<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>justice Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/justice/feed/" rel="self" type="application/rss+xml" />
	<link>https://www.justkannada.in/tag/justice/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Tue, 21 Jul 2026 06:27:28 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>justice Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/justice/</link>
	<width>32</width>
	<height>32</height>
</image> 
	<item>
		<title>ಎಂದೂ ನಂದದ ನ್ಯಾಯದ ನಂದಾದೀಪ &#8216;ನ್ಯಾ.ಕೃಷ್ಣ ಎಸ್. ದೀಕ್ಷಿತ್&#8217; &#8211; ಪಾಂಡಿತ್ಯ, ಮಾನವೀಯತೆ, ಸಂವಿಧಾನದ ಸಮ್ಮಿಲನ.</title>
		<link>https://www.justkannada.in/justice-krishna-s-dixit-3/</link>
		
		<dc:creator><![CDATA[prashanth]]></dc:creator>
		<pubDate>Tue, 21 Jul 2026 06:24:44 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Constitution]]></category>
		<category><![CDATA[great judge]]></category>
		<category><![CDATA[Humanity]]></category>
		<category><![CDATA[justice]]></category>
		<category><![CDATA[Krishna S. Dixit]]></category>
		<guid isPermaLink="false">https://www.justkannada.in/?p=157540</guid>

					<description><![CDATA[<p>ಬೆಂಗಳೂರು,ಜುಲೈ,21,2026 (www.justkannada.in): ಕೆಲವು ನ್ಯಾಯಾಧೀಶರು ಕೇವಲ ತೀರ್ಪುಗಳನ್ನು ಬರೆಯುತ್ತಾರೆ. ಆದರೆ ಕೆಲವರು ತಮ್ಮ ತೀರ್ಪುಗಳ ಮೂಲಕ ಸಮಾಜದ ಮನಸ್ಸನ್ನೇ ರೂಪಿಸುತ್ತಾರೆ. ಅಂತಹ ಅಪರೂಪದ ನ್ಯಾಯಮೂರ್ತಿಗಳ ಸಾಲಿನಲ್ಲಿ ಹೆಮ್ಮೆಯಿಂದ ಉಲ್ಲೇಖವಾಗುವ ಹೆಸರು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್. ಕೃಷ್ಣ ದೀಕ್ಷಿತ್ ಹೆಸರು ಕೇಳಿದಾಗ ಕೇವಲ ನ್ಯಾಯಾಧೀಶರೊಬ್ಬರ ಚಿತ್ರಣ ಮೂಡುವುದಿಲ್ಲ, ಅಪಾರ ಅಧ್ಯಯನಶೀಲ, ಸಂವಿಧಾನದ ಅಚಲ ಕಾವಲುಗಾರ, ಭಾರತೀಯ ಸಂಸ್ಕೃತಿಯ ಆರಾಧಕ, ಸಾಹಿತ್ಯದ ರಸಿಕ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಅಪರೂಪದ ಚಿಂತಕರೊಬ್ಬರ ವ್ಯಕ್ತಿತ್ವ ಕಣ್ಮುಂದೆ ಬರುತ್ತದೆ. ನ್ಯಾ ಕೃಷ್ಣದೀಕ್ಷಿತ್ [&#8230;]</p>
<p>The post <a href="https://www.justkannada.in/justice-krishna-s-dixit-3/">ಎಂದೂ ನಂದದ ನ್ಯಾಯದ ನಂದಾದೀಪ &#8216;ನ್ಯಾ.ಕೃಷ್ಣ ಎಸ್. ದೀಕ್ಷಿತ್&#8217; &#8211; ಪಾಂಡಿತ್ಯ, ಮಾನವೀಯತೆ, ಸಂವಿಧಾನದ ಸಮ್ಮಿಲನ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಜುಲೈ,21,2026 (<a href="http://www.justkannada.in">www.justkannada.in</a>):</strong> ಕೆಲವು ನ್ಯಾಯಾಧೀಶರು ಕೇವಲ ತೀರ್ಪುಗಳನ್ನು ಬರೆಯುತ್ತಾರೆ. ಆದರೆ ಕೆಲವರು ತಮ್ಮ ತೀರ್ಪುಗಳ ಮೂಲಕ ಸಮಾಜದ ಮನಸ್ಸನ್ನೇ ರೂಪಿಸುತ್ತಾರೆ. ಅಂತಹ ಅಪರೂಪದ ನ್ಯಾಯಮೂರ್ತಿಗಳ ಸಾಲಿನಲ್ಲಿ ಹೆಮ್ಮೆಯಿಂದ ಉಲ್ಲೇಖವಾಗುವ ಹೆಸರು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್. ಕೃಷ್ಣ ದೀಕ್ಷಿತ್ ಹೆಸರು ಕೇಳಿದಾಗ ಕೇವಲ ನ್ಯಾಯಾಧೀಶರೊಬ್ಬರ ಚಿತ್ರಣ ಮೂಡುವುದಿಲ್ಲ, ಅಪಾರ ಅಧ್ಯಯನಶೀಲ, ಸಂವಿಧಾನದ ಅಚಲ ಕಾವಲುಗಾರ, ಭಾರತೀಯ ಸಂಸ್ಕೃತಿಯ ಆರಾಧಕ, ಸಾಹಿತ್ಯದ ರಸಿಕ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಅಪರೂಪದ ಚಿಂತಕರೊಬ್ಬರ ವ್ಯಕ್ತಿತ್ವ ಕಣ್ಮುಂದೆ ಬರುತ್ತದೆ.<img fetchpriority="high" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p><strong>ನ್ಯಾ ಕೃಷ್ಣದೀಕ್ಷಿತ್ ಅವರ ಹಿನ್ನೆಲೆ</strong></p>
<p>ಸಾಮಾನ್ಯ ಕೃಷಿ ಕುಟುಂಬದಲ್ಲಿ ಹುಟ್ಟಿದವರು‌ ಕೃಷ್ಣ ದೀಕ್ಷಿತ್. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ 1964ರ ಜುಲೈ 20ರಂದು ಜನಿಸಿದರು. ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಮಾಸೂರಿನಲ್ಲಿ ಪಡೆದರು. ಕರ್ನಾಟಕ ಕಾಲೇಜ್ ಆಫ್ ಧಾರವಾಡದಲ್ಲಿ 1986ರಲ್ಲಿ ಬಿ.ಎಸ್ಸಿ ಪದವಿ ಪಡೆದರು. 1989ರಲ್ಲಿ ಧಾರವಾಡದ ಯೂನಿವರ್ಸಿಟಿ ಲಾ ಕಾಲೇಜ್&#8217;ನಿಂದ ಕಾನೂನು ಪದವೀಧರರಾಗಿ ಎರಡನೇ  ರ್ಯಾಂಕ್ ಗಳಿಸಿದರು. ನಂತರ ರಾಜ್ಯ ವಕೀಲರ ಪರಿಷತ್‌ ನಲ್ಲಿ 1989ರಲ್ಲಿ ನೋಂದಣಿ ಮಾಡಿಸಿದ ಅವರು ಬೆಂಗಳೂರಿನಲ್ಲಿ ಹಿರಿಯ ವಕೀಲ ಸುರೇಶ್ ಎಸ್.ಜೋಶಿ ಅವರ ಬಳಿ ತಮ್ಮ ವೃತ್ತಿ ಜೀವನ ಆರಂಭಿಸಿದರು.  ಕರ್ನಾಟಕ ಮತ್ತು ಮದ್ರಾಸ್‌ ಹೈಕೋರ್ಟ್‌ಗಳಲ್ಲಿ ವಕೀಲಿಕೆ ನಡೆಸಿದರು. ಚುನಾವಣೆ, ಸೇವಾ ವಿಷಯಗಳು, ಭೂ ಸುಧಾರಣೆಗಳು ಹಾಗೂ ಬ್ಯಾಂಕಿಂಗ್‌ ಮುಂತಾದ ಕಾನೂನು ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದ ಅವರು ನ್ಯಾಯಮೂರ್ತಿಯಾಗಿ ನೇಮಕವಾಗುವ ಮುನ್ನ ಸರ್ಕಾರದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು.</p>
<p><strong>ಪ್ರಮುಖ ಹುದ್ದೆಗಳು</strong></p>
<p>1999ರಲ್ಲಿ ಭಾರತೀಯ ಚುನಾವಣಾ ಆಯೋಗದ ಹಿರಿಯ ಸ್ಥಾಯಿ ವಕೀಲರು, 1999ರಲ್ಲಿ ಕೇಂದ್ರ ಸರ್ಕಾರದ ಸ್ಥಾಯಿ ವಕೀಲರು ಮತ್ತು 2014ರಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಭಾರತದ ಸಹಾಯಕ ಸಾಲಿಸಿಟ‌ರ್ ಜನರಲ್ ಆಗಿದ್ದರು.<img decoding="async" class="aligncenter size-full wp-image-104725" src="https://www.justkannada.in/wp-content/uploads/2023/03/high-court.jpg" alt="" width="500" height="300" srcset="https://www.justkannada.in/wp-content/uploads/2023/03/high-court.jpg 500w, https://www.justkannada.in/wp-content/uploads/2023/03/high-court-300x180.jpg 300w" sizes="(max-width: 500px) 100vw, 500px" /></p>
<p>ವಿಶ್ವವಿದ್ಯಾಲಯ ಅನುದಾನ ಆಯೋಗ, ಭಾರತೀಯ ಸ್ಪರ್ಧಾ ಆಯೋಗ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ, ಮುಂಬೈನ ಭಾಭಾ ಪರಮಾಣು ಸಂಶೋಧನಾ ಕೇಂದ್ರ, ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆ, ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ನಂತಹ ಶಾಸನಬದ್ಧ ಸಂಸ್ಥೆಗಳ ಸ್ಥಾಯಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು.</p>
<p><strong>ಜ್ಞಾನವೇ ಅವರ ಆಭರಣ</strong></p>
<p>ಜ್ಞಾನಕ್ಕೆ ಪರ್ಯಾಯ ಹೆಸರು ಕೃಷ್ಣ ದೀಕ್ಷಿತ್ ಎನ್ನುವಂತಿದೆ ಇದಕ್ಕೆ ಕಾರಣ ಅವರು ಕಾನೂನಿನ ಪುಸ್ತಕಗಳನ್ನು ಮಾತ್ರವಲ್ಲ, ರಾಮಾಯಣ, ಮಹಾಭಾರತ, ಭಾಗವತ, ಉಪನಿಷತ್ತುಗಳು, ಭಗವದ್ಗೀತೆ, ಪುರಾಣಗಳು, ಕಾಳಿದಾಸ, ಬಸವಣ್ಣ, ಸರ್ವಜ್ಞ, ಶೇಕ್ಸ್‌ಪಿಯರ್ ಸೇರಿದಂತೆ ಭಾರತೀಯ ಮತ್ತು ಪಾಶ್ಚಾತ್ಯ ಸಾಹಿತ್ಯದ ಮೇಲೆ ಅವರು ಹೊಂದಿರುವ ಅಧ್ಯಯನದ ಹಿಡಿತ. ಇದು ನ್ಯಾಯಾಂಗ ವಲಯದಲ್ಲಿ ಅಪರೂಪದಲ್ಲಿ ಅಪರೂಪ ಎನಿಸಿ ವಿಶೇಷ ಗೌರವಕ್ಕೆ ಪಾತ್ರವಾಗಿದೆ.</p>
<p><strong>ರಾಮಾಯಣ ಮತ್ತು ಮಹಾಭಾರತದ ಮೌಲ್ಯಗಳ ಪ್ರತಿಧ್ವನಿ</strong></p>
<p>ಅವರ ನ್ಯಾಯ ಲೇಖನಗಳಲ್ಲಿ ರಾಮಾಯಣದ ಧರ್ಮನಿಷ್ಠೆ, ಮಹಾಭಾರತದ ನ್ಯಾಯದ ಅನ್ವೇಷಣೆ ಮತ್ತು ಭಗವದ್ಗೀತೆಯ ಕರ್ತವ್ಯ ಪ್ರಜ್ಞೆಯಂತಹ ಮೌಲ್ಯಗಳ ಪ್ರತಿಧ್ವನಿ ಕೇಳಿಸುತ್ತದೆ. ಅವರು ಈ ಗ್ರಂಥಗಳನ್ನು ಧಾರ್ಮಿಕ ದೃಷ್ಟಿಯಿಂದ ಮಾತ್ರವಲ್ಲ, ಭಾರತೀಯ ನಾಗರಿಕತೆಯ ನೈತಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಮೂಲಗಳಾಗಿ ಉಲ್ಲೇಖಿಸಿರುವುದು ಗಮನಾರ್ಹ. ಧರ್ಮ, ನ್ಯಾಯ, ಕರ್ತವ್ಯ, ಕ್ಷಮೆ, ಹೊಣೆಗಾರಿಕೆ ಮತ್ತು ಮಾನವ ಘನತೆ ಎಂಬ ಮೌಲ್ಯಗಳನ್ನು ವಿವರಿಸುವ ಸಂದರ್ಭಗಳಲ್ಲಿ ಇಂತಹ ಉಲ್ಲೇಖಗಳು ಅವರ ತೀರ್ಪುಗಳಿಗೆ ವಿಶಿಷ್ಟ ಆಳವನ್ನು ನೀಡಿವೆ. ನ್ಯಾಯಮೂರ್ತಿಯಾಗಿ ಅವರು ನೀಡಿದ ಅನೇಕ ತೀರ್ಪುಗಳು ದೇಶದಾದ್ಯಂತ ಗಮನ ಸೆಳೆದಿವೆ. ಆದರೆ ಆ ಉಲ್ಲೇಖಗಳು ಕೇವಲ ಅಲಂಕಾರಕ್ಕಾಗಿ ಅಲ್ಲ, ನ್ಯಾಯದ ತತ್ವವನ್ನು ಹೆಚ್ಚು ಅರ್ಥಪೂರ್ಣವಾಗಿ ವಿವರಿಸುವ ಚಿಂತನೆಯ ಸಾಧನಗಳಾಗಿ ಬಳಸಲ್ಪಟ್ಟಿವೆ. ಸಂವಿಧಾನದ ಮೌಲ್ಯಗಳು ಮತ್ತು ಭಾರತೀಯ ಜ್ಞಾನ ಪರಂಪರೆಯ ನಡುವೆ ಸಂವಾದ ನಡೆಸುವ ಅಪರೂಪದ ಶೈಲಿಯನ್ನೇ ಅವರು ರೂಪಿಸಿದ್ದಾರೆ. ಕಾನೂನಿನ ಅಕ್ಷರವನ್ನು ಗೌರವಿಸುತ್ತಲೇ ಸಂವಿಧಾನದ ಮೌಲ್ಯಗಳು, ವೈಯಕ್ತಿಕ ಸ್ವಾತಂತ್ರ್ಯ, ಮಾನವ ಘನತೆ ಮತ್ತು ನ್ಯಾಯದ ತತ್ವಗಳಿಗೆ ಹೆಚ್ಚಿನ ಆದ್ಯತೆ ನೀಡಿದರು. ಅವರ ತೀರ್ಪುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶಗಳು<img decoding="async" class="aligncenter size-full wp-image-101153" src="https://www.justkannada.in/wp-content/uploads/2022/12/fine-1.jpg" alt="" width="500" height="242" srcset="https://www.justkannada.in/wp-content/uploads/2022/12/fine-1.jpg 500w, https://www.justkannada.in/wp-content/uploads/2022/12/fine-1-300x145.jpg 300w" sizes="(max-width: 500px) 100vw, 500px" /></p>
<p>ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಒತ್ತು.</p>
<p>ಆಡಳಿತದ ಉತ್ತರದಾಯಿತ್ವವನ್ನು ನೆನಪಿಸುವ ದೃಢ ನಿಲುವು.</p>
<p>ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮಾನವ ಘನತೆಯ ರಕ್ಷಣೆ.</p>
<p>ನ್ಯಾಯ ವಿಳಂಬವಾಗಬಾರದು ಎಂಬ ಸ್ಪಷ್ಟ ಸಂದೇಶ.</p>
<p>ಕಾನೂನು ಮತ್ತು ಸಾಮಾಜಿಕ ಮೌಲ್ಯಗಳ ನಡುವಿನ ಸಮತೋಲನ.</p>
<p>ಪ್ರಮುಖ ತೀರ್ಪುಗಳು ಹಿಜಾಬ್, ಆನ್‌ ಲೈನ್ ಗೇಮಿಂಗ್, ಟ್ವಿಟರ್, ನಾಡಗೀತೆ ವಿವಾದ, ಕಡ್ಡಾಯ ವೈದ್ಯಕೀಯ ಸೇವೆ, ಆದಾಯ ತೆರಿಗೆ ಮರುಪಾವತಿ, ಸೆಟ್ ಟಾಪ್ ಬಾಕ್ಸ್‌ ಮೇಲಿನ ಜಿಎಸ್‌ ಟಿ, ಜಿಎಸ್‌ಟಿಯಿಂದ ವಿಶ್ವವಿದ್ಯಾಲಯಗಳಿಗೆ ವಿನಾಯಿತಿ, ಕಾರ್ಮಿಕರಿಗೆ ಕನಿಷ್ಠ ವೇತನ, ಜಲಾಶಯಗಳ ಸುತ್ತ ಗಣಿಗಾರಿಕೆ ನಿಷೇಧ, ಮೀಸಲು ಅರಣ್ಯಗಳನ್ನು ಮರು ಪಡೆಯುವುದು, ಚುನಾವಣಾ ಪ್ರಕ್ರಿಯೆಯಲ್ಲಿ ರೋಡ್‌ ಶೋ ನಡೆಸುವ ಹಕ್ಕು, ಅಪರಾಧಿಗಳ ಪೆರೋಲ್, ಫರ್ಲೋ, ಬ್ಯಾಂಕ್‌ಗಳನ್ನು ವಂಚಿಸಿ ಸಾಲ ಪಡೆಯುವುದು, ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಹಿಂಪಡೆಯುವುದು, ಭಾರತದ ಸಾಗರೋತ್ತರ ನಾಗರಿಕರ ಶೈಕ್ಷಣಿಕ ಹಕ್ಕುಗಳು, ವಿದೇಶಿಯರಿಗೆ ವೀಸಾ ನಿರಾಕರಿಸುವ ಕೇಂದ್ರ ಸರ್ಕಾರದ ಅಧಿಕಾರ, ಪಕ್ಷಗಾರರಿಗೆ ಮೇಲ್ಮನವಿ ಸಲ್ಲಿಸಬಹುದಾದ ಆದೇಶಗಳನ್ನು ತಿಳಿಸಲು ಅರೆ ನ್ಯಾಯಿಕ ಅಧಿಕಾರಿಗಳ ಕರ್ತವ್ಯ, ಪಿಂಚಣಿದಾರರ ಹಕ್ಕುಗಳು, ರಕ್ಷಣಾ ಸಿಬ್ಬಂದಿ ಸವಲತ್ತುಗಳು, ವಯಸ್ಸಾದ ಪೋಷಕರು, ಹೆಂಡತಿ ಮಕ್ಕಳನ್ನು ನಿರ್ವಹಿಸುವ ಕರ್ತವ್ಯ, ಗೈರುಹಾಜರಿ ಮಾಲೀಕರ ಸಾರ್ವಜನಿಕ ಆಸ್ತಿಗಳು ಮತ್ತು ಆಸ್ತಿಗಳನ್ನು ರಕ್ಷಿಸುವ ನ್ಯಾಯಾಲಯಗಳ ಕರ್ತವ್ಯ, ಹಾಲುಣಿಸುವ ತಾಯಂದಿರ ಸ್ತನ್ಯಪಾನ ಹಕ್ಕುಗಳು, ಹಿಂದೂ ಧಾರ್ಮಿಕ ಸಂಸ್ಥೆಗಳು, ಮಠಗಳು ಇತ್ಯಾದಿಗಳ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪ ಮಾಡದೇ ಇರುವುದು ಸೇರಿ ಹಲವಾರು ಮಹತ್ವದ ತೀರ್ಪುಗಳು.</p>
<p><strong>ಕೃಷ್ಣ ದೀಕ್ಷಿತರ ಕನ್ನಡ ಪ್ರೇಮ &#8211; ಐತಿಹಾಸಿಕ ನಿಲುವು</strong></p>
<p>ಮಾನವೀಯ ಮೌಲ್ಯಗಳು ಮತ್ತು ಭಾರತೀಯ ಸಂಸ್ಕೃತಿಯ ಮೇಲಿನ ಅಪಾರ ಅಭಿಮಾನ ಹೊಂದಿದ್ದ ಕೃಷ್ಣದೀಕ್ಷಿತ್ ಅವರು ಕನ್ನಡ ಭಾಷೆಯ ಬಗೆಗಿನ ತಮ್ಮ ಪ್ರೀತಿಯನ್ನು ನ್ಯಾಯಾಂಗದ ವೇದಿಕೆಯಲ್ಲಿಯೂ ಅರ್ಥಪೂರ್ಣವಾಗಿ ವ್ಯಕ್ತಪಡಿಸಿದರು.<img loading="lazy" decoding="async" class="aligncenter size-full wp-image-154862" src="https://www.justkannada.in/wp-content/uploads/2026/05/BDA_Adv.jpeg" alt="" width="1598" height="197" srcset="https://www.justkannada.in/wp-content/uploads/2026/05/BDA_Adv.jpeg 1598w, https://www.justkannada.in/wp-content/uploads/2026/05/BDA_Adv-300x37.jpeg 300w, https://www.justkannada.in/wp-content/uploads/2026/05/BDA_Adv-1024x126.jpeg 1024w, https://www.justkannada.in/wp-content/uploads/2026/05/BDA_Adv-768x95.jpeg 768w, https://www.justkannada.in/wp-content/uploads/2026/05/BDA_Adv-1536x189.jpeg 1536w, https://www.justkannada.in/wp-content/uploads/2026/05/BDA_Adv-150x18.jpeg 150w, https://www.justkannada.in/wp-content/uploads/2026/05/BDA_Adv-696x86.jpeg 696w, https://www.justkannada.in/wp-content/uploads/2026/05/BDA_Adv-1068x132.jpeg 1068w, https://www.justkannada.in/wp-content/uploads/2026/05/BDA_Adv-600x74.jpeg 600w" sizes="auto, (max-width: 1598px) 100vw, 1598px" /></p>
<p>2024ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿದ್ದ ವೇಳೆ ಅವರು ಸಂಪೂರ್ಣವಾಗಿ ಕನ್ನಡದಲ್ಲೇ ಆದೇಶ ಹೊರಡಿಸಿದ್ದು ನ್ಯಾಯಾಂಗದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿ ಉಳಿಯಿತು. ಬಹುಭಾಷೆ, ಬಹುಸಂಸ್ಕೃತಿಗಳ ಭಾರತದಲ್ಲಿ ನ್ಯಾಯದ ಭಾಷೆ ಜನರ ಭಾಷೆಯಾಗಬೇಕು ಎಂಬ ಆಶಯಕ್ಕೆ ಅವರ ಈ ಹೆಜ್ಜೆ ಹೊಸ ಅರ್ಥ ನೀಡಿತು. ನ್ಯಾಯಾಲಯದ ಆದೇಶಗಳು ಜನ ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗಬೇಕು, ನ್ಯಾಯವು ಕೇವಲ ವಕೀಲರಿಗಷ್ಟೇ ಅಲ್ಲ, ಸಾಮಾನ್ಯ ನಾಗರಿಕರಿಗೂ ತಲುಪಬೇಕು ಎಂಬ ಅವರ ಚಿಂತನೆ ಈ ನಿರ್ಧಾರದ ಹಿಂದಿತ್ತು. ಜನರ ನಾಡಿ ಮಿಡಿತವನ್ನು ಅರಿತ ನ್ಯಾಯಮೂರ್ತಿಯಾಗಿ ಅವರು ಕನ್ನಡದಲ್ಲೇ ಆದೇಶ ಹೊರಡಿಸಿದಾಗ ಅದು ಕೇವಲ ಭಾಷೆಯ ಮೇಲಿನ ಪ್ರೀತಿಯಲ್ಲ, ಕನ್ನಡಿಗರ ಆತ್ಮಗೌರವಕ್ಕೂ ನೀಡಿದ ಗೌರವವಾಗಿತ್ತು. ಈ ಕ್ರಮ ರಾಜ್ಯದ ಕೋಟ್ಯಂತರ ಕನ್ನಡಿಗರ ಮನದಲ್ಲಿ ಸಂತಸ ಮೂಡಿಸಿತು. ನ್ಯಾಯದ ಬಾಗಿಲು ಜನರ ಭಾಷೆಯಲ್ಲಿ ತೆರೆಯಬಹುದು ಎಂಬ ವಿಶ್ವಾಸವನ್ನು ಅವರ ನಡೆ ಬಲಪಡಿಸಿತು. ಅವರ ಈ ಐತಿಹಾಸಿಕ ಹೆಜ್ಜೆ ಇತರ ನ್ಯಾಯಾಧೀಶರು ಹಾಗೂ ನ್ಯಾಯಾಲಯಗಳಿಗೂ ಪ್ರೇರಣೆಯಾಯಿತು. ರಾಜ್ಯದ ನ್ಯಾಯಾಂಗದಲ್ಲಿ ಕನ್ನಡದ ಬಳಕೆಯನ್ನು ಇನ್ನಷ್ಟು ವಿಸ್ತರಿಸುವ ಚರ್ಚೆಗೆ ಇದು ನಾಂದಿಯಾಯಿತು. ಮುಂದಿನ ದಿನಗಳಲ್ಲಿ ಹೆಚ್ಚಿನ ಆದೇಶಗಳು ಕನ್ನಡದಲ್ಲೇ ಹೊರಬರಬೇಕು ಎಂಬ ಆಶಯಕ್ಕೆ ಅವರ ನಿರ್ಧಾರ ದಾರಿದೀಪವಾಯಿತು. ಕನ್ನಡವನ್ನು ಕೇವಲ ಮಾತೃಭಾಷೆಯಾಗಿ ಅಲ್ಲ, ನ್ಯಾಯವನ್ನು ಜನರಿಗೆ ತಲುಪಿಸುವ ಶಕ್ತಿಯುತ ಮಾಧ್ಯಮವಾಗಿ ಕಂಡ ನ್ಯಾಯಮೂರ್ತಿ ಶ್ರೀ ಕೃಷ್ಣ ಎಸ್. ದೀಕ್ಷಿತ್ ಅವರ ಹೆಸರು ಕನ್ನಡ ನ್ಯಾಯಾಂಗದ ಇತಿಹಾಸದಲ್ಲಿ ಸದಾ ಗೌರವದಿಂದ ಸ್ಮರಿಸಲ್ಪಡುತ್ತಿದೆ. ನ್ಯಾಯ, ಜ್ಞಾನ, ಸಂಸ್ಕೃತಿ ಮತ್ತು ಕನ್ನಡದ ಮೇಲಿನ ಅವರ ಅಪಾರ ಅಭಿಮಾನ ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಿ ಉಳಿದಿದೆ.</p>
<p><strong>ಪುಟ್ಟ ಕಂದಮ್ಮನಿಗಾಗಿ ಮಿಡಿದಿದ್ದ ನ್ಯಾಯಮೂರ್ತಿಗಳು</strong></p>
<p>ಹೈಕೋರ್ಟ್‌ ನ ನ್ಯಾಯಮೂರ್ತಿಯಾಗಿದ್ದ ವೇಳೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಮಾನವೀಯತೆ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿದ ಅನೇಕ ತೀರ್ಪುಗಳ ಮೂಲಕ ಜನಮನ ಗೆದ್ದಿದ್ದಾರೆ. ಅಂತಹ ಅತ್ಯಂತ ಗಮನಾರ್ಹ ಪ್ರಕರಣಗಳಲ್ಲಿ ಒಂದು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿನ ಚಿಕಿತ್ಸೆಗೆ ಸುಮಾರು ₹16 ಕೋಟಿ ವೆಚ್ಚವಾಗುತ್ತಿದ್ದ ಪ್ರಕರಣ.</p>
<p>ಆ ಪ್ರಕರಣದಲ್ಲಿ ಮಗುವಿನ ಜೀವ ಉಳಿಸಲು ವಿದೇಶದಿಂದ ತರಬೇಕಾದ ಅತ್ಯಂತ ದುಬಾರಿ ಔಷಧಿಯ ಅಗತ್ಯವಿತ್ತು. ಮಗುವಿನ ಕುಟುಂಬಕ್ಕೆ ಆ ವೆಚ್ಚವನ್ನು ಭರಿಸುವ ಸಾಮರ್ಥ್ಯ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಪ್ರಕರಣದ ವಿಚಾರಣೆ ವೇಳೆ ಕೇವಲ ಕಾನೂನಿನ ತಾಂತ್ರಿಕ ಅಂಶಗಳನ್ನಷ್ಟೇ ನೋಡದೆ, ಸಂವಿಧಾನದ 21ನೇ ವಿಧಿಯಲ್ಲಿರುವ ಜೀವಿಸುವ ಹಕ್ಕು ಎಂಬ ಮೂಲಭೂತ ಹಕ್ಕನ್ನು ಪ್ರಮುಖವಾಗಿ ಪರಿಗಣಿಸಿದರು. ಜೀವ ಉಳಿಸುವ ಚಿಕಿತ್ಸೆ ಹಣದ ಕೊರತೆಯಿಂದ ನಿರಾಕರಿಸಲಾಗಬಾರದು ಎಂಬ ಮಾನವೀಯ ದೃಷ್ಟಿಕೋನವನ್ನು ಅವರು ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ಅವರು ರಾಜ್ಯ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಮಗುವಿನ ಚಿಕಿತ್ಸೆಗೆ ಅಗತ್ಯವಾದ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಸರ್ಕಾರವು ಕೇಂದ್ರ ಸರ್ಕಾರ ಸೇರಿದಂತೆ ಸಂಬಂಧಿತ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಮಗುವಿನ ಚಿಕಿತ್ಸೆಗೆ ಬೇಕಾದ ಎಲ್ಲ ನೆರವು ಒದಗಿಸಬೇಕು ಎಂದು ಸೂಚಿಸಿದರು. ಇಂತಹ ಪ್ರಕರಣಗಳಲ್ಲಿ ಸರ್ಕಾರವು ತನ್ನ ಕಲ್ಯಾಣ ರಾಜ್ಯದ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂಬುದನ್ನು ಅವರು ಒತ್ತಿ ಹೇಳಿದರು.<img loading="lazy" decoding="async" class="aligncenter size-full wp-image-132127" src="https://www.justkannada.in/wp-content/uploads/2024/11/jail.-order.jpg" alt="" width="500" height="280" srcset="https://www.justkannada.in/wp-content/uploads/2024/11/jail.-order.jpg 500w, https://www.justkannada.in/wp-content/uploads/2024/11/jail.-order-300x168.jpg 300w, https://www.justkannada.in/wp-content/uploads/2024/11/jail.-order-150x84.jpg 150w" sizes="auto, (max-width: 500px) 100vw, 500px" /></p>
<p>ಈ ಪ್ರಕರಣ ದೇಶಾದ್ಯಂತ ಗಮನ ಸೆಳೆಯಿತು. ನ್ಯಾಯಮೂರ್ತಿ ದೀಕ್ಷಿತ್ ಅವರ ಆದೇಶವು ಕೇವಲ ಒಂದು ಮಗುವಿನ ಚಿಕಿತ್ಸೆಯ ಕುರಿತ ತೀರ್ಪಾಗಿರಲಿಲ್ಲ, ಆರ್ಥಿಕ ಅಸಮಾನತೆಯಿಂದ ಯಾವುದೇ ಮಗುವಿನ ಜೀವ ಅಪಾಯಕ್ಕೆ ಸಿಲುಕಬಾರದು ಎಂಬ ಸಂದೇಶವನ್ನು ಸಮಾಜ ಮತ್ತು ಸರ್ಕಾರಕ್ಕೆ ನೀಡಿದ ಮಹತ್ವದ ತೀರ್ಪಾಗಿತ್ತು.</p>
<p>ಈ ತೀರ್ಪು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ನ್ಯಾಯದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಅವರ ತೀರ್ಪುಗಳಲ್ಲಿ ಕಾನೂನಿನ ಕಟ್ಟುನಿಟ್ಟಿನ ಜೊತೆಗೆ ಮಾನವೀಯ ಕಾಳಜಿ, ಕರುಣೆ ಮತ್ತು ಸಾಮಾಜಿಕ ಹೊಣೆಗಾರಿಕೆ ಸ್ಪಷ್ಟವಾಗಿ ಕಾಣಿಸುತ್ತವೆ. ಆದ್ದರಿಂದಲೇ ಅವರು ಕೇವಲ ನ್ಯಾಯಾಧೀಶರಾಗಿ ಮಾತ್ರವಲ್ಲ, ಮಾನವೀಯ ನ್ಯಾಯದ ಪ್ರತೀಕ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.</p>
<p><strong>ನ್ಯಾಯದ ಜೊತೆಗೆ ಮಾನವೀಯತೆಯ ಸ್ಪರ್ಶ</strong></p>
<p>ನ್ಯಾಯವೆಂದರೆ ಕೇವಲ ಕಾನೂನಿನ ಕಠಿಣ ಪದಗಳಲ್ಲ, ಅದರೊಳಗೆ ಮಾನವ ಬದುಕಿನ ನೋವು, ಆಸೆ, ಗೌರವ ಮತ್ತು ಹಕ್ಕುಗಳೂ ಅಡಗಿವೆ ಎಂಬುದನ್ನು ನ್ಯಾಯಮೂರ್ತಿ ದೀಕ್ಷಿತ್ ಅವರ ಹಲವು ತೀರ್ಪುಗಳ ಮೂಲ ನೆನಪಿಸಿದ್ದಾರೆ. ಅವರು ಕಾನೂನನ್ನು ಅಕ್ಷರಶಃ ಅನ್ವಯಿಸುವುದರ ಜೊತೆಗೆ, ಅದರ ಉದ್ದೇಶ ಮತ್ತು ಮಾನವೀಯ ಪರಿಣಾಮವನ್ನೂ ಪರಿಗಣಿಸುವ ದೃಷ್ಟಿಕೋನಕ್ಕೆ ಹೆಸರುವಾಸಿಯಾಗಿದ್ದಾರೆ. ಅದಕ್ಕಾಗಿಯೇ ಅವರ ತೀರ್ಪುಗಳು ಅನೇಕ ಬಾರಿ ಕಾನೂನು ವಿದ್ಯಾರ್ಥಿಗಳು, ವಕೀಲರು ಮತ್ತು ನ್ಯಾಯಾಧೀಶರ ಅಧ್ಯಯನಕ್ಕೆ ವಿಷಯವಾಗಿವೆ.</p>
<p><strong>ಸರಳತೆ ಮತ್ತು ಸೌಜನ್ಯದ ಪ್ರತಿರೂಪ</strong></p>
<p>ಅಪಾರ ಪಾಂಡಿತ್ಯ ಹೊಂದಿದ್ದರೂ ಅಹಂಕಾರಕ್ಕೆ ಅವಕಾಶ ನೀಡದ ವ್ಯಕ್ತಿತ್ವ ಅವರದು. ನ್ಯಾಯಾಲಯದಲ್ಲಿ ವಕೀಲರ ವಾದಗಳನ್ನು ತಾಳ್ಮೆಯಿಂದ ಆಲಿಸುವುದು, ಕಿರಿಯ ವಕೀಲರನ್ನೂ ಗೌರವದಿಂದ ನಡೆಸಿಕೊಳ್ಳುವುದು ಮತ್ತು ನ್ಯಾಯಾಲಯದ ಘನತೆಯನ್ನು ಕಾಪಾಡುವುದು ಅವರ ಕಾರ್ಯ ಶೈಲಿಯ ವಿಶೇಷ ಲಕ್ಷಣಗಳಾಗಿವೆ.</p>
<p><strong>ಯುವ ಕಾನೂನು ವಿದ್ಯಾರ್ಥಿಗಳಿಗೆ ಸ್ಫೂರ್ತಿ</strong></p>
<p>ಅವರು ಹೇಳುವ ಪ್ರತಿಯೊಂದು ವಿಚಾರವೂ ಒಂದು ಪಾಠದಂತಿರುತ್ತದೆ. ಕಾನೂನು ಓದುವ ವಿದ್ಯಾರ್ಥಿಗಳು ಕೇವಲ ಕಾನೂನಿನ ಪುಸ್ತಕಗಳಲ್ಲ, ಇತಿಹಾಸ, ಸಾಹಿತ್ಯ, ತತ್ವಶಾಸ್ತ್ರ ಮತ್ತು ಸಮಾಜವನ್ನೂ ಅಧ್ಯಯನ ಮಾಡಬೇಕು ಎಂಬ ಸಂದೇಶವನ್ನು ಅವರ ಬದುಕು ನೀಡುತ್ತದೆ.</p>
<p><strong>ಗೌರವ ಡಾಕ್ಟರೇಟ್ – ಸಮಾಜದ ಗೌರವ</strong></p>
<p>ನ್ಯಾಯಾಂಗ, ಶಿಕ್ಷಣ ಮತ್ತು ಕಾನೂನು ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಒಡಿಶಾದ ಶಿಕ್ಷಣ &#8216;ಓ&#8217; ಅನುಸಂಧಾನ (SOA) ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ. ಇದು ಅವರ ವೈಯಕ್ತಿಕ ಸಾಧನೆ ಮಾತ್ರವಲ್ಲ, ಕರ್ನಾಟಕದ ನ್ಯಾಯ ಪರಂಪರೆಗೆ ಸಂದ ಗೌರವವೂ ಆಗಿದೆ.<img loading="lazy" decoding="async" class="aligncenter size-full wp-image-157543" src="https://www.justkannada.in/wp-content/uploads/2026/07/krishna-S-deekshith.jpg" alt="" width="500" height="333" srcset="https://www.justkannada.in/wp-content/uploads/2026/07/krishna-S-deekshith.jpg 500w, https://www.justkannada.in/wp-content/uploads/2026/07/krishna-S-deekshith-300x200.jpg 300w, https://www.justkannada.in/wp-content/uploads/2026/07/krishna-S-deekshith-150x100.jpg 150w" sizes="auto, (max-width: 500px) 100vw, 500px" /></p>
<p><strong>ನ್ಯಾಯದ ಬೆಳಕು ಎಂದೆಂದಿಗೂ ಬೆಳಗಲಿ</strong></p>
<p>ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಜೀವನ ನಮಗೆ ಒಂದು ಮಹತ್ವದ ಸಂದೇಶವನ್ನು ನೀಡುತ್ತದೆ. ನ್ಯಾಯದ ಪರವಾಗಿ ಅಚಲವಾಗಿ ನಿಂತು, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದು, ಸಮಾಜಕ್ಕೆ ನ್ಯಾಯದ ಮೇಲಿನ ವಿಶ್ವಾಸವನ್ನು ಬಲಪಡಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಸೇವೆ ಸದಾ ಸ್ಮರಣೀಯ. ಅವರ ಜೀವನಯಾನವು ಕೇವಲ ಒಬ್ಬ ನ್ಯಾಯಾಧೀಶರ ಯಶೋಗಾಥೆಯಲ್ಲ, ಅದು ನ್ಯಾಯ, ಜ್ಞಾನ, ಮಾನವೀಯತೆ ಮತ್ತು ರಾಷ್ಟ್ರಸೇವೆಯ ಆದರ್ಶ ಪಥವಾಗಿದೆ. ಇಂತಹ ಮಹನೀಯರ ಸಾಧನೆಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಿ ಬೆಳಗುತ್ತಲೇ ಇರುತ್ತವೆ. ಕಾನೂನು ಜ್ಞಾನದಿಂದ ಬಲಗೊಳ್ಳುತ್ತದೆ, ನ್ಯಾಯ ಮಾನವೀಯತೆಯಿಂದ ಪರಿಪೂರ್ಣಗೊಳ್ಳುತ್ತದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುತ್ತಾ, ಭಾರತೀಯ ಜ್ಞಾನಪರಂಪರೆಯ ಬೆಳಕನ್ನು ನ್ಯಾಯದ ದಾರಿಯಲ್ಲಿ ಹರಿಸಿದ ಕೃಷ್ಣ ದೀಕ್ಷಿತ್‌ ರಂತಹ ನ್ಯಾಯಮೂರ್ತಿಗಳು ನ್ಯಾಯಾಂಗದ ನಿಜವಾದ ಆಸ್ತಿ. ಅವರ ತೀರ್ಪುಗಳು ಕೇವಲ ಕಾನೂನು ದಾಖಲೆಗಳಲ್ಲ, ಅವು ಚಿಂತನೆಗೆ ಆಹ್ವಾನ ನೀಡುವ ಬರಹಗಳು, ಮಾನವೀಯತೆಯನ್ನು ನೆನಪಿಸುವ ಸಂದೇಶಗಳು ಮತ್ತು ನ್ಯಾಯದ ಮೇಲಿನ ವಿಶ್ವಾಸವನ್ನು ಬಲಪಡಿಸುವ ದಾರಿದೀಪಗಳು. ಅವರ ನ್ಯಾಯಸೇವೆ, ಪಾಂಡಿತ್ಯ, ವಿನಯ ಮತ್ತು ಮಾನವೀಯ ಕಳಕಳಿ ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗುತ್ತದೆ. ಅಷ್ಟೇ ಅಲ್ಲ ಕರ್ನಾಟಕದ ಈ ಮೇರು ನ್ಯಾಯಮೂರ್ತಿಯ ಹೆಸರು ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಸದಾ ಗೌರವದಿಂದ ಸ್ಮರಿಸಲ್ಪಡುತ್ತದೆ.<img loading="lazy" decoding="async" class="aligncenter size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="auto, (max-width: 1000px) 100vw, 1000px" /></p>
<p>ಇಂದು ಕೃಷ್ಣದೀಕ್ಷಿತ್ ಅವರ ಹುಟ್ಟುಹಬ್ಬ ಜೊತೆಗೆ ಸುಧೀರ್ಘ ನ್ಯಾಯಾಂಗ ಸೇವೆಯಿಂದ ನಿವೃತ್ತರಾಗುವ ಕಾಲಘಟ್ಟ. ಅವರು ಮುಂದಿನ ಜೀವನ ಸುಖಮಯವಾಗಿರಲಿ. ಅವರ ಮಾರ್ಗದರ್ಶನ ಸದಾ ಎಲ್ಲರಿಗೂ ಸಿಗುವಂತಾಗಲಿ. ತಾಯಿ ಚಾಮುಂಡೇಶ್ವರಿ ಅವರಿಗೆ ಆರೋಗ್ಯ ಆಯಸ್ಸು ಕರುಣಿಸಿ ಕಾಪಾಡಲಿ.</p>
<figure id="attachment_157542" aria-describedby="caption-attachment-157542" style="width: 500px" class="wp-caption aligncenter"><img loading="lazy" decoding="async" class="size-full wp-image-157542" src="https://www.justkannada.in/wp-content/uploads/2026/07/HN-Venkatesh.jpg" alt="" width="500" height="638" srcset="https://www.justkannada.in/wp-content/uploads/2026/07/HN-Venkatesh.jpg 500w, https://www.justkannada.in/wp-content/uploads/2026/07/HN-Venkatesh-235x300.jpg 235w, https://www.justkannada.in/wp-content/uploads/2026/07/HN-Venkatesh-329x420.jpg 329w, https://www.justkannada.in/wp-content/uploads/2026/07/HN-Venkatesh-150x191.jpg 150w, https://www.justkannada.in/wp-content/uploads/2026/07/HN-Venkatesh-300x383.jpg 300w" sizes="auto, (max-width: 500px) 100vw, 500px" /><figcaption id="caption-attachment-157542" class="wp-caption-text">HN Venkatesh</figcaption></figure>
<p>&nbsp;</p>
<p><strong>ಎಚ್ ಎನ್ ವೆಂಕಟೇಶ್</strong></p>
<p><strong>ಗೌರವ ಸಂಪಾದಕರು</strong></p>
<p><strong>ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ</strong></p>
<p><strong>ಮೈಸೂರು</strong></p>
<p>Key words: great judge, Justice, Krishna S. Dixit, humanity, Constitution.</p>
<p>The post <a href="https://www.justkannada.in/justice-krishna-s-dixit-3/">ಎಂದೂ ನಂದದ ನ್ಯಾಯದ ನಂದಾದೀಪ &#8216;ನ್ಯಾ.ಕೃಷ್ಣ ಎಸ್. ದೀಕ್ಷಿತ್&#8217; &#8211; ಪಾಂಡಿತ್ಯ, ಮಾನವೀಯತೆ, ಸಂವಿಧಾನದ ಸಮ್ಮಿಲನ.</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಒಡಿಶಾದ ಎಸ್‌ ಒಎ ವಿವಿಯಿಂದ  ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್</title>
		<link>https://www.justkannada.in/justice-krishna-s-dixit-honorary-doctorate/</link>
		
		<dc:creator><![CDATA[prashanth]]></dc:creator>
		<pubDate>Fri, 10 Jul 2026 07:05:20 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[honorary doctorate]]></category>
		<category><![CDATA[justice]]></category>
		<category><![CDATA[Krishna S. Dixit]]></category>
		<category><![CDATA[Odisha]]></category>
		<category><![CDATA[SOA University]]></category>
		<guid isPermaLink="false">https://www.justkannada.in/?p=157122</guid>

					<description><![CDATA[<p>ಬೆಂಗಳೂರು,ಜುಲೈ,10,2026 (www.justkannada.in): ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣ ಶ್ರೀಪಾದ್ ದೀಕ್ಷಿತ್ ಅವರಿಗೆ ಒಡಿಶಾದ ಸಿಕ್ಷಾ &#8216;ಓ&#8217; ಅನುಸಂಧಾನ್ (SOA) ಡೀಮ್ಡ್ ಟು ಬಿ ಯುನಿವರ್ಸಿಟಿ ಗೌರವ ಡಾಕ್ಟರೇಟ್ (Honoris Causa) ಪ್ರದಾನ ಮಾಡಲು ನಿರ್ಧರಿಸಲಾಗಿದೆ. ಜುಲೈ 18, 2026ರಂದು ಬೆಳಿಗ್ಗೆ 11 ಗಂಟೆಗೆ ಭುವನೇಶ್ವರದ ಎಸ್‌ ಒಎ ವಿಶ್ವವಿದ್ಯಾಲಯದ ವಿಶೇಷ ಘಟಿಕೋತ್ಸವದಲ್ಲಿ ಈ ಗೌರವ ಪ್ರದಾನ ಮಾಡಲಾಗುತ್ತದೆ. ಈ ಸಮಾರಂಭದಲ್ಲಿ ಅತಿಥಿ ಗೌರವವಾಗಿ ಭಾಗವಹಿಸಿ ವಿದ್ಯಾರ್ಥಿಗಳು ಹಾಗೂ ಸಂಶೋಧಕರನ್ನು ಉದ್ದೇಶಿಸಿ ಭಾಷಣ ಮಾಡುವಂತೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. [&#8230;]</p>
<p>The post <a href="https://www.justkannada.in/justice-krishna-s-dixit-honorary-doctorate/">ಒಡಿಶಾದ ಎಸ್‌ ಒಎ ವಿವಿಯಿಂದ  ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಜುಲೈ,10,2026 (<a href="http://www.justkannada.in">www.justkannada.in</a>):</strong> ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣ ಶ್ರೀಪಾದ್ ದೀಕ್ಷಿತ್ ಅವರಿಗೆ ಒಡಿಶಾದ ಸಿಕ್ಷಾ &#8216;ಓ&#8217; ಅನುಸಂಧಾನ್ (SOA) ಡೀಮ್ಡ್ ಟು ಬಿ ಯುನಿವರ್ಸಿಟಿ ಗೌರವ ಡಾಕ್ಟರೇಟ್ (Honoris Causa) ಪ್ರದಾನ ಮಾಡಲು ನಿರ್ಧರಿಸಲಾಗಿದೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಜುಲೈ 18, 2026ರಂದು ಬೆಳಿಗ್ಗೆ 11 ಗಂಟೆಗೆ ಭುವನೇಶ್ವರದ ಎಸ್‌ ಒಎ ವಿಶ್ವವಿದ್ಯಾಲಯದ ವಿಶೇಷ ಘಟಿಕೋತ್ಸವದಲ್ಲಿ ಈ ಗೌರವ ಪ್ರದಾನ ಮಾಡಲಾಗುತ್ತದೆ. ಈ ಸಮಾರಂಭದಲ್ಲಿ ಅತಿಥಿ ಗೌರವವಾಗಿ ಭಾಗವಹಿಸಿ ವಿದ್ಯಾರ್ಥಿಗಳು ಹಾಗೂ ಸಂಶೋಧಕರನ್ನು ಉದ್ದೇಶಿಸಿ ಭಾಷಣ ಮಾಡುವಂತೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪ್ರದೀಪ್ ಕುಮಾರ್ ನಂದಾ ಅವರು ನ್ಯಾಯಮೂರ್ತಿ ದೀಕ್ಷಿತ್ ಅವರಿಗೆ ಅಧಿಕೃತ ಆಹ್ವಾನ ನೀಡಿದ್ದಾರೆ.<img loading="lazy" decoding="async" class="aligncenter size-full wp-image-157124" src="https://www.justkannada.in/wp-content/uploads/2026/07/justice-krishna-dixit.jpg1_.jpg" alt="" width="500" height="281" srcset="https://www.justkannada.in/wp-content/uploads/2026/07/justice-krishna-dixit.jpg1_.jpg 500w, https://www.justkannada.in/wp-content/uploads/2026/07/justice-krishna-dixit.jpg1_-300x169.jpg 300w, https://www.justkannada.in/wp-content/uploads/2026/07/justice-krishna-dixit.jpg1_-150x84.jpg 150w" sizes="auto, (max-width: 500px) 100vw, 500px" /></p>
<p>ನ್ಯಾಯಮೂರ್ತಿ ಕೃಷ್ಣ ಶ್ರೀಪಾದ್ ದೀಕ್ಷಿತ್ ಅವರು ಕಾನೂನು ಕ್ಷೇತ್ರಕ್ಕೆ ನೀಡಿರುವ ವಿಶಿಷ್ಟ ಕೊಡುಗೆ, ನ್ಯಾಯದ ಪರವಾದ ಅಚಲ ಬದ್ಧತೆ, ನೈತಿಕ ಮೌಲ್ಯಗಳ ಪಾಲನೆ ಹಾಗೂ ಕಾನೂನು ವೃತ್ತಿಯ ಮೇಲೆ ಬೀರಿರುವ ಶಾಶ್ವತ ಪ್ರಭಾವವನ್ನು ಪರಿಗಣಿಸಿ ಕಾನೂನು ವಿಭಾಗದಲ್ಲಿ ಗೌರವ ಡಾಕ್ಟರೇಟ್ (Honoris Causa in Law) ನೀಡಲಾಗುತ್ತಿದೆ.<img loading="lazy" decoding="async" class="aligncenter size-full wp-image-157123" src="https://www.justkannada.in/wp-content/uploads/2026/07/justice-krishna-dixit.jpg" alt="" width="500" height="573" srcset="https://www.justkannada.in/wp-content/uploads/2026/07/justice-krishna-dixit.jpg 500w, https://www.justkannada.in/wp-content/uploads/2026/07/justice-krishna-dixit-262x300.jpg 262w, https://www.justkannada.in/wp-content/uploads/2026/07/justice-krishna-dixit-366x420.jpg 366w, https://www.justkannada.in/wp-content/uploads/2026/07/justice-krishna-dixit-150x172.jpg 150w, https://www.justkannada.in/wp-content/uploads/2026/07/justice-krishna-dixit-300x344.jpg 300w" sizes="auto, (max-width: 500px) 100vw, 500px" /></p>
<p>ಇನ್ನು ಎಸ್‌ ಒಎ ವಿಶ್ವವಿದ್ಯಾಲಯವು ಯುಜಿಸಿ ಮಾನ್ಯತೆ ಪಡೆದ ಡೀಮ್ಡ್ ವಿಶ್ವವಿದ್ಯಾಲಯವಾಗಿದ್ದು, NAAC A++ ಶ್ರೇಯಾಂಕ ಮತ್ತು NIRF ದೇಶದ ಅಗ್ರ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಶಿಕ್ಷಣ ಸಂಸ್ಥೆಯಾಗಿದೆ. ವಿಶ್ವವಿದ್ಯಾಲಯವು ಶಿಕ್ಷಣ, ಸಂಶೋಧನೆ ಹಾಗೂ ನಾವೀನ್ಯತೆಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ.<img loading="lazy" decoding="async" class="aligncenter size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="auto, (max-width: 1000px) 100vw, 1000px" /></p>
<p>Key words: Justice, Krishna S. Dixit,  honorary doctorate, SOA University, Odisha</p>
<p>The post <a href="https://www.justkannada.in/justice-krishna-s-dixit-honorary-doctorate/">ಒಡಿಶಾದ ಎಸ್‌ ಒಎ ವಿವಿಯಿಂದ  ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮೈಸೂರು: ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಬೀದಿಗೆ ಬಿದ್ದ ಕುಟುಂಬ</title>
		<link>https://www.justkannada.in/mysore-family-finance-harassment/</link>
		
		<dc:creator><![CDATA[prashanth]]></dc:creator>
		<pubDate>Tue, 07 Jul 2026 08:15:22 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[family]]></category>
		<category><![CDATA[finance]]></category>
		<category><![CDATA[harassment]]></category>
		<category><![CDATA[justice]]></category>
		<category><![CDATA[Mysore.]]></category>
		<guid isPermaLink="false">https://www.justkannada.in/?p=156994</guid>

					<description><![CDATA[<p>ಮೈಸೂರು,ಜುಲೈ,7,2026 (www.justkannada.in): ಖಾಸಗಿ ಫೈನಾನ್ಸ್ ಕಿರುಕುಳದಿಂದ ಬೀದಿಗೆ ಬಿದ್ದ ಕುಟುಂಬವು ನ್ಯಾಯಕ್ಕಾಗಿ ತಹಸೀಲ್ದಾರ್  ಮೊರೆ ಹೋದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ. ನಂಜನಗೂಡು ತಾಲೂಕು ಹರದನಹಳ್ಳಿ ಗ್ರಾಮದ ರೇವಮ್ಮ ಎಂಬುವರ ಮನೆಗೆ ಫೈನಾನ್ಸ್ ಸಿಬ್ಬಂದಿ ಬೀಗ ಜಡಿದಿದ್ದು ಕಂಗಾಲಾದ ಕುಟುಂಬಸ್ಥರು ಇದೀಗ ನ್ಯಾಯ ಕೊಡಿಸಲು ತಹಶೀಲ್ದಾರ್   ಅವರಿಗೆ ಮನವಿ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ &#8216;ಇಕ್ವಿಟಿ ಸ್ಮಾಲ್ ಫೈನಾನ್ಸ್&#8217;  ನಲ್ಲಿ ರೇಖಾ ಹಾಗೂ ರೇವಮ್ಮ ಸಾಲ ಪಡೆದಿದ್ದರು. 3.15 ಲಕ್ಷ ಸಾಲ ಪಡೆದಿದ್ದು ಪ್ರತಿ [&#8230;]</p>
<p>The post <a href="https://www.justkannada.in/mysore-family-finance-harassment/">ಮೈಸೂರು: ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಬೀದಿಗೆ ಬಿದ್ದ ಕುಟುಂಬ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಜುಲೈ,7,2026 (<a href="http://www.justkannada.in">www.justkannada.in</a>):</strong> ಖಾಸಗಿ ಫೈನಾನ್ಸ್ ಕಿರುಕುಳದಿಂದ ಬೀದಿಗೆ ಬಿದ್ದ ಕುಟುಂಬವು ನ್ಯಾಯಕ್ಕಾಗಿ ತಹಸೀಲ್ದಾರ್  ಮೊರೆ ಹೋದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ನಂಜನಗೂಡು ತಾಲೂಕು ಹರದನಹಳ್ಳಿ ಗ್ರಾಮದ ರೇವಮ್ಮ ಎಂಬುವರ ಮನೆಗೆ ಫೈನಾನ್ಸ್ ಸಿಬ್ಬಂದಿ ಬೀಗ ಜಡಿದಿದ್ದು ಕಂಗಾಲಾದ ಕುಟುಂಬಸ್ಥರು ಇದೀಗ ನ್ಯಾಯ ಕೊಡಿಸಲು ತಹಶೀಲ್ದಾರ್   ಅವರಿಗೆ ಮನವಿ ಮಾಡಿದ್ದಾರೆ.<img loading="lazy" decoding="async" class="aligncenter size-full wp-image-156995" src="https://www.justkannada.in/wp-content/uploads/2026/07/finance.jpg" alt="" width="500" height="224" srcset="https://www.justkannada.in/wp-content/uploads/2026/07/finance.jpg 500w, https://www.justkannada.in/wp-content/uploads/2026/07/finance-300x134.jpg 300w, https://www.justkannada.in/wp-content/uploads/2026/07/finance-150x67.jpg 150w" sizes="auto, (max-width: 500px) 100vw, 500px" /></p>
<p>ಎರಡು ವರ್ಷಗಳ ಹಿಂದೆ &#8216;ಇಕ್ವಿಟಿ ಸ್ಮಾಲ್ ಫೈನಾನ್ಸ್&#8217;  ನಲ್ಲಿ ರೇಖಾ ಹಾಗೂ ರೇವಮ್ಮ ಸಾಲ ಪಡೆದಿದ್ದರು. 3.15 ಲಕ್ಷ ಸಾಲ ಪಡೆದಿದ್ದು ಪ್ರತಿ ತಿಂಗಳು 7 ಸಾವಿರ ಕಂತು ಪಾವತಿ ಮಾಡುತ್ತಿದ್ದರು. ಆದರೆ  ಅನಾರೋಗ್ಯದ ನಿಮಿತ್ತ ಎರಡು ತಿಂಗಳು ಕಂತು ಕಟ್ಟಿಲ್ಲ. ಈ ಬಗ್ಗೆ ಫೈನಾನ್ಸ್ ಗೆ ತೆರಳಿ ಕುಟುಂಬ ಸಮಯಾವಕಾಶ ಕೇಳಿದ್ದು, ಆದರೂ ಸಹ  ಅತ್ತೆ ರೇವಮ್ಮ ಹಾಗೂ ಸೊಸೆ ಮನೆಯಲ್ಲಿ ಇಲ್ಲದ ವೇಳೆ  ಫೈನಾನ್ಸ್ ಸಿಬ್ಬಂದಿಗಳು ಮನೆಗೆ ಬೀಗ  ಜಡಿದು ನೋಟಿಸ್ ಅಂಟಿಸಿದ್ದಾರೆ. ಈ ಮೂಲಕ ಸರ್ಕಾರದ ಆದೇಶ ಗಾಳಿಗೆ ತೂರಿದ್ದಾರೆ.<img loading="lazy" decoding="async" class="aligncenter size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="auto, (max-width: 1000px) 100vw, 1000px" /></p>
<p>ಮನೆಗೆ ಬೀಗ ಜಡಿದ ಹಿನ್ನೆಲೆಯಲ್ಲಿ ರೇವಮ್ಮ ಕುಟುಂಬದವರಿಗೆ 15 ದಿನಗಳಿಂದ ಮನೆ ಮುಂದಿನ ಜಗುಲಿಯೇ ಆಶ್ರಯತಾಣವಾಗಿದ್ದು ಇದೀಗ ನ್ಯಾಯ ಸಿಗದಿದ್ದರೆ ವಿಷ ಕುಡಿಯುವ ಎಚ್ಚರಿಕೆ ನೀಡಿದ್ದಾರೆ.</p>
<p>Key words: Mysore , Family, finance, harassment, Justice</p>
<p>The post <a href="https://www.justkannada.in/mysore-family-finance-harassment/">ಮೈಸೂರು: ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಬೀದಿಗೆ ಬಿದ್ದ ಕುಟುಂಬ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮಧ್ಯಸ್ಥಿಕೆ ಕೇಂದ್ರಗಳು ತ್ವರಿತ ನ್ಯಾಯದಾನಕ್ಕೆ ಪ್ರಮುಖ ದಾರಿಯಾಗಲಿವೆ-ನ್ಯಾ. ಎಸ್.ಜಿ ಪಂಡಿತ್</title>
		<link>https://www.justkannada.in/justice-s-g-pandit-2/</link>
		
		<dc:creator><![CDATA[prashanth]]></dc:creator>
		<pubDate>Sat, 04 Jul 2026 10:40:22 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Uncategorized]]></category>
		<category><![CDATA[Consumer Disputes Redressal Commission]]></category>
		<category><![CDATA[District]]></category>
		<category><![CDATA[justice]]></category>
		<category><![CDATA[Mediation centers]]></category>
		<category><![CDATA[Mysore.]]></category>
		<category><![CDATA[S. G. Pandit]]></category>
		<guid isPermaLink="false">https://www.justkannada.in/?p=156912</guid>

					<description><![CDATA[<p>ಮೈಸೂರು, ಜುಲೈ,4,2026 (www.justkannada.in): ಸಂಧಾನ ಅಥವಾ ಮಧ್ಯಸ್ಥಿಕೆ ಕೇಂದ್ರಗಳು ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ಮೂಲಕ ತ್ವರಿತ ನ್ಯಾಯದಾನಕ್ಕೆ ಪ್ರಮುಖ ದಾರಿಯಾಗಲಿವೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ಎಸ್.ಜಿ ಪಂಡಿತ್ ಅವರು ನುಡಿದರು. ಜಿಲ್ಲಾಡಳಿತ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಮೈಸೂರು ಮತ್ತು ಜಿಲ್ಲಾ ನ್ಯಾಯವಾದಿಗಳ ಸಂಘ, ಮೈಸೂರು. ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ  ಮೈಸೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಧ್ಯಸ್ಥಿಕೆ ಕೇಂದ್ರದ ನೂತನ ಕಟ್ಟಡವನ್ನು  ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ [&#8230;]</p>
<p>The post <a href="https://www.justkannada.in/justice-s-g-pandit-2/">ಮಧ್ಯಸ್ಥಿಕೆ ಕೇಂದ್ರಗಳು ತ್ವರಿತ ನ್ಯಾಯದಾನಕ್ಕೆ ಪ್ರಮುಖ ದಾರಿಯಾಗಲಿವೆ-ನ್ಯಾ. ಎಸ್.ಜಿ ಪಂಡಿತ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು, ಜುಲೈ,4,2026 (<a href="http://www.justkannada.in">www.justkannada.in</a>):</strong> ಸಂಧಾನ ಅಥವಾ ಮಧ್ಯಸ್ಥಿಕೆ ಕೇಂದ್ರಗಳು ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ಮೂಲಕ ತ್ವರಿತ ನ್ಯಾಯದಾನಕ್ಕೆ ಪ್ರಮುಖ ದಾರಿಯಾಗಲಿವೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ಎಸ್.ಜಿ ಪಂಡಿತ್ ಅವರು ನುಡಿದರು.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಜಿಲ್ಲಾಡಳಿತ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಮೈಸೂರು ಮತ್ತು ಜಿಲ್ಲಾ ನ್ಯಾಯವಾದಿಗಳ ಸಂಘ, ಮೈಸೂರು. ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ  ಮೈಸೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಧ್ಯಸ್ಥಿಕೆ ಕೇಂದ್ರದ ನೂತನ ಕಟ್ಟಡವನ್ನು  ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಎಸ್.ಜಿ ಪಂಡಿತ್  ಅವರು ಉದ್ಘಾಟಿಸಿದರು.</p>
<p>ನಂತರ ಮಾತನಾಡಿ ಸಂಧಾನ ಅಥವಾ ಮಧ್ಯಸ್ಥಿಕೆ ಎಂಬುದು ನಮ್ಮ ದೇಶಕ್ಕೆ ಹೊಸದೇನಲ್ಲ. ಮಹಾಭಾರತದ ಕಾಲದ ಕೃಷ್ಣ ಸಂಧಾನದ ದಿನಗಳಿಂದಲೂ ನಮ್ಮ ಸಂಸ್ಕೃತಿಯಲ್ಲಿ ಈ ಪದ್ಧತಿಯನ್ನು ನಾವು ಅಳವಡಿಸಿಕೊಂಡು ಬಂದಿದ್ದೇವೆ . ಇಂದು ನ್ಯಾಯಾಲಯಗಳ ಮೇಲೆ ಎಷ್ಟೊಂದು ಒತ್ತಡವಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಸಂಧಾನ ಅಥವಾ ಮಧ್ಯಸ್ಥಿಕೆ ಕೇಂದ್ರಗಳು ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ಮೂಲಕ ತ್ವರಿತ ನ್ಯಾಯದಾನಕ್ಕೆ ಪ್ರಮುಖ ದಾರಿಯಾಗಲಿವೆ ಎಂದರು.<img loading="lazy" decoding="async" class="aligncenter size-full wp-image-154862" src="https://www.justkannada.in/wp-content/uploads/2026/05/BDA_Adv.jpeg" alt="" width="1598" height="197" srcset="https://www.justkannada.in/wp-content/uploads/2026/05/BDA_Adv.jpeg 1598w, https://www.justkannada.in/wp-content/uploads/2026/05/BDA_Adv-300x37.jpeg 300w, https://www.justkannada.in/wp-content/uploads/2026/05/BDA_Adv-1024x126.jpeg 1024w, https://www.justkannada.in/wp-content/uploads/2026/05/BDA_Adv-768x95.jpeg 768w, https://www.justkannada.in/wp-content/uploads/2026/05/BDA_Adv-1536x189.jpeg 1536w, https://www.justkannada.in/wp-content/uploads/2026/05/BDA_Adv-150x18.jpeg 150w, https://www.justkannada.in/wp-content/uploads/2026/05/BDA_Adv-696x86.jpeg 696w, https://www.justkannada.in/wp-content/uploads/2026/05/BDA_Adv-1068x132.jpeg 1068w, https://www.justkannada.in/wp-content/uploads/2026/05/BDA_Adv-600x74.jpeg 600w" sizes="auto, (max-width: 1598px) 100vw, 1598px" /></p>
<p>ಯಾವುದೇ ಕಕ್ಷಿದಾರರು ಆರಂಭದಲ್ಲಿ ತಮ್ಮ ವಕೀಲರು ಹೇಳಿದಂತೆ ಕೇಳುವ ಪರಿಸ್ಥಿತಿಯಲ್ಲಿರುತ್ತಾರೆ ಮತ್ತು ವಕೀಲರನ್ನೇ ದೇವರೆಂದು ಭಾವಿಸುತ್ತಾರೆ. ಗ್ರಾಹಕರ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ, ವಕೀಲರು ಕಕ್ಷಿದಾರರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಅವರಿಗೆ ಮೊದಲ ಆದ್ಯತೆಯಾಗಿ ಮಧ್ಯಸ್ಥಿಕೆ ಅಥವಾ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಸಹಕಾರಿಯಾಗಬೇಕು ಎಂದು ತಿಳಿಸಿದರು.</p>
<p>ಸಂಧಾನದಿಂದ ಪ್ರಕರಣಗಳು ಎಷ್ಟು ಬೇಗ ತೀರ್ಮಾನವಾಗುತ್ತವೆ ಮತ್ತು ಇದರಿಂದ ಅವರಿಗೆ ಏನೆಲ್ಲಾ ಉಪಯೋಗಗಳಿವೆ ಎಂಬುದನ್ನು ವಕೀಲರು ಮನವರಿಕೆ ಮಾಡಿಕೊಟ್ಟರೆ, ಕಕ್ಷಿದಾರರು ಖಂಡಿತ ಒಪ್ಪಿಕೊಳ್ಳುತ್ತಾರೆ ಹಾಗೂ ಪರಿಹಾರ ಸುಲಭವಾಗುತ್ತದೆ ಎಂದು ಹೇಳಿದರು.<img loading="lazy" decoding="async" class="aligncenter size-full wp-image-156914" src="https://www.justkannada.in/wp-content/uploads/2026/07/justice.jpg-di.jpg" alt="" width="500" height="225" srcset="https://www.justkannada.in/wp-content/uploads/2026/07/justice.jpg-di.jpg 500w, https://www.justkannada.in/wp-content/uploads/2026/07/justice.jpg-di-300x135.jpg 300w, https://www.justkannada.in/wp-content/uploads/2026/07/justice.jpg-di-150x68.jpg 150w" sizes="auto, (max-width: 500px) 100vw, 500px" /></p>
<p>ಮೈಸೂರಿನಲ್ಲಿ ಈಗ ಸುಸಜ್ಜಿತವಾದ ನೂತನ ಮಧ್ಯಸ್ಥಿಕೆ ಕೇಂದ್ರ ಉದ್ಘಾಟನೆಯಾಗಿದೆ. ಸಾರ್ವಜನಿಕರು ಹಾಗೂ ನ್ಯಾಯವಾದಿಗಳು ಈ ಕೇಂದ್ರದ ಸದುಪಯೋಗವನ್ನು ಪಡೆದುಕೊಳ್ಳಬೇಕು  ಎಂದು ನ್ಯಾ. ಎಸ್.ಜಿ ಪಂಡಿತ್ ತಿಳಿಸಿದರು.<img loading="lazy" decoding="async" class="aligncenter size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="auto, (max-width: 1000px) 100vw, 1000px" /></p>
<p>ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ  ಅಧ್ಯಕ್ಷ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ರಿಜಿಸ್ಟ್ರಾರ್ ಮತ್ತು ಆಡಳಿತಾಧಿಕಾರಿ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ, ಜಿಲ್ಲಾಡಳಿತದ ಅಧಿಕಾರಿಗಳು, ಗ್ರಾಹಕ ಆಯೋಗದ ಪದಾಧಿಕಾರಿಗಳು ಹಾಗೂ ಮೈಸೂರು ಜಿಲ್ಲಾ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಮತ್ತು ವಕೀಲರು ಉಪಸ್ಥಿತರಿದ್ದರು.</p>
<p>Key words: Mysore, District, Consumer Disputes Redressal Commission, Mediation centers, Justice, S.G. Pandit</p>
<p>The post <a href="https://www.justkannada.in/justice-s-g-pandit-2/">ಮಧ್ಯಸ್ಥಿಕೆ ಕೇಂದ್ರಗಳು ತ್ವರಿತ ನ್ಯಾಯದಾನಕ್ಕೆ ಪ್ರಮುಖ ದಾರಿಯಾಗಲಿವೆ-ನ್ಯಾ. ಎಸ್.ಜಿ ಪಂಡಿತ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಪ್ರತಿಯೊಂದು ಶಾಲೆಯಲ್ಲೂ ಪರಿಸರ ಸಂರಕ್ಷಣೆ ಜಾಗೃತಿ ಅತ್ಯಗತ್ಯ: ನ್ಯಾ. ಎಸ್. ಜಿ. ಪಂಡಿತ್</title>
		<link>https://www.justkannada.in/justice-s-g-pandit/</link>
		
		<dc:creator><![CDATA[prashanth]]></dc:creator>
		<pubDate>Sat, 04 Jul 2026 09:32:57 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[awareness]]></category>
		<category><![CDATA[environmental]]></category>
		<category><![CDATA[justice]]></category>
		<category><![CDATA[Protection]]></category>
		<category><![CDATA[S. G. Pandit]]></category>
		<category><![CDATA[school]]></category>
		<guid isPermaLink="false">https://www.justkannada.in/?p=156904</guid>

					<description><![CDATA[<p>ಮೈಸೂರು, ಜುಲೈ, 04,2026 (www.justkannada.in): ಇಂದಿನ ದಿನಗಳಲ್ಲಿ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪರಿಸರ ದಿನಾಚರಣೆ ಹಾಗೂ ಗಿಡ ನೆಡುವ ಕೆಲಸಗಳು ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಪ್ರತಿಯೊಂದು ಶಾಲೆಯನ್ನೂ ತಲುಪಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಜಿ. ಪಂಡಿತ್ ಅವರು ಹೇಳಿದರು. ಇಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಅರಣ್ಯ ಇಲಾಖೆ, ವಕೀಲರ [&#8230;]</p>
<p>The post <a href="https://www.justkannada.in/justice-s-g-pandit/">ಪ್ರತಿಯೊಂದು ಶಾಲೆಯಲ್ಲೂ ಪರಿಸರ ಸಂರಕ್ಷಣೆ ಜಾಗೃತಿ ಅತ್ಯಗತ್ಯ: ನ್ಯಾ. ಎಸ್. ಜಿ. ಪಂಡಿತ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು, ಜುಲೈ, 04,2026 (<a href="http://www.justkannada.in">www.justkannada.in</a>):</strong> ಇಂದಿನ ದಿನಗಳಲ್ಲಿ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪರಿಸರ ದಿನಾಚರಣೆ ಹಾಗೂ ಗಿಡ ನೆಡುವ ಕೆಲಸಗಳು ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಪ್ರತಿಯೊಂದು ಶಾಲೆಯನ್ನೂ ತಲುಪಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಜಿ. ಪಂಡಿತ್ ಅವರು ಹೇಳಿದರು.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಇಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಅರಣ್ಯ ಇಲಾಖೆ, ವಕೀಲರ ಸಂಘ, heart fullness institute, mysuru ಹಾಗೂ ತೋಟಗಾರಿಕಾ ಮಹಾವಿದ್ಯಾಲಯ, ಮೈಸೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಒಂದು ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ತೋಟಗಾರಿಕಾ ಮಹಾವಿದ್ಯಾಲಯ, ಯಲಚನಹಳ್ಳಿ, ಇಲವಾಲ ಇಲ್ಲಿ ಚಾಲನೆ (ಒಂದು ಮರ ನೂರಾರು ಉಸಿರು) ನೀಡಿ ನ್ಯಾ. ಎಸ್. ಜಿ. ಪಂಡಿತ್ ಅವರು ಮಾತನಾಡಿದರು.</p>
<p>ಇಂದಿನ ಮಾನವ ಕುಲವು ತನ್ನ ಮೂಲಭೂತ ಕರ್ತವ್ಯಗಳನ್ನೇ ಮರೆತುಬಿಟ್ಟಿದೆ. ಪ್ರತಿಯೊಂದನ್ನೂ ನೆನಪಿಸಲು ನಮಗೊಂದು ದಿನಾಚರಣೆಯ ಅಗತ್ಯ ಬೀಳುತ್ತಿದೆ. ಆಚರಣೆಯ ದಿನ ಮಾತ್ರ ಪರಿಸರ ನೆನಪಿರುತ್ತದೆ, ಆದರೆ ಮರುದಿನವೇ ನಾವು ಅದನ್ನು ಮರೆತುಬಿಡುತ್ತೇವೆ. ದಿನನಿತ್ಯವೂ ಕಾಡುತ್ತಿರುವ ಪರಿಸರ ಅಸಮತೋಲನ ಮತ್ತು ತೀವ್ರ ಉಷ್ಣ ಅಲೆಗಳಿಗೆ  ಮಾನವನ ಸ್ವಾರ್ಥವೇ ಕಾರಣ. ಮಾನವನು ತನ್ನ ವೈಯಕ್ತಿಕ ಲಾಭಕ್ಕಾಗಿ ಮರಗಳನ್ನು ಕಡಿಯುತ್ತಿರುವುದರ ದುಷ್ಪರಿಣಾಮವನ್ನು ನಾವೀಗ ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದೇವೆ ಎಂದರು.<img loading="lazy" decoding="async" class="aligncenter size-full wp-image-156905" src="https://www.justkannada.in/wp-content/uploads/2026/07/justice.jpg" alt="" width="500" height="333" srcset="https://www.justkannada.in/wp-content/uploads/2026/07/justice.jpg 500w, https://www.justkannada.in/wp-content/uploads/2026/07/justice-300x200.jpg 300w, https://www.justkannada.in/wp-content/uploads/2026/07/justice-150x100.jpg 150w" sizes="auto, (max-width: 500px) 100vw, 500px" /></p>
<p>ನಾವೆಲ್ಲರೂ ನಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಅಷ್ಟೇ ಜವಾಬ್ದಾರಿಯಿಂದ ನಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದೇವಾ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಂವಿಧಾನದ ಆರ್ಟಿಕಲ್ 51 ರ ಅಡಿಯಲ್ಲಿ ಪರಿಸರ ಸಂರಕ್ಷಣೆ ಮತ್ತು ಅರಣ್ಯವನ್ನು ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಕರ್ತವ್ಯವನ್ನು ನಾವು ಪ್ರಾಮಾಣಿಕವಾಗಿ ಪಾಲಿಸುತ್ತಿದ್ದೇವಾ ಎಂಬ ಪ್ರಶ್ನೆಗೆ ನಾವೇ ಉತ್ತರ ಕಂಡುಕೊಳ್ಳಬೇಕಿದೆ ಎಂದರು.</p>
<p>ಇಂದು ನಾವೆಲ್ಲರೂ ಸೇರಿ ಉತ್ಸಾಹದಿಂದ ಗಿಡಗಳನ್ನು ನೆಟ್ಟು ಮನೆಗೆ ಮರಳುತ್ತೇವೆ. ಆದರೆ ಆ ಸಸಿಗಳನ್ನು ಮುಂದೆ ಹೇಗೆ ಪೋಷಿಸುತ್ತೇವೆ ಎಂಬುದು ಅತ್ಯಂತ ಮುಖ್ಯ. ನಮ್ಮ ಮಕ್ಕಳನ್ನು 10-20 ವರ್ಷಗಳ ಕಾಲ ಪ್ರೀತಿಯಿಂದ ಸಾಕಿ ಬೆಳೆಸುವ ನಾವು, ಕನಿಷ್ಠ ಒಂದು ವರ್ಷವಾದರೂ ನೆಟ್ಟ ಗಿಡವನ್ನು ನೋಡಿಕೊಳ್ಳಲು ಸಾಧ್ಯವಿಲ್ಲವೇ ಎಂದು ಹೇಳಿದರು.<img loading="lazy" decoding="async" class="aligncenter size-full wp-image-154862" src="https://www.justkannada.in/wp-content/uploads/2026/05/BDA_Adv.jpeg" alt="" width="1598" height="197" srcset="https://www.justkannada.in/wp-content/uploads/2026/05/BDA_Adv.jpeg 1598w, https://www.justkannada.in/wp-content/uploads/2026/05/BDA_Adv-300x37.jpeg 300w, https://www.justkannada.in/wp-content/uploads/2026/05/BDA_Adv-1024x126.jpeg 1024w, https://www.justkannada.in/wp-content/uploads/2026/05/BDA_Adv-768x95.jpeg 768w, https://www.justkannada.in/wp-content/uploads/2026/05/BDA_Adv-1536x189.jpeg 1536w, https://www.justkannada.in/wp-content/uploads/2026/05/BDA_Adv-150x18.jpeg 150w, https://www.justkannada.in/wp-content/uploads/2026/05/BDA_Adv-696x86.jpeg 696w, https://www.justkannada.in/wp-content/uploads/2026/05/BDA_Adv-1068x132.jpeg 1068w, https://www.justkannada.in/wp-content/uploads/2026/05/BDA_Adv-600x74.jpeg 600w" sizes="auto, (max-width: 1598px) 100vw, 1598px" /></p>
<p>ಹಾರ್ಟ್‌ ಫುಲ್‌ ನೆಸ್ ಇನ್‌ ಸ್ಟಿಟ್ಯೂಟ್ ನೆಟ್ಟ ಸಸಿಗಳನ್ನು ಮುಂದಿನ ಮೂರು ವರ್ಷಗಳ ಕಾಲ ನಿರ್ವಹಣೆ ಮಾಡುವುದಾಗಿ ಭರವಸೆ ನೀಡಿರುವುದನ್ನು ಶ್ಲಾಘಿಸಿದ ನ್ಯಾ. ಎಸ್. ಜಿ. ಪಂಡಿತ್, ಪ್ರತಿ ವರ್ಷ ಒಂದು ಲಕ್ಷ ಸಸಿಗಳನ್ನು ನೆಟ್ಟು, ಅವುಗಳನ್ನು ಮೂರು ವರ್ಷಗಳ ಕಾಲ ಪೋಷಿಸಿ ಬೆಳೆಸಿದರೆ, ಅದು ಪರಿಸರಕ್ಕೆ ನಾವು ನೀಡುವ ಅತ್ಯಂತ ದೊಡ್ಡ ಕೊಡುಗೆಯಾಗುತ್ತದೆ ಎಂದು ಹೇಳಿದರು.</p>
<p>ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ವಿಷ್ಣುವರ್ಧನ ಅವರು ಮಾತನಾಡಿ  ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಿಂದಾಗಿ ಇಂದು ಪ್ರಕೃತಿಯ ಸಮತೋಲನ ತಪ್ಪುತ್ತಿದ್ದು, ಕೃಷಿ ಹಾಗೂ ತೋಟಗಾರಿಕಾ ವಲಯಗಳು ಭೀತಿ ಎದುರಿಸುತ್ತಿವೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಇಂದು ಪರಿಸರ ಸಮತೋಲನ ತಪ್ಪುತ್ತಿದೆ. ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣವು ಇರಬೇಕಾದ ಮಿತಿಗಿಂತ ಅಧಿಕ ಪಟ್ಟು ಹೆಚ್ಚಾಗಿದೆ. ಇದರ ಪರಿಣಾಮವಾಗಿ ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಬರಗಾಲ ಹಾಗೂ ಬಿಸಿಲಿನ ಬೇಗೆಯಂತಹ  ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ಇದು ನೇರವಾಗಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಉತ್ಪಾದನೆ ಹಾಗೂ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.</p>
<p>ಹವಾಮಾನ ಬದಲಾವಣೆಯಿಂದಾಗಿ ತೋಟಗಾರಿಕಾ ಬೆಳೆಗಳ ಜೈವಿಕ ಕ್ರಿಯೆಯಲ್ಲಿ ಏರುಪೇರಾಗುತ್ತಿದೆ. ಸಿ.ಪಿ.ಸಿ.ಆರ್.ಐ  ವರದಿ ಪ್ರಕಾರ, ಕೇವಲ 1 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ಏರಿಕೆಯಿಂದಾಗಿ ತೆಂಗು ಇಳುವರಿಯಲ್ಲಿ ಶೇ. 20 ರಷ್ಟು ಕುಸಿತ ಕಂಡುಬಂದಿದೆ. ಇನ್ನು ಮಾವಿನ ಬೆಳೆಯಲ್ಲೂ ಸಹ ಡಿಸೆಂಬರ್ ಜನವರಿಯಲ್ಲಿ ಬರಬೇಕಾದ ಹೂವು, ಈಗ ಜೂನ್-ಜುಲೈ ತಿಂಗಳಲ್ಲೂ ಬರುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದು ರೈತರ ಆದಾಯಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ಹೇಳಿದರು.<img loading="lazy" decoding="async" class="aligncenter size-full wp-image-146128" src="https://www.justkannada.in/wp-content/uploads/2025/10/jk02_new.jpg" alt="" width="1000" height="123" srcset="https://www.justkannada.in/wp-content/uploads/2025/10/jk02_new.jpg 1000w, https://www.justkannada.in/wp-content/uploads/2025/10/jk02_new-300x37.jpg 300w, https://www.justkannada.in/wp-content/uploads/2025/10/jk02_new-768x94.jpg 768w, https://www.justkannada.in/wp-content/uploads/2025/10/jk02_new-150x18.jpg 150w, https://www.justkannada.in/wp-content/uploads/2025/10/jk02_new-696x86.jpg 696w, https://www.justkannada.in/wp-content/uploads/2025/10/jk02_new-600x74.jpg 600w" sizes="auto, (max-width: 1000px) 100vw, 1000px" /></p>
<p>ನಾವು ಕೇವಲ ಗಿಡ ನೆಡುವುದಷ್ಟೇ ಅಲ್ಲ, ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಬೇಕಿದೆ. ಇಂದು ನಾವು ಕುಡಿಯುವ ನೀರು, ಉಸಿರಾಡುವ ಗಾಳಿ ಹಾಗೂ ತಿನ್ನುವ ಆಹಾರವನ್ನು ವಿಷವಾಗಿಸಿಕೊಂಡಿದ್ದೇವೆ. ಕೃಷಿಯಲ್ಲಿ ಮಿತಿಮೀರಿದ ರಾಸಾಯನಿಕಗಳ ಬಳಕೆಯಿಂದಾಗಿ ಮಣ್ಣಿನಲ್ಲಿರುವ ಉಪಕಾರಿ ಸೂಕ್ಷ್ಮಜೀವಿಗಳು  ನಾಶವಾಗಿ, ಭೂಮಿ ಬಂಜರಾಗುತ್ತಿದೆ. ನೀರನ್ನು ಮರುಬಳಕೆ ಮಾಡುವುದು ಮತ್ತು ಜಾಗರೂಕತೆಯಿಂದ ಬಳಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.</p>
<p>ದೇಶದಲ್ಲಿ ಕೃಷಿ ಭೂಮಿಯ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ, ಆದರೆ ಜನಸಂಖ್ಯೆ ಸ್ಫೋಟಗೊಳ್ಳುತ್ತಿದೆ. 1950ರಲ್ಲಿ ನಮ್ಮ ದೇಶದ ಜನಸಂಖ್ಯೆ 40 ಕೋಟಿಯಿದ್ದಾಗ ಆಹಾರ ಉತ್ಪಾದನೆ 50 ಮಿಲಿಯನ್ ಟನ್ ಇತ್ತು. ಇಂದು ಜನಸಂಖ್ಯೆ 150 ಕೋಟಿ ತಲುಪಿದ್ದರೂ, ನಮ್ಮ ಆಹಾರ ಉತ್ಪಾದನೆ 350 ಮಿಲಿಯನ್ ಟನ್‌ಗೆ ಏರಿಕೆಯಾಗಿದೆ.  ಮುಂದಿನ ದಿನಗಳಲ್ಲಿ  ಸಮತೋಲನ ಕಾಯ್ದುಕೊಳ್ಳಲು ಪರಿಸರ ರಕ್ಷಣೆ ಅತ್ಯಗತ್ಯ ಎಂದು ಹೇಳಿದರು.<img loading="lazy" decoding="async" class="aligncenter size-full wp-image-156905" src="https://www.justkannada.in/wp-content/uploads/2026/07/justice.jpg" alt="" width="500" height="333" srcset="https://www.justkannada.in/wp-content/uploads/2026/07/justice.jpg 500w, https://www.justkannada.in/wp-content/uploads/2026/07/justice-300x200.jpg 300w, https://www.justkannada.in/wp-content/uploads/2026/07/justice-150x100.jpg 150w" sizes="auto, (max-width: 500px) 100vw, 500px" /></p>
<p>ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರದ ಅಧ್ಯಕ್ಷರರಾದ ಉಷಾರಾಣಿ, , ಡಿ.ಸಿ.ಎಫ್. ಪರಮೇಶ ಕೆ., ವಕೀಲರ ಸಂಘದ ಅಧ್ಯಕ್ಷಎಸ್. ಲೋಕೇಶ್, Regional Felicitator, Heartfulness Institute ನ ಕೆ. ಮಧುಸೂಧನ್, ತೋಟಗಾರಿಕಾ ಮಹಾವಿದ್ಯಾಲಯ ಡೀನ್ ಚಂದ್ರಶೇಖರ್ ಹಂಚಿನಮನಿ ಅವರು ಉಪಸ್ಥಿತರಿದ್ದರು.</p>
<p>Key words: Environmental, protection, awareness, school, Justice, S. G. Pandit</p>
<p>The post <a href="https://www.justkannada.in/justice-s-g-pandit/">ಪ್ರತಿಯೊಂದು ಶಾಲೆಯಲ್ಲೂ ಪರಿಸರ ಸಂರಕ್ಷಣೆ ಜಾಗೃತಿ ಅತ್ಯಗತ್ಯ: ನ್ಯಾ. ಎಸ್. ಜಿ. ಪಂಡಿತ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ</title>
		<link>https://www.justkannada.in/justice-yashwant-verma-resigns/</link>
		
		<dc:creator><![CDATA[prashanth]]></dc:creator>
		<pubDate>Fri, 10 Apr 2026 08:15:03 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Allahabad]]></category>
		<category><![CDATA[High Court]]></category>
		<category><![CDATA[justice]]></category>
		<category><![CDATA[resigns]]></category>
		<category><![CDATA[Yashwant Verma]]></category>
		<guid isPermaLink="false">https://www.justkannada.in/?p=153565</guid>

					<description><![CDATA[<p>ಅಲಹಾಬಾದ್,ಏಪ್ರಿಲ್,10,2026 (www.justkannada.in): ನಿವಾಸದಲ್ಲಿ ಬೆಂಕಿ ಹತ್ತಿಕೊಂಡಿದ್ದ ವೇಳೆ  ಭಾರೀ ಪ್ರಮಾಣದ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಂಬಂಧಿಸಿದ ಆರೋಪಗಳ ಆಂತರಿಕ ವಿಚಾರಣೆಯನ್ನು ಎದುರಿಸುತ್ತಿರುವ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ದಿಢೀರ್ ರಾಜೀನಾಮೆ ನೀಡಿದ್ದಾರೆ. ನಿವಾಸದಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಪತ್ತೆಯಾದ ವಿವಾದದ ನಂತರ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು.  ಇದೀಗ ರಾಷ್ಟ್ರಪತಿ ಅವರಿಗೆ  ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ನ್ಯಾಯಮೂರ್ತಿ ಯಶವಂತ್ ವರ್ಮಾ [&#8230;]</p>
<p>The post <a href="https://www.justkannada.in/justice-yashwant-verma-resigns/">ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಅಲಹಾಬಾದ್,ಏಪ್ರಿಲ್,10,2026 (<a href="http://www.justkannada.in">www.justkannada.in</a>):</strong> ನಿವಾಸದಲ್ಲಿ ಬೆಂಕಿ ಹತ್ತಿಕೊಂಡಿದ್ದ ವೇಳೆ  ಭಾರೀ ಪ್ರಮಾಣದ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಂಬಂಧಿಸಿದ ಆರೋಪಗಳ ಆಂತರಿಕ ವಿಚಾರಣೆಯನ್ನು ಎದುರಿಸುತ್ತಿರುವ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ದಿಢೀರ್ ರಾಜೀನಾಮೆ ನೀಡಿದ್ದಾರೆ. <img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ನಿವಾಸದಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಪತ್ತೆಯಾದ ವಿವಾದದ ನಂತರ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು.  ಇದೀಗ ರಾಷ್ಟ್ರಪತಿ ಅವರಿಗೆ  ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.</p>
<p>ನ್ಯಾಯಮೂರ್ತಿ ಯಶವಂತ್ ವರ್ಮಾ  ಅವರ ನಿವಾಸಕ್ಕೆ 2025 ಮಾರ್ಚ್ 14 ರಂದು ಬೆಂಕಿಯ ಹೊತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ನಿವಾಸದಲ್ಲಿ ದೊಡ್ಡ ಮೊತ್ತದ ನಗದು ಪತ್ತೆಯಾಗಿತ್ತು. ಈ ವಿಷಯದ ಕುರಿತು ಸುಪ್ರೀಂ ಕೋರ್ಟ್ ತನಿಖಾ ವರದಿಯನ್ನು ಸಹ ಪ್ರಕಟಿಸಿತ್ತು. 2025 ಜುಲೈ 21 ರಂದು ಲೋಕಸಭೆ ಮತ್ತು ರಾಜ್ಯಸಭೆಯ 200 ಕ್ಕೂ ಹೆಚ್ಚು ಸಂಸದರು ಅವರನ್ನು ದೋಷಾರೋಪಣೆ ಮಾಡಲು ಸಂಸತ್ತಿನಲ್ಲಿ ಒಂದು ನಿರ್ಣಯಕ್ಕೆ ಸಹಿ ಹಾಕಿದ್ದರು. 2025 ಆಗಸ್ಟ್ 12 ರಂದು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ವರ್ಮಾ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲು ಮೂವರು ಸದಸ್ಯರ ತನಿಖಾ ಸಮಿತಿ ರಚಿಸಿದ್ದರು.</p>
<p>ಈಗ ದೋಷಾರೋಪಣೆಗಳ ಪ್ರಕ್ರಿಯೆಗಳ ನಡುವೆಯೇ ಯಶವಂತ ವರ್ಮಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.</p>
<p>Key words: Allahabad, High Court, Justice, Yashwant Verma, resigns</p>
<p>The post <a href="https://www.justkannada.in/justice-yashwant-verma-resigns/">ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ದುರ್ಬಲರಿಗೆ ಅನ್ಯಾಯವಾಗದಂತೆ ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಒದಗಿಸುವುದು ಪೊಲೀಸರ ಕರ್ತವ್ಯ- ಸಿಎಂ ಸಿದ್ದರಾಮಯ್ಯ</title>
		<link>https://www.justkannada.in/cm-siddaramaiah-391/</link>
		
		<dc:creator><![CDATA[prashanth]]></dc:creator>
		<pubDate>Sat, 17 Jan 2026 11:28:14 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[CM Siddaramaiah]]></category>
		<category><![CDATA[duty]]></category>
		<category><![CDATA[Equal]]></category>
		<category><![CDATA[justice]]></category>
		<category><![CDATA[police]]></category>
		<guid isPermaLink="false">https://www.justkannada.in/?p=150358</guid>

					<description><![CDATA[<p>ಬೆಂಗಳೂರು,ಜನವರಿ,17,2026 (www.justkannada.in): ದುರ್ಬಲರು, ಪರಿಶಿಷ್ಟ ಜಾತಿ, ವರ್ಗದ ಜನರು, ಧಾರ್ಮಿಕ ಅಲ್ಪಸಂಖ್ಯಾತರು ರಕ್ಷಣೆ ಎಲ್ಲರ ಹೊಣೆಯಾಗಿದೆ. ದುರ್ಬಲರು ಯಾವುದೇ ಕಾರಣಕ್ಕೂ ಅನ್ಯಾಯಕ್ಕೆ ಒಳಗಾಗಬಾರದು. ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಒದಗಿಸುವುದು ಪೊಲೀಸರ ಕರ್ತವ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು. ಇಂದು ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಮಾಜದಲ್ಲಿ ಶಾಂತಿ ನೆಮ್ಮದಿ ಕಾಪಾಡುವ ಗುರುತರವಾದ ಕಾರ್ಯವನ್ನು ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ನಡೆಸುತ್ತಿದೆ. ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ರಕ್ಷಣೆಯನ್ನು ಒದಗಿಸಿದೆ. ಎಲ್ಲರಿಗೂ ಕಾನೂನು ಒಂದೇ. [&#8230;]</p>
<p>The post <a href="https://www.justkannada.in/cm-siddaramaiah-391/">ದುರ್ಬಲರಿಗೆ ಅನ್ಯಾಯವಾಗದಂತೆ ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಒದಗಿಸುವುದು ಪೊಲೀಸರ ಕರ್ತವ್ಯ- ಸಿಎಂ ಸಿದ್ದರಾಮಯ್ಯ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಜನವರಿ,17,2026 (<a href="http://www.justkannada.in">www.justkannada.in</a>):</strong> ದುರ್ಬಲರು, ಪರಿಶಿಷ್ಟ ಜಾತಿ, ವರ್ಗದ ಜನರು, ಧಾರ್ಮಿಕ ಅಲ್ಪಸಂಖ್ಯಾತರು ರಕ್ಷಣೆ ಎಲ್ಲರ ಹೊಣೆಯಾಗಿದೆ. ದುರ್ಬಲರು ಯಾವುದೇ ಕಾರಣಕ್ಕೂ ಅನ್ಯಾಯಕ್ಕೆ ಒಳಗಾಗಬಾರದು. ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಒದಗಿಸುವುದು ಪೊಲೀಸರ ಕರ್ತವ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಇಂದು ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಮಾಜದಲ್ಲಿ ಶಾಂತಿ ನೆಮ್ಮದಿ ಕಾಪಾಡುವ ಗುರುತರವಾದ ಕಾರ್ಯವನ್ನು ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ನಡೆಸುತ್ತಿದೆ. ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ರಕ್ಷಣೆಯನ್ನು ಒದಗಿಸಿದೆ. ಎಲ್ಲರಿಗೂ ಕಾನೂನು ಒಂದೇ. ಯಾರು ತಪ್ಪು ಮಾಡಿದರೂ ಅದು ತಪ್ಪೇ. ಬಲಾಢ್ಯರು, ಸಮಾಜ ಘಾತುಕ ಶಕ್ತಿಗಳಿಗೆ ಯಾವುದೇ ಕಾರಣಕ್ಕೂ ಮಣೆ ಹಾಕಬಾರದು. ದುರ್ಬಲರು, ಪರಿಶಿಷ್ಟ ಜಾತಿ, ವರ್ಗದ ಜನರು, ಧಾರ್ಮಿಕ ಅಲ್ಪಸಂಖ್ಯಾತರು ರಕ್ಷಣೆ ಎಲ್ಲರ ಹೊಣೆ. ದುರ್ಬಲರು ಯಾವುದೇ ಕಾರಣಕ್ಕೂ ಅನ್ಯಾಯಕ್ಕೆ ಒಳಗಾಗಬಾರದು. ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಒದಗಿಸುವುದು ಪೊಲೀಸರ ಕರ್ತವ್ಯವಾಗಿದೆ ಎಂದರು.</p>
<p>ತಹಶೀಲ್ದಾರ್ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಆ ತಾಲೂಕಿನಲ್ಲಿ ಜನರು ನೆಮ್ಮದಿಯಿಂದ ಇರಲು ಸಾಧ್ಯ. ಇದೇ ರೀತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಎಸ್ಪಿ ಮತ್ತು ಸಿಇಒ ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಆ ಜಿಲ್ಲೆಯ ಜನರು ನೆಮ್ಮದಿಯಿಂದ ಇರಲು ಸಾಧ್ಯ. ಆದರೆ ಕೆಲವು ಪೊಲೀಸ್ ಠಾಣೆಗಳಲ್ಲಿ ಕೆಲವು ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದ ಕಾರಣಕ್ಕೆ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಕೊಲೆ, ಸುಲಿಗೆ, ಡಕಾಯಿತಿ, ದರೋಡೆ ಪ್ರಕಣಗಳ ಸಂಖ್ಯೆಯಲ್ಲಿ ಕಳೆದ ಒಂದು ವರ್ಷದಲ್ಲಿ ಕಡಿಮೆಯಾಗಿದೆ. ಆದರೆ ಸೈಬರ್ ಅಪರಾಧ, ಡ್ರಗ್ಸ್ ಚಟುವಟಿಕೆಗಳು ಹೆಚ್ಚಾಗಿದ್ದು, ಅದನ್ನು ಮಟ್ಟ ಹಾಕಲು ಕಠಿಣ ಕ್ರಮಗಳನ್ನು ಜರುಗಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.</p>
<p>ನಮ್ಮ ರಾಜ್ಯದಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ಕನ್ವಿಕ್ಷನ್ ದರ ಕಡಿಮೆಯಿದೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಶಿಕ್ಷೆಯನ್ನು ಖಾತ್ರಿಪಡಿಸುವಲ್ಲಿ ಪೊಲೀಸರ ಪಾತ್ರ ಮುಖ್ಯವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಕನ್ವಿಕ್ಷನ್ ಪ್ರಮಾಣ ಕಳೆದ ವರ್ಷ ಶೇ.3ರಷ್ಟಿತ್ತು ಈಗ ಶೇ.12 ಕ್ಕೆ ಸುಧಾರಿಸಿದ್ದು, ಇದನ್ನು ಇನ್ನಷ್ಟು ಉತ್ತಮಪಡಿಸಬೇಕಿದೆ. ಅಪರಾಧವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲದಿದ್ದರೂ, ಅಪರಾಧ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ. ಆದರೆ ಕಳೆದ ಸಾಲಿನಲ್ಲಿ 88 ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರೇ ಭಾಗಿಯಾಗಿರುವುದು ನಾಚಿಗೇಡಿನ ವಿಷಯ ಎಂದು ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.</p>
<p>ಪೊಲೀಸರು ಜಾಗರೂಕರಾಗಿದ್ದರೆ ಅನೇಕ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿದೆ. ಎಟಿಎಂ ದರೋಡೆ ಪ್ರಕರಣಗಳು, ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣಗಳನ್ನು ಪೊಲೀಸರು ಮುಂಜಾಗರೂಕತೆ ಮೂಲಕ ತಪ್ಪಿಸಬಹುದಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸರಿಯಾದ ಮುಂಜಾಗರೂಕತೆ ಕೈಗೊಂಡಿದ್ದರೆ, ಅಮಾಯಕರು ಕಾಲ್ತುಳಿತಕ್ಕೆ ಬಲಿಯಾಗುವುದನ್ನು ತಪ್ಪಿಸಲು ಸಾಧ್ಯವಿತ್ತು.</p>
<p>ಜೈಲುಗಳಲ್ಲಿ ಅವ್ಯವಸ್ಥೆ ಪ್ರಕರಣಗಳನ್ನು, ಮಾದಕ ವಸ್ತು ಜಾಲ ನಿಯಂತ್ರಣದಲ್ಲಿ ಯಾವುದೇ ಲೋಪವನ್ನು ಸಹಿಸಲು ಸಾಧ್ಯವಿಲ್ಲ. ಮಾದಕ ವಸ್ತು ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಮುಂದಿನ ಅಧಿವೇಶದನಲ್ಲಿ ಹೊಸ ಕಾನೂನು ಜಾರಿಗೊಳಿಸಲು ಸರ್ಕಾರ ಸಿದ್ಧವಿದೆ ಎಂದರು.</p>
<p>ಇದೇ ರೀತಿ ಸೈಬರ್ ಅಪರಾಧಗಳು ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು, ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡಬೇಕಿದೆ. ಕಾನೂನು ಸುವ್ಯವಸ್ಥೆ ಮತ್ತು ರಾಜ್ಯದ ಅಭಿವೃದ್ಧಿ ಪರಸ್ಪರ ಪೂರಕವಾಗಿವೆ. ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದರೆ ಮಾತ್ರ ಬಂಡವಾಳ ಹೂಡಿಕೆ ಹೆಚ್ಚಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ. ಪ್ರತಿಯೊಬ್ಬರಿಗೂ ರಕ್ಷಣೆ ಒದಗಿಸುವುದು, ನ್ಯಾಯ ಒದಗಿಸುವುದು ಸರ್ಕಾರದ ಬದ್ಧತೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.</p>
<p>Key words: police, duty, equal, justice, CM Siddaramaiah</p>
<p>The post <a href="https://www.justkannada.in/cm-siddaramaiah-391/">ದುರ್ಬಲರಿಗೆ ಅನ್ಯಾಯವಾಗದಂತೆ ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಒದಗಿಸುವುದು ಪೊಲೀಸರ ಕರ್ತವ್ಯ- ಸಿಎಂ ಸಿದ್ದರಾಮಯ್ಯ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ಮಂಡ್ಯ: ನ್ಯಾಯಾಲಯ ಕಾಮಗಾರಿಗಳ ಪರಿಶೀಲಿಸಿದ ಹೈಕೋರ್ಟ್ ನ್ಯಾ. ಸುನಿಲ್ ದತ್ ಯಾದವ್</title>
		<link>https://www.justkannada.in/justice-sunil-dutt-yadav/</link>
		
		<dc:creator><![CDATA[prashanth]]></dc:creator>
		<pubDate>Sat, 17 Jan 2026 10:45:21 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[court]]></category>
		<category><![CDATA[High Court]]></category>
		<category><![CDATA[justice]]></category>
		<category><![CDATA[mandya]]></category>
		<category><![CDATA[Sunil Dutt Yadav]]></category>
		<category><![CDATA[works]]></category>
		<guid isPermaLink="false">https://www.justkannada.in/?p=150355</guid>

					<description><![CDATA[<p>ಮಂಡ್ಯ,ಜನವರಿ,17,2026 (www.justkannada.in): ಮಂಡ್ಯ ನ್ಯಾಯಾಲಯ ಸಂಕೀರ್ಣಕ್ಕೆ ಮಂಜೂರಾಗಿರುವ ಜಾಗದ ಮತ್ತು ನ್ಯಾಯಾಧೀಶರ ವಸತಿಸಮುಚ್ಚಗಳನ್ನು ಇಂದು ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರು ಪರಿಶೀಲನೆ ನಡೆಸಿದರು. ಮಂಡ್ಯದ ನ್ಯಾಯಾಧೀಶರಿಗೆ ಸಂಬಂಧಪಟ್ಟಂತೆ ನಗರದ ಮನುಗನಹಳ್ಳಿಯಲ್ಲಿ ವಸತಿಸಮುಚ್ಚಗಳನ್ನು ನಿರ್ಮಾಣ ಮಾಡಲಾಗಿದೆ.  ವಸತಿಸಮುಚ್ಚಗಳ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ರೂ. 5 ಕೋಟಿ ಪ್ರಾಸ್ತವನೆ ಸಲ್ಲಿಸಲಾಗಿತ್ತು. ಸದರಿ ಜಾಗಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರು ಭೇಟಿ ನೀಡಿ ಕಟ್ಟಡದ ವಿನ್ಯಾಸ ಮತ್ತು ಉಳಿಕೆ ಕಾಮಗಾರಿಗಳ ವೀಕ್ಷಣೆ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಪರಿಶೀಲನೆ [&#8230;]</p>
<p>The post <a href="https://www.justkannada.in/justice-sunil-dutt-yadav/">ಮಂಡ್ಯ: ನ್ಯಾಯಾಲಯ ಕಾಮಗಾರಿಗಳ ಪರಿಶೀಲಿಸಿದ ಹೈಕೋರ್ಟ್ ನ್ಯಾ. ಸುನಿಲ್ ದತ್ ಯಾದವ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮಂಡ್ಯ,ಜನವರಿ,17,2026 (<a href="http://www.justkannada.in">www.justkannada.in</a>):</strong> ಮಂಡ್ಯ ನ್ಯಾಯಾಲಯ ಸಂಕೀರ್ಣಕ್ಕೆ ಮಂಜೂರಾಗಿರುವ ಜಾಗದ ಮತ್ತು ನ್ಯಾಯಾಧೀಶರ ವಸತಿಸಮುಚ್ಚಗಳನ್ನು ಇಂದು ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರು ಪರಿಶೀಲನೆ ನಡೆಸಿದರು.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಮಂಡ್ಯದ ನ್ಯಾಯಾಧೀಶರಿಗೆ ಸಂಬಂಧಪಟ್ಟಂತೆ ನಗರದ ಮನುಗನಹಳ್ಳಿಯಲ್ಲಿ ವಸತಿಸಮುಚ್ಚಗಳನ್ನು ನಿರ್ಮಾಣ ಮಾಡಲಾಗಿದೆ.  ವಸತಿಸಮುಚ್ಚಗಳ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ರೂ. 5 ಕೋಟಿ ಪ್ರಾಸ್ತವನೆ ಸಲ್ಲಿಸಲಾಗಿತ್ತು. ಸದರಿ ಜಾಗಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರು ಭೇಟಿ ನೀಡಿ ಕಟ್ಟಡದ ವಿನ್ಯಾಸ ಮತ್ತು ಉಳಿಕೆ ಕಾಮಗಾರಿಗಳ ವೀಕ್ಷಣೆ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು.</p>
<p>ಮದ್ದೂರಿಗೆ ಭೇಟಿ ನೀಡಿ ಮದ್ದೂರು ನ್ಯಾಯಾಲಯಕ್ಕೆ ಸಂಬಂಧಪಟ್ಟ ಕಾಮಗಾರಿಗಳನ್ನೂ ಪರಿಶೀಲನೆ ನಡೆಸಿದರು.</p>
<p>ಮದ್ದೂರಿನ ನ್ಯಾಯಾಲಯಕ್ಕೆ ಸಂಬಂಧಪಟ್ಟಂತೆ ಮದ್ದೂರು ನಗರದ ಸರ್ವೇ ನಂ 800/1, 800/3, 801/1 ರೇಷ್ಮೆ ಇಲಾಖೆಯ ವ್ಯಾಪ್ತಿಗೆ ಬರುವ 4.35 ಎಕ್ಕರೆ ಜಾಗವನ್ನು ಗುರುತಿಸಿ ನ್ಯಾಯಾಲಯ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸದರಿ ಸ್ಥಳವನ್ನು ಹಸ್ತಾಂತರಿಸಲಾಗಿದೆ. ಸದರಿ ಜಾಗದಲ್ಲಿ 21 ಕೋಟಿ ವೆಚ್ಚದಲ್ಲಿ ನ್ಯಾಯಾಲಯ ಸಂಕೀರ್ಣ ಮತ್ತು ನ್ಯಾಯಾಧೀಶರ ವಸತಿಗೃಹಗಳ ನಿರ್ಮಾಣ ಕಾಮಗಾರಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.</p>
<p>ಮಂಡ್ಯ ಜಿಲ್ಲೆಯಲ್ಲಿ ಇರುವ ಏಳು ಸಿವಿಲ್ ನ್ಯಾಯಾಲಯ ಸಂಕೀರ್ಣಕ್ಕೆ ಸಂಬಂಧಪಟ್ಟಂತೆ ಕೃಷಿ ಇಲಾಖೆಗೆ ಸೇರಿದ 22.12 ಗುಂಟೆ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ.  ಸದರಿ ಜಾಗದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮಾಡಲು ರೂ 25 ಕೋಟಿ ವೆಚ್ಚದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.</p>
<p>ಇದೇ ಸಂದರ್ಭದಲ್ಲಿ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಆನಂದ್ ಎಂ, ಮಂಡ್ಯ ತಹಶೀಲ್ದಾರ್ ವಿಶ್ವನಾಥ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್ ಸತ್ಯಾನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.</p>
<p>Key words: Mandya, High Court, Justice, Sunil Dutt Yadav, court, works</p>
<p>The post <a href="https://www.justkannada.in/justice-sunil-dutt-yadav/">ಮಂಡ್ಯ: ನ್ಯಾಯಾಲಯ ಕಾಮಗಾರಿಗಳ ಪರಿಶೀಲಿಸಿದ ಹೈಕೋರ್ಟ್ ನ್ಯಾ. ಸುನಿಲ್ ದತ್ ಯಾದವ್</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ರಸ್ತೆ ಅಪಘಾತಗಳ ಸಂಖ್ಯೆ ಶೂನ್ಯವಾಗುವುದು ಗುರಿಯಾಗಬೇಕು- ನ್ಯಾ. ಅಭಯ್ ಮನೋಹರ್ ಸಪ್ರೆ</title>
		<link>https://www.justkannada.in/abhay-manohar-sapre-mysore/</link>
		
		<dc:creator><![CDATA[prashanth]]></dc:creator>
		<pubDate>Sat, 20 Dec 2025 12:40:13 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Abhay Manohar Sapre]]></category>
		<category><![CDATA[goal]]></category>
		<category><![CDATA[justice]]></category>
		<category><![CDATA[Mysore.]]></category>
		<category><![CDATA[road accidents]]></category>
		<category><![CDATA[Zero number]]></category>
		<guid isPermaLink="false">https://www.justkannada.in/?p=149295</guid>

					<description><![CDATA[<p>ಮೈಸೂರು,ಡಿಸೆಂಬರ್,20,2025 (www.justkannada.in): ಪ್ರತಿ ಜೀವ ಅಮೂಲ್ಯ, ರಸ್ತೆ ಅಪಘಾತಗಳ   ಸಂಖ್ಯೆ ಶೂನ್ಯವಾಗುವುದು ಗುರಿಯಾಗಬೇಕು ಎಂದು ಸುಪ್ರೀಂ ಕೋರ್ಟ್ ನ ರಸ್ತೆ ಸುರಕ್ಷತಾ  ಸಮಿತಿ ಅಧ್ಯಕ್ಷರು ಹಾಗೂ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಅಭಯ್ ಮನೋಹರ್ ಸಪ್ರೆ ಅವರು ತಿಳಿಸಿದರು. ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನ್ಯಾ.ಅಭಯ್ ಮನೋಹರ್ ಸಪ್ರೆ,  ರಸ್ತೆ ಅಪಘಾತದಲ್ಲಿ ಯಾವುದೇ ಉದ್ದೇಶವಿಲ್ಲದೆ ಅಂದಾಜು ದೇಶದಲ್ಲಿ ಪ್ರತಿ ವರ್ಷ ಅಂದಾಜು 2 ಲಕ್ಷ ಜನರು [&#8230;]</p>
<p>The post <a href="https://www.justkannada.in/abhay-manohar-sapre-mysore/">ರಸ್ತೆ ಅಪಘಾತಗಳ ಸಂಖ್ಯೆ ಶೂನ್ಯವಾಗುವುದು ಗುರಿಯಾಗಬೇಕು- ನ್ಯಾ. ಅಭಯ್ ಮನೋಹರ್ ಸಪ್ರೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಮೈಸೂರು,ಡಿಸೆಂಬರ್,20,2025 (www.justkannada.in):</strong> ಪ್ರತಿ ಜೀವ ಅಮೂಲ್ಯ, ರಸ್ತೆ ಅಪಘಾತಗಳ   ಸಂಖ್ಯೆ ಶೂನ್ಯವಾಗುವುದು ಗುರಿಯಾಗಬೇಕು ಎಂದು ಸುಪ್ರೀಂ ಕೋರ್ಟ್ ನ ರಸ್ತೆ ಸುರಕ್ಷತಾ  ಸಮಿತಿ ಅಧ್ಯಕ್ಷರು ಹಾಗೂ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಅಭಯ್ ಮನೋಹರ್ ಸಪ್ರೆ ಅವರು ತಿಳಿಸಿದರು.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನ್ಯಾ.ಅಭಯ್ ಮನೋಹರ್ ಸಪ್ರೆ,  ರಸ್ತೆ ಅಪಘಾತದಲ್ಲಿ ಯಾವುದೇ ಉದ್ದೇಶವಿಲ್ಲದೆ ಅಂದಾಜು ದೇಶದಲ್ಲಿ ಪ್ರತಿ ವರ್ಷ ಅಂದಾಜು 2 ಲಕ್ಷ ಜನರು ಮರಣ ಹೊಂದುತ್ತಾರೆ ಎಂದರೆ ಇದು ಚಿಂತಿಸುವ ವಿಷಯವಾಗಿದೆ. ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸಬೇಕು ಎಂಬುವುದು ಸಾಮಾನ್ಯ ಜ್ಞಾನ. ಇದಕ್ಕೆ ಯಾವುದೇ ಪದವಿ ಬೇಡ. ಹೆಚ್ಚು ವಿದ್ಯಾವಂತರು ಸಹ ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್ ಧರಿಸದೇ ರಸ್ತೆ ಅಪಘಾತದಲ್ಲಿ ಮರಣ ಹೊಂದಿರುವ ಉದಾಹರಣೆಗಳಿವೆ.  ಸಾರ್ವಜನಿಕರು  ಕಡ್ಡಾಯವಾಗಿ ಸಂಚಾರಿ ನಿಯಮ ಪಾಲನೆ ಮಾಡುವ ರೀತಿ ಮನಸ್ಥಿತಿ ಬದಲಾವಣೆ ಮಾಡಬೇಕು. ಇದಕ್ಕೆ ಇರುವ ದಾರಿ ಎಂದರೆ ಒಂದು ಜಾಗೃತಿ ಮೂಡಿಸುವುದು ಇನ್ನೊಂದು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಾಗಿ ಸಂಚಾರಿ ನಿಯಮಗಳನ್ನು ಜಾರಿಗೊಳಿಸುವುದು ಎಂದರು.</p>
<p>ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ.ಜಿ ಅವರು 2020 ರಿಂದ 2025 ರವರೆಗೆ ಜಿಲ್ಲೆಯಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳು, ಮರಣ ಹೊಂದಿದವರ ಸಂಖ್ಯೆ, ಗುರುತಿಸಿರುವ ಬ್ಲ್ಯಾಕ್ ಸ್ಪಾಟ್ ಗಳು ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.</p>
<p>ಸಭೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಟ್ಕಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.</p>
<p>Key words: Zero number, road accidents, goal, Justice, Abhay Manohar Sapre, Mysore</p>
<p>The post <a href="https://www.justkannada.in/abhay-manohar-sapre-mysore/">ರಸ್ತೆ ಅಪಘಾತಗಳ ಸಂಖ್ಯೆ ಶೂನ್ಯವಾಗುವುದು ಗುರಿಯಾಗಬೇಕು- ನ್ಯಾ. ಅಭಯ್ ಮನೋಹರ್ ಸಪ್ರೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
		<item>
		<title>ನ್ಯಾಷನಲ್ ಹೆರಾಲ್ಡ್ ಪ್ರಕರಣ: ಕೋರ್ಟ್ ನ್ಯಾಯ ಎತ್ತಿಹಿಡಿದಿದೆ- ಸಿಎಂ ಸಿದ್ದರಾಮಯ್ಯ</title>
		<link>https://www.justkannada.in/cm-siddaramaiah-366/</link>
		
		<dc:creator><![CDATA[prashanth]]></dc:creator>
		<pubDate>Wed, 17 Dec 2025 09:42:49 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[Politics]]></category>
		<category><![CDATA[case]]></category>
		<category><![CDATA[CM Siddaramaiah]]></category>
		<category><![CDATA[court]]></category>
		<category><![CDATA[justice]]></category>
		<category><![CDATA[National Herald]]></category>
		<category><![CDATA[upheld]]></category>
		<guid isPermaLink="false">https://www.justkannada.in/?p=149123</guid>

					<description><![CDATA[<p>ಬೆಳಗಾವಿ, ಡಿಸೆಂಬರ್,17,2025 (www.justkannada.in): ಬಿಜೆಪಿಯು ದ್ವೇಷ ರಾಜಕಾರಣದಲ್ಲಿ ತೊಡಗಿದ್ದು, ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಅಪಪ್ರಚಾರ ಮಾಡುತ್ತಿದೆ. ಬಿಜೆಪಿಯ ಈ ಕುತಂತ್ರಕ್ಕೆ  ಉತ್ತರವಾಗಿ ನ್ಯಾಯಾಲಯದಲ್ಲಿ ನ್ಯಾಯ ದೊರೆತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ನ್ಯಾಷನಲ್ ಹೆರಾಲ್ಡ್  ಪ್ರಕರಣದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದನ್ನು ಖಂಡಿಸಿ, ಈ ಪ್ರಕರಣದಲ್ಲಿ ED ಸಲ್ಲಿಸಿದ ಆರೋಪ  ಪಟ್ಟಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ ವಿಚಾರಣಾ ನ್ಯಾಯಾಲಯದ (ಟ್ರಯಲ್ ಕೋರ್ಟ್) ತೀರ್ಮಾನವನ್ನು ಬೆಂಬಲಿಸಿ  ಎಂಎಲ್ ಎ ಹಾಗೂ [&#8230;]</p>
<p>The post <a href="https://www.justkannada.in/cm-siddaramaiah-366/">ನ್ಯಾಷನಲ್ ಹೆರಾಲ್ಡ್ ಪ್ರಕರಣ: ಕೋರ್ಟ್ ನ್ಯಾಯ ಎತ್ತಿಹಿಡಿದಿದೆ- ಸಿಎಂ ಸಿದ್ದರಾಮಯ್ಯ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಳಗಾವಿ, ಡಿಸೆಂಬರ್,17,2025 (<a href="http://www.justkannada.in">www.justkannada.in</a>):</strong> ಬಿಜೆಪಿಯು ದ್ವೇಷ ರಾಜಕಾರಣದಲ್ಲಿ ತೊಡಗಿದ್ದು, ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಅಪಪ್ರಚಾರ ಮಾಡುತ್ತಿದೆ. ಬಿಜೆಪಿಯ ಈ ಕುತಂತ್ರಕ್ಕೆ  ಉತ್ತರವಾಗಿ ನ್ಯಾಯಾಲಯದಲ್ಲಿ ನ್ಯಾಯ ದೊರೆತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.<img loading="lazy" decoding="async" class="aligncenter size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="auto, (max-width: 936px) 100vw, 936px" /></p>
<p>ಇಂದು ನ್ಯಾಷನಲ್ ಹೆರಾಲ್ಡ್  ಪ್ರಕರಣದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದನ್ನು ಖಂಡಿಸಿ, ಈ ಪ್ರಕರಣದಲ್ಲಿ ED ಸಲ್ಲಿಸಿದ ಆರೋಪ  ಪಟ್ಟಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ ವಿಚಾರಣಾ ನ್ಯಾಯಾಲಯದ (ಟ್ರಯಲ್ ಕೋರ್ಟ್) ತೀರ್ಮಾನವನ್ನು ಬೆಂಬಲಿಸಿ  ಎಂಎಲ್ ಎ ಹಾಗೂ ಎಂಎಲ್ ಸಿ ಗಳೊಂದಿಗೆ ಬೆಳಗಾವಿ ಸುವರ್ಣ ಸೌಧದ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.</p>
<p><strong>ಬಿಜೆಪಿಯವರ ದ್ವೇಷದ ರಾಜಕಾರಣ</strong></p>
<p>ಬಿಜೆಪಿಯವರ ದ್ವೇಷದ ರಾಜಕಾರಣ. ಕೇಂದ್ರ ಅಥವಾ ರಾಜ್ಯಗಳಾಗಲಿ, ಬಿಜೆಪಿ ಅಧಿಕಾರದಲ್ಲಿರುವ ಕಡೆಗಳೆಲ್ಲಾ ಕಾಂಗ್ರೆಸ್ ನವರನ್ನು ಗುರಿಯಾಗಿಸಿ, ಅವರನ್ನು ಅಪರಾಧಿಗಳಾಗಿ ಬಿಂಬಿಸಿ, ನ್ಯಾಯಾಲಯಕ್ಕೆ ಎಡತಾಕುವಂತೆ ಮಾಡುತ್ತಿದ್ದಾರೆ. ಇಂತಹ ಅಸತ್ಯವಾದ ವಿಚಾರವನ್ನು ಮುನ್ನಲೆಗೆ ತಂದು ಬಿಜೆಪಿಯು ದುರುದ್ದೇಶದಲ್ಲಿ ತೊಡಗಿದ್ದಾರೆ. ಬಿಜೆಪಿಯವರು ತಮ್ಮ ತಪ್ಪುಗಳನ್ನು ಮರೆಮಾಚಲು ಇಂತಹ ದುಷ್ಕೃತ್ಯಕ್ಕೆ ಕೈಹಾಕಿದ್ದಾರೆ. ಇಂದು ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ದೇಶದಲ್ಲಿ ಹಣದುಬ್ಬರ  ಹೆಚ್ಚಿದ್ದು ನಿರುದ್ಯೋಗದ ಪ್ರಮಾಣ ಏರಿಕೆಯಾಗಿದೆ. ಜನರ ಮೇಲೆ ತೆರಿಗೆಗಳನ್ನು ಮನಬಂದಂತೆ ಹೇರಿ, ಭಾರತವನ್ನು ಸಾಲಗಾರ ದೇಶವನ್ನಾಗಿ ಮಾಡಲಾಗುತ್ತಿದೆ ಎಂದರು.</p>
<p><strong>ಸುಳ್ಳು ಪ್ರಕರಣಕ್ಕೆ ಮೊರೆ ಹೋಗುವ ಬಿಜೆಪಿ</strong></p>
<p>ಮನಮೋಹನ್ ಸಿಂಗ್ ಅವರು ದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಸಾಲ ಸುಮಾರು 53.11 ಲಕ್ಷ ಕೋಟಿ ಆಗಿತ್ತು. ಆದರೆ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಸಾಲದ ಮೊತ್ತ ಸುಮಾರು 2 ಲಕ್ಷ ಕೋಟಿಯನ್ನೂ ಮೀರಿದೆ. ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದು 11 ವರ್ಷಗಳಲ್ಲಿ ಈ ಸಾಲದ ಮೊತ್ತವು 148 ಲಕ್ಷ ಕೋಟಿ ಹೆಚ್ಚಾಗಿದೆ. ಬಿಜೆಪಿಯವರು ತಮ್ಮ ಈ ತಪ್ಪನ್ನು ಮರೆಮಾಚಲು ಇಂತಹ ಸುಳ್ಳು ಪ್ರಕರಣಗಳ ಮೊರೆಹೋಗುತ್ತಿದೆ ಎಂದರು.</p>
<p><strong>ಪ್ರತಿ ಖಾತೆಗೆ ಹಣ: ಪ್ರಧಾನಿ ಮೋದಿಯವರ ಸುಳ್ಳು ಭರವಸೆ</strong></p>
<p>ಮೋದಿಯವರು ಅಧಿಕಾರಕ್ಕೆ ಬಂದ ತಕ್ಷಣ, ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ಪ್ರತಿವರ್ಷ 2 ಕೋಟಿ ಉದ್ಯೋಗವನ್ನು ಸೃಷ್ಟಿಸುವುದಾಗಿ ಘೋಷಿಸಿದ್ದರು. ವಿದೇಶದಲ್ಲಿನ ಕಪ್ಪುಹಣವನ್ನು ದೇಶಕ್ಕೆ ತಂದು ದೇಶದ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ.ಗಳನ್ನು ನೀಡುವುದಾಗಿ ಹೇಳಿದರು. ಈ ಯಾವುದೇ ಭರವಸೆಗಳನ್ನು ಮೋದಿಯವರು ಈಡೇರಿಸಲಿಲ್ಲ. ಇತ್ತೀಚೆಗೆ ದೈನಂದಿನ ಬಳಕೆಯ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಗಳು ಗಗನಕ್ಕೇರಿವೆ. ಬಿಜೆಪಿಯವರು ತಮ್ಮ ಇಂತಹ ತಪ್ಪುಗಳನ್ನು ಮರೆಮಾಚಲು , ಇಂತಹ ಸುಳ್ಳು ಪ್ರಕರಣಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ, ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.</p>
<p><strong>ನ್ಯಾಷನಲ್ ಹೆರಾಲ್ಡ್ ಪ್ರಕರಣ: ಕೋರ್ಟ್ ನ್ಯಾಯ ಎತ್ತಿಹಿಡಿದಿದೆ</strong></p>
<p>ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು 1937 ರಲ್ಲಿ ಜವಾಹರ್ ಲಾಲ್ ನೆಹರೂ ರವರು ದೇಶದ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಜಾಗೃತಿ ಮೂಡಿಸಲು ಈ ಪತ್ರಿಕೆಯನ್ನು ಪ್ರಾರಂಭಿಸಿದರು, ಇದು ಕಾಂಗ್ರೆಸ್ ಪಕ್ಷದ ಆಸ್ತಿ. ನಂತರ ಈ ಪತ್ರಿಕೆಯನ್ನು ಯಂಗ್ ಇಂಡಿಯನ್ ಸಂಸ್ಥೆ ವಹಿಸಿಕೊಂಡಿತು. ಸಂಸ್ಥೆಗೆ ಸೇರಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ , ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್ ಇವರ ಮೇಲೆ ಪ್ರಕರಣ ದಾಖಲಿಸಿ, ಇಡಿ ತನಿಖೆಯನ್ನು ಮಾಡಿಸಲಾಯಿತು. 2012 ರಲ್ಲಿ ಸುಬ್ರಮಣ್ಯಂಸ್ವಾಮಿಯವರು ಇವರ ವಿರುದ್ಧ ದಾವೆ ಹೂಡಿದ್ದರು. ಪ್ರಸ್ತುತ ಇಡಿಯವರು ಸಲ್ಲಿಸಿದ್ದ ಆರೋಪ ಪಟ್ಟಿಯನ್ನು  ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದೆ. ಈ ಪ್ರಕರಣವನ್ನು ಸುಳ್ಳು ಎಂದು ಹೈಕೋರ್ಟ್ ನ್ಯಾಯವನ್ನು ಎತ್ತಿಹಿಡಿದಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.</p>
<p><strong>ಹೆಸರನ್ನು ಬದಲಾಯಿಸುವುದಷ್ಟೇ ಬಿಜೆಪಿ ಕಾಯಕ</strong></p>
<p>ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಯನ್ನು ಬದಲಿಸಿ VB-G RaM Gಯೋಜನೆಯೆಂದು ಬದಲಿಸಿದ್ದಾರೆ. ರಾಜಭವನವನ್ನು ಇಂದು ಲೋಕಭವನ ಎಂದು ಬದಲಾಯಿಸಿದ್ದಾರೆ. ಇದು ಸರ್ಕಾರದ ಆಸ್ತಿಯಾಗಿದ್ದು, ಇದರ ಹೆಸರನ್ನು ಬದಲಾವಣೆ ಮಾಡಿದ್ದು ಸರಿಯಲ್ಲ. ಹೆಸರು ಬದಲಾಯಿಸುವ ಕಾರ್ಯದಲ್ಲಿ ನಿರತವಾಗಿದೆಯೇ ಹೊರತು ಬಡವರಿಗೆ ಅನುಕೂಲ ಕಲ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿಲ್ಲ ಎಂದರು.</p>
<p><strong>ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿಯಿಲ್ಲ</strong></p>
<p>ಮಹಾತ್ಮಾಗಾಂಧಿ ಹಾಗೂ ಅಂಬೇಡ್ಕರ್ ರವರ ಚಿಂತನೆಗಳನ್ನು ಇಷ್ಟಪಡದ ಬಿಜೆಪಿಯವರಿಗೆ ಬಡವರನ್ನೂ ಕಂಡರೂ ಆಗುವುದಿಲ್ಲ. ದೇಶದ ಬಡವರಿಗೆಂದು ತಂದಿರುವ ಯಾವುದೇ ಯೋಜನೆಗಳಿಗೆ ಬಿಜೆಪಿಯವರ ಸಹಮತಿಯಿಲ್ಲ. ಬಡವರು, ದೀನದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ಕಡೆಗಣಿಸುವ ಬಿಜೆಪಿಯವರು , ಕರ್ನಾಟಕದಲ್ಲಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದರು. ಆದರೆ ಈ ಯೋಜನೆಯನ್ನು ದೇಶದೆಲ್ಲೆಡೆ ಬಿಜೆಪಿ ಅನುಸರಿಸುತ್ತಿದೆ ಎಂದರು.</p>
<p><strong>ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ</strong></p>
<p>ಇಂದು ಈ ತೀರ್ಪಿನ ಪರವಾಗಿ ಪ್ರತಿಭಟನೆಯನ್ನು ಕೈಗೊಂಡಿದ್ದು, ಸದನದ ಒಳಗೆ ಮತ್ತು ಹೊರಗೆ ಈ ಪ್ರತಿಭಟನೆಯನ್ನು ಮುಂದುವರೆಸಲಿದ್ದೇವೆ. ರಾಜ್ಯ ಹಾಗೂ ದೇಶದುದ್ದಕ್ಕೂ ಬಿಜೆಪಿಯ ಕುತಂತ್ರ ನೀತಿಯನ್ನು ವಿರೋಧಿಸಿ ಪ್ರತಿಭಟನೆಯನ್ನು ಕೈಗೊಳ್ಳುತ್ತೇವೆ. ಕಾಂಗ್ರೆಸ್ ಎಂದಿಗೂ ಕೈಕಟ್ಟಿ ಕೂರುವ ಪಕ್ಷವಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ಕಾಂಗ್ರೆಸ್ ಪಕ್ಷ. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ.  ಆದರೆ ಈಗ ದ್ವೇಷ ರಾಜಕಾರಣವನ್ನು ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.</p>
<p>Key words: National Herald, case, Court, upheld, justice, CM Siddaramaiah</p>
<p>The post <a href="https://www.justkannada.in/cm-siddaramaiah-366/">ನ್ಯಾಷನಲ್ ಹೆರಾಲ್ಡ್ ಪ್ರಕರಣ: ಕೋರ್ಟ್ ನ್ಯಾಯ ಎತ್ತಿಹಿಡಿದಿದೆ- ಸಿಎಂ ಸಿದ್ದರಾಮಯ್ಯ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
