<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Food scientist Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/food-scientist/feed/" rel="self" type="application/rss+xml" />
	<link>https://www.justkannada.in/tag/food-scientist/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Sun, 23 Mar 2025 06:25:10 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.3</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Food scientist Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/food-scientist/</link>
	<width>32</width>
	<height>32</height>
</image> 
	<item>
		<title>ತರಕಾರಿ, ಹಣ್ಣುಗಳನ್ನ ಒಂದು ತಿಂಗಳ ಕಾಲ ಕೆಡದಂತೆ ತಾಜಾವಾಗಿರಿಸಲು ಸಹಕಾರಿ ಈ ‘ಕೃಷಿ ಕವಚ’</title>
		<link>https://www.justkannada.in/food-scientist-ramakrishna/</link>
		
		<dc:creator><![CDATA[prashanth]]></dc:creator>
		<pubDate>Sun, 23 Mar 2025 06:25:10 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[SCIENCE & TECHNOLOGY]]></category>
		<category><![CDATA[agricultural cover]]></category>
		<category><![CDATA[Food scientist]]></category>
		<category><![CDATA[fresh]]></category>
		<category><![CDATA[helps]]></category>
		<category><![CDATA[ramakrishna]]></category>
		<category><![CDATA[vegetables and fruits]]></category>
		<guid isPermaLink="false">https://www.justkannada.in/?p=138042</guid>

					<description><![CDATA[<p>ಬೆಂಗಳೂರು,ಮಾರ್ಚ್,23,2025 (www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನವರಾದ ಡಿಎಫ್‌ಆರ್‌ಎಲ್‌ ನ ನಿವೃತ್ತ ಪ್ರಧಾನ ಆಹಾರ ವಿಜ್ಞಾನಿ ರಾಮಕೃಷ್ಣ ಅವರು ‘ಕೃಷಿ ಕವಚ’ ಎಂಬ ತಂತ್ರಜ್ಞಾನವನ್ನ ಅಭಿವೃದ್ದಿಪಡಿಸಿದ್ದು ಇದು ರೈತರು ಬೆಳೆಯುವ ತರಕಾರಿ, ಹಣ್ಣುಗಳನ್ನ ಒಂದು ತಿಂಗಳ ಕಾಲ ಕೆಡದಂತೆ ತಾಜಾವಾಗಿರಿಸಲು ಸಹಕಾರಿಯಾಗಲಿದೆ. ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ರಾಮಕೃಷ್ಣ ಆವರಣದಲ್ಲಿ ನಡೆದ 2015ನೇ ಸಾಲಿನ ರಾಷ್ಟ್ರೀಯ &#8216;ತೋಟಗಾರಿಕೆ ಮೇಳ&#8217;ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ನಿವೃತ್ತ ಪ್ರಧಾನ ಆಹಾರ ವಿಜ್ಞಾನಿ ರಾಮಕೃಷ್ಣ ಅವರು, ರೈತರು ಹಾಗೂ ಜನಸಾಮಾನ್ಯರಿಗೆ ಉಪಯೋಗ [&#8230;]</p>
<p>The post <a href="https://www.justkannada.in/food-scientist-ramakrishna/">ತರಕಾರಿ, ಹಣ್ಣುಗಳನ್ನ ಒಂದು ತಿಂಗಳ ಕಾಲ ಕೆಡದಂತೆ ತಾಜಾವಾಗಿರಿಸಲು ಸಹಕಾರಿ ಈ ‘ಕೃಷಿ ಕವಚ’</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು,ಮಾರ್ಚ್,23,2025 (<a href="http://www.justkannada.in">www.justkannada.in</a>): </strong> ಸಾಂಸ್ಕೃತಿಕ ನಗರಿ ಮೈಸೂರಿನವರಾದ ಡಿಎಫ್‌ಆರ್‌ಎಲ್‌ ನ ನಿವೃತ್ತ ಪ್ರಧಾನ ಆಹಾರ ವಿಜ್ಞಾನಿ ರಾಮಕೃಷ್ಣ ಅವರು ‘ಕೃಷಿ ಕವಚ’ ಎಂಬ ತಂತ್ರಜ್ಞಾನವನ್ನ ಅಭಿವೃದ್ದಿಪಡಿಸಿದ್ದು ಇದು ರೈತರು ಬೆಳೆಯುವ ತರಕಾರಿ, ಹಣ್ಣುಗಳನ್ನ ಒಂದು ತಿಂಗಳ ಕಾಲ ಕೆಡದಂತೆ ತಾಜಾವಾಗಿರಿಸಲು ಸಹಕಾರಿಯಾಗಲಿದೆ.<img fetchpriority="high" decoding="async" class="alignnone size-full wp-image-124029" src="https://www.justkannada.in/wp-content/uploads/2024/05/jk-logo.jpg" alt="" width="936" height="120" srcset="https://www.justkannada.in/wp-content/uploads/2024/05/jk-logo.jpg 936w, https://www.justkannada.in/wp-content/uploads/2024/05/jk-logo-600x77.jpg 600w, https://www.justkannada.in/wp-content/uploads/2024/05/jk-logo-300x38.jpg 300w, https://www.justkannada.in/wp-content/uploads/2024/05/jk-logo-768x98.jpg 768w, https://www.justkannada.in/wp-content/uploads/2024/05/jk-logo-150x19.jpg 150w, https://www.justkannada.in/wp-content/uploads/2024/05/jk-logo-696x89.jpg 696w" sizes="(max-width: 936px) 100vw, 936px" /></p>
<p>ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ರಾಮಕೃಷ್ಣ ಆವರಣದಲ್ಲಿ ನಡೆದ 2015ನೇ ಸಾಲಿನ ರಾಷ್ಟ್ರೀಯ &#8216;ತೋಟಗಾರಿಕೆ ಮೇಳ&#8217;ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ನಿವೃತ್ತ ಪ್ರಧಾನ ಆಹಾರ ವಿಜ್ಞಾನಿ ರಾಮಕೃಷ್ಣ ಅವರು, ರೈತರು ಹಾಗೂ ಜನಸಾಮಾನ್ಯರಿಗೆ ಉಪಯೋಗ ಆಗುವಂತಹ ತಂತ್ರಜ್ಞಾನವಾದ &#8216;ಕೃಷಿ ಕವಚ&#8217;ದ (ತರಕಾರಿಗಳು, ಹಣ್ಣುಗಳು ಹಾಗೂ ಹೂವುಗಳು-ಪೇಟೆಂಟ್ ಪೆಡ್ಡಿಂಗ್) ಬಗ್ಗೆ ವೈಜ್ಞಾನಿಕ ಮಾಹಿತಿಯ ಮಂಡನೆ ಮಾಡಿ ಈ ತಂತ್ರಜ್ಞಾನದ  ಬಗ್ಗೆ ವಿವರಿಸಿದರು.</p>
<p>ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸುಧಾರಿತ ತಂತ್ರಜ್ಞಾನದ ಬಳಕೆ ಮಹತ್ವದ್ದಾಗಿದೆ. ವಿಕಸಿತ ಭಾರತಕ್ಕಾಗಿ ತೋಟಗಾರಿಕೆಯು ಪೋಷಣೆ, ಸಬಲೀಕರಣ ಜೀವನೋಪಾಯ ಹಾಗೂ ಆಗಿದೆ. ಪೌಷ್ಟಿಕಾಂಶಯುಕ್ತ ಬೆಳೆಗಳ ಮೂಲಕ ಪೌಷ್ಟಿಕತೆ, ಸಂಸ್ಕರಣೆ, ಮೌಲ್ಯವರ್ಧನೆ ಹೆಚ್ಚಿಸುವ ತಂತ್ರಜ್ಞಾನ ಹಾಗೂ ಕ್ರಮಗಳನ್ನು ಪ್ರಾತ್ಯಕ್ಷಿಕೆ ಮೂಲಕ ಇತರ ವಿಜ್ಞಾನಿಗಳೊಂದಿಗೆ ಎಂದು ತಿಳಿಸಿದರು.</p>
<p>ಕಾರ್ಯಕ್ರಮದಲ್ಲಿ ಉಸಿರಾಟ ಅಥವಾ ಜೀವರಾಸಾಯನಿಕವಾಗಿ ಸಕ್ರಿಯವಾಗಿರುವ ಕೃಷಿ ಉತ್ಪನ್ನಗಳು ಮತ್ತು ತಾಜಾ ಹಣ್ಣುಗಳು ಮತ್ತು ತರಕಾರಿಗಳಂತಹ ಸರಕುಗಳ ಪ್ಯಾಕೇಜಿಂಗ್‌ ಗೆ ಸಂಬಂಧಿಸಿದ ಮೂರು ವರ್ಷಗಳಿಗೂ ಹೆಚ್ಚು ಕಾಲ ಕೃಷಿ ಕವಚ್‌ ನಲ್ಲಿ ಅವರು ಮಾಡಿದ ಕೆಲಸವನ್ನು ಅವರು ನೆನಪಿಸಿಕೊಂಡರು.</p>
<p>ಕೃಷಿ ಕವಚ್ ಬ್ಯಾಗ್ ಅನ್ನು ಪಾಲಿಲ್ಯಾಕ್ಟಿಕ್ ಆಮ್ಲ ಮತ್ತು ಬಾ-ಗ್ಯಾಸ್ ಮತ್ತು ಇತರ ಬದಲಿಗಳಿಂದ ಮಿತವ್ಯಯ ಮತ್ತು ಸ್ಥಳೀಯವಾದ ಹೆಚ್ಚುವರಿ ಗುಣಲಕ್ಷಣಗಳೊಂದಿಗೆ ತಯಾರಿಸಲಾಗುತ್ತದೆ. &#8220;ಗ್ರಾಹಕರ ಅವಶ್ಯಕತೆಗೆ ಅನುಗುಣವಾಗಿ 1 ಕೆಜಿಯಿಂದ 10 ಕೆಜಿ ಮತ್ತು ಅದಕ್ಕಿಂತ ಹೆಚ್ಚಿನದನ್ನು ಕಸ್ಟಮೈಸ್ ಮಾಡಬಹುದು. ಗ್ರಾಹಕರು ಕೃಷಿ ಕವಚ್ ತಂತ್ರಜ್ಞಾನದಿಂದ ತರಕಾರಿ, ಹಣ್ಣುಗಳು ಮತ್ತು ಹೂವುಗಳನ್ನು ಒಂದು ತಿಂಗಳವರೆಗೆ ತಾಜಾವಾಗಿರಿಸಿಕೊಳ್ಳಬಹುದು&#8221; ಎಂದು ಅವರು ಹೇಳಿದರು.</p>
<p><strong>ಡಿಎಫ್‌ಆರ್‌ಎಲ್‌ ನ ನಿವೃತ್ತ ಪ್ರಧಾನ ಆಹಾರ ವಿಜ್ಞಾನಿ ರಾಮಕೃಷ್ಣ ಅವರ ಬಗ್ಗೆ ಮಾಹಿತಿ..</strong></p>
<p>ರಾಮಕೃಷ್ಣ ಅವರು ಮೈಸೂರಿನಲ್ಲಿ ಜನಿಸಿ ಇಂಜೀನಿಯರಿಂಗ್ ನಲ್ಲಿ  ಸ್ನಾತಕೋತ್ತರ ಪದವಿ 40 ವರ್ಷಗಳ ಕಾಲ  ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾಗಿ (ಸಂಶೋಧನಾ ಉಪಕರಣಗಳು) ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ ಡಿ.ಆರ್.ಡಿ.ಒ ರಕ್ಷಣಾ ಸಚಿವಾಲಯ, ಭಾರತ ಸರ್ಕಾರ ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಶಸ್ತ್ರ &#8216;ಪಡೆಯವರಿಗೆ ಸ್ಥಳೀಯ ರಿರ್ಟಾಟ್ ಸಂಸ್ಕರಣಾ ತಂತ್ರಜ್ಞಾನದ ಮೂಲಕ (ತಿನ್ನಲು ಸಿದ್ಧ ಆಹಾರವನ್ನು) ಪಡಿಸಿರುತ್ತಾರೆ. ಇದರೊಂದಿಗೆ ಇವರು ನಾಗರಿಕರಿಗೆ ಕೃಷಿ ಆಹಾರ ಸಂಸ್ಕರಣ ಘಟಕದ ಕಾರ್ಯಾಚರಣೆ ಉಪಕರಣಗಳನ್ನು ಮತ್ತು ಬಾಹ್ಯಾಕಾಶದಲ್ಲಿ ಉಪಯೋಗಿಸಲು ಆಹಾರ ತಂತ್ರಜ್ಞಾನಕ್ಕೆ ಅಭಿವೃದ್ಧಿಪಡಿಸಿದ್ದಾರೆ ಇವರ ಈ ಹೊಸ ಆಹಾರ ವ್ಯವಸ್ಥೆಯ ಆವಿಷ್ಕಾರಗಳು ಉನ್ನತ ಮತ್ತು ಎತ್ತರದ ಸ್ಥಳಗಳು, ಮರುಭೂಮಿಗಳು, ನೌಕಾ ಹಡಗು.ಮಾರ್ಕೋಸ್ ಮತ್ತು ಕಮಾಂಡೋಸ್ ಬಳಕೆಗೆ ಸಶಸ್ತ್ರ ಪಡೆಯವರ ಅವಶ್ಯಕತೆಗಳನ್ನು ಆಧರಿಸಿ ಪ್ರದರ್ಶಿಸಿರುತ್ತಾರೆ. ಇವರು ಮಂಜುಗಡ್ಡೆಯಲ್ಲಿ ವಾಸಿಸುವ ಸೈನಿಕರಿಗಾಗಿ ಸೌರಶಕ್ತಿ ಬಳಕೆಯ ಮೂಲಕ ತಾಜಾ ಮೊಸರು ತಯಾರಕ ಮತ್ತು ಪುನರ್ ಭರ್ತಿ ಮಾಡಬಹುದಾದ, ಹಗುರವಾದ ಸ್ವಯಂ ತಾಪನ ಆಹಾರವನ್ನು ಬಿಸಿ ಮಾಡಲು ಸೌರಶಕ್ತಿ ಮತ್ತು ಪರಿಸರ ಸ್ನೇಹಿ ಪಾಲಿಮರ್ ಮರುಬಳಕೆಗಾಗಿ ಬೆಳೆದ ಜೈವಿಕ ಸಂಶ್ಲೇಷಣೆ ರಿಯಾಕ್ಟರ್ ಕೋಲ್ಡ್ ಮತ್ತು ಹಣ್ಣುಗಳು ಮತ್ತು ತರಕಾರಿಗಳ ಶೇಖರಣೆಗಾಗಿ ಫ್ರೀಜ್ ವಿರೋಧಿ ಬ್ಯಾಗ್ / ಫ್ರೀಜ್ ವಿರೋಧಿ ಬೃಹತ್ ಕಂಟೇನ‌ರ್, ಆಹಾರದ ಚೀಲಗಳನ್ನು ಅಭಿವೃದ್ಧಿಪಡಿಸಿದ್ದಾರೆ.</p>
<p>ರೈತರಿಗೆ ಮತ್ತು ಮಾರಾಟಗಾರರಿಗೆ ಬಯೋಪಾಲಿಮರ್ ರಚಿತ ಮತ್ತು ಪರಿಸರ ಸ್ನೇಹಿ ಪಾಲಿಮರಿಕ್ ಮರುಬಳಕೆಯ ಉಸಿರಾಡುವ ಚೀಲಗಳನ್ನು ಅವರ ಶೀಥಿಲ ತಾಪಮಾನ ಇಲ್ಲದ ಕೊಠಡಿ ತಾಪಮಾನದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸಾಗಿಸಲು ಮತ್ತು ಸಂಗ್ರಹಿಸಲು ಅಭಿವೃದ್ಧಿಪಡಿಸಿದ್ದಾರೆ. ಇಂತಹ ತಂತ್ರಜ್ಞಾನಗಳು ನಮ್ಮ ದೇಶಕ್ಕೆ ಕಠಿಣ ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಜೀವನಕ್ಕೆ ಗಮನಾರ್ಹವಾಗಿ ಸಹಾಯ ಮಾಡಿದೆ. 100 ಕ್ಕಿಂತಲೂ ಹೆಚ್ಚಿನ ಇಂತಹ ತಂತ್ರಜ್ಞಾನಗಳು ಭಾರತೀಯ ಆಹಾರ ಉದ್ಯಮಗಳಿಗೆ ಸ್ಥಳೀಯೀಕರಣದೊಂದಿಗೆ ವರ್ಗಾವಣೆ ಮಾಡಲಾಗಿದ್ದು, ದೊಡ್ಡ ಪ್ರಮಾಣದಲ್ಲಿ ಆದಾಯವನ್ನು ರಫ್ತು ನೀಡುವುದಾಗಿದೆ.</p>
<p>ಇವರು 2 ಭಾರತೀಯ ಪೇಟೆಂಟ್ ಗಳನ್ನು ಪಡೆದಿರುತ್ತಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನ / ಸಿಂಪೋಸಿಯಾಗಳಲ್ಲಿ ಎಪ್ಪತ್ತಾರು ಸಂಶೋಧನಾ</p>
<p>ಆವಿಷ್ಕಾರಗಳ ವಿಷಯವಾಗಿ ಪ್ರಬಂಧಗಳನ್ನು ಮಂಡಿಸಿರುತ್ತಾರೆ /ಪ್ರಕಟಿಸಿರುತ್ತಾರೆ. ಪಿಎಚ್ ಡಿ ಎಂಟೆಕ್ ಬಿಇ, ಡಿಎಂಇ, ಐಟಿಐ ವಿದ್ಯಾರ್ಥಿಗಳಿಗೆ ಸಹ ಮಾರ್ಗದರ್ಶನ್ ನೀಡಿ ಎಂಟು ವರ್ಗೀಕೃತ ಗಳಿಗೆ ಲೇಖಕರಾಗಿದ್ದಾರೆ. ರಕ್ಷಣಾ ತಾಂತ್ರಿಕ * ಪಡೆಗಳಿಗೆ ಅಹಾರ ಸರಬರಾಜು, ರಾಷ್ಟ್ರೀಯ ಭದ್ರತಾ ಸಿಬ್ಬಂದಿ, ಸರಸ್ತೆ ಅಂಟಾರ್ಟಿಕಾ, ಐಎನ್ಎಸ್ ನ್ ಅಭಿಮನ್ಯು, ಕಾರ್ಗಿಲ್ ಯುದ್ಧ (ಆಪರೇಷನ್ ವಿಜಯ್) ಮತ್ತು ಅಪರೇಷನ್ ಸಹಾಯಕ ಮತ್ತು ನೈಸರ್ಕಿಕ ವಿಕೋಪದಲ್ಲಿದ್ದ ಜನರಿಗೂಹಾ ಸಿದ್ದ ಆಹಾರವನ್ನ ಕಳಿಸಿದ್ದಾರೆ</p>
<p>ಇವರು 25 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿ ಆಹಾರ ಸಂಸ್ಕರಣ ಯಂತ್ರಗಳನ್ನು ಭಾರತೀಯ ನೌಕಾಪಡೆಗಳು, ವಾಯುಪಡೆ ಮತ್ತು ಸೈನ್ಯದ ಗಡಿಗಳಲ್ಲಿ ಅಳವಡಿಸಿದ್ದಾರೆ. ಇವರು ಡಿ.ಆರ್.ಡಿ.ಒ / ಎಐಸಿಟಿಇ / ಯುಜಿಸಿ / ಸಿ.ಎಸ್.ಐ.ಆರ್ (35 ಸಂಖ್ಯೆಗಳಲ್ಲಿ) ಮತ್ತು ವಿತರಣಾ ವ್ಯವಸ್ಥೆಗಳೊಂದಿಗೆ ಆಹಾರ ಸಂಸ್ಕರಣ ಉದ್ಯಮ ಸಚಿವಾಲಯದಲ್ಲಿ ಸಹ ಅವಿಷ್ಕಾರಕಾರಕರಾಗಿ ತಂಡದ ಮುಖಂಡರಾಗಿ ಹಲವಾರು ಸೇವೆಗಳನ್ನು ಸಲ್ಲಿಸಿರುತ್ತಾರೆ. ದೇಶೀಯ ತಂತ್ರಜ್ಞಾನಗಳುರಿಗೆ ಮೇಲೆ ಅವಲಂಬನೆಯನ್ನು ಪಡೆಯಲು ರಾಷ್ಟ್ರಗಳು ಪ್ರಯತ್ನಿಸುತ್ತಿರುವಾಗ ರೈತರಿಗೆ, ಮತ್ತು ಕೈಗಾರಿಕೆಗಳಿಗೆ ಮೌಲ್ಯದ ಸೇರ್ಪಡೆಯೊಂದಿಗೆ ಆಹಾರ ವಿಜ್ಞಾನ ತಂತಜ್ಞಾನ ಕ್ಷೇತ್ರಕ್ಕೆ ಇವರ ಆಟಾ ಕೊಡುಗೆ ಅತ್ಯಂತ ಸಕಾರಾತ್ಮಕ ಸಮಯಕ್ಕೆ ಬಂದು ಒದಗಿದೆ.</p>
<p>Key words: &#8216;agricultural cover,  helps, vegetables and fruits, fresh , Food scientist, Ramakrishna</p>
<p>The post <a href="https://www.justkannada.in/food-scientist-ramakrishna/">ತರಕಾರಿ, ಹಣ್ಣುಗಳನ್ನ ಒಂದು ತಿಂಗಳ ಕಾಲ ಕೆಡದಂತೆ ತಾಜಾವಾಗಿರಿಸಲು ಸಹಕಾರಿ ಈ ‘ಕೃಷಿ ಕವಚ’</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
