<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>minister ST somashekar- visit-Mysore - Jubilent Factory - Remdcivir Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/minister-st-somashekar-visit-mysore-jubilent-factory-remdcivir/feed/" rel="self" type="application/rss+xml" />
	<link>https://www.justkannada.in/tag/minister-st-somashekar-visit-mysore-jubilent-factory-remdcivir/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Mon, 10 May 2021 12:45:48 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>minister ST somashekar- visit-Mysore - Jubilent Factory - Remdcivir Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/minister-st-somashekar-visit-mysore-jubilent-factory-remdcivir/</link>
	<width>32</width>
	<height>32</height>
</image> 
	<item>
		<title>ಕೊರೊನಾ ಮೊದಲ ಅಲೆಯಲ್ಲಿ ಮೈಸೂರಿಗೆ ಕಂಟಕವಾಗಿದ್ದ‌ ಜುಬಿಲಿಯಂಟ್ ಕಾರ್ಖಾನೆ ಇದೀಗ‌ 2ನೇ ಅಲೆಯಲ್ಲಿ ಜೀವರಕ್ಷಕ..!</title>
		<link>https://www.justkannada.in/minister-st-somashekar-visit-mysore-jubilent-factory-remdcivir/</link>
		
		<dc:creator><![CDATA[JK Desk]]></dc:creator>
		<pubDate>Mon, 10 May 2021 12:45:48 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[minister ST somashekar- visit-Mysore - Jubilent Factory - Remdcivir]]></category>
		<guid isPermaLink="false">https://www.justkannada.in/?p=64777</guid>

					<description><![CDATA[<p>ಮೈಸೂರು,ಮೇ,10,2021(www.justkannada.in): ಕೊರೊನಾ ಮೊದಲ  ಅಲೆಯಲ್ಲಿ ಮೈಸೂರಿಗೆ ಕಂಟಕವಾಗಿದ್ದ‌ ನಂಜನಗೂಡು ತಾಲೂಕಿನ ಜುಬಿಲಿಯಂಟ್ ಕಾರ್ಖಾನೆ ಇದೀಗ‌ ಎರಡನೇ ಅಲೆಯಲ್ಲಿ ಜೀವರಕ್ಷಕವಾಗಿ ಕೆಲಸ ಮಾಡುತ್ತಿದೆ. ಇದೀಗ ಕೊರೊನಾ‌ ಜೀವರಕ್ಷಕ ರೆಮಿಡಿಸಿವಿರ್ ಅನ್ನ  ಜುಬಿಲಿಯಂಟ್ ಕಾರ್ಖಾನೆಯಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ  ಕಾರ್ಖಾನೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ‌ ಹರ್ಷವರ್ಧನ್, ಎಸ್ಪಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿ ರೆಮಿಡಿಸಿವಿರ್ ಹೆಚ್ಚು ಉತ್ಪಾದನೆಗೆ ಮನವಿ ಮಾಡಿದರು. ಈ ಸಂಬಂಧ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್  ಜುಬಿಲೆಂಟ್ [&#8230;]</p>
<p>The post <a href="https://www.justkannada.in/minister-st-somashekar-visit-mysore-jubilent-factory-remdcivir/">ಕೊರೊನಾ ಮೊದಲ ಅಲೆಯಲ್ಲಿ ಮೈಸೂರಿಗೆ ಕಂಟಕವಾಗಿದ್ದ‌ ಜುಬಿಲಿಯಂಟ್ ಕಾರ್ಖಾನೆ ಇದೀಗ‌ 2ನೇ ಅಲೆಯಲ್ಲಿ ಜೀವರಕ್ಷಕ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಮೇ,10,2021(<a href="https://www.justkannada.in">www.justkannada.in</a>):</strong> ಕೊರೊನಾ ಮೊದಲ  ಅಲೆಯಲ್ಲಿ ಮೈಸೂರಿಗೆ ಕಂಟಕವಾಗಿದ್ದ‌ ನಂಜನಗೂಡು ತಾಲೂಕಿನ ಜುಬಿಲಿಯಂಟ್ ಕಾರ್ಖಾನೆ ಇದೀಗ‌ ಎರಡನೇ ಅಲೆಯಲ್ಲಿ ಜೀವರಕ್ಷಕವಾಗಿ ಕೆಲಸ ಮಾಡುತ್ತಿದೆ.<img fetchpriority="high" decoding="async" class="aligncenter size-full wp-image-53142" src="https://www.justkannada.in/wp-content/uploads/2021/01/jk.jpg" alt="jk" width="640" height="640" /></p>
<p>ಇದೀಗ ಕೊರೊನಾ‌ ಜೀವರಕ್ಷಕ ರೆಮಿಡಿಸಿವಿರ್ ಅನ್ನ  ಜುಬಿಲಿಯಂಟ್ ಕಾರ್ಖಾನೆಯಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ  ಕಾರ್ಖಾನೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ‌ ಹರ್ಷವರ್ಧನ್, ಎಸ್ಪಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿ ರೆಮಿಡಿಸಿವಿರ್ ಹೆಚ್ಚು ಉತ್ಪಾದನೆಗೆ ಮನವಿ ಮಾಡಿದರು.</p>
<p>ಈ ಸಂಬಂಧ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್  ಜುಬಿಲೆಂಟ್ ಕಾರ್ಖಾನೆಗೆ ಭೇಟಿ  ವೇಳೆಯಲ್ಲಿ ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ್ ಅವರೊಂದಿಗೆ ಚರ್ಚಿಸಿದರು.</p>
<p>ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ವಾಗುತ್ತಿದ್ದು, ಇದರಿಂದ ರೆಮ್ಡಿಸಿವಿರ್ ಔಷಧಿಗೆ ಬೇಡಿಕೆಯು ಹೆಚ್ಚಾದ ಹಿನ್ನೆಲೆಯಲ್ಲಿ ಔಷಧಿಯ ಅಭಾವ ಉಂಟಾಗುವ ಭೀತಿ ಉಂಟಾಗಿದೆ. ಹೀಗಾಗಿ  ರೆಮ್ಡಿಸಿವಿರ್ ಉತ್ಪಾದಿಸುವ ಜುಬಿಲೆಂಟ್ ಕಾರ್ಖಾನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಹಕಾರ ಕೇಳಿದರು.</p>
<p>ರಾಜ್ಯದಲ್ಲಿ ರೆಮ್ಡಿಸಿವಿರ್ ಇಂಜೆಕ್ಷನ್‌ ಗಾಗಿ ಸರ್ಕಾರದ ಮೇಲೆ ಒತ್ತಡ ಉಂಟಾಗಿದೆ. ಇದರಿಂದ ಕೋವಿಡ್ ಪ್ರಕರಣಗಳು ಕಡಿಮೆಯಾಗುವವರೆಗೆ ಸಾಧ್ಯವಾದಷ್ಟು ಮಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಈ ಔಷಧಿಯನ್ನು ಉತ್ಪಾದಿಸಲು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.</p>
<p>ಕೋವಿಡ್ ಮೊದಲ ಅಲೆಯಲ್ಲಿ ಜುಬಿಲೆಂಟ್ ಕಾರ್ಖಾನೆಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದ್ದವು. ಈಗ ಇಂತಹ ಪ್ರಕರಣಗಳು ಈ ಕಾರ್ಖಾನೆಯಿಂದ ಬರದಿರುವುದು ಸಂತೋಷದ ವಿಷಯವಾಗಿದೆ ಎಂದರು.</p>
<p>ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾಮಾನ್ಯವಾಗಿ ಎಲ್ಲರೂ ರೆಮ್ಡಿಸಿವಿರ್ ಕೇಳುತ್ತಿದ್ದಾರೆ. ಕೋವಿಡ್ 19 ಚಿಕಿತ್ಸೆಗೆ ರೆಮ್ಡಿಸಿವಿರ್ ಪರಿಣಾಮಕಾರಿ ಔಷದಿಯಾಗಿದ್ದು, ಮೈಸೂರು ಜಿಲ್ಲೆಯಲ್ಲಿ ಹೆಚ್ಚಿನ ಕೊವಿಡ್ ಪ್ರಕರಣಗಳು ದಾಖಲಾಗುತ್ತಿದ್ದು,  ಹಾಗಾಗಿ ಮೈಸೂರು ಜಿಲ್ಲೆಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಜಿಲ್ಲಾಡಳಿತದ ಮನವಿ ಮೇರೆಗೆ ಪ್ರತಿನಿತ್ಯ ಅಗತ್ಯ ಇರುವ ರೆಮ್ಡಿಸಿವಿರ್ ಲಸಿಕೆಯನ್ನು ಒದಗಿಸಿಕೊಡಬೇಕೆಂದು ಕೋರಿದರು.</p>
<p>ಜುಬಿಲರಂಟ್ ಉಪಾಧ್ಯಕ್ಷ ಲಕ್ಷ್ಮಿ ನಾರಾಯಣ್ ಅವರು ಮಾತನಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ಬೇಡಿಕೆಯ ಪತ್ರವನ್ನು ಕಳುಹಿಸಿಕೊಟ್ಟರೆ ಆಡಳಿತ ಮಂಡಳಿಯ ಗಮನಕ್ಕೆ ತಂದು ರೆಮ್ಡಿಸಿವಿರ್ ಔಷಧಿ ನೀಡಲು ಪ್ರಯತ್ನಿಸಲಾಗುವುದು ಎಂದರು.<img decoding="async" class="aligncenter size-medium wp-image-64778" src="https://www.justkannada.in/wp-content/uploads/2021/05/jubilu-300x156.jpg" alt="minister-st-somashekar-visit-mysore-jubilent-factory-remdcivir" width="300" height="156" /></p>
<p>ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಹರ್ಷವರ್ಧನ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೀವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಮುಖಂಡರಾದ ಶ್ರೀವತ್ಸ, ವಿಶೇಷ ಕರ್ತವ್ಯಾಧಿಕಾರಿ ದಿನೇಶ ಗೂಳಿಗೌಡ ಸೇರಿದಂತೆ ಇತರರು ಹಾಜರಿದ್ದರು.</p>
<p>Key words: minister ST somashekar- visit-Mysore &#8211; Jubilent Factory &#8211; Remdcivir</p>
<p>The post <a href="https://www.justkannada.in/minister-st-somashekar-visit-mysore-jubilent-factory-remdcivir/">ಕೊರೊನಾ ಮೊದಲ ಅಲೆಯಲ್ಲಿ ಮೈಸೂರಿಗೆ ಕಂಟಕವಾಗಿದ್ದ‌ ಜುಬಿಲಿಯಂಟ್ ಕಾರ್ಖಾನೆ ಇದೀಗ‌ 2ನೇ ಅಲೆಯಲ್ಲಿ ಜೀವರಕ್ಷಕ..!</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
