<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Dattatreya  salagame Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<atom:link href="https://www.justkannada.in/tag/dattatreya-salagame/feed/" rel="self" type="application/rss+xml" />
	<link>https://www.justkannada.in/tag/dattatreya-salagame/</link>
	<description>Online Kannada News &#124; Breaking Kannada News &#124; Karnataka News &#124; Live Updates &#124; ಕನ್ನಡ ನ್ಯೂಸ್ &#124; ಜಸ್ಟ್ ಕನ್ನಡ</description>
	<lastBuildDate>Fri, 20 Nov 2020 12:34:06 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://www.justkannada.in/wp-content/uploads/2024/03/cropped-new-logo-32x32.jpg</url>
	<title>Dattatreya  salagame Archives &#187; Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</title>
	<link>https://www.justkannada.in/tag/dattatreya-salagame/</link>
	<width>32</width>
	<height>32</height>
</image> 
	<item>
		<title>ಇ- ಸಂಚಾರ’ ವಲಯದಲ್ಲಿ ಸ್ವಯಂ ಉತ್ಪಾದನೆಗೆ ಆದ್ಯತೆ-ಬಿಟಿಎಸ್-2020”ದಲ್ಲಿ ದತ್ತಾತ್ರೇಯ ಸಾಲಗಾಮೆ ಸಲಹೆ</title>
		<link>https://www.justkannada.in/preference-self-generating-e-mobility-dattatreya-salagame-bts-2020/</link>
		
		<dc:creator><![CDATA[JK Desk]]></dc:creator>
		<pubDate>Fri, 20 Nov 2020 12:34:06 +0000</pubDate>
				<category><![CDATA[Front Page]]></category>
		<category><![CDATA[News]]></category>
		<category><![CDATA[BTS-2020]]></category>
		<category><![CDATA[Dattatreya  salagame]]></category>
		<category><![CDATA[e-mobility]]></category>
		<category><![CDATA[preference]]></category>
		<category><![CDATA[self-generating]]></category>
		<guid isPermaLink="false">https://www.justkannada.in/?p=46022</guid>

					<description><![CDATA[<p>ಬೆಂಗಳೂರು ನವೆಂಬರ್,20,2020(www.justkannada.in):  ಸುಸ್ಥಿರ ‘ಇ-ಸಂಚಾರ’ (ಇ-ಮೊಬಿಲಿಟಿ) ವಲಯದಲ್ಲಿ ನಾವು ಎಲ್ಲೆಲ್ಲಿ ಸ್ವಯಂ ಉತ್ಪಾದನೆ ಮಾಡಬಹುದು ಎಂಬ ಅಧ್ಯಯನ ಆಗಬೇಕು. ಇದೇ ವೇಳೆ ಹೈಪರ್ ಲೋಕಲ್ ಪರಿಹಾರಗಳನ್ನು ಕಂಪನಿಗಳು ರೂಪಿಸಿದರೆ  ಸ್ವಾವಲಂಬನೆ ಸಾಧ್ಯವಾಗಲಿದೆ  ಎಂದು ರಾಬರ್ಟ್ ಬಾಷ್‌ ನ ಭಾರತೀಯ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾದ ದತ್ತಾತ್ರೇಯ ಸಾಲಗಾಮೆ ಹೇಳಿದರು. ಬೆಂಗಳೂರು ತಂತ್ರಜ್ಞಾನ ಶೃಂಗಮೇಳ- 2020”ದ ಎರಡನೇ ದಿನವಾದ ಶುಕ್ರವಾರ ಜರ್ಮನಿ ಕಾನ್ಸುಲೇಟ್ ನೇತೃತ್ವದಲ್ಲಿ ನಡೆದ &#8216;ಇ- ಮೊಬಿಲಿಟಿ- ಭವಿಷ್ಯದ ಹಾದಿ&#8217; ಕುರಿತ ಸಂವಾದದಲ್ಲಿ ಅವರು ಭಾಗವಹಿಸಿದ್ದರು. ನಡೆದ &#8216;ಇ- [&#8230;]</p>
<p>The post <a href="https://www.justkannada.in/preference-self-generating-e-mobility-dattatreya-salagame-bts-2020/">ಇ- ಸಂಚಾರ’ ವಲಯದಲ್ಲಿ ಸ್ವಯಂ ಉತ್ಪಾದನೆಗೆ ಆದ್ಯತೆ-ಬಿಟಿಎಸ್-2020”ದಲ್ಲಿ ದತ್ತಾತ್ರೇಯ ಸಾಲಗಾಮೆ ಸಲಹೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></description>
										<content:encoded><![CDATA[<p><strong>ಬೆಂಗಳೂರು ನವೆಂಬರ್,20,2020(<a href="https://www.justkannada.in">www.justkannada.in</a>):</strong>  ಸುಸ್ಥಿರ ‘ಇ-ಸಂಚಾರ’ (ಇ-ಮೊಬಿಲಿಟಿ) ವಲಯದಲ್ಲಿ ನಾವು ಎಲ್ಲೆಲ್ಲಿ ಸ್ವಯಂ ಉತ್ಪಾದನೆ ಮಾಡಬಹುದು ಎಂಬ ಅಧ್ಯಯನ ಆಗಬೇಕು. ಇದೇ ವೇಳೆ ಹೈಪರ್ ಲೋಕಲ್ ಪರಿಹಾರಗಳನ್ನು ಕಂಪನಿಗಳು ರೂಪಿಸಿದರೆ  ಸ್ವಾವಲಂಬನೆ ಸಾಧ್ಯವಾಗಲಿದೆ  ಎಂದು ರಾಬರ್ಟ್ ಬಾಷ್‌ ನ ಭಾರತೀಯ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾದ ದತ್ತಾತ್ರೇಯ ಸಾಲಗಾಮೆ ಹೇಳಿದರು.<img decoding="async" class="aligncenter size-full wp-image-7" src="https://www.justkannada.in/wp-content/uploads/2019/05/jk-logo.jpg" alt="kannada-journalist-media-fourth-estate-under-loss" width="125" height="125" /></p>
<p>ಬೆಂಗಳೂರು ತಂತ್ರಜ್ಞಾನ ಶೃಂಗಮೇಳ- 2020”ದ ಎರಡನೇ ದಿನವಾದ ಶುಕ್ರವಾರ ಜರ್ಮನಿ ಕಾನ್ಸುಲೇಟ್ ನೇತೃತ್ವದಲ್ಲಿ ನಡೆದ &#8216;ಇ- ಮೊಬಿಲಿಟಿ- ಭವಿಷ್ಯದ ಹಾದಿ&#8217; ಕುರಿತ ಸಂವಾದದಲ್ಲಿ ಅವರು ಭಾಗವಹಿಸಿದ್ದರು.</p>
<p>ನಡೆದ &#8216;ಇ- ಮೊಬಿಲಿಟಿ- ಭವಿಷ್ಯದ ಹಾದಿ&#8217; ಸಂವಾದವನ್ನು ವಿಡಿಎಂಎ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ನಾಥ್ ನಿರ್ವಹಿಸಿದರು.  ಬೆಂಗಳೂರಿನ ಜರ್ಮನ್ ಕನ್ಸುಲೇಟ್‌ನ ಕನ್ಸುಲ್ ಜನರಲ್ ಆಖಿಂ ಬುರ್ಕಾರ್ತ್,  ದತ್ತಾತ್ರೇಯ ಸಾಲಗಾಮೆ, ಪಂಕಜ್ ವ್ಯಾಸ್ ಹಾಗೂ ಮನು ಸಾಲೆ ಪಾಲ್ಗೊಂಡರು.</p>
<p>ಸಾಂಪ್ರದಾಯಿಕ ಸಾರಿಗೆಯಿಂದ ಇ-ಮೊಬಿಲಿಟಿಯತ್ತ ರೂಪಾಂತರಗೊಳ್ಳುವಲ್ಲಿ ಸರ್ಕಾರದ ಕಾರ್ಯನೀತಿಯ ಪಾತ್ರ ದೊಡ್ಡದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಫೇಮ್ 1 ಹಾಗೂ ಫೇಮ್ 2 ನೀತಿಗಳು ಇ-ವಾಹನ ಉದ್ಯಮಕ್ಕೆ ಉತ್ತೇಜನಕಾರಿಯಾಗಿವೆ. ಆರಂಭದ ಇದೇ ವೇಗವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ 2022ರ ನಂತರದ ಸರ್ಕಾರದ ನೀತಿಯೂ ಸ್ಪಷ್ಟವಾಗಿರಬೇಕು. ಇವಿ ಕ್ಷೇತ್ರದ ಮೂಲಸೌಕರ್ಯದಂತಹ ಕ್ಷೇತ್ರದಲ್ಲಿ ಸರ್ಕಾರಿ-ಖಾಸಗಿ ಸಹಭಾಗಿತ್ವದಿಂದ ವೇಗವರ್ಧನೆಯಾಗಲಿದೆ ಎಂದು ದತ್ತಾತ್ರೇಯ ಸಾಲಗಾಮೆ ಅಭಿಪ್ರಾಯಪಟ್ಟರು.</p>
<p>ಪವರ್ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಭಾರತ ಪ್ರಬಲವಾಗಿದೆ. ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಪ್ರೋತ್ಸಾಹದಾಯಕ ವಾತಾವರಣವಿದೆ. ದೇಶದಲ್ಲಿ ಮೊತ್ತಮೊದಲ ಇ-ವಾಹನ ಉದ್ಯಮ ಸ್ಥಾಪನೆಯಾಗಿದ್ದೇ ಬೆಂಗಳೂರಿನಲ್ಲಿ ಎಂದು ನೆನಪಿಸಿಕೊಂಡರು.</p>
<p><strong>ಪೆಡಲ್ ಸೈಕಲ್‍‌ ವಾಲಾಗಳಿಂದ ಮೌನಕ್ರಾಂತಿ</strong></p>
<p>ಭಾರತದಲ್ಲಿ ಇ-ಮೊಬಿಲಿಟಿಯ ಆರಂಭದ ಮೌನಕ್ರಾಂತಿ ಮಾಡಿದವರು ಅಸಂಘಟಿತ ವಲಯಗಳ ಸೈಕಲ್‌ ವಾಲಾಗಳು. ಪೆಡಲ್ ಸೈಕಲ್‌ ಗಳಿಂದ ರೂಪಾಂತರಗೊಂಡ ಇ-ರಿಕ್ಷಾಗಳು ಮೆಟ್ರೋ ಫೀಡರ್‌ಗಳಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇನ್ಫೀನಿಯನ್ ಟೆಕ್ನಾಲಜೀಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿನಯ್ ಶೆಣೈ ಬೊಟ್ಟು ಮಾಡಿದರು.</p>
<p>ಮೊದಲ ಹಂತದಲ್ಲಿ ತ್ರಿಚಕ್ರ, ದ್ವಿಚಕ್ರ ವಾಹನವನ್ನು ನಾವು ಇ-ವಾಹನಗಳಾಗಿ ಪರಿವರ್ತನೆಗೊಳಿಸಬಹುದು. ಎರಡನೆಯ ಹಂತದಲ್ಲಿ ಸಾರ್ವಜನಿಕ ಸಾರಿಗೆಗಳನ್ನು ಪರಿವರ್ತಿಸಬೇಕು. ಕೊನೆಯ ಹಂತದಲ್ಲಿ ಪ್ರಯಾಣಿಕ ಹಾಗೂ ಲಕ್ಷುರಿ ವಾಹನಗಳು ರೂಪಾಂತರಗೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.<img fetchpriority="high" decoding="async" class="aligncenter size-full wp-image-46023" src="https://www.justkannada.in/wp-content/uploads/2020/11/e-mobilitu.jpg" alt="preference-self-generating-e-mobility-dattatreya-salagame-bts-2020" width="2138" height="1106" /></p>
<p>ಈ ದಿಸೆಯಲ್ಲಿ ಸರ್ಕಾರ ಮುಂಚೂಣಿಯಲ್ಲಿ ನಿಲ್ಲಬೇಕು. ಚಾರ್ಜಿಂಗ್ ಮೂಲಸೌಕರ್ಯ, ಸ್ಟೇಶನ್ ಸೌಲಭ್ಯವನ್ನು ಕಲ್ಪಿಸಬೇಕು. ಆಪರೇಟರ್‌ಗಳಿಗೆ ಸಹಾಯ ನೀಡಬೇಕು, ಉದ್ಯಮಗಳಿಗೆ ಪ್ರೋತ್ಸಾಹಧ ನೀಡುವ ಕಾರ್ಯ ಮಾಡಬೇಕು ಎಂದರು.</p>
<p><strong>ಜರ್ಮನಿ ಸಹಭಾಗಿತ್ವದಿಂದ ಅನುಕೂಲ</strong></p>
<p>ಇ-ವಿ ಕ್ಷೇತ್ರದಲ್ಲಿ ಜರ್ಮನಿಯು ತುಂಬಾ ಮುಂದಿದೆ. ಸರ್ಕಾರದ ನೀತಿ ನಿರ್ಧಾರಗಳು, ಸಂಶೋಧನೆ ಮತ್ತು ಅಭಿವೃದ್ಧಿ ಇತ್ಯಾದಿ ಕ್ಷೇತ್ರದಲ್ಲಿ ಭಾರತ-ಜರ್ಮನಿ ಸಹಭಾಗಿತ್ವದಿಂದ ಅನುಕೂಲ ಸಾಧ್ಯವಿದೆ. ಸಾಫ್ಟ್ ವೇರ್‌ನ ಸೂಕ್ತ ಬಳಕೆಯಿಂದ ಭಾರತದ ರಸ್ತೆ ಸ್ಥಿತಿ, ಹವಾಮಾನ ಪರಿಸ್ಥಿತಿಯ ದೋಷವನ್ನು ಮೀರಿ ವಾಹನಗಳು ಕಾರ್ಯನಿರ್ವಹಿಸುವಂತೆ ಮಾಡಬಹುದಾಗಿದೆ ಎಂದು ಮರ್ಸಿಡೆಸ್ ಬೆಂಝ್  ಆರ್ ಆಂಡ್ ಡಿ ಇಂಡಿಯಾದ ಸಿಇಒ ಮನು ಸಾಲೆ ಹೇಳಿದರು.</p>
<p>ಇ-ಹೈವೇ ಅಥವಾ ಇಲೆಕ್ಟ್ರಿಕ್ ರಸ್ತೆ ವ್ಯವಸ್ಥೆಯು ಇ-ಮೊಬಿಲಿಟಿಗೆ ಉತ್ತೇಜನ ನೀಡಬಲ್ಲುದು ಎಂದು ಸೀಮನ್ಸ್ ಟೆಕ್ನಾಲಜೀಸ್ ಇಂಡಿಯಾದ ಸಿಇಒ ಪಂಕಜ್ ವ್ಯಾಸ್ ಅಭಿಪ್ರಾಯಪಟ್ಟರು.</p>
<p>ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಸುಸ್ಥಿರ ಸಾರಿಗ ಅತ್ಯಗತ್ಯ. ಜರ್ಮನಿಯು ಭವಿಷ್ಯದ ಸುಸ್ಱಿರ ಸಾರಿಗೆಗೆ ಬುನಾದಿ ಹಾಕಿದೆ. ಜರ್ಮನಿ-ಭಾರತ ಸಹಭಾಗಿತ್ವದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಬೆಂಗಳೂರಿನ ಜರ್ಮನ್ ಕನ್ಸುಲೇಟ್‌ನ ಕನ್ಸುಲ್ ಜನರಲ್ ಆಖಿಂ ಬುರ್ಕಾರ್ತ್ ಹೇಳಿದರು.</p>
<p>ವಿಡಿಎಂಎ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ನಾಥ್ ಸಂವಾದ ನಿರ್ವಹಿಸಿದರು. ನೆರ್ವಾನಿಕ್ ಎಐ ಲ್ಯಾಬ್ಸ್ ಪ್ರೈ.ಲಿನ ಸಹಸಂಸ್ಥಾಪಕರಾದ ರಂಜನ್ ಕುಮಾರ್ ಹಾಗೂ ಜರ್ಮನಿ ತಂತ್ರಜ್ಞಾನ ಕನ್ಸಲ್ಟ್ ಹೂಬರ್ಟ್ ರಿಲಾರ್ಡ್ ಸಂವಾದದಲ್ಲಿ ಪಾಲ್ಗೊಂಡಿದ್ದರು.</p>
<p>Key words: Preference &#8211; self-generating &#8211; e-mobility- Dattatreya  salagame- BTS-2020</p>
<p>The post <a href="https://www.justkannada.in/preference-self-generating-e-mobility-dattatreya-salagame-bts-2020/">ಇ- ಸಂಚಾರ’ ವಲಯದಲ್ಲಿ ಸ್ವಯಂ ಉತ್ಪಾದನೆಗೆ ಆದ್ಯತೆ-ಬಿಟಿಎಸ್-2020”ದಲ್ಲಿ ದತ್ತಾತ್ರೇಯ ಸಾಲಗಾಮೆ ಸಲಹೆ</a> appeared first on <a href="https://www.justkannada.in">Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ</a>.</p>
]]></content:encoded>
					
		
		
			</item>
	</channel>
</rss>
