆಯಾಗಲಿದೆ. ವಿಪಕ್ಷ ನಾಯಕರು ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ನಾಯಕರಿಗೆ ಹೊಟ್ಟೆ ಉರಿ.  ಗ್ಯಾರಂಟಿ [&#8230;]</p>
<p>The post <a href="https://www.justkannada.in/no-withdrawal-guarantee-plans-minister-parameshwar-tongue-opposition/">ಗ್ಯಾರಂಟಿ ಯೋಜನೆಗಳಿಂದ ಹಿಂದೆ ಸರಿಯಲ್ಲ: ವಿಪಕ್ಷಗಳ ಟೀಕೆಗೆ ಟಾಂಗ್ ಕೊಟ್ಟ ಸಚಿವ ಪರಮೇಶ್ವರ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಮೇ,25,2023(<a href="http://www.justkannada.in">www.justkannada.in</a>): </strong> ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಟೀಕಿಸಿದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಸಚಿವ ಡಾ.ಜಿ.ಪರಮೇಶ್ವರ್ ಟಾಂಗ್ ನೀಡಿದ್ದಾರೆ.<img fetchpriority="high" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="(max-width: 936px) 100vw, 936px" /></p>
<p>ಈ ಕುರಿತು ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್,  ಗ್ಯಾರಂಟಿ ಯೋಜನೆಗಳ ಬಗ್ಗೆ ವಿಪಕ್ಷಗಳು ಮಾತನಾಡುವುದನ್ನ ಗಮನಿಸಿದ್ಣೇನೆ. ಮೊದಲ ಸಂಪುಟದಲ್ಲೇ ಆದೇಶ ಹೊರಡಿಸಲಾಗುತ್ತದೆ . ಸಂಬಂಧ ಪಟ್ಟ ಇಲಾಖೆಗಳಲ್ಲಿ ಪ್ರಕ್ರಿಯೆ ನಡೆಯುತ್ತಿದೆ. 2ನೇ ಸಂಪುಟದಲ್ಲಿ ಸ್ಪಷ್ಟವಾಗಿ ಘೋಷಣೆಯಾಗಲಿದೆ. ವಿಪಕ್ಷ ನಾಯಕರು ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ನಾಯಕರಿಗೆ ಹೊಟ್ಟೆ ಉರಿ.  ಗ್ಯಾರಂಟಿ ಯೋಜನೆಗಳಿಂದ ಹಿಂದೆ ಸರಿಯಲ್ಲ ಎಂದರು.<img decoding="async" class="aligncenter size-full wp-image-98631" src="https://www.justkannada.in/wp-content/uploads/2022/10/parameshwa.jpg" alt="" width="500" height="283" srcset="https://www.justkannada.in/wp-content/uploads/2022/10/parameshwa.jpg 500w, https://www.justkannada.in/wp-content/uploads/2022/10/parameshwa-300x170.jpg 300w" sizes="(max-width: 500px) 100vw, 500px" /></p>
<p>ಭಜರಂಗದಳ ಬ್ಯಾನ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್,  ಬ್ಯಾನ್ ವಿಚಾರದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಶಾಂತಿ ಕದಡುವ ಸಂಘಟನೆಗಳ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ಅವಶ್ಯಕತೆ ಇದ್ದರೇ ಭಜರಂಗದಳ ಬ್ಯಾನ್ ಮಾಡತ್ತೇವೆ ಎಂದು ತಿಳಿಸಿದರು.</p>
<p>Key words: No withdrawal -guarantee –plans-Minister- Parameshwar- tongue -opposition</p>
<p>The post <a href="https://www.justkannada.in/no-withdrawal-guarantee-plans-minister-parameshwar-tongue-opposition/">ಗ್ಯಾರಂಟಿ ಯೋಜನೆಗಳಿಂದ ಹಿಂದೆ ಸರಿಯಲ್ಲ: ವಿಪಕ್ಷಗಳ ಟೀಕೆಗೆ ಟಾಂಗ್ ಕೊಟ್ಟ ಸಚಿವ ಪರಮೇಶ್ವರ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಬಸ್ಸುಗಳ ಸಂಖ್ಯೆ 10 ಸಾವಿರಕ್ಕೆ ಹೆಚ್ಚಿಸಲು ಬಿಎಂಟಿಸಿ ಯೋಚನೆ: ಆದ್ರೆ ಸವಾಲಾಗಿದೆ ಮಾನವ ಸಂಪನ್ಮೂಲದ ಕೊರತೆ.</title>
		<link>https://www.justkannada.in/bmtc-plans-increase-number-buses-10-thousand/</link>
		
		<dc:creator><![CDATA[JK Desk]]></dc:creator>
		<pubDate>Thu, 17 Nov 2022 06:47:44 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[10 thousand]]></category>
		<category><![CDATA[BMTC]]></category>
		<category><![CDATA[buses]]></category>
		<category><![CDATA[Increase...]]></category>
		<category><![CDATA[number]]></category>
		<category><![CDATA[Plans]]></category>
		<guid isPermaLink="false">https://www.justkannada.in/?p=99817</guid>

					<description><![CDATA[<p>ಬೆಂಗಳೂರು, ನವೆಂಬರ್ 17, 2022 (www.justkannada.in): ಬೆಂಗಳೂರು ಮಹಾನಗರದಲ್ಲಿ ಸಾರ್ವಜನಿಕ ವಾಹನಗಳಲ್ಲಿ ಓಡಾಡುವವರಿಗೆ ಇಲ್ಲೊಂದು ಒಳ್ಳೆಯ ಸುದ್ದಿಯಿದೆ. ಬಿಎಂಟಿಸಿ ಮುಂದಿನ ಕೆಲವು ವರ್ಷಗಳಲ್ಲಿ ತನ್ನ ಬಸ್ಸುಗಳ ಸಂಖ್ಯೆಯನ್ನು10 ಸಾವಿರಕ್ಕೆ ಹೆಚ್ಚಿಸಲು ಆಲೋಚಿಸುತ್ತಿದೆ. ಆದರೆ ಅಗತ್ಯ ಸಿಬ್ಬಂದಿ ಕೊರತೆ ಹಾಗೂ ಬಳಕೆದಾರರ ಕೊರತೆಗಳು ಬಿಎಂಟಿಸಿಗೆ ದೊಡ್ಡ ಸವಾಲುಗಳಾಗಿವೆಯಂತೆ. ಪ್ರಸ್ತುತು ಬಿಎಂಟಿಸಿ ೬,೫೦೦ ಬಸ್ಸುಗಳನ್ನು ಹೊಂದಿದೆ. ಬಿಎಂಟಿಸಿ ನಿರ್ದೇಶಕ (ಐಟಿ) ಎ.ವಿ. ಸೂರ್ಯ ಸೇನ್ ಅವರು ಈ ಸಂಬಂಧ ಮಾಧ್ಯಮದ ಜೊತೆ ಮಾತನಾಡುತ್ತಾ, &#8220;ನಾವು ೨೦೨೪ರ ವೇಳೆಗೆ ಬಸ್ಸುಗಳ ಸಂಖ್ಯೆಯನ್ನು [&#8230;]</p>
<p>The post <a href="https://www.justkannada.in/bmtc-plans-increase-number-buses-10-thousand/">ಬಸ್ಸುಗಳ ಸಂಖ್ಯೆ 10 ಸಾವಿರಕ್ಕೆ ಹೆಚ್ಚಿಸಲು ಬಿಎಂಟಿಸಿ ಯೋಚನೆ: ಆದ್ರೆ ಸವಾಲಾಗಿದೆ ಮಾನವ ಸಂಪನ್ಮೂಲದ ಕೊರತೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು, ನವೆಂಬರ್ 17, 2022 (www.justkannada.in):</strong> ಬೆಂಗಳೂರು ಮಹಾನಗರದಲ್ಲಿ ಸಾರ್ವಜನಿಕ ವಾಹನಗಳಲ್ಲಿ ಓಡಾಡುವವರಿಗೆ ಇಲ್ಲೊಂದು ಒಳ್ಳೆಯ ಸುದ್ದಿಯಿದೆ. ಬಿಎಂಟಿಸಿ ಮುಂದಿನ ಕೆಲವು ವರ್ಷಗಳಲ್ಲಿ ತನ್ನ ಬಸ್ಸುಗಳ ಸಂಖ್ಯೆಯನ್ನು10 ಸಾವಿರಕ್ಕೆ ಹೆಚ್ಚಿಸಲು ಆಲೋಚಿಸುತ್ತಿದೆ. ಆದರೆ ಅಗತ್ಯ ಸಿಬ್ಬಂದಿ ಕೊರತೆ ಹಾಗೂ ಬಳಕೆದಾರರ ಕೊರತೆಗಳು ಬಿಎಂಟಿಸಿಗೆ ದೊಡ್ಡ ಸವಾಲುಗಳಾಗಿವೆಯಂತೆ.<a href="https://www.justkannada.in/wp-content/uploads/2022/09/jk-logo.jpg"><img decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="(max-width: 936px) 100vw, 936px" /></a></p>
<p>ಪ್ರಸ್ತುತು ಬಿಎಂಟಿಸಿ ೬,೫೦೦ ಬಸ್ಸುಗಳನ್ನು ಹೊಂದಿದೆ. ಬಿಎಂಟಿಸಿ ನಿರ್ದೇಶಕ (ಐಟಿ) ಎ.ವಿ. ಸೂರ್ಯ ಸೇನ್ ಅವರು ಈ ಸಂಬಂಧ ಮಾಧ್ಯಮದ ಜೊತೆ ಮಾತನಾಡುತ್ತಾ, &#8220;ನಾವು ೨೦೨೪ರ ವೇಳೆಗೆ ಬಸ್ಸುಗಳ ಸಂಖ್ಯೆಯನ್ನು ೮,೦೦೦ಕ್ಕೆ ಹಾಗೂ ಮುಂದಿನ ವರ್ಷಗಳಲ್ಲಿ ೧೦,೦೦೦ಕ್ಕೆ ಹೆಚ್ಚಿಸಲು ಯೋಜನೆ ರೂಪಿಸುತ್ತಿದ್ದೇವೆ,&#8221; ಎಂದರು.</p>
<p>ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ನಗರದ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಬಸ್ಸುಗಳ ಸಂಖ್ಯೆಯನ್ನು ೧೦,೦೦೦ ಕ್ಕೆ ಹೆಚ್ಚಿಸುವುದು ಸೂಕ್ತವಾಗಿದೆ. ಇದಕ್ಕಾಗಿ ಬಿಎಂಟಿಸಿ ಎರಡು-ಆಯಾಮಗಳ ಕಾರ್ಯತಂತ್ರವೊಂದನ್ನು ರೂಪಿಸಿದೆ. ಇದರಲ್ಲಿ ಮೊದಲನೆಯ ಕಾರ್ಯತಂತ್ರವೇನೆಂದರೆ ಈಗಿರುವ ಡಿಪೋಗಳನ್ನು ವಿಸ್ತರಿಸಿ ಆಯಾ ಡಿಪೋಗಳಿಗೆ ಹಂಚಿಕೆ ಮಾಡಿರುವ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಎರಡನೆಯದಾಗಿ, ಡಿಪೋಗಳ ಸಂಖ್ಯೆಯನ್ನೇ ಹೆಚ್ಚಿಸುವುದಾಗಿದೆ. ಪ್ರಸ್ತುತ, ಬೆಂಗಳೂರು ನಗರದ ಹೊರವಲಯಗಳಲ್ಲಿ ಐದು ಡಿಪೋಗಳನ್ನು ಆರಂಭಿಸಲಾಗುವುದು. ಇದಕ್ಕಾಗಿ ಅಗತ್ಯ ಸ್ಥಳಾವಕಾಶವನ್ನು ಹುಡುಕಲಾಗುತ್ತಿದೆ.</p>
<p>ಈ ಸಂಬಂಧ ಮಾತನಾಡಿದ ಸೂರ್ಯಸೇನ್ ಅವರು, &#8220;ಪ್ರಸ್ತುತ, ನಮ್ಮ ಮುಂದಿರುವ ಅತೀ ದೊಡ್ಡ ಸವಾಲೇನೆಂದರೆ ಸಿಬ್ಬಂದಿಗಳ ಕೊರತೆ. ಈ ಕೊರತೆಯಿಂದಾಗಿ ಸುಮಾರು 600 ರಿಂದ 700 ಬಸ್ಸುಗಳ ಸೇವೆ ನಿಂತಿದೆ. ಆದ್ದರಿಂದ, ಈಗ ಪ್ರತಿ ದಿನ ಕೇವಲ ೫,೬೦೦ ಬಸ್ಸುಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಸಿಬ್ಬಂದಿಗಳ ನೇಮಕಾತಿಗೆ ಸಂಬಂಧಿಸಿದಂತೆ ಅಗತ್ಯ ಬೆಂಬಲ ಒದಗಿಸುವಂತೆ ನಾವು ರಾಜ್ಯ ಸರ್ಕಾರವನ್ನು ಕೋರಿದ್ದೇವೆ. ಸಿಬ್ಬಂದಿಗಳ ಕೊರತೆ ನೀಗದ ಹೊರತು, ಬಸ್ಸುಗಳ ಸಂಖ್ಯೆಯನ್ನು ೧೦,೦೦೦ಕ್ಕೆ ಹೆಚ್ಚಿಸುವುದು ಕನಸಾಗಲಿದೆ. ಹೊರಗುತ್ತಿಗೆ ಹಾಗೂ ನೇಮಕಾತಿ ಆಧಾರದ ಮೇಲೆ ಸಿಬ್ಬಂದಿಗಳ ಸೇವೆಗಳನ್ನು ಪಡೆಯುವ ಸಂಬಂಧ ಸಾಧ್ಯತೆಗಳನ್ನು ಅವಲೋಕಿಸಲಾಗುತ್ತಿದೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಈ ನಡುವೆ, ಹೊಸ ಡಿಪೋಗಳಿಗಾಗಿ ಅಗತ್ಯ ಸ್ಥಳದ ಹುಡುಕಾಟವನ್ನೂ ನಡೆಸಲಾಗುತ್ತಿದೆ,&#8221; ಎಂದು ವಿವರಿಸಿದರು.<a href="https://www.justkannada.in/wp-content/uploads/2022/11/bmtc.jpg"><img loading="lazy" decoding="async" class="aligncenter size-full wp-image-99818" src="https://www.justkannada.in/wp-content/uploads/2022/11/bmtc.jpg" alt="" width="500" height="366" srcset="https://www.justkannada.in/wp-content/uploads/2022/11/bmtc.jpg 500w, https://www.justkannada.in/wp-content/uploads/2022/11/bmtc-300x220.jpg 300w" sizes="auto, (max-width: 500px) 100vw, 500px" /></a></p>
<p>ಸರ್ಕಾರೇತರ ಸಂಸ್ಥೆ ಜನಾಗ್ರಹದ ಶ್ರೀನಿವಾಸ್ ಅಳವಳ್ಳಿ ಅವರು ಈ ಕುರಿತು ಮಾತನಾಡುತ್ತಾ, &#8220;ನಾವೂ ಸಹ ಬಿಎಂಟಿಸಿಯ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಲು ನಾವೂ ಸಹ ಕೋರುತ್ತಿದ್ದೇವೆ. ಅದರ ಸಂಖ್ಯೆಯನ್ನು ೧೫ ಸಾವಿರಕ್ಕೆ ಹೆಚ್ಚಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಪ್ರಸ್ತುತ, ಇಡೀ ನಗರವನ್ನು ತಲುಪುವ ಏಕೈಕ ಸಂಚಾರ ವ್ಯವಸ್ಥೆ ಎಂದರೆ ಬಿಎಂಟಿಸಿ ಆಗಿದೆ. ಈ ರೀತಿ ಇಡೀ ನಗರವನ್ನು ವ್ಯಾಪಿಸಲು ಮೆಟ್ರೋಗೆ ಕನಿಷ್ಠ ಇನ್ನೂ ಐದು ವರ್ಷಗಳಾದರೂ ಬೇಕಾಗುತ್ತದೆ,&#8221; ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.</p>
<p>ಬಸ್ಸುಗಳನ್ನು ಬಳಸುವವರ ಸಂಖ್ಯೆಯನ್ನು ಹೆಚ್ಚಿಸಲು ಇನ್ನೂ ಬಹಳ ಪ್ರಯತ್ನಗಳಾಗಬೇಕಿದೆ ಎನ್ನುವುದು ಶ್ರೀನಿವಾಸ್ ಅವರ ಅಭಿಪ್ರಾಯವಾಗಿದೆ. ಅವರ ಪ್ರಕಾರ, ಹೆಚ್ಚಿನ ಜನರು ಬಸ್ಸುಗಳನ್ನು ಬಳಸುವಂತಾಗಲು ಅವರಿಗೆ ಮುಂದಿನ ಬಸ್ಸು ನಿಖರವಾಗಿ ಯಾವ ಸಮಯಕ್ಕೆ ಬರುತ್ತದೆ ಎಂದು ಖಾತ್ರಿಯಾಗಬೇಕು. ಬಿಎಂಟಿಸಿ ಆ್ಯಪ್ ಬಹಳ ದೀರ್ಘ ಕಾಲದಿಂದ ಈಡೇರಿಕೆ ಆಗದೆ ಉಳಿದಿದೆ. ಇದು ನಿಜವಾದರೆ ಬಸ್ಸುಗಳನ್ನು ಬಳಸುವವರಿಗೆ ಮುಂದಿನ ಬಸ್ಸು ಬರುವ ಸಮಯ ನಿಖರವಾಗಿ ತಿಳಿಯಲು ಬಹಳ ಉಪಯೋಗವಾಗುತ್ತದೆ.</p>
<p>ಎರಡನೆಯದಾಗಿ, ಜನರು ತಮ್ಮ ಸ್ವಂತ ವಾಹನಗಳು ಅಥವಾ ಕ್ಯಾಬ್‌ ಗಳನ್ನು ಬಳಸುತ್ತಿರುವುದು ಏಕೆಂದರೆ ಅವರು ತಲುಪಬೇಕಾದ ಸ್ಥಳವನ್ನು ಸರಿಯಾದ ಸಮಯಕ್ಕೆ, ವೇಗವಾಗಿ ಹೋಗಬಹುದು ಎನ್ನುವ ಕಾರಣದಿಂದಾಗಿ. ಬಸ್ಸುಗಳಾದರೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅಲ್ಲಲ್ಲಿ ನಿಲ್ಲುತ್ತವೆ. ಅದಕ್ಕಾಗಿ ರಸ್ತೆಗಳಲ್ಲಿ ಬಸ್ಸುಗಳಿಗಾಗಿಯೇ ಮೀಸಲಿರುವ ಪಥಗಳ ಅಗತ್ಯವಿದೆ. ನಗರದ ೧೨ ರಸ್ತೆಗಳಲ್ಲಿ ಬಸ್ ಲೇನ್‌ ಗಳನ್ನು ಪರಿಚಯಿಸಲು ಯೋಜನೆಯಿದೆ. ಜೊತೆಗೆ ಸರ್ಕಾರ ಆರು ಪಥಗಳಿರುವಂತಹ ರಸ್ತೆಗಳಲ್ಲಿಯೂ ಈ ರೀತಿ ಬಸ್ ಲೇನ್‌ ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಆಲೋಚಿಸಬಹುದು,&#8221; ಎಂದು ವಿವರಸಿದರು.</p>
<p>&#8220;ನಮ್ಮಲ್ಲಿ ಈಗಾಗಲೇ ಹುಬ್ಬಳ್ಳಿ-ಧಾರವಾಡದಲ್ಲಿ ಹಾಗೂ ಅಹಮದಾಬಾದ್‌ನಲ್ಲಿ ಬಸ್ ರ್ಯಾಕಪಿಡ್ ಟ್ರಾನ್ಸಿಟ್ ವ್ಯವಸ್ಥೆ ಇದೆ. ಮೂರನೆಯದಾಗಿ, ಕಂಪನಿಗಳೂ ಸಹ ಸಾರ್ವಜನಿಕ ಸಾರಿಗೆಯನ್ನು ಬಳಸುವಂತಹ ಉದ್ಯೋಗಿಗಳನ್ನು ಪ್ರೋತ್ಸಾಹಿಸಬೇಕು. ಇದರಿಂದ ಹೆಚ್ಚಿನ ಉದ್ಯೋಗಿಗಳು ಸಾರ್ವಜನಿಕ ವಾಹನಗಳನ್ನು ಬಳಸಲು ಆರಂಭಿಸುತ್ತಾರೆ ಹಾಗೂ ಅವರಿಗೆ ಸರಿಯಾದ ಸಮಯಕ್ಕೆ ಕೆಲಸದ ಸ್ಥಳವನ್ನು ತಲುಪುವುದೂ ಸಾಧ್ಯವಾಗುತ್ತದೆ. ಇದರಿಂದಾಗಿ ಕೆಲಸದ ಸ್ಥಳಗಳಲ್ಲಿ ಉತ್ಪಾದಕತೆ ಹೆಚ್ಚುವುದರ ಜೊತೆಗೆ ಒತ್ತಡವೂ ಕಡಿಮೆಯಾಗುತ್ತದೆ,&#8221; ಎಂದರು.</p>
<p>ಈ ನಡುವೆ, ಸೂರ್ಯ ಸೇನ್ ಅವರು ಅಪ್‌ ಡೇಟ್ ಮಾಡಿರುವ ಬಿಎಂಟಿಸಿ ಆ್ಯಪ್ ಅನ್ನು ಇನ್ನೊಂದು ತಿಂಗಳ ಒಳಗಾಗಿ ಚಾಲನೆಗೊಳಿಸುವುದಾಗಿ ತಿಳಿಸಿದ್ದಾರೆ.</p>
<p>ಸುದ್ದಿ ಮೂಲ: ಬೆಂಗಳೂರ್ ಮಿರರ್</p>
<p>Key words: BMTC-plans &#8211; increase -number -buses &#8211; 10 thousand.</p>
<p>The post <a href="https://www.justkannada.in/bmtc-plans-increase-number-buses-10-thousand/">ಬಸ್ಸುಗಳ ಸಂಖ್ಯೆ 10 ಸಾವಿರಕ್ಕೆ ಹೆಚ್ಚಿಸಲು ಬಿಎಂಟಿಸಿ ಯೋಚನೆ: ಆದ್ರೆ ಸವಾಲಾಗಿದೆ ಮಾನವ ಸಂಪನ್ಮೂಲದ ಕೊರತೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಪ್ರಧಾನಿ ಮೋದಿ ಬೆಂಗಳೂರು ಭೇಟಿ: ಬಿಜೆಪಿ ವತಿಯಿಂದ ಬೃಹತ್ ಸಮಾವೇಶ ಆಯೋಜಿಸಲು ಯೋಜನೆ.</title>
		<link>https://www.justkannada.in/prime-minister-modi-visits-bengaluru-bjp-plans-massive-convention/</link>
		
		<dc:creator><![CDATA[JK Desk]]></dc:creator>
		<pubDate>Fri, 28 Oct 2022 07:15:35 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[convention]]></category>
		<category><![CDATA[Massive]]></category>
		<category><![CDATA[Plans]]></category>
		<category><![CDATA[Prime Minister –Modi- visits- Bengaluru-BJP]]></category>
		<guid isPermaLink="false">https://www.justkannada.in/?p=98799</guid>

					<description><![CDATA[<p>ಬೆಂಗಳೂರು, ಅಕ್ಟೋಬರ್ 28, 2022(www.justkannada.in): ನವೆಂಬರ್ 11 ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಥಾಪಿಸುತ್ತಿರುವ ೧೦೮-ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರ ಮೂರು ಲಕ್ಷ ಜನರನ್ನು ಸೇರಿಸುವ ಆಲೋಚನೆ ಹೊಂದಿದೆ. ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರು ನವೆಂಬರ್ 11 ರಂದು ಯಾವ ಯಾವ ಕಾರ್ಯಕ್ರಮಗಳಿವೆ ಎಂದು ತಿಳಿಸಲು ಪ್ರಧಾನಿ ಮೋದಿಯವರೊಂದಿಗೆ ವೀಡಿಯೋ ಕಾನ್ಫರೆನ್ಸಿಂಗ್ ಅನ್ನು ಏರ್ಪಡಿಸಿದ್ದರು. ಪ್ರಧಾನಿ [&#8230;]</p>
<p>The post <a href="https://www.justkannada.in/prime-minister-modi-visits-bengaluru-bjp-plans-massive-convention/">ಪ್ರಧಾನಿ ಮೋದಿ ಬೆಂಗಳೂರು ಭೇಟಿ: ಬಿಜೆಪಿ ವತಿಯಿಂದ ಬೃಹತ್ ಸಮಾವೇಶ ಆಯೋಜಿಸಲು ಯೋಜನೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು, ಅಕ್ಟೋಬರ್ 28, 2022(<a href="http://www.justkannada.in">www.justkannada.in</a>):</strong> ನವೆಂಬರ್ 11 ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಥಾಪಿಸುತ್ತಿರುವ ೧೦೮-ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರ ಮೂರು ಲಕ್ಷ ಜನರನ್ನು ಸೇರಿಸುವ ಆಲೋಚನೆ ಹೊಂದಿದೆ.<img loading="lazy" decoding="async" class="aligncenter size-full wp-image-96611" src="https://www.justkannada.in/wp-content/uploads/2022/09/jk-logo.jpg" alt="" width="936" height="120" srcset="https://www.justkannada.in/wp-content/uploads/2022/09/jk-logo.jpg 936w, https://www.justkannada.in/wp-content/uploads/2022/09/jk-logo-600x77.jpg 600w, https://www.justkannada.in/wp-content/uploads/2022/09/jk-logo-300x38.jpg 300w, https://www.justkannada.in/wp-content/uploads/2022/09/jk-logo-768x98.jpg 768w, https://www.justkannada.in/wp-content/uploads/2022/09/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರು ನವೆಂಬರ್ 11 ರಂದು ಯಾವ ಯಾವ ಕಾರ್ಯಕ್ರಮಗಳಿವೆ ಎಂದು ತಿಳಿಸಲು ಪ್ರಧಾನಿ ಮೋದಿಯವರೊಂದಿಗೆ ವೀಡಿಯೋ ಕಾನ್ಫರೆನ್ಸಿಂಗ್ ಅನ್ನು ಏರ್ಪಡಿಸಿದ್ದರು. ಪ್ರಧಾನಿ ಮೋದಿಯವರು, ದಕ್ಷಿಣ ಭಾರತದ ಮೊಟ್ಟ ಮೊದಲ, ಬೆಂಗಳೂರು ಮೂಲಕ ಹಾದು ಹೋಗುವ ಮೈಸೂರು-ಚೆನ್ನೈ ರೈಲಿಗೆ ಚಾಲನೆ ನೀಡಲಿದ್ದಾರೆ. ಜೊತೆಗೆ, ೨.೫ ಕೋಟಿ ಹೆಚ್ಚುವರಿ ಪ್ರಯಾಣಿಕರನ್ನು ನಿರ್ವಹಿಸುವ ರೂ.೫,೦೦೦ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ. ನಂತರ, ಕೆಂಪೇಗೌಡ ಪ್ರಗತಿ ಪ್ರತಿಮೆ ಉದ್ಘಾಟಿಸಲಿದ್ದಾರೆ. ಅದಾದ ನಂತರ, ಒಕ್ಕಲಿಗರ ಪ್ರಾಬಲ್ಯವಿರುವಂತಹ ಸುಮಾರು ೧೬ ಜಿಲ್ಲೆಗಳಿಂದ ಮೂರು ಲಕ್ಷ ಜನರು ಭಾಗವಹಿಸಲಿರುವ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.</p>
<p>ಕೆಂಪೇಗೌಡ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿರುವ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಅವರು ಕಂಚು ಹಾಗೂ ಉಕ್ಕಿನಿಂದ ತಯಾರಿಸಲ್ಪಟ್ಟಿರುವ ಈ ಬೃಹತ್ ಪ್ರತಿಮೆಗೆ ರೂ.೬೪ ಕೋಟಿ ವೆಚ್ಚವಾಗಿದೆ ಎಂದು ತಿಳಿಸಿದರು. ಪ್ರತಿಮೆಯ ಸುತ್ತಮುತ್ತಲಿನ ಪ್ರದೇಶವನ್ನು ಸುಂದರವಾದ ಉದ್ಯಾನವನ್ನಾಗಿ ಅಭಿವೃದ್ಧಿಪಡಿಸಲಿದ್ದು, ಇದಕ್ಕಾಗಿ ರಾಜ್ಯದಾದ್ಯಂತ ವಿವಿಧ ಸ್ಥಳಗಳಿಂದ ಸಂಗ್ರಹಿಸಿ ತರುವ ಮಣ್ಣನ್ನು ಬಳಸಿಕೊಳ್ಳಲಾಗುವುದು. ಸುಮಾರು ೨೦ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವ ಈ ಯೋಜನೆಯನ್ನು ಮುಂದಿನ ಆರು ತಿಂಗಳ ಒಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.</p>
<p>&#8220;ಕೆಂಪೇಗೌಡ ವಿಮಾನನಿಲ್ದಾಣದ ಆವರಣದಲ್ಲಿ ೩ಡಿ ವರ್ಚ್ಯುವಲ್ ರಿಯಾಲಿಟಿ ಪಾರ್ಕ್ ಒಂದನ್ನು ಅಭಿವೃದ್ಧಿಪಡಿಸಲು ನಾವು ಆಲೋಚಿಸುತ್ತಿದ್ದು, ಬೆಂಗಳೂರು ಹಾಗೂ ಅದರ ಸ್ಥಾಪಕರ ಕುರಿತು ಸಂಕ್ಷಿಪ್ತ ಚರಿತ್ರೆಯನ್ನು ಆಧರಿಸಿರುವ ಕಥಾನಕವಿರುತ್ತದೆ,&#8221; ಎಂದು ಅಶ್ವತ್ ನಾರಾಯಣ್ ಅವರು ಮಾಧ್ಯಮಕ್ಕೆ ತಿಳಿಸಿದರು. ಜೊತೆಗೆ, ೧೬ನೇ ಶತಮಾನದ ಅರಸನಾಗಿದ್ದಂತಹ ೪೬ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಕೆಂಪೇಗೌಡ ಪ್ರವಾಸೋದ್ಯಮ ಸರ್ಕ್ಯೂಟ್ ಅನ್ನೂ ಸಹ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.<img loading="lazy" decoding="async" class="aligncenter size-full wp-image-98508" src="https://www.justkannada.in/wp-content/uploads/2022/10/pm-modi.jpg" alt="" width="500" height="337" srcset="https://www.justkannada.in/wp-content/uploads/2022/10/pm-modi.jpg 500w, https://www.justkannada.in/wp-content/uploads/2022/10/pm-modi-300x202.jpg 300w" sizes="auto, (max-width: 500px) 100vw, 500px" /></p>
<p>ಈ ೪೬ ಸ್ಥಳಗಳನ್ನು ಗುರುತಿಸುವ ವಿವರವಾದ ಯೋಜನಾ ವರದಿಗಳು ಅಂತಿಮ ಸಿದ್ಧತೆಯಲ್ಲಿವೆ. &#8220;ಪ್ರವಾಸೋದ್ಯಮ ಇಲಾಖೆಯು ಮಾಗಡಿಯಲ್ಲಿರುವ ರಂಗನಾಥಸ್ವಾಮಿ ದೇವಾಲಯದ ಮರುಅಭಿವೃದ್ಧಿಗಾಗಿ ಪುರಾತತ್ವ ಸಂಗ್ರಹಾಲಗಳು ಮತ್ತು ಪರಂಪರೆ ಇಲಾಖೆಗೆ ಹಣವನ್ನು ಬಿಡುಗಡೆಗೊಳಿಸಿದೆ,&#8221; ಎಂದು ತಿಳಿಸಿದರು.</p>
<p>ಖ್ಯಾತ ಶಿಲ್ಪಿ ರಾಮ್ ಸುತಾರ್ (ಗುಜರಾತ್‌ನಲ್ಲಿರುವ ಏಕತಾ ಪ್ರತಿಮೆಯ ನಿರ್ಮಾತೃ) ಅವರು ಕೆಂಪೇಗೌಡರ ಪ್ರತಿಮೆಯನ್ನು ವಿನ್ಯಾಸಪಡಿಸಿದ್ದು, ವಿಧಾನಸೌಧದ ಮುಂದೆಯೂ ಸ್ಥಾಪಿಸಲು ಉದ್ದೇಶಿಸಿರುವ ಮತ್ತೊಂದು ಕೆಂಪೇಗೌಡರ ಪ್ರತಿಮೆಯನ್ನೂ ವಿನ್ಯಾಸಪಡಿಸಿದ್ದಾರೆ. ವಿಧಾನಸೌಧದ ಮುಂದಿನ ಪ್ರತಿಮೆಯನ್ನು ಮುಂದಿನ ಎರಡು ತಿಂಗಳುಗಳ ಒಳಗೆ ಅಳವಡಿಸಲಾಗುವುದು, ಎಂದು ಮಾನ್ಯ ಸಚಿವರು ತಿಳಿಸಿದರು.</p>
<p>ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್</p>
<p>Key words: Prime Minister –Modi- visits- Bengaluru-BJP -plans – massive- convention</p>
<p>The post <a href="https://www.justkannada.in/prime-minister-modi-visits-bengaluru-bjp-plans-massive-convention/">ಪ್ರಧಾನಿ ಮೋದಿ ಬೆಂಗಳೂರು ಭೇಟಿ: ಬಿಜೆಪಿ ವತಿಯಿಂದ ಬೃಹತ್ ಸಮಾವೇಶ ಆಯೋಜಿಸಲು ಯೋಜನೆ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೈಸೂರು ಮಹಾನಗರ ಪಾಲಿಕೆಯ ಅಯವ್ಯಯ ಮಂಡನೆ: ಘೋಷಣೆಯಾದ ಯೋಜನೆಗಳೇನು ಗೊತ್ತೆ..?</title>
		<link>https://www.justkannada.in/mysore-city-corporation-budget-plans-announced/</link>
		
		<dc:creator><![CDATA[JK Desk]]></dc:creator>
		<pubDate>Thu, 29 Apr 2021 11:31:30 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[announced]]></category>
		<category><![CDATA[budget]]></category>
		<category><![CDATA[mysore-city-corporation]]></category>
		<category><![CDATA[Plans]]></category>
		<guid isPermaLink="false">https://www.justkannada.in/?p=63816</guid>

					<description><![CDATA[<p> ಮೈಸೂರು,ಏಪ್ರಿಲ್,29,2021(www.justkannada.in):  2021-21ನೇ ಸಾಲಿನ ಮೈಸೂರು ಮಹಾನಗರಪಾಲಿಕೆ ಆಯವ್ಯಯ‌ ಮಂಡನೆ  ಮಾಡಲಾಗಿದ್ದು, ಜಗನ್‌ಮೋಹನ ಅರಮನೆಯ ಬಳಿ ಅಂಡರ್‌ ಪಾಸ್ ನಿರ್ಮಾಣ ಸೇರಿ ಹಲವು ಯೋಜನೆ ಘೋಷಿಸಲಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ವರ್ಚ್ಯುಯಲ್ ಮೂಲಕ ಬಜೆಟ್ ಮಂಡನೆ ಮಾಡಲಾಗಿದ್ದು ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷೆ ಎಂ.ಎಸ್.ಶೋಭಾ  ಅವರು ಬಜೆಟ್ ಮಂಡಿಸಿದರು. ಕೊರೋನಾ ಕಾರಣದಿಂದಾಗಿ ಮಹಾನಗರ ಪಾಲಿಕೆ ಆಯುಕ್ತರು, ಮಹಾಪೌರರು, ಉಪಮಹಾಪೌರರು ಹಾಗೂ ಪ್ರಮುಖ ಅಧಿಕಾರಿಗಳು ಮಾತ್ರ ಸಭೆಯಲ್ಲಿ ಹಾಜರಾಗಿದ್ದರು. ಉಳಿದವರಿಗೆ ಆನ್‌ಲೈನ್ ಮೂಲಕ ಬಜೆಟ್ [&#8230;]</p>
<p>The post <a href="https://www.justkannada.in/mysore-city-corporation-budget-plans-announced/">ಮೈಸೂರು ಮಹಾನಗರ ಪಾಲಿಕೆಯ ಅಯವ್ಯಯ ಮಂಡನೆ: ಘೋಷಣೆಯಾದ ಯೋಜನೆಗಳೇನು ಗೊತ್ತೆ..?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong> ಮೈಸೂರು,ಏಪ್ರಿಲ್,29,2021(<a href="https://www.justkannada.in">www.justkannada.in</a>):</strong>  2021-21ನೇ ಸಾಲಿನ ಮೈಸೂರು ಮಹಾನಗರಪಾಲಿಕೆ ಆಯವ್ಯಯ‌ ಮಂಡನೆ  ಮಾಡಲಾಗಿದ್ದು, ಜಗನ್‌ಮೋಹನ ಅರಮನೆಯ ಬಳಿ ಅಂಡರ್‌ ಪಾಸ್ ನಿರ್ಮಾಣ ಸೇರಿ ಹಲವು ಯೋಜನೆ ಘೋಷಿಸಲಾಗಿದೆ.<img loading="lazy" decoding="async" class="aligncenter size-full wp-image-53142" src="https://www.justkannada.in/wp-content/uploads/2021/01/jk.jpg" alt="jk" width="640" height="640" /></p>
<p>ಇತಿಹಾಸದಲ್ಲಿ ಮೊದಲ ಬಾರಿಗೆ ವರ್ಚ್ಯುಯಲ್ ಮೂಲಕ ಬಜೆಟ್ ಮಂಡನೆ ಮಾಡಲಾಗಿದ್ದು ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷೆ ಎಂ.ಎಸ್.ಶೋಭಾ  ಅವರು ಬಜೆಟ್ ಮಂಡಿಸಿದರು. ಕೊರೋನಾ ಕಾರಣದಿಂದಾಗಿ ಮಹಾನಗರ ಪಾಲಿಕೆ ಆಯುಕ್ತರು, ಮಹಾಪೌರರು, ಉಪಮಹಾಪೌರರು ಹಾಗೂ ಪ್ರಮುಖ ಅಧಿಕಾರಿಗಳು ಮಾತ್ರ ಸಭೆಯಲ್ಲಿ ಹಾಜರಾಗಿದ್ದರು. ಉಳಿದವರಿಗೆ ಆನ್‌ಲೈನ್ ಮೂಲಕ ಬಜೆಟ್ ವಿಶೇಷ ಸಭೆ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು.</p>
<p>ಇಂದು ಮಂಡಿಸಿದ ಬಜೆಟ್ 987.68  ಕೋಟಿ ರೂ. ಗಾತ್ರದ ಬಜೆಟ್ ಆಗಿದ್ದು, ಜಗನ್‌ ಮೋಹನ ಅರಮನೆಯ ಬಳಿ ಅಂಡರ್‌ ಪಾಸ್ ನಿರ್ಮಾಣ, ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಾಣ, ಪ್ರೀ-ಕ್ಯಾಸ್ಟ್ ಮ್ಯಾನ್‌ ಹೋಲ್‌ಗಳ ನಿರ್ಮಾಣ ಸೇರಿದಂತೆ ಕೆಲವು ಹೊಸ ಯೋಜನೆಗಳನ್ನೊಳಗೊಂಡಿದೆ. 981.55 ಕೋಟಿ ಆದಾಯ ನಿರೀಕ್ಷೆ ಹೊಂದಿದ್ದು. ಉಳಿತಾಯ – 6.13  ಕೋಟಿ ರೂ ಆಗಿದೆ.</p>
<p>ಬಜೆಟ್ ಮಂಡನೆ ವೇಳೆ ಮಾತನಾಡಿದ  ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷೆ ಎಂ.ಎಸ್.ಶೋಭಾ  ಅವರು, ೨೦೨೦-೨೧ನೇ ಸಾಲಿನ ಆಯವ್ಯಯದಲ್ಲಿ 618.71 ಕೋಟಿ ರೂ. ಜಮೆಗಳನ್ನು ನಿರೀಕ್ಷಿಸಲಾಗಿತ್ತು. ವರ್ಷಾಂತ್ಯಕ್ಕೆ   ೪೬೮.೪೯ ಕೋಟಿ ರೂ. ಜಮೆಗಳನ್ನು ಸಂಗ್ರಹಿಸಲಾಗಿದೆ. ೮೭೧.೫೩ ಕೋಟಿ ರೂ. ಪಾವತಿಸಲು ಅವಕಾಶ ಮಾಡಲಾಗಿತ್ತು. ಸ್ವಯಂ ಸಂಪನ್ಮೂಲಗಳ ಹಾಗೂ ಅನುದಾನಗಳ ಲಭ್ಯತೆಯ ಅನುಸಾರವಾಗಿ ೪೨೪.೫೧ ರೂ. ಪಾವತಿ ಮಾಡಲಾಗಿದೆ</p>
<p>೨೦೨೦-೨೧ನೇ ಸಾಲಿನಲ್ಲಿ ೧೦.೩೨ ಕೋಟಿ ರೂ. ಮುಕ್ತನಿಧಿ ಅನುದಾನ ನಿರೀಕ್ಷಿಸಲಾಗಿತ್ತು. ರಾಜ್ಯ ಸರ್ಕಾರ ೧೯.೧೭ ಕೋಟಿ ರೂ. ಬಿಡುಗಡೆ ಮಾಡಿದೆ. ಬೀದಿದೀಪ, ನೀರು ಸರಬರಾಜು ಸ್ಥಾವರಗಳ ವಿದ್ಯುಚ್ಛಕ್ತಿ ಬಿಲ್ ಪಾವತಿಗಾಗಿ ೭೫.೨೩ ಕೋಟಿ ರೂ. ನಿರೀಕ್ಷೆ ಮಾಡಲಾಗಿತ್ತು. ಆದರೆ ಸರ್ಕಾರ ೭೬ ಕೋಟಿ ರೂ. ನೀಡಿದೆ. ನಗರಪಾಲಿಕೆ ಅಧಿಕಾರಿ/ನೌಕರರ ವೇತನ, ನಿವೃತ್ತ ನೌಕರರ ಪಿಂಚಣಿಗಾಗಿ ೬೮.೫೨ ಕೋಟಿ ರೂ., ೧೫ನೇ ಹಣಕಾಸು ಆಯೋಗದ ಅನುದಾನದ ಅಡಿಯಲ್ಲಿ ೬೯.೩೯ ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿತ್ತು. ಅದರ ಬದಲು ಕ್ರಮವಾಗಿ ೬೬.೦೫ ಕೋಟಿ ರೂ., ೫೨.೦೪ ಕೋಟಿ ರೂ. ಬಿಡುಗಡೆಯಾಗಿದೆ  ಎಂದು ಶೋಭಾ ಅವರು ಮಾಹಿತಿ ನೀಡಿದರು.</p>
<p>ಇನ್ನುಳಿದಂತೆ ಜನಪ್ರತಿನಿಧಿಗಳ ಪ್ರದೇಶಾಭಿವೃದ್ಧಿ ಅನುದಾನದಿಂದ ೨೫ ಕೋಟಿ ರೂ., ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ೩೦ ಕೋಟಿ ರೂ. ನಿರೀಕ್ಷಿಸಲಾಗಿದೆ. ಎಸ್‌ಎಫ್‌ ಸಿ ವಿಶೇಷ ಅನುದಾನದ ಅಡಿಯಲ್ಲಿ ಕೃಷ್ಣರಾಜ ಹಾಗೂ ಚಾಮರಾಜ ಕ್ಷೇತ್ರಗಳ ಅಭಿವೃದ್ಧಿಗಾಗಿ ತಲಾ ೧೫ ಕೋಟಿ ರೂ. ಹಂಚಿಕೆ ಮಾಡಲಾಗಿದೆ (ಒಟ್ಟು ೩೦ ಕೋಟಿ ರೂ.). ಈ ಪೈಕಿ ೧೭.೨೫ ಕೋಟಿ ರೂ.ಬಿಡುಗಡೆಯಾಗಿದ್ದು, ಉಳಿದ ೧೨.೭೪ ಕೋಟಿ ರೂ.ಗಳನ್ನು ಹಾಗೂ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ೨೫ ಕೋಟಿ ರೂ. ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದು ಶೋಭಾ ಅವರು ತಿಳಿಸಿದರು.<img loading="lazy" decoding="async" class="aligncenter size-medium wp-image-63817" src="https://www.justkannada.in/wp-content/uploads/2021/04/mysodre-300x156.jpg" alt="mysore-city-corporation-budget-plans-announced" width="300" height="156" /></p>
<p><strong>ಬಜೆಟ್ ನ ಪ್ರಮುಖಾಂಶ ಹೀಗಿದೆ ನೋಡಿ&#8230;</strong></p>
<p>ಕೊರೊನಾ ಕಾಲದಲ್ಲಿ ಆರೋಗ್ಯ ಯೋಜನೆಗಳಿಗೆ ಒತ್ತು</p>
<p>ನಗರಪಾಲಿಕೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ವರ್ಷಕ್ಕೆ ಒಂದು ಬಾರಿ ಉಚಿತ ವೈದ್ಯಕೀಯ ತಪಾಸಣೆ ನಡೆಸಲು ಹಾಗೂ ಪಾಲಿಕೆ ವತಿಯಿಂದ ವೈದ್ಯಕೀಯ ವೆಚ್ಚ ಮರುಬರಿಸಲು ೨೫ ಲಕ್ಷ ರೂ.</p>
<p>.ಕೊರೊನಾ ದುಷ್ಪರಿಣಾಮಗಳನ್ನು ಎದುರಿಸಲು ೬.೫ ಕೋಟಿ ರೂ. ಸರ್ಕಾರದಿಂದ ಪರಿಹಾರ ದೊರೆಯದ ಪಾಲಿಕೆಯ ನೌಕರರಿಗೆ ೫ ಲಕ್ಷ ರೂ. ಪರಿಹಾರ. ಬಡತನದ ರೇಖೆಗಿಂದ ಕೆಳಗಿರುವ ನಾಗರೀಕರಿಗೆ ವೈದ್ಯಕೀಯ ತಪಾಸಣೆ ಮಾಡಲು ಅಗತ್ಯ ಕಟ್ಟಡ ಹಾಗೂ ಯಂತ್ರೋಪಕರಣಗಳ ಖರೀದಿಗೆ ೭.೫ ಕೋಟಿ ರೂ. ಮಾಧ್ಯಮದವರ ಕೊರೊನಾ ಚಿಕಿತ್ಸಾ ವೆಚ್ಚ ಮರುಬರಿಸಲು ೨೫ ಲಕ್ಷ ರೂ .</p>
<p>ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ ಪ್ರತಿ ವಲಯಕ್ಕೆ ಒಂದರಂತೆ ಡೀಸೆಲ್ ತಯಾರಿಕಾ ಘಟಕ ಸ್ಥಾಪಿಸಲು ೧ ಕೋಟಿ ರೂ.ಮೀಸಲು.</p>
<p>ವಲಯ ಕಚೇರಿಗಳು ಹಾಗೂ ಮುಖ್ಯ ಕಚೇರಿಯಲ್ಲಿ ಬ್ಯಾಂಕ್‌ಗಳ ಸಹಯೋಗದೊಂದಿಗೆ ಕ್ಯಾಷ್ ಡೆಪಾಸಿಟ್ ಯಂತ್ರ ಅಳವಡಿಕೆ. ವಿದ್ಯಾರಣ್ಯಪುರಂ, ರಾಯನಕೆರೆ ಮತ್ತು ಕೆಸರೆ ಪ್ರದೇಶಗಳಲ್ಲಿರುವ ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕಗಳನ್ನು ನವೀಕರಿಸಲು ೧೦ ಕೋಟಿ ರೂ. ವಿದ್ಯಾರಣ್ಯಪುರಂ ಘಟಕದಲ್ಲಿ ಬಯೋಮೈನಿಂಗ್ ಮಾಡಲು ೭.೩೫ ಕೋಟಿ ರೂ. ಮೀಸಲು.</p>
<p>ವೃತ್ತಗಳ ಸೌಂದರ್ಯೀಕರಣ ಹಾಗೂ ಅಭಿವೃದ್ಧಿಗೆ ೧.೫ ಕೋಟಿ ರೂ., ನಗರಪಾಲಿಕೆ ಮುಖ್ಯ ಕಚೇರಿಯಲ್ಲಿ ಇಲ್ಯುಮಿನೇಟೆಡ್ ದೀಪಗಳ ಅಳವಡಿಕೆ ಹಾಗೂ ಯದುವಂಶದ ರಾಜರೊಬ್ಬರ ಪುತ್ಥಳಿ ನಿರ್ಮಾಣಕ್ಕೆ ೫ ಕೋಟಿ ರೂ. ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ೩ ಕೋಟಿ ರೂ.</p>
<p>ಶುದ್ಧೀಕರಿಸಿದ ಮಲಿನ ನೀರಿನ ಮರುಬಳಕೆಗೆ ೧ ಕೋಟಿ ರೂ. ಪರಿಶಿಷ್ಟ ಜಾತಿ/ವರ್ಗಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ೫೭.೪೨ ಕೋಟಿ ರೂ., ಬಡಜನರ ಕಲ್ಯಾಣ ಕಾರ್ಯಕ್ರಮಗಳಿಗೆ ೭.೩೯ ಕೋಟಿ ರೂ., ವಿಕಲಷೇತನರ ಕಲ್ಯಾಣ ಕಾರ್ಯಕ್ರಮಗಳಿಗೆ ೧೧.೩೦ ಕೋಟಿ ರೂ.</p>
<p>ಹಲವು ಮೂಲಗಳಿಂದ ಮೂಲಗಳಿಂದ ಆದಾಯ ನಿರೀಕ್ಷೆ.</p>
<p>೯೮೭.೬೮ ಕೋಟಿ ರೂ.ಆದಾಯ ನಿರೀಕ್ಷೆ .</p>
<p>ಆಸ್ತಿ ತೆರಿಗೆ &#8211; ೧೮೮.೪೪ ಕೋಟಿ ರೂ.</p>
<p>ನೀರಿನ ತೆರಿಗೆ, ಒಳಚರಂಡಿ ನಿರ್ವಹಣಾ ಕರ &#8211; ೬೫ ಕೋಟಿ ರೂ.</p>
<p>ನಗರ ಮತ್ತು ಪಟ್ಟಣ ಯೋಜನೆ &#8211; ೬.೬೫ ಕೋಟಿ ರೂ.</p>
<p>ಉದ್ದಿಮೆ ಪರವಾನಗಿ ಶುಲ್ಕ &#8211; ೯ ಕೋಟಿ ರೂ.</p>
<p>ನಗರಪಾಲಿಕೆ ಆಸ್ತಿಗಳಿಂದ ಬರುವ ಬಾಡಿಗೆ &#8211; ೪.೨೫ ಕೋಟಿ ರೂ. ನಿರೀಕ್ಷೆ.</p>
<p>ನಗರಪಾಲಿಕೆ ಅಧಿಕಾರಿಗಳಿಗೆ ಪರಿಸರ ಸ್ನೇಹಿ ವಾಹನಗಳು ಬಳಕೆಗೆ ನಿರ್ಧಾರ.</p>
<p>. ಈ ಸಾಲಿನಲ್ಲಿ ಪ್ರಾಯೋಗಿಕವಾಗಿ ಕನಿಷ್ಠ ಒಂದು ಪ್ಯಾಕೇಜ್‌ನಲ್ಲಿ ವಾಹನಗಳನ್ನು ಕೊಳ್ಳಲು ಬಜೆಟ್ ನಲ್ಲಿ ನಿರ್ಧಾರ.</p>
<p>ಪ್ರೀ-ಕ್ಯಾಸ್ಟ್ ಮ್ಯಾನ್‌ಹೋಲ್, ಅಂಡರ್‌ಪಾಸ್, ಕ್ರೀಡಾಂಗಣ ನಿರ್ಮಾಣ.</p>
<p>ಪ್ರೀ-ಕ್ಯಾಸ್ಟ್ ಮ್ಯಾನ್‌ಹೋಲ್‌ಗಳನ್ನು ನಿರ್ಮಿಸಲು  ೬ ಕೋಟಿ ರೂ. ಮೀಸಲು.</p>
<p>ನಗರದ ಹೃದಯ ಭಾಗದಲ್ಲಿರುವ ಜಗನ್ಮೋಹನ ಅರಮನೆಯ ಬಳಿ ಅಂಡರ್‌ಪಾಸ್ ನಿರ್ಮಿಸಲು ೨ ಕೋಟಿ ರೂ.,</p>
<p>ನಗರಪಾಲಿಕೆ ವ್ಯಾಪ್ತಿಯಲ್ಲಿ ಒಂದು ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ೫೦ ಲಕ್ಷ ರೂ.,</p>
<p>ವಿಜಯನಗರ ರೈಲ್ವೇ ಬಡಾವಣೆಯಲ್ಲಿ ಕ್ರೀಡಾಂಗಣ ಅಭಿವೃದ್ಧಿಪಡಿಸಲು ೧ ಕೋಟಿ ರೂ. .</p>
<p>Key words: Mysore city corporation- Budget –plans- announced.</p>
<p>The post <a href="https://www.justkannada.in/mysore-city-corporation-budget-plans-announced/">ಮೈಸೂರು ಮಹಾನಗರ ಪಾಲಿಕೆಯ ಅಯವ್ಯಯ ಮಂಡನೆ: ಘೋಷಣೆಯಾದ ಯೋಜನೆಗಳೇನು ಗೊತ್ತೆ..?</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಕೇಂದ್ರ- ರಾಜ್ಯದ ಯೋಜನೆಗಳು ಸಹಕಾರ ಇಲಾಖೆ ಮೂಲಕ ಜನತೆ ಮನೆ ಮನೆಗೆ; ಸಚಿವ ಎಸ್.ಟಿ.ಸೋಮಶೇಖರ್</title>
		<link>https://www.justkannada.in/centralstateplansthroughdepartmentcooperationpeoplecomehomeministers-t-somashekhar/</link>
		
		<dc:creator><![CDATA[JK Desk]]></dc:creator>
		<pubDate>Mon, 16 Nov 2020 08:36:51 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[central]]></category>
		<category><![CDATA[Co]]></category>
		<category><![CDATA[come]]></category>
		<category><![CDATA[Department]]></category>
		<category><![CDATA[home]]></category>
		<category><![CDATA[minister]]></category>
		<category><![CDATA[Operation]]></category>
		<category><![CDATA[people]]></category>
		<category><![CDATA[Plans]]></category>
		<category><![CDATA[S.T. Somashekhar]]></category>
		<category><![CDATA[State]]></category>
		<category><![CDATA[through]]></category>
		<guid isPermaLink="false">https://www.justkannada.in/?p=45419</guid>

					<description><![CDATA[<p>ದಾವಣಗೆರೆ,ನವೆಂಬರ್,16,2020(www.justkannada.in) ; ಸಹಕಾರಿ ಚಳವಳಿ ಹಾಗೂ ಸಹಕಾರ ಕ್ಷೇತ್ರದ ಬಗ್ಗೆ ರಾಜ್ಯದ ಜನತೆಗೆ ಉಪಯುಕ್ತ ಮಾಹಿತಿಯನ್ನು ಕೊಡುವ ಕೆಲಸ ಸಹಕಾರ ಸಪ್ತಾಹದ ಮೂಲಕವಾಗುತ್ತಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ನಮ್ಮ ಇಲಾಖೆ ಮಾಡಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಲಕ್ಷಾಂತರ ಮಂದಿಗೆ ಸಹಕಾರ ಕ್ಷೇತ್ರದಿಂದ ಉದ್ಯೋಗ ಸಿಗುತ್ತಿದೆ 67ನೇ ಅಖಿಲ ಭಾರತ ಸಹಕಾರ ಸಪ್ತಾಹ -2020ರ ಮೂರನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋಟ್ಯಂತರ ರೂಪಾಯಿ [&#8230;]</p>
<p>The post <a href="https://www.justkannada.in/centralstateplansthroughdepartmentcooperationpeoplecomehomeministers-t-somashekhar/">ಕೇಂದ್ರ- ರಾಜ್ಯದ ಯೋಜನೆಗಳು ಸಹಕಾರ ಇಲಾಖೆ ಮೂಲಕ ಜನತೆ ಮನೆ ಮನೆಗೆ; ಸಚಿವ ಎಸ್.ಟಿ.ಸೋಮಶೇಖರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ದಾವಣಗೆರೆ,ನವೆಂಬರ್,16,2020(www.justkannada.in)</strong> ; ಸಹಕಾರಿ ಚಳವಳಿ ಹಾಗೂ ಸಹಕಾರ ಕ್ಷೇತ್ರದ ಬಗ್ಗೆ ರಾಜ್ಯದ ಜನತೆಗೆ ಉಪಯುಕ್ತ ಮಾಹಿತಿಯನ್ನು ಕೊಡುವ ಕೆಲಸ ಸಹಕಾರ ಸಪ್ತಾಹದ ಮೂಲಕವಾಗುತ್ತಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ನಮ್ಮ ಇಲಾಖೆ ಮಾಡಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.</p>
<p><img loading="lazy" decoding="async" class="aligncenter size-full wp-image-7" src="https://www.justkannada.in/wp-content/uploads/2019/05/jk-logo.jpg" alt="kannada-journalist-media-fourth-estate-under-loss" width="125" height="125" /></p>
<p><strong>ಲಕ್ಷಾಂತರ ಮಂದಿಗೆ ಸಹಕಾರ ಕ್ಷೇತ್ರದಿಂದ ಉದ್ಯೋಗ ಸಿಗುತ್ತಿದೆ</strong></p>
<p>67ನೇ ಅಖಿಲ ಭಾರತ ಸಹಕಾರ ಸಪ್ತಾಹ -2020ರ ಮೂರನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋಟ್ಯಂತರ ರೂಪಾಯಿ ಠೇವಣಿ ಸಹಕಾರ ಬ್ಯಾಂಕ್ ಗಳಲ್ಲಿದೆ. ಲಕ್ಷಾಂತರ ಮಂದಿಗೆ ಸಹಕಾರ ಕ್ಷೇತ್ರದಿಂದ ಉದ್ಯೋಗ ಸಿಗುತ್ತಿದೆ. ಕಲಬುರಗಿಯಲ್ಲಿ ಸಹಕಾರ ಕ್ಷೇತ್ರದ ವತಿಯಿಂದ ಆಸ್ಪತ್ರೆ ಕಟ್ಟಿಸಿದ್ದು ಲಕ್ಷಾಂತರ ಮಂದಿಗೆ ಉಪಯೋಗವಾಗುತ್ತಿದೆ. ಇದೇ ರೀತಿಯಾಗಿ ರಾಜ್ಯದ ವಿವಿಧೆಡೆ ಸಹಕಾರಿಗಳಿಂದ ಹೆಚ್ಚಿನ ಉತ್ತಮ ಕೆಲಸವಾಗುತ್ತಿದೆ ಎಂದು ತಿಳಿಸಿದರು.</p>
<p><strong>ಆರ್ಥಿಕ ಸ್ಪಂದನ ಸದ್ವಿನಿಯೋಗಕ್ಕೆ ನೋಡಲ್ ಅಧಿಕಾರಿಗಳ ನೇಮಕ</strong></p>
<p>ಆತ್ಮನಿರ್ಭರ ಯೋಜನೆಯಡಿ ರಾಜ್ಯ ಸರ್ಕಾರ ಹಾಗೂ ಸಹಕಾರ ಇಲಾಖೆ ನೇತೃತ್ವದಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ಇತ್ತೀಚೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು. ಇದರ ಮೂಲಕ 39,600 ಕೋಟಿ ರೂಪಾಯಿ ಸಾಲ ವಿತರಣೆ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದರಡಿ 25 ಸಾವಿರದಿಂದ ಹಿಡಿದು 10 ಲಕ್ಷದವರೆಗೂ ಸಾಲವನ್ನು ನೀಡಿ ಸಾರ್ವಜನಿಕರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ತಯಾರಿಸಲಾಗುವುದು ಎಂದರು.</p>
<p>ಆರ್ಥಿಕ ಸ್ಪಂದನವನ್ನು 4 ವಿಭಾಗಗಳಾಗಿ ವಿಂಗಡಿಸಿ ಚಾಲನೆ ನೀಡಿದ್ದೇವೆ. ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳ ಮೂಲಕ ಈಗಾಗಲೇ ಸಾಲ  ವಿತರಣೆ ಮಾಡಲು ಚಾಲನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಈ ಯೋಜನೆಯ ದುರ್ಬಳಕೆಯಾಗಬಾರದು ಎಂಬ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.</p>
<p><strong>15 ಲಕ್ಷ ರೈತರಿಗೆ 10 ಸಾವಿರ ಕೋಟಿ ರೂ. ಸಾಲ ವಿತರಣೆ</strong></p>
<p>ಕೋವಿಡ್ ಸಂದರ್ಭ ಎದುರಾದ ಹಿನ್ನೆಲೆಯಲ್ಲಿ ರೈತರಿಗೆ ಪ್ರಸಕ್ತ ಸಾಲಿನಲ್ಲಿ ಸಾಲ ನೀಡುವುದು ಬಹಳ ಕಷ್ಟ ಎಂದೇ ಅಂದಾಜಿಸಲಾಗಿತ್ತು. ಕಳೆದ ವರ್ಷ ನೀಡಲಾಗಿದ್ದ 13500 ಕೋಟಿಯಷ್ಟು ಸಾಲವನ್ನೂ ಸಹ ನೀಡಲು ಕಷ್ಟವಾಗಬಹುದು ಎಂಬ ಆತಂಕದ ನಡುವೆಯೂ ನಾವು 24 ಲಕ್ಷ ರೈತರಿಗೆ 14,500 ಕೋಟಿ ರೂಪಾಯಿ ಸಾಲ ವಿತರಣೆ ಗುರಿ ಹಾಕಿಕೊಂಡೆವು. ಅದರನ್ವಯ ಈವರೆಗೆ ಅಂದರೆ ನವೆಂಬರ್ 16ರ ವರೆಗೆ 15,22,076 ರೈತರಿಗೆ 9945.82 ಕೋಟಿ ರೂಪಾಯಿ ಸಾಲವನ್ನು ನೀಡಿದ್ದೇವೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.</p>
<p><strong>ಹಣ ದುರ್ಬಳಕೆ ಮಾಡುತ್ತವೆ ಎಂಬ ವಾದವನ್ನು ನಾನು ಒಪ್ಪಲಾರೆ</strong></p>
<p>280 ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಗಳಿದ್ದು, ರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್ ಬಿಟ್ಟರೆ ಉಳಿದೆಲ್ಲ ಬ್ಯಾಂಕುಗಳು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿವೆ. ಹೀಗಾಗಿ ಸಹಕಾರಿ ಬ್ಯಾಂಕುಗಳು ಹಣ ದುರ್ಬಳಕೆ ಮಾಡುತ್ತವೆ ಎಂಬ ವಾದವನ್ನು ನಾನು ಒಪ್ಪಲಾರೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.</p>
<p>ಸಹಕಾರ ಕ್ಷೇತ್ರದಲ್ಲಿ ನನಗೆ ಪ್ರೋತ್ಸಾಹ ನೀಡಿ ಹುರಿದುಂಬಿಸಿದ ಕೆಲಸ ಮಾಡಿದವರು ಹಿರಿಯ ಸಹಕಾರಿಗಳು ಹಾಗೂ ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರು ಮಾಡಿದ್ದಾರೆ. ಅವರು ಸಹಕಾರಿ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ನಗರಾಭಿವೃದ್ಧಿ ಸಚಿವರಾದ ಬಿ. ಎ. ಬಸವರಾಜು ಅವರು ಸಹ ಅಭಿವೃದ್ಧಿ ಪರವಾಗಿ ಸಾಕಷ್ಟು ಶ್ರಮ ಹಾಕುತ್ತಾರೆ. ಅವರು ಗ್ರಾಮ ಪಂಚಾಯಿತಿ ಮಟ್ಟದಿಂದ ಸಚಿವರಾಗುವ ತನಕ ಬೆಳೆದಿದ್ದಾರೆ. ಆಡಳಿತ ವಿಭಾಗದ ಎಲ್ಲ ಸಮಸ್ಯೆಗಳ ಅರಿವು ಸಹ ಅವರಿಗಿದೆ. ಜೊತೆಗೆ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ ಎಂದು ತಿಳಿಸಿದರು.</p>
<p><strong>42600 ಆಶಾ ಕಾರ್ಯಕರ್ತೆಯರಿಗೂ ತಲಾ 3000 ದಂತೆ ಒಟ್ಟು 12.75 ಕೋಟಿ ರೂ</strong></p>
<p>ಕೋವಿಡ್ 19ರ ಸಂಕಷ್ಟದ ಕಾಲದಲ್ಲಿ ಲಾಭದಲ್ಲಿರುವ ಸಹಕಾರ ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸಿ 53 ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಟ್ಟಿದ್ದೇವೆ. ಇನ್ನು ಕೊರೋನಾ ವಾರಿಯರ್ಸ್ ಗಳಾದ 42600 ಆಶಾ ಕಾರ್ಯಕರ್ತೆಯರಿಗೂ ಸಹ ತಲಾ 3000 ದಂತೆ ಒಟ್ಟು 12.75 ಕೋಟಿ ರೂಪಾಯಿಯನ್ನು ವಿತರಣೆ ಮಾಡಿದ್ದೇವೆ. ಇದು ನೂರಕ್ಕೆ ನೂರರಷ್ಟು ಯಶಸ್ವಿಯಾಗಿದ್ದಕ್ಕೆ ಸಂತಸವಿದೆ ಎಂದು ಸಚಿವರು ತಿಳಿಸಿದರು.</p>
<p>ಬಡವರ ಬಂಧು, ಕಾಯಕ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮವನ್ನು ಸಹಕಾರ ಇಲಾಖೆ ಮುಖಾಂತರ ಹಮ್ಮಿಕೊಂಡು ಜನತೆಗೆ ಸ್ಪಂದನೆ ನೀಡಲಾಗುತ್ತಿದೆ. ಬಡವರ ಬಂಧು ಯೋಜನೆಯಡಿಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಾಜ್ಯದ ನಗರ ಪ್ರದೇಶಗಳಲ್ಲಿನ ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳನ್ನು ಲೇವಾದೇವಿಗಾರರ ಕಾಟದಿಂದ ಮುಕ್ತಿಗೊಳಿಸಿ ಡಿಸಿಸಿ ಬ್ಯಾಂಕುಗಳು, ಪಟ್ಟಣ ಸಹಕಾರ ಬ್ಯಾಂಕುಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ರೂ.2 ಸಾವಿರದಿಂದ 10 ಸಾವಿರ ರೂ.ಗಳ ಮಿತಿಯಲ್ಲಿ ಸಾಲ ವಿತರಿಸಲಾಗುತ್ತಿದೆ.</p>
<p>ಸದರಿ ಸಾಲಗಳ ಮೇಲಿನ ಬಡ್ಡಿಯನ್ನು ರಾಜ್ಯ ಸರ್ಕಾರವೇ ಭರಿಸುತ್ತಿದ್ದು, 2020-21ನೇ ಸಾಲಿನಲ್ಲಿ 25 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಈವರೆಗೆ 20760 ಫಲಾನುಭವಿಗಳಿಗೆ 14.43 ಕೋಟಿ ರೂ.ಗಳ ಸಾಲ ವಿತರಿಸಲಾಗಿದೆ ಎಂದು ಸಚಿವರು ತಿಳಿಸಿದರು.</p>
<p><strong>ಸಮಾಜದಲ್ಲಿ ಶೋಷಣೆ ನಿರ್ಮೂಲ ಮಾಡಬೇಕು</strong></p>
<p><img loading="lazy" decoding="async" class="aligncenter size-medium wp-image-45420" src="https://www.justkannada.in/wp-content/uploads/2020/11/sOma-300x251.jpg" alt="Central-State-Plans-Through-Department-Co-operation-People-come-home-Minister-S.T.Somashekhar" width="300" height="251" /></p>
<p>ಸಹಕಾರ ತತ್ವದಲ್ಲಿ ನನಗೆ ವಿಶೇಷವಾದ ನಂಬಿಕೆ ಇದೆ. ಸಮಾಜದಲ್ಲಿ ಶೋಷಣೆ ನಿರ್ಮೂಲ ಮಾಡಬೇಕು.  ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ದೊರಕಿಸಿಕೊಡಬೇಕು ಎಂಬ ಆಶಯವನ್ನು ನಮ್ಮ ಸರ್ಕಾರ ದೀಕ್ಷೆಯಾಗಿ ಸ್ವೀಕರಿಸಿದೆ. ಕೋವಿಡ್- 19 ವೈರಾಣು ವೈಪರೀತ್ಯದ ಹಿನ್ನೆಲೆಯಲ್ಲಿ ರಾಜ್ಯದ ಸಹಕಾರ ಸಂಸ್ಥೆಗಳು ಎಲ್ಲಾ ವರ್ಗದ ಜನರಿಗೆ ಆರ್ಥಿಕ ನೆರವು ನೀಡಲೆಂದು ಆಶಿಸುತ್ತಾ, 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ, ಅರ್ಥಪೂರ್ಣವಾಗಿ ಅನುಷ್ಠಾನಗೊಳ್ಳಲಿ ಎಂದು ಆಶಿಸುತ್ತೇನೆ ಎಂದು ಸಚಿವರಾದ ಸೋಮಶೇಖರ್ ಹೇಳಿದರು.</p>
<p><strong>ಸಚಿವ ಸೋಮಶೇಖರ್ ರಿಂದ ಉತ್ತಮ ಕಾರ್ಯ; ಬಿ.ಎ.ಬಸವರಾಜು</strong></p>
<p>ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜು ಮಾತನಾಡಿ, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ರೈತರ ಹಾಗೂ ಸಾರ್ವಜನಿಕರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಹೈನುಗಾರಿಕೆ, ಕೃಷಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಸಚಿವರ ಸಹಕಾರ ಬೇಕಿದೆ ಎಂದು ತಿಳಿಸಿದರು.</p>
<p><strong>ನಿಷ್ಪಕ್ಷಪಾತವಾಗಿ ಸಹಕಾರ ರತ್ನ ಪ್ರಶಸ್ತಿ ಆಯ್ಕೆ; ಎಚ್.ಕೆ. ಪಾಟೀಲ್ ಅಭಿನಂದನೆ</strong></p>
<p>ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ರಾಜಕೀಯದಲ್ಲಿ ತಾರತಮ್ಯ ಇರುವುದು ಸಹಜ. ಆದರೆ, ರಾಜಕಾರಣಿಗಳು ಸಹಕಾರ ಕ್ಷೇತ್ರದಲ್ಲಿದ್ದಾಗ ಜಾತಿ, ಪಕ್ಷ ಹೀಗೆ ಬೇರೆ ಬೇರೆ ಒತ್ತಡಗಳಿಂದ ನ್ಯಾಯ ಒದಗಿಸುವುದು ಕಷ್ಟ. ಆದರೆ, ಸಹಕಾರ ಸಚಿವರಾದ ಸೋಮಶೇಖರ್ ಅವರು ಇದಾವುದನ್ನೂ ನೋಡದೆ ಎಲ್ಲ ಪಕ್ಷಗಳ ಹಿರಿಯ ಸಹಕಾರಿಗಳನ್ನು ಗುರುತಿಸಿ ಅವರಿಗೆ ಸಹಕಾರ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.</p>
<p>ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕರಾದ ರೇಣುಕಾಚಾರ್ಯ, ಶಾಸಕರಾದ  ರವೀಂದ್ರನಾಥ್, ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಿರಿಯ ಸಹಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.</p>
<p>key words ; Central-State-Plans-Through-Department-Co-operation-People-come-home-Minister-S.T.Somashekhar</p>
<p>The post <a href="https://www.justkannada.in/centralstateplansthroughdepartmentcooperationpeoplecomehomeministers-t-somashekhar/">ಕೇಂದ್ರ- ರಾಜ್ಯದ ಯೋಜನೆಗಳು ಸಹಕಾರ ಇಲಾಖೆ ಮೂಲಕ ಜನತೆ ಮನೆ ಮನೆಗೆ; ಸಚಿವ ಎಸ್.ಟಿ.ಸೋಮಶೇಖರ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ದಸರಾಗೂ ಮುನ್ನ ಉಗ್ರ ಸಂಘಟನೆಗಳಿಂದ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ವಿಚಾರ: ಜನರಲ್ಲಿ ಆತಂಕ, ಗೊಂದಲ ಮೂಡಿಸುವ ಕೆಲಸ ಆಗಬಾರದು-ಸಚಿವ ಸೋಮಣ್ಣ ಹೇಳಿಕೆ</title>
		<link>https://www.justkannada.in/mysore-dasara-plans-terrorist-minister-v-somanna-reaction/</link>
		
		<dc:creator><![CDATA[JK Desk]]></dc:creator>
		<pubDate>Tue, 17 Sep 2019 08:38:52 +0000</pubDate>
				<category><![CDATA[DASARA-2019]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[minister]]></category>
		<category><![CDATA[mysore dasara]]></category>
		<category><![CDATA[Plans]]></category>
		<category><![CDATA[reaction]]></category>
		<category><![CDATA[terrorist]]></category>
		<category><![CDATA[V. Somanna]]></category>
		<guid isPermaLink="false">https://www.justkannada.in/?p=12344</guid>

					<description><![CDATA[<p>ಮೈಸೂರು,ಸೆ,17,2019(www.justkannada.in): ಮೈಸೂರು ದಸರೆಗೂ ಮುನ್ನವೇ ವಿದ್ವಂಸಕ ಕೃತ್ಯ ನಡೆಸಲು ಉಗ್ರ ಸಂಘಟನೆಗಳ ಪ್ಲ್ಯಾನ್ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಜನರಲ್ಲಿ ಆತಂಕ, ಗೊಂದಲ ಮೂಡಿಸುವ ಕೆಲಸ ಆಗಬಾರದು ಎಂದು ಹೇಳಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಮೈಸೂರಿನ ಪತ್ರಕರ್ತರ ಸಂಘದಲ್ಲಿ  ಸಂವಾದ ಕಾರ್ಯಕ್ರಮ ನಡೆಸಿ ಸಚಿವ ವಿ.ಸೋಮಣ್ಣ ಮಾತನಾಡಿದರು. ದಸರಾ ಮಹೋತ್ಸವದ ಸಂಭ್ರಮ ಮುಖ್ಯ. ಅದರ ಜೊತೆಯಲ್ಲೇ ಬರುವ ಪ್ರವಾಸಿಗರ ಸುರಕ್ಷತೆ ಕೂಡ ಮುಖ್ಯ. [&#8230;]</p>
<p>The post <a href="https://www.justkannada.in/mysore-dasara-plans-terrorist-minister-v-somanna-reaction/">ದಸರಾಗೂ ಮುನ್ನ ಉಗ್ರ ಸಂಘಟನೆಗಳಿಂದ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ವಿಚಾರ: ಜನರಲ್ಲಿ ಆತಂಕ, ಗೊಂದಲ ಮೂಡಿಸುವ ಕೆಲಸ ಆಗಬಾರದು-ಸಚಿವ ಸೋಮಣ್ಣ ಹೇಳಿಕೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಮೈಸೂರು,ಸೆ,17,2019(<a href="https://www.justkannada.in">www.justkannada.in</a>): ಮೈಸೂರು ದಸರೆಗೂ ಮುನ್ನವೇ ವಿದ್ವಂಸಕ ಕೃತ್ಯ ನಡೆಸಲು ಉಗ್ರ ಸಂಘಟನೆಗಳ ಪ್ಲ್ಯಾನ್ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಜನರಲ್ಲಿ ಆತಂಕ, ಗೊಂದಲ ಮೂಡಿಸುವ ಕೆಲಸ ಆಗಬಾರದು ಎಂದು ಹೇಳಿದ್ದಾರೆ.</p>
<p>ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಮೈಸೂರಿನ ಪತ್ರಕರ್ತರ ಸಂಘದಲ್ಲಿ  ಸಂವಾದ ಕಾರ್ಯಕ್ರಮ ನಡೆಸಿ ಸಚಿವ ವಿ.ಸೋಮಣ್ಣ ಮಾತನಾಡಿದರು. ದಸರಾ ಮಹೋತ್ಸವದ ಸಂಭ್ರಮ ಮುಖ್ಯ. ಅದರ ಜೊತೆಯಲ್ಲೇ ಬರುವ ಪ್ರವಾಸಿಗರ ಸುರಕ್ಷತೆ ಕೂಡ ಮುಖ್ಯ. ಭದ್ರತೆಗೆ ಆದ್ಯತೆ ಮೇರೆಗೆ ಗಮನ ಹರಿಸಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಐಜಿ ಅವರೊಂದಿಗೂ ಚರ್ಚಿಸಿದ್ದೇನೆ.‌ ಖುದ್ದಾಗಿ ಗೃಹ ಸಚಿವರನ್ನು ಭೇಟಿ ಮನವಿ ಮಾಡಿದ್ದೇನೆ.‌ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.</p>
<p>ಪಾರಂಪರಿಕ ಹಬ್ಬಕ್ಕೆ‌ ನಿಮ್ಮ‌ ಸಲಹೆ ನನಗೆ ‌ಮುಖ್ಯ. ನಿಮ್ಮ ಸಲಹೆ ಸೂಚನೆ‌ ನನ್ನ‌ ಹುಮ್ಮಸ್ಸು ಹೆಚ್ಚಿಸಿದೆ. ಇನ್ನೂ ಕೆಲವು ಕೆಲಸ ಕಾರ್ಯ ಆರಂಭ ವಿಳಂಬವಾಗಿದೆ. ನಿಮ್ಮ ಸಲಹೆ ಸೂಚನೆಗಳಿಂದ ಇನ್ನೂ ಕೆಲವು ಸಫಲತೆ ಕಂಡಿಲ್ಲ. ಸರ್ಕಾರ ಖರ್ಚು ಮಾಡುವುದು ಕಡಿಮೆ. ಜನರ ಸಫಲತೆ ಕಾಣಲು ನಿಮ್ಮ ಸಹಕಾರ‌ ಮುಖ್ಯ. ನೀವು ಜನರಿಗೆ ತಿಳಿಸಿದ್ದು ಸಫಲತೆ ಕಂಡಿದೆ ಎಂದು ಮಾಧ್ಯಮದವರಿಗೆ ತಿಳಿಸಿದರು.</p>
<p>ಕಳೆದ ಬಾರಿಗಿಂತ ಈ ಬಾರಿ ಯುವ ಸಂಭ್ರಮ ವಿಭಿನ್ನವಾಗಲಿದೆ. ದಸರಾ ಪಕ್ಷಾತೀತವಾಗಿ ನಡೆದು ಬಂದಿದೆ. ಅದನ್ನ ನಮ್ಮ‌ ಸರ್ಕಾರದ ಸಹಕಾರದಲ್ಲಿ ಈ ಬಾರಿಯೂ ಅದೇ ರೀತಿ ನಡೆಸುತ್ತೇವೆ ಎಂದು ಸಚಿವ ಸೋಮಣ್ಣ ತಿಳಿಸಿದರು.</p>
<p><strong>ದಸರಾ ಮುಗಿದ ಬಳಿಕ ಶಾಸ್ವತ ದಸರಾ ಪ್ರಾಧಿಕಾರ ರಚನೆ ಕುರಿತು ನಿರ್ಧಾರ</strong></p>
<p>ಶಾಸ್ವತ ದಸರಾ ಪ್ರಾಧಿಕಾರ ರಚನೆ ಮಾಡುವ  ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ವಿ.ಸೋಮಣ್ಣ, ಈ ದಸರಾ ಮುಗಿದ ಬಳಿಕ  ಶಾಸ್ವತ ದಸರಾ ಪ್ರಾಧಿಕಾರ ರಚನೆ ಬಗ್ಗೆ ಒಂದು ನಿರ್ಧಾರವನ್ನು ಮಾಡುತ್ತೇವೆ. ಒಂದು ಪ್ರಾಧಿಕಾರ ರಚನೆ ಮಾಡೋದು ದೊಡ್ಡ ವಿಚಾರವಲ್ಲ. ಅದು ಯಾವ ರೀತಿಯ ಪ್ರಾಧಿಕಾರ ರಚನೆ ಆಗಬೇಕು. ಆ ಬಗ್ಗೆ ಮುಂದಿನ ದಿನ ನಿರ್ಧಾರ ಮಾಡ್ತಿವಿ. ರಾಜಕಾರಣಿಗಳು ಆ ಪ್ರಾಧಿಕಾರದಲ್ಲಿ ಇರಬೇಕಾ..ಬೇಡ್ವಾ.? ಅಧಿಕಾರಿಗಳಿಂದ ಪ್ರಾಧಿಕಾರ ಇರಬೇಕಾ.? ಎಂಬ ಯೋಚನೆ ಮಾಡ್ತಿವಿ. ಇದನ್ನ ಮುಂದಿನ ದಿನದಲ್ಲಿ ನಿಮ್ಮೊಟ್ಟಿಗೆ ಚರ್ಚೆ ಮಾಡ್ತಿನಿ ಎಂದು ಹೇಳಿದರು.</p>
<p><strong>ಗೋಲ್ಡ್‌ ಕಾರ್ಡ್ ಅನ್ನ 2500 ಸಾವಿರ ಒಳಗೆ ನಿಲ್ಲಿಸಲು ಚಿಂತನೆ..</strong></p>
<p>ದಸರಾ ‌ಗೋಲ್ಡ್ ಕಾರ್ಡ್ ‌ವಿಚಾರ ಸಂಬಂಧ ಮಾತನಾಡಿದ ವಿ.ಸೋಮಣ್ಣ,  ಗೋಲ್ಡ್‌ ಕಾರ್ಡ್ ಅನ್ನ 2500 ಸಾವಿರ ಒಳಗೆ ನಿಲ್ಲಿಸಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಡಿಸಿ ಇತರೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ನಮಗೆ ಈ ಗೋಲ್ಡ್ ಕಾರ್ಡ್ ನಿಂದ‌ ಹಣ ಬರುತ್ತಿಲ್ಲ. ಈ ಬಾರಿ ಗೋಲ್ಡ್ ಕಾರ್ಡ್ ವಿಚಾರ ದಲ್ಲಿ ಒಂದು ಹೊಸ ಬೆಳವಣಿಗೆ ಮಾಡಲಾಗಿದೆ ಎಂದು ತಿಳಿಸಿದರು.</p>
<p>Key words: Mysore- Dasara- Plans –terrorist-  Minister-V. Somanna -reaction</p>
<p>The post <a href="https://www.justkannada.in/mysore-dasara-plans-terrorist-minister-v-somanna-reaction/">ದಸರಾಗೂ ಮುನ್ನ ಉಗ್ರ ಸಂಘಟನೆಗಳಿಂದ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ವಿಚಾರ: ಜನರಲ್ಲಿ ಆತಂಕ, ಗೊಂದಲ ಮೂಡಿಸುವ ಕೆಲಸ ಆಗಬಾರದು-ಸಚಿವ ಸೋಮಣ್ಣ ಹೇಳಿಕೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
