<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>leading Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/leading/feed/" rel="self" type="application/rss+xml" />
	<link>https://www.justkannada.in/tag/leading/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Fri, 13 Jun 2025 09:46:47 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.1</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>leading Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/leading/</link>
	<width>32</width>
	<height>32</height>
</image> 
	<item>
		<title>ಫ್ರಾನ್ಸ್‌ ಗೆ ಭೇಟಿ:  ಪ್ರಮುಖ ಜಾಗತಿಕ ವೇದಿಕೆಗಳಲ್ಲಿ ಕರ್ನಾಟಕ ಪ್ರತಿನಿಧಿಯಾಗಿ ಸಚಿವ ಪ್ರಿಯಾಂಕ್ ಖರ್ಗೆ</title>
		<link>https://www.justkannada.in/minister-priyank-kharge-14/</link>
		
		<dc:creator><![CDATA[prashanth]]></dc:creator>
		<pubDate>Fri, 13 Jun 2025 09:46:47 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[France]]></category>
		<category><![CDATA[global forums]]></category>
		<category><![CDATA[leading]]></category>
		<category><![CDATA[minister]]></category>
		<category><![CDATA[Priyank Kharge]]></category>
		<category><![CDATA[Represent]]></category>
		<guid isPermaLink="false">https://www.justkannada.in/?p=141477</guid>

					<description><![CDATA[<p>ನವದೆಹಲಿ,ಜೂನ್,13,2025 (www.justkannada.in):  ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಸ್ತುತ ಜೂನ್ 11 ರಿಂದ 16, 2025 ರವರೆಗೆ ಫ್ರಾನ್ಸ್‌ ಪ್ರವಾಸದಲ್ಲಿದ್ದಾರೆ. ಜಾಗತಿಕ ತಂತ್ರಜ್ಞಾನ, ನಾವೀನ್ಯತೆ, ಸ್ಟಾರ್ಟ್‌ಅಪ್‌ ಗಳು ಮತ್ತು ಏರೋಸ್ಪೇಸ್ ವಲಯಗಳಲ್ಲಿ ಕರ್ನಾಟಕದ ನಾಯಕತ್ವವನ್ನು ಸಚಿವ ಪ್ರಿಯಾಂಕ್ ಖರ್ಗೆ ಜಾಗತಿಕ ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ತಂತ್ರಜ್ಞಾನ, ನಾವೀನ್ಯತೆ ಮತ್ತು ಸ್ಟಾರ್ಟ್‌ ಅಪ್ ಪರಿಸರ ವ್ಯವಸ್ಥೆಗಳು ಹಾಗೂ ಏರೋ ಸ್ಪೇಸ್ ಮತ್ತು ರಕ್ಷಣೆಯಲ್ಲಿ ಕರ್ನಾಟಕದ ನಾಯಕತ್ವವನ್ನು ಎತ್ತಿ ತೋರಿಸುವ ಮೂರು ಪ್ರಮುಖ ಜಾಗತಿಕ ವೇದಿಕೆಗಳಾದ [&#8230;]</p>
<p>The post <a href="https://www.justkannada.in/minister-priyank-kharge-14/">ಫ್ರಾನ್ಸ್‌ ಗೆ ಭೇಟಿ:  ಪ್ರಮುಖ ಜಾಗತಿಕ ವೇದಿಕೆಗಳಲ್ಲಿ ಕರ್ನಾಟಕ ಪ್ರತಿನಿಧಿಯಾಗಿ ಸಚಿವ ಪ್ರಿಯಾಂಕ್ ಖರ್ಗೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ನವದೆಹಲಿ,ಜೂನ್,13,2025 (<a href="http://www.justkannada.in">www.justkannada.in</a>):</strong>  ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಸ್ತುತ ಜೂನ್ 11 ರಿಂದ 16, 2025 ರವರೆಗೆ ಫ್ರಾನ್ಸ್‌ ಪ್ರವಾಸದಲ್ಲಿದ್ದಾರೆ.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಜಾಗತಿಕ ತಂತ್ರಜ್ಞಾನ, ನಾವೀನ್ಯತೆ, ಸ್ಟಾರ್ಟ್‌ಅಪ್‌ ಗಳು ಮತ್ತು ಏರೋಸ್ಪೇಸ್ ವಲಯಗಳಲ್ಲಿ ಕರ್ನಾಟಕದ ನಾಯಕತ್ವವನ್ನು ಸಚಿವ ಪ್ರಿಯಾಂಕ್ ಖರ್ಗೆ ಜಾಗತಿಕ ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ.</p>
<p>ತಂತ್ರಜ್ಞಾನ, ನಾವೀನ್ಯತೆ ಮತ್ತು ಸ್ಟಾರ್ಟ್‌ ಅಪ್ ಪರಿಸರ ವ್ಯವಸ್ಥೆಗಳು ಹಾಗೂ ಏರೋ ಸ್ಪೇಸ್ ಮತ್ತು ರಕ್ಷಣೆಯಲ್ಲಿ ಕರ್ನಾಟಕದ ನಾಯಕತ್ವವನ್ನು ಎತ್ತಿ ತೋರಿಸುವ ಮೂರು ಪ್ರಮುಖ ಜಾಗತಿಕ ವೇದಿಕೆಗಳಾದ ವಿವಾ ಟೆಕ್ನಾಲಜಿ (ವಿವಾಟೆಕ್), ಪ್ಯಾರಿಸ್ ಏರ್ ಫೋರಮ್ ಮತ್ತು ಪ್ಯಾರಿಸ್ ಏರ್ ಶೋಗಳಲ್ಲಿ ಭಾಗವಹಿಸಲು ಅವರನ್ನು ಆಹ್ವಾನಿಸಲಾಗಿದೆ.</p>
<p>ಜೂನ್ 11 ರಂದು ಐಲೆ-ಡಿ-ಫ್ರಾನ್ಸ್ ಪ್ರದೇಶದ ಅಧ್ಯಕ್ಷರೊಂದಿಗಿನ ಸಭೆಯೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಫ್ರಾನ್ಸ್ ಪ್ರವಾಸ ಪ್ರಾರಂಭವಾಯಿತು. ಈ ಸಭೆಯು ಜನವರಿ 2024 ರಲ್ಲಿ ಕರ್ನಾಟಕ ಸರ್ಕಾರ ಮತ್ತು ಐಲೆ-ಡಿ-ಫ್ರಾನ್ಸ್ ನಡುವೆ ಸಹಿ ಹಾಕಿದ ಒಪ್ಪಂದದ ಆಧಾರದ ಮೇಲೆ ನಡೆಯಿತು. ಇದು ಎರಡೂ ಪ್ರದೇಶಗಳಲ್ಲಿ ಸಂಶೋಧನಾ ಸಂಸ್ಥೆಗಳು, ಸ್ಟಾರ್ಟ್‌ಅಪ್‌ ಗಳು ಮತ್ತು ವಿದ್ಯಾರ್ಥಿಗಳ ನಡುವೆ ಕ್ರಿಯಾತ್ಮಕ ವಿನಿಮಯವನ್ನು ಸಕ್ರಿಯಗೊಳಿಸಿದೆ. ಐಐಐಟಿ ಬೆಂಗಳೂರಿನ ವಿದ್ಯಾರ್ಥಿ ನಿಯೋಗಗಳು ಈಗಾಗಲೇ ಫ್ರಾನ್ಸ್‌ ನಲ್ಲಿ ಕಲಿಕಾ ವಿನಿಮಯವನ್ನು ಕೈಗೊಂಡಿವೆ, ಪರಸ್ಪರ ಭೇಟಿಗಳನ್ನು ಯೋಜಿಸಲಾಗಿದೆ. 2026 ರ ಫ್ರಾಂಕೊ-ಇಂಡಿಯನ್ ನಾವೀನ್ಯತೆ ವರ್ಷದಡಿಯಲ್ಲಿ ಈ ಪಾಲುದಾರಿಕೆಯನ್ನು ಇನ್ನಷ್ಟು ಗಾಢವಾಗಿಸುವ ಮಾರ್ಗಗಳನ್ನು ಈ ಸಂವಾದವು ಅನ್ವೇಷಿಸಿತು.  ಬೆಂಗಳೂರು ಮತ್ತು ಫ್ರೆಂಚ್ ಸಂಸ್ಥೆಗಳ ನಡುವಿನ ಜಂಟಿ ಸಂಶೋಧನೆ, ಪ್ರತಿಭಾ ಚಲನಶೀಲತೆ ಮತ್ತು ನವೋದ್ಯಮ ಸಹಯೋಗದ ಮೇಲೆ ಕೇಂದ್ರೀಕರಿಸಲಾಯಿತು.</p>
<p>ಆ ನಂತರ, ವಿವಾಟೆಕ್‌ ಗೆ ಮುನ್ನುಡಿಯಾಗಿ ನಡೆದ ಲಾ ಫ್ರೆಂಚ್ ಟೆಕ್ ಇನ್ ಯುರೋಪ್ ಸೈಡ್ ಈವೆಂಟ್‌ನಲ್ಲಿ ಗೌರವ ಅತಿಥಿಯಾಗಿ ಸಚಿವ ಖರ್ಗೆ ಅವರನ್ನು ಆಹ್ವಾನಿಸಲಾಯಿತು.  ಪ್ರಿಯಾಂಕ್ ಖರ್ಗೆ ಅವರು ಯುರೋಪಿನಾದ್ಯಂತ 22 ಫ್ರೆಂಚ್ ಟೆಕ್ ಸಮುದಾಯಗಳ ನಾಯಕರು, ಫ್ರೆಂಚ್ ಸಂಸತ್ತಿನ ಸದಸ್ಯರು, ಉದ್ಯಮಿಗಳು ಮತ್ತು ಹೂಡಿಕೆದಾರರೊಂದಿಗೆ ಸಂವಾದ ನಡೆಸಿದರು. ಜೂನ್ 12 ರಂದು, ಯುರೋಪಿನ ಅತಿದೊಡ್ಡ ಸ್ಟಾರ್ಟ್‌ ಅಪ್ ಮತ್ತು ನಾವೀನ್ಯತೆ ಶೃಂಗಸಭೆಯಾದ ವಿವಾಟೆಕ್‌ ನಲ್ಲಿ ಸಚಿವ  ಪ್ರಿಯಾಂಕ್ ಖರ್ಗೆ ಭಾರತವನ್ನು ಪ್ರತಿನಿಧಿಸಿದರು.</p>
<p>ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ನಾವೀನ್ಯತೆ ಪರಿಸರ ವ್ಯವಸ್ಥೆಯ ಅಭಿವೃದ್ಧಿ ಸಂಸ್ಥೆಯಾದ ಸ್ಟಾರ್ಟ್‌ ಅಪ್ ಜೀನೋಮ್ ಅಭಿವೃದ್ಧಿಪಡಿಸಿದ ಗ್ಲೋಬಲ್ ಸ್ಟಾರ್ಟ್‌ ಅಪ್ ಇಕೋಸಿಸ್ಟಮ್ ರಿಪೋರ್ಟ್ 2025 (ಜಿಎಸ್‌ಇಆರ್) ಅನ್ನು ಪ್ರಾರಂಭಿಸಲು ಅವರನ್ನು ವಿಶೇಷವಾಗಿ ಆಹ್ವಾನಿಸಲಾಯಿತು. ಜಾಗತಿಕ ಹೂಡಿಕೆ ಹರಿವಿನ ಮೇಲೆ ಪ್ರಭಾವ ಬೀರುವಲ್ಲಿ ಮತ್ತು ಉದ್ಯಮಿಗಳು ಮತ್ತು ಪಾಲುದಾರರಿಗೆ ನಾವೀನ್ಯತೆ ತಂತ್ರಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಈ ಪ್ರತಿಷ್ಠಿತ ಗ್ಲೋಬಲ್ ಸ್ಟಾರ್ಟ್‌ಅಪ್ ಸೂಚ್ಯಂಕದಲ್ಲಿ ಬೆಂಗಳೂರು 7 ಸ್ಥಾನಗಳನ್ನು ಜಿಗಿದು 14 ನೇ ಸ್ಥಾನಕ್ಕೆ ತಲುಪಿದೆ. ಕರ್ನಾಟಕದ ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ (ಜಿಐಎ) ಯ ಪ್ರಮುಖ ಸದಸ್ಯರಾಗಿರುವ ಫ್ರಾನ್ಸ್, ವಿವಾಟೆಕ್ ಶೃಂಗಸಭೆಯು ಯುರೋಪಿಯನ್ ಮಾರುಕಟ್ಟೆಯೊಂದಿಗೆ ವಿಶಾಲವಾದ ನಿಶ್ಚಿತಾರ್ಥಕ್ಕೆ ಒಂದು ಗೇಟ್‌ ವೇ ಆಗಿ ಕಾರ್ಯನಿರ್ವಹಿಸಿತು, ಅಲ್ಲಿ ಸಚಿವರು ಪಾಲುದಾರಿಕೆಗಳು, ಎಫ್‌ಡಿಐ ಮತ್ತು ತಂತ್ರಜ್ಞಾನ ವಿನಿಮಯಕ್ಕಾಗಿ ಹೊಸ ಅವಕಾಶಗಳನ್ನು ಅನ್ವೇಷಿಸಿದರು.</p>
<p>ಜೂನ್ 13 ರಿಂದ 16 ರವರೆಗೆ, ಸಚಿವರು ವಿಶ್ವದ ಅತ್ಯಂತ ಪ್ರಭಾವಶಾಲಿ ಏರೋಸ್ಪೇಸ್ ಮತ್ತು ರಕ್ಷಣಾ ಸಭೆಗಳಲ್ಲಿ ಎರಡು ಪ್ಯಾರಿಸ್ ಏರ್ ಫೋರಂ ಮತ್ತು ಪ್ಯಾರಿಸ್ ಏರ್ ಶೋನಲ್ಲಿ ಭಾಗವಹಿಸಲಿದ್ದಾರೆ. ಲಾ ಟ್ರಿಬ್ಯೂನ್ ಮತ್ತು ಗ್ರೂಪ್ ಎಡಿಪಿ ಆಯೋಜಿಸಿರುವ ಪ್ಯಾರಿಸ್ ಏರ್ ಫೋರಂ, ವಾಯುಯಾನ, ಏರೋಸ್ಪೇಸ್, ​​ಬಾಹ್ಯಾಕಾಶ ಮತ್ತು ರಕ್ಷಣಾ ಎಲೆಕ್ಟ್ರಾನಿಕ್ಸ್‌ ನ ಭವಿಷ್ಯವನ್ನು ಚರ್ಚಿಸಲು ಉನ್ನತ ಕಾರ್ಪೊರೇಟ್ ಕಾರ್ಯನಿರ್ವಾಹಕರನ್ನು ಕರೆಯಲಿದೆ.</p>
<p>ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಮುಖ ಭಾಷಣಕಾರರಾಗಿ ಆಹ್ವಾನಿಸಲಾಗಿದ್ದು, ಈ ವಲಯಗಳಲ್ಲಿ ಕರ್ನಾಟಕ ಮತ್ತು ಭಾರತದ ಬೆಳೆಯುತ್ತಿರುವ ಶಕ್ತಿಯನ್ನು ಎತ್ತಿ ತೋರಿಸುವ ಸಮಿತಿಗೆ ಅವರು ಸೇರಲಿದ್ದಾರೆ. ಡಸಾಲ್ಟ್ ಸಿಸ್ಟಮ್ಸ್ ಆಯೋಜಿಸಿರುವ ಪ್ಯಾರಿಸ್ ಏರ್ ಶೋನಲ್ಲಿ ಕಾರ್ಯನಿರ್ವಾಹಕ ನಾಯಕತ್ವದ ಸಂವಾದದೊಂದಿಗೆ ಈ ಭೇಟಿ ಮುಕ್ತಾಯಗೊಳ್ಳಲಿದೆ, ಅಲ್ಲಿ ಸಚಿವರು ಇಂಡೋ-ಫ್ರೆಂಚ್ ಕೈಗಾರಿಕಾ ಮತ್ತು ತಾಂತ್ರಿಕ ಸಹಯೋಗವನ್ನು ಅನ್ವೇಷಿಸಲಿದ್ದಾರೆ. ಈ ಭೇಟಿಯು ಜಾಗತಿಕ ಪಾಲುದಾರಿಕೆಗಳನ್ನು ಬಲಪಡಿಸಲು ಮತ್ತು ನಾವೀನ್ಯತೆ, ಏರೋಸ್ಪೇಸ್, ​​ಬಾಹ್ಯಾಕಾಶ, ರಕ್ಷಣಾ ಎಲೆಕ್ಟ್ರಾನಿಕ್ಸ್ ಮತ್ತು ಭವಿಷ್ಯದ ತಂತ್ರಜ್ಞಾನಗಳಲ್ಲಿ ನಾಯಕನಾಗಿ ತನ್ನ ಸ್ಥಾನವನ್ನು ಬಲಪಡಿಸಲು ಕರ್ನಾಟಕದ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ.<img decoding="async" class="aligncenter size-full wp-image-139872" src="https://www.justkannada.in/wp-content/uploads/2025/05/TOP-BANNER-01.png" alt="vtu" width="730" height="90" srcset="https://www.justkannada.in/wp-content/uploads/2025/05/TOP-BANNER-01.png 730w, https://www.justkannada.in/wp-content/uploads/2025/05/TOP-BANNER-01-300x37.png 300w, https://www.justkannada.in/wp-content/uploads/2025/05/TOP-BANNER-01-150x18.png 150w, https://www.justkannada.in/wp-content/uploads/2025/05/TOP-BANNER-01-696x86.png 696w, https://www.justkannada.in/wp-content/uploads/2025/05/TOP-BANNER-01-600x74.png 600w" sizes="(max-width: 730px) 100vw, 730px" /></p>
<p>Key words: Minister, Priyank Kharge , represent, leading, global forums,  France</p>
<p>The post <a href="https://www.justkannada.in/minister-priyank-kharge-14/">ಫ್ರಾನ್ಸ್‌ ಗೆ ಭೇಟಿ:  ಪ್ರಮುಖ ಜಾಗತಿಕ ವೇದಿಕೆಗಳಲ್ಲಿ ಕರ್ನಾಟಕ ಪ್ರತಿನಿಧಿಯಾಗಿ ಸಚಿವ ಪ್ರಿಯಾಂಕ್ ಖರ್ಗೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ವಿಧಾನಸಭಾ ಚುನಾವಣೆ: ಹರಿಯಾಣದಲ್ಲಿ ಬಿಜೆಪಿ, ಜಮ್ಮುಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಮುನ್ನಡೆ</title>
		<link>https://www.justkannada.in/assembly-elections-bjp-haryana-congress-leading-jammu-kashmir/</link>
		
		<dc:creator><![CDATA[prashanth]]></dc:creator>
		<pubDate>Tue, 08 Oct 2024 04:56:23 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[assembly elections]]></category>
		<category><![CDATA[BJP]]></category>
		<category><![CDATA[congress]]></category>
		<category><![CDATA[haryana]]></category>
		<category><![CDATA[jammu kashmir]]></category>
		<category><![CDATA[leading]]></category>
		<guid isPermaLink="false">https://www.justkannada.in/?p=130398</guid>

					<description><![CDATA[<p>ನವದೆಹಲಿ,ಅಕ್ಟೋಬರ್,8,2024 (www.justkannada.in): ಹರಿಯಾಣ ಮತ್ತು ಜಮ್ಮುಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು ಹರಿಯಾಣದಲ್ಲಿ ಬಿಜೆಪಿ ಜಮ್ಮುಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ಎಸ್‌ಸಿ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಹರಿಯಾಣದಲ್ಲಿ 90 ಕ್ಷೇತ್ರಗಳ ಪೈಕಿ ಬಿಜೆಪಿ 47 ಕಾಂಗ್ರೆಸ್ 36, ಇತರೇ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.  ಜಮ್ಮುಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿಕೂಟ  50 ಬಿಜೆಪಿ 24, ಪಿಡಿಪಿ 3  ಹಾಗೂ ಇದತೇ 13 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಹರಿಯಾಣದಲ್ಲಿ 90 ವಿಧಾನಸಭಾ ಕ್ಷೇತ್ರಗಳಿದ್ದು, ಸರಳ ಬಹುಮತಕ್ಕೆ 46 ಕ್ಷೇತ್ರಗಳಲ್ಲಿ ಗೆಲ್ಲಬೇಕಿದೆ. [&#8230;]</p>
<p>The post <a href="https://www.justkannada.in/assembly-elections-bjp-haryana-congress-leading-jammu-kashmir/">ವಿಧಾನಸಭಾ ಚುನಾವಣೆ: ಹರಿಯಾಣದಲ್ಲಿ ಬಿಜೆಪಿ, ಜಮ್ಮುಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಮುನ್ನಡೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ನವದೆಹಲಿ,ಅಕ್ಟೋಬರ್,8,2024 (<a href="http://www.justkannada.in">www.justkannada.in</a>):</strong> ಹರಿಯಾಣ ಮತ್ತು ಜಮ್ಮುಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು ಹರಿಯಾಣದಲ್ಲಿ ಬಿಜೆಪಿ ಜಮ್ಮುಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ಎಸ್‌ಸಿ ಮೈತ್ರಿಕೂಟ ಮುನ್ನಡೆ ಸಾಧಿಸಿದೆ.<img decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಹರಿಯಾಣದಲ್ಲಿ 90 ಕ್ಷೇತ್ರಗಳ ಪೈಕಿ ಬಿಜೆಪಿ 47 ಕಾಂಗ್ರೆಸ್ 36, ಇತರೇ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.  ಜಮ್ಮುಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿಕೂಟ  50 ಬಿಜೆಪಿ 24, ಪಿಡಿಪಿ 3  ಹಾಗೂ ಇದತೇ 13 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.</p>
<p>ಹರಿಯಾಣದಲ್ಲಿ 90 ವಿಧಾನಸಭಾ ಕ್ಷೇತ್ರಗಳಿದ್ದು, ಸರಳ ಬಹುಮತಕ್ಕೆ 46 ಕ್ಷೇತ್ರಗಳಲ್ಲಿ ಗೆಲ್ಲಬೇಕಿದೆ. 92 ವಿಧಾನಸಭಾ ಕ್ಷೇತ್ರಗಳಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕದ ಬಳಿಕ ಚುನಾವಣೆ ನಡೆದಿದೆ. ಸರಳ ಬಹುಮತಕ್ಕೆ ಯಾವುದೇ ಪಕ್ಷ 47 ಕ್ಷೇತ್ರಗಳಲ್ಲಿ ಗೆಲ್ಲಬೇಕಿದೆ.</p>
<p>Key words: Assembly elections,  BJP, Haryana, Congress,  leading , Jammu Kashmir</p>
<p>The post <a href="https://www.justkannada.in/assembly-elections-bjp-haryana-congress-leading-jammu-kashmir/">ವಿಧಾನಸಭಾ ಚುನಾವಣೆ: ಹರಿಯಾಣದಲ್ಲಿ ಬಿಜೆಪಿ, ಜಮ್ಮುಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಮುನ್ನಡೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಟೋಕಿಯೋ ಒಲಂಪಿಕ್ಸ್ : ಭಾರತದ ಮಹಿಳೆಯರ ಹಾಕಿ ತಂಡವನ್ನು ಸೆಮಿಫೈನಲ್‌ ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕ್ಯಾಪ್ಟನ್ ರಾಣಿ ರಾಮ್‌ ಪಾಲ್.</title>
		<link>https://www.justkannada.in/tokyo-olympics-captain-rani-paul-key-player-leading-indias-womens-hockey-team-semifinals/</link>
		
		<dc:creator><![CDATA[JK Desk]]></dc:creator>
		<pubDate>Mon, 02 Aug 2021 10:58:38 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Sports]]></category>
		<category><![CDATA[hockey team]]></category>
		<category><![CDATA[India's women']]></category>
		<category><![CDATA[leading]]></category>
		<category><![CDATA[semifinals.]]></category>
		<category><![CDATA[Tokyo Olympics-Captain Rani Paul - key player]]></category>
		<guid isPermaLink="false">https://www.justkannada.in/?p=72010</guid>

					<description><![CDATA[<p>ನವದೆಹಲಿ, ಆಗಸ್ಟ್ 2, 2021 (www.justkannada.in): ಭಾರತ ಬರೋಬ್ಬರಿ 41 ವರ್ಷಗಳ ಬಳಿಕ ವಿಶ್ವದ ಮಹೋನ್ನತ ಒಲಂಪಿಕ್ಸ್ ಕ್ರೀಡೆಗಳಲ್ಲಿ ಸೆಮಿ-ಫೈನಲ್ಸ್ ಸುತ್ತಿಗೆ ಪ್ರವೇಶಿಸಿದೆ. ಅದಲ್ಲಿಯೂ ವಿಶೇಷವಾಗಿ ಭಾರತದ ಮಹಿಳಾ ಹಾಕಿ ತಂಡ ಈ ಸಾಧನೆಯನ್ನು ಮಾಡಿದೆ. ತಂಡದ ನಾಯಕಿ ರಾಣಿ ರಾಮ್‌ ಪಾಲ್ ಅವರು ತಂಡವನ್ನು ಈ ಹಂತದವರೆಗೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ರಾಣಿ ರಾಮ್‌ ಪಾಲ್ ಅವರ ನೇತೃತ್ವದಡಿ ಭಾರತದ ಮಹಿಳೆಯರ ಹಾಕಿ ತಂಡ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವಲ್ಲಿ [&#8230;]</p>
<p>The post <a href="https://www.justkannada.in/tokyo-olympics-captain-rani-paul-key-player-leading-indias-womens-hockey-team-semifinals/">ಟೋಕಿಯೋ ಒಲಂಪಿಕ್ಸ್ : ಭಾರತದ ಮಹಿಳೆಯರ ಹಾಕಿ ತಂಡವನ್ನು ಸೆಮಿಫೈನಲ್‌ ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕ್ಯಾಪ್ಟನ್ ರಾಣಿ ರಾಮ್‌ ಪಾಲ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ನವದೆಹಲಿ, ಆಗಸ್ಟ್ 2, 2021 (www.justkannada.in):</strong> ಭಾರತ ಬರೋಬ್ಬರಿ 41 ವರ್ಷಗಳ ಬಳಿಕ ವಿಶ್ವದ ಮಹೋನ್ನತ ಒಲಂಪಿಕ್ಸ್ ಕ್ರೀಡೆಗಳಲ್ಲಿ ಸೆಮಿ-ಫೈನಲ್ಸ್ ಸುತ್ತಿಗೆ ಪ್ರವೇಶಿಸಿದೆ. ಅದಲ್ಲಿಯೂ ವಿಶೇಷವಾಗಿ ಭಾರತದ ಮಹಿಳಾ ಹಾಕಿ ತಂಡ ಈ ಸಾಧನೆಯನ್ನು ಮಾಡಿದೆ. ತಂಡದ ನಾಯಕಿ ರಾಣಿ ರಾಮ್‌ ಪಾಲ್ ಅವರು ತಂಡವನ್ನು ಈ ಹಂತದವರೆಗೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ರಾಣಿ ರಾಮ್‌ ಪಾಲ್ ಅವರ ನೇತೃತ್ವದಡಿ ಭಾರತದ ಮಹಿಳೆಯರ ಹಾಕಿ ತಂಡ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾತು.<img loading="lazy" decoding="async" class="aligncenter size-full wp-image-71658" src="https://www.justkannada.in/wp-content/uploads/2021/07/justkannnada-mysore.jpg" alt="" width="936" height="120" /></p>
<p>ಈ ಪ್ರಕಾರವಾಗಿ ಒಲಂಪಿಕ್ಸ್ ನಲ್ಲಿ  ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಡುವ ರಾಣಿ ರಾಮ್‌ ಪಾಲ್ ತಮ್ಮ ಕನಸ್ಸನ್ನು ಸಾಕಾರಗೊಳಿಸುವಲ್ಲಿ ಮತ್ತಷ್ಟು ಹತ್ತಿರವಾಗಿದ್ದಾರೆ. ಕಳೆದ ವಾರ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ, ಇಂದು ದೇಶದಲ್ಲಿ ಗುರುತಿಸಲ್ಪಡುತ್ತಿರುವ ರಾಣಿ ರಾಮ್‌ ಪಾಲ್ ಅವರು ಒಲಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ತಮಗೆ ಅಪಾರ ಬೆಂಬಲವನ್ನು ನೀಡಿದಂತಹ ತಮ್ಮ ಕೋಚ್ ಹಾಗೂ ಕುಟುಂಬಸ್ಥರ ಋಣ ತೀರಿಸಲೇಬೇಕೆಂದು ತಿಳಿಸಿದ್ದರು.</p>
<p>ರಾಣಿ ರಾಮ್‌ ಪಾಲ್ ಅವರ ಜೀವನದ ಪಯಣ ಹೂವಿನ ನಡಿಗೆಯೇನಾಗಿಲ್ಲ. ಬಾಲ್ಯದಲ್ಲಿ ಹಾಕಿ ಸ್ಟಿಕ್ ಖರೀದಿಸಲೂ ಸಹ ಈ ಕುಟುಂಬಕ್ಕೆ ಸಾಧ್ಯವಿರಲಿಲ್ಲ. ಆದರೂ ಸಹ 2010ರಲ್ಲಿ ನಡೆದಂತಹ ವಿಶ್ವ ಕಪ್‌ ನಲ್ಲಿ ರಾಷ್ಟ್ರೀಯ ಮಹಿಳಾ ಹಾಕಿ ತಂಡದಲ್ಲಿ ಅತ್ಯಂತ ಕಿರಿಯ ಆಟಗಾರ್ತಿಯಾಗಿ (ಕೇವಲ 15 ವರ್ಷ) ಸೇರ್ಪಡೆಯಾಗುವವರೆಗೂ ಆಕೆಯ ಜೀವನಚರಿತ್ರೆ ಅತ್ಯಂತ ಪ್ರಭಾವ ಬೀರುವಂತಿದೆ.</p>
<p>&#8220;ನಮ್ಮದು ಅತ್ಯಂತ ಬಡ ಕುಟುಂಬ. ಸರಿಯಾಗಿ ವಿದ್ಯುತ್ ಸಂಪರ್ಕವಿಲ್ಲದ, ಯಾವಾಗಲೂ ಸೊಳ್ಳೆಗಳಿಂದ ಕೂಡಿದ್ದ ಮನೆಯಲ್ಲಿ ನಾವು ವಾಸಿಸುತ್ತಿದ್ದೆವು. ಪ್ರತಿ ದಿನ ಎರಡು ಹೊತ್ತು ಕೂಳಿಗೂ ತಾತ್ವಾರ. ಮಳೆ ಬಂದರೆ ಎಲ್ಲಾ ಕಡೆ ನೀರು ಸೋರುತಿತ್ತು. ಇವೆಲ್ಲವನ್ನು ನೋಡಿ ನಾನು ಬೇಸತ್ತಿದ್ದೆ,&#8221; ಎನ್ನುತ್ತಾರೆ ಈಗ 26-ವರ್ಷ-ವಯಸ್ಸಿನ ರಾಣಿ.</p>
<p>ರಾಣಿಯವರ ತಾಯಿ ಮನೆಯೊಂದರಲ್ಲಿ ಮನೆಕೆಲಸ ಮಾಡುತ್ತಿದ್ದರೆ, ಆಕೆಯ ತಂದೆ ರಿಕ್ಷಾ ಎಳೆಯುವ ಕೆಲಸದಲ್ಲಿ ತೊಡಗಿದ್ದಾರೆ. ಅವರ ಮನೆಯ ಬಳಿ ಒಂದು ಹಾಕಿ ಅಕಾಡೆಮಿಯಿತ್ತಂತೆ. ರಾಣಿ ಬಾಲ್ಯದಲ್ಲಿ ಗಂಟೆಗಟ್ಟಲೇ ಅಲ್ಲಿ ಆಟಗಾರರು ಹಾಕಿ ಆಟ ಆಡುವುದನ್ನು ನೋಡುತ್ತಾ ಕಳೆಯುತ್ತಿದ್ದಂತೆ. ಆ ಮೂಲಕ ಆಕೆಯಲ್ಲಿಯೂ ಹಾಕಿ ಆಟಗಾರ್ತಿಯಾಗುವ ಬಯಕೆ ಮೂಡಿತು. ರಾಣಿಯ ಅಪ್ಪನ ಪ್ರತಿ ದಿನದ ಕೂಲಿ ಕೇವಲ ರೂ.೮೦. ಹಾಗಾಗಿ, ಅವರಿಗೆ ತಮ್ಮ ಮಗಳಿಗೆ ಹಾಕಿ ಸ್ಟಿಕ್ ಕೊಡಿಸುವುದೂ ಸಾಧ್ಯವಾಗಲಿಲ್ಲ! &#8220;ನಾನು ಪ್ರತಿ ದಿನ ಕೋಚ್ ಬಳಿ ಹೋಗಿ ನನಗೆ ಹಾಕಿ ಕಲಿಸುವಂತೆ ಕೇಳಿಕೊಳ್ಳುತ್ತಿದೆ. ಆದರೆ ನನ್ನ ಅಪೌಷ್ಠಿಕ ದೇಹವನ್ನು ನೋಡಿ ತಿರಸ್ಕರಿಸುತ್ತಿದ್ದರು,&#8221; ಎನ್ನುತ್ತಾರೆ ರಾಣಿ.<img loading="lazy" decoding="async" class="aligncenter size-full wp-image-72011" src="https://www.justkannada.in/wp-content/uploads/2021/08/Rani-Paul-key-player-–-leading-Indias-womens-hockey-team-semifinals..jpg" alt="" width="692" height="400" /></p>
<p>ಆದರೆ ಧೃತಿಗೆಡದೆ ಆಕೆ ಹೇಗೋ ಒಂದು ಮುರಿದ ಒಂದು ಹಾಕಿ ಸ್ಟಿಕ್ ಸಂಪಾದಿಸಿ ಸ್ವತಃ ಅಭ್ಯಸಿಸಲು ಆರಂಭಿಸಿದಳು. ಬಹಳ ಕೇಳಿಕೊಂಡ ನಂತರ ಕೋಚ್ ಈಕೆಗೆ ತರಬೇತಿ ನೀಡಲು ಒಪ್ಪಿದರು. ಆಗಲೂ ಸಹ ರಾಣಿಯ ಸಮಯ ಉತ್ತಮವರಿಲಿಲ್ಲ. ಅಕಾಡೆಮಿಯಲ್ಲಿ ಎಲ್ಲಾ ಮಕ್ಕಳೂ ಸಹ ಪ್ರತಿ ದಿನ 500 ಎಂಎಲ್‌ ನಷ್ಟು ಹಾಲು ತರಬೇಕಾಗಿತ್ತು. &#8220;ಆದರೆ ನನ್ನ ಕುಟುಂಬಕ್ಕೆ 200 ಎಂಎಲ್‌ ನಷ್ಟು ಹಾಲು ಮಾತ್ರ ಕೊಡಿಸುವಷ್ಟು ಶಕ್ತಿಯಿತ್ತು; ಯಾರಿಗೂ ಹೇಳದೆ ನಾನು ಹಾಲಿಗೆ ನೀರು ಸೇರಿಸಿ ಕುಡಿಯುತ್ತಿದೆ. ಏಕೆಂದರೆ ನನಗೆ ಹಾಕಿ ಅಂದರೆ ಅಷ್ಟೊಂದು ಪ್ರೀತಿ.&#8221;</p>
<p>&#8220;ಮೇಲಾಗಿ ಪ್ರತಿಯೊಬ್ಬರು ಬೆಳ್ಳಂಬೆಳಗ್ಗೆ ತರಬೇತಿ ಆರಂಭಿಸುತ್ತಿದ್ದರು. ನಮ್ಮ ಮನೆಯಲ್ಲಿ ಗಡಿಯಾರವೂ ಇರಲಿಲ್ಲ. ಹಾಗಾಗಿ ನನ್ನ ತಾಯಿ ಎಚ್ಚರವಾಗಿದ್ದು ನಾನು ತರಬೇತಿಗೆ ಹೋಗಲು ಸಮಯವಾಯಿತೇ ಎಂದು ಆಕಾಶವನ್ನು ನೋಡಿ, ನನ್ನನ್ನು ನಿದ್ದೆಯಿಂದ ಎಬ್ಬಿಸುತ್ತಿದ್ದರು.&#8221;</p>
<p>ಅದೃಷ್ಟವಶಾತ್ ಆಕೆಯ ಕುಟುಂಬಸ್ಥರ ಜೊತೆಗೆ ಹಾಕಿ ಕೋಚ್ ಈಕೆಯ ನೆರವಿಗೆ ಬಂದರು. &#8220;ಅವರು ನನಗೆ ಹಾಕಿ ಸ್ಟಿಕ್ ಮತ್ತು ಹಾಕಿ ಕಿಟ್ ಹಾಗೂ ಪಾದರಕ್ಷೆಗಳನ್ನು ಕೊಡಿಸಿದರು. ಜೊತೆಗೆ ಅವರ ಕುಟುಂಬದೊಂದಿಗೆ ನನಗೆ ಇರಲು ಅವಕಾಶ ನೀಡಿ, ನನ್ನ ಆಹಾರದ ಅಗತ್ಯಗಳನ್ನೂ ನೋಡಿಕೊಂಡರು. ನಾನು ಒಂದು ದಿನವೂ ತಪ್ಪಿಸದೇ ತರಬೇತಿ ಪಡೆಯುತ್ತಿದ್ದೆ,&#8221; ಎನ್ನುವಾಗ ರಾಣಿಯ ಕಣ್ಗಳಲ್ಲಿ ಹೊಳಪು ಮಿಂಚುತ್ತದೆ.</p>
<p>ಮೊದಲ ಪಂದ್ಯದಲ್ಲಿ ಗೆದ್ದ ನಂತರ ರಾಣಿಗೆ ರೂ.500 ರಙೂ ವೇತನ ಲಭಿಸಿತಂತೆ. ಆ ಹಣವನ್ನು ಆಕೆ ತನ್ನ ತಂದೆಗೆ ನೀಡಿದರಂತೆ. &#8220;ನಮ್ಮಪ್ಪ ಆವರೆಗೂ ಅಷ್ಟೊಂದು ಹಣವನ್ನು ತಮ್ಮ ಕೈಗಳಲ್ಲಿ ನೋಡೇ ಇರಲಿಲ್ಲ. ಇಂದಲ್ಲ ನಾಳೆ ನಾನು ನಿಮ್ಮನ್ನು ನಮ್ಮ ಸ್ವಂತ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದರಂತೆ. ಅದಕ್ಕಾಗಿ ಆಕೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಾ ಬಂದಿದ್ದಾರೆ.</p>
<p>ಹಲವು ರಾಜ್ಯ ಮಟ್ಟದ ಚಾಂಪಿಯನ್‌ ಷಿಪ್‌ ಗಳ ನಂತರ ರಾಣಿಗೆ ಆಕೆ 15 ವರ್ಷವಿದ್ದಾಗ ರಾಷ್ಟ್ರಮಟ್ಟದ ತಂಡದಿಂದ ಕರೆ ಬಂದಿದೆ. &#8220;ನನ್ನ ಕುಟುಂಬದ ಬೆಂಬಲದೊಂದಿಗೆ ನನ್ನ ದೇಶಕ್ಕೆ ಕೀರ್ತಿ ತರಲು ಪಣತೊಟ್ಟಿದ್ದೇನೆ. ಕ್ರಮೇಣ ತಂಡದ ನಾಯಕಿಯಾಗಿ ನೇಮಕ ಮಾಡಲ್ಪಟ್ಟೆ,&#8221; ಎನ್ನುತ್ತಾರೆ ಹೆಮ್ಮೆಯಿಂದ ರಾಣಿ ರಾಮ್‌ಪಾಲ್.</p>
<p>ನಾಲ್ಕು ವರ್ಷಗಳ ಹಿಂದೆ ಆಕೆ ಒಂದು ಮನೆಯನ್ನು ಖರೀದಿಸಿ ತಮ್ಮ ಪೋಷಕರಿಗೆ ಉಡುಗೊರೆಯಾಗಿ ನೀಡಿದ್ದಾರಂತೆ. ಆಗ ಕುಟುಂಬದ ಎಲ್ಲರೂ ಒಬ್ಬರನ್ನೊಬ್ಬರು ಗಟ್ಟಿಯಾಗಿ ತಬ್ಬಿಕೊಂಡು ಅತ್ತರಂತೆ!</p>
<p>ಮುರಿದ ಹಾಕಿ ಸ್ಟಿಕ್‌ ನೊಂದಿಗೆ ಅಭ್ಯಾಸ ಮಾಡುವುದರಿಂದ ಆರಂಭವಾದ ಈಕೆಯ ಕತೆ  ಟೋಕಿಯೋ ಒಲಂಪಿಕ್ಸ್ ವರೆಗೆ ಸಾಗಿ ಬಂದಿರುವ ದಾರಿ ದೇಶದ ಎಲ್ಲಾ ಯುವಜನರಿಗೂ ಪ್ರೇರಣೆಯಲ್ಲವೇ?.</p>
<p>Key words: Tokyo Olympics-Captain Rani Paul &#8211; key player – leading- India&#8217;s women&#8217;s- hockey team -semifinals.</p>
<p>The post <a href="https://www.justkannada.in/tokyo-olympics-captain-rani-paul-key-player-leading-indias-womens-hockey-team-semifinals/">ಟೋಕಿಯೋ ಒಲಂಪಿಕ್ಸ್ : ಭಾರತದ ಮಹಿಳೆಯರ ಹಾಕಿ ತಂಡವನ್ನು ಸೆಮಿಫೈನಲ್‌ ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕ್ಯಾಪ್ಟನ್ ರಾಣಿ ರಾಮ್‌ ಪಾಲ್.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರಗೆ ಬಾರಿ ಮುನ್ನಡೆ: ತುಮಕೂರಿನಲ್ಲಿ ಹೆಚ್.ಡಿಡಿಗೆ ಹಿನ್ನಡೆ&#8230;</title>
		<link>https://www.justkannada.in/%e0%b2%b6%e0%b2%bf%e0%b2%b5%e0%b2%ae%e0%b3%8a%e0%b2%97%e0%b3%8d%e0%b2%97%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%bf%e0%b2%9c%e0%b3%86%e0%b2%aa%e0%b2%bf-%e0%b2%85%e0%b2%ad%e0%b3%8d/</link>
		
		<dc:creator><![CDATA[JK Desk]]></dc:creator>
		<pubDate>Thu, 23 May 2019 05:22:32 +0000</pubDate>
				<category><![CDATA[Election News and Analysis]]></category>
		<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[Real Time Updates]]></category>
		<category><![CDATA[Results 2019]]></category>
		<category><![CDATA[BJP's candidate BY Raghavendra]]></category>
		<category><![CDATA[leading]]></category>
		<category><![CDATA[Shimoga..]]></category>
		<guid isPermaLink="false">https://www.justkannada.in/?p=2184</guid>

					<description><![CDATA[<p>ಶಿವಮೊಗ್ಗ,ಮೇ,23,2019(www.justkannada.in): ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ದ ಬಾರಿ ಮುನ್ನಡೆ ಸಾಧಿಸಿದ್ದಾರೆ. ಶಿವಮೊಗ್ಗದಲ್ಲಿ ಬಿವೈ ರಾಘವೇಂದ್ರ 90 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ.  ತುಮಕೂರು ಕ್ಷೇತ್ರದಲ್ಲಿ  ಮೈತ್ರಿ ಅಭ್ಯರ್ಥಿ ಹೆಚ್.ಡಿ ದೇವೇಗೌಡರು ಬಾರಿ ಹಿನ್ನಡೆ ಅನುಭವಿಸಿದ್ದಾರೆ. ಹೆಚ್.ಡಿ ದೇವೇಗೌಡರು9 ಸಾವಿರ ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನಡುವೆ ಬಿಗ್ ಫೈಟ್ ನಡೆಯುತ್ತಿದ್ದು ಮಂಡ್ಯ ಫಲಿತಾಂಶ ಹಾವು [&#8230;]</p>
<p>The post <a href="https://www.justkannada.in/%e0%b2%b6%e0%b2%bf%e0%b2%b5%e0%b2%ae%e0%b3%8a%e0%b2%97%e0%b3%8d%e0%b2%97%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%bf%e0%b2%9c%e0%b3%86%e0%b2%aa%e0%b2%bf-%e0%b2%85%e0%b2%ad%e0%b3%8d/">ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರಗೆ ಬಾರಿ ಮುನ್ನಡೆ: ತುಮಕೂರಿನಲ್ಲಿ ಹೆಚ್.ಡಿಡಿಗೆ ಹಿನ್ನಡೆ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p>ಶಿವಮೊಗ್ಗ,ಮೇ,23,2019(<a href="https://www.justkannada.in">www.justkannada.in</a>): ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ದ ಬಾರಿ ಮುನ್ನಡೆ ಸಾಧಿಸಿದ್ದಾರೆ.</p>
<p>ಶಿವಮೊಗ್ಗದಲ್ಲಿ ಬಿವೈ ರಾಘವೇಂದ್ರ 90 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ.  ತುಮಕೂರು ಕ್ಷೇತ್ರದಲ್ಲಿ  ಮೈತ್ರಿ ಅಭ್ಯರ್ಥಿ ಹೆಚ್.ಡಿ ದೇವೇಗೌಡರು ಬಾರಿ ಹಿನ್ನಡೆ ಅನುಭವಿಸಿದ್ದಾರೆ. ಹೆಚ್.ಡಿ ದೇವೇಗೌಡರು9 ಸಾವಿರ ಮತಗಳ ಹಿನ್ನಡೆ ಅನುಭವಿಸಿದ್ದಾರೆ.</p>
<p>ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನಡುವೆ ಬಿಗ್ ಫೈಟ್ ನಡೆಯುತ್ತಿದ್ದು ಮಂಡ್ಯ ಫಲಿತಾಂಶ ಹಾವು ಏಣಿಯಾಟದಂತಾಗಿದೆ.  ಕಲ್ಬುರ್ಗಿಯಲ್ಲಿ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್  21 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.</p>
<p>Key words: BJP&#8217;s candidate BY Raghavendra has been a leading in Shimoga..</p>
<p>#election2019 #result</p>
<p>The post <a href="https://www.justkannada.in/%e0%b2%b6%e0%b2%bf%e0%b2%b5%e0%b2%ae%e0%b3%8a%e0%b2%97%e0%b3%8d%e0%b2%97%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%bf%e0%b2%9c%e0%b3%86%e0%b2%aa%e0%b2%bf-%e0%b2%85%e0%b2%ad%e0%b3%8d/">ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರಗೆ ಬಾರಿ ಮುನ್ನಡೆ: ತುಮಕೂರಿನಲ್ಲಿ ಹೆಚ್.ಡಿಡಿಗೆ ಹಿನ್ನಡೆ&#8230;</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
