ಫೋನ್ ಕದ್ದಾಲಿಕೆ : ಹೊಸ ಬಾಂಬ್ ಸಿಡಿಸಿದ ಡಿ.ಕೆ ಶಿವಕುಮಾರ್…

ಬೆಂಗಳೂರು, ಆಗಸ್ಟ್, 21, 2020(www.justkannada.in):  ನನ್ನ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ಕರೆ ಬಂದರೂ ವಾಯ್ಸ್ ಬರುತ್ತಿಲ್ಲ. ಈ ಬಗ್ಗೆ ದೂರು ನೀಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ. jk-logo-justkannada-logo

ಬೆಂಗಳೂರಿನಲ್ಲಿ ಈ ಬಗ್ಗೆ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಬೆಳಗ್ಗೆಯಿಂದ ಸುಮಾರು 20 ಕರೆಗಳು ಬಂದಿದೆ. ಆದರೆ, ಯಾವುದರಲ್ಲಿಯೂ ವಾಯ್ಸ್ ಕೇಳುತ್ತಿಲ್ಲ. ನನ್ನ ಕರೆಗಳನ್ನು ಕದ್ದಾಲಿಕೆ ಮಾಡಲಿ. ಫೋನ್ ಕದ್ದಾಲಿಕೆ ಇದೇ ಮೊದಲೇನಲ್ಲ. ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ  ಎಂದು ಹೇಳಿದ್ದಾರೆ. kpcc-president-dk shivakumar- phone -tap-accuse

Key words : kpcc-president-dk shivakumar- phone -tap-accuse