ದಸರಾ, ತಲಕಾಡು ಪಂಚಲಿಂಗ ದರ್ಶನ ಆಚರಣೆ ಕೈಬಿಡುವಂತೆ ಕುರುಬೂರು ಶಾಂತ ಕುಮಾರ್ ಒತ್ತಾಯ..

ಮೈಸೂರು, ಆಗಸ್ಟ್, 28, 2020(www.justkannada.in) : ಕೊರೋನಾ ಹಿನ್ನೆಲೆ ಈ ಬಾರಿ ದಸರಾ ಆಚರಣೆ ತಲಕಾಡು ಪಂಚಲಿಂಗ ದರ್ಶನ ಆಚರಣೆ ಕೈಬಿಡುವಂತೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತ ಕುಮಾರ್ ಒತ್ತಾಯಿಸಿದ್ದಾರೆ.

jk-logo-justkannada-logo

ಕೊರೊನಾ ಸೋಂಕಿನಿಂದ ಲಕ್ಷಾಂತರ ಜನರು ನರಳುತ್ತಿದ್ದಾರೆ. ಸಾವಿರಾರು ಜನರು ಸಾಯುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ಪ್ರದೇಶದ ಜನರು ಕೊರೊನಾ ಸೋಂಕಿಗೆ ಹೆಚ್ಚು ತುತ್ತಾಗುತ್ತಿದ್ದಾರೆ. ಹೀಗಾಗಿ, ದಸರಾ ಮತ್ತು ಪಂಚಲಿಂಗ ದರ್ಶನ ಮಾಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

Dasara-Talakadu-panchalinga-darshan-celebration-abandon-Kurubur Shanth Kumar

ದಸರಾ ಆಚರಣೆಯಲ್ಲಿ  ಲಕ್ಷಾಂತರ ಜನರು ಸೇರುವ ಕಾರಣ ಮತ್ತಷ್ಟು ಅನಾಹುತಕ್ಕೆ ಕಾರಣವಾಗಬಹುದು ಎಂಬುದನ್ನು ಸರಕಾರ ಅರಿಯಬೇಕು. ಈ ಆಚರಣೆಗೆ ಖರ್ಚು ಮಾಡುತ್ತಿದ್ದ ನೂರಾರು ಕೋಟಿ ಹಣವನ್ನು ಕೊರೊನಾ ಪೀಡಿತ ರೋಗಿಗಳ ಉಪಚಾರಕ್ಕಾಗಿ ಹಾಗೂ ಆಸ್ಪತ್ರೆಗಳ ಸೌಕರ್ಯಗಳಿಗಾಗಿ ಬಳಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.

key words : Dasara-Talakadu-panchalinga-darshan-celebration-abandon-Kurubur Shanth Kumar