ಸಚಿವರ ಸತತ ಪ್ರಯತ್ನಕ್ಕೆ ಸಿಕ್ತು ಪ್ರತಿಫಲ: ಕಲಬುರಗಿ ಜಿಲ್ಲೆಗೆ ರೆಮಿಡಿಸಿವರ್ ಲಸಿಕೆ ಹೆಚ್ಚಳ

ಬೆಂಗಳೂರು,ಮೇ,11,2021(www.justkannada.in):  ಕಲಬುರಗಿ ಜಿಲ್ಲಾ ಉಸ್ತುವಾರಿ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್ ನಿರಾಣಿ ಅವರ ಸತತ ಪ್ರಯತ್ನದ ಫಲವಾಗಿ ಜಿಲ್ಲೆಗೆ   ಹೆಚ್ಚಿನ ಪ್ರಮಾಣದ ಲಸಿಕೆ ಲಭಿಸಲಿದೆ.jk

ಆದರೆ ಬೆಳಗಾವಿ ಹೊರತುಪಡಿಸಿದರೆ ರಾಜ್ಯದಲ್ಲೇ ಎರಡನೇ ಅತೀ ದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಕಲಬುರಗಿ ಜಿಲ್ಲೆಗೆ ಇನ್ನು ಹೆಚ್ಚಿನ ರೆಮಿಡಿಸಿವರ್ ಬರಬಹುದೆಂಬ ನಿರೀಕ್ಷೆಯನ್ನು ಇಟ್ಡುಕೊಳ್ಳಲಾಗಿದೆ. ಇದೀಗ ಕಲಬುರಗಿ ಜಿಲ್ಲೆಗೆ 1200 ರೆಮಿಡಿಸಿವರ್ ಪೂರೈಕೆ ಮಾಡಲು ರಾಜ್ಯ ಸರರ್ಕಾರ  ಮುಂದಾಗಿದೆ. ಇದರಿಂದಾಗಿ  ಸೋಂಕಿತರಿಗೆ ನೆಮ್ಮದಿಯನ್ನು ತಂದಿದ್ದು, ರೆಮಿಡಿಸಿವರ್ ಲಸಿಕೆ ಇಲ್ಲ ಎಂಬ ಕೊರಗನ್ನು ತಾತ್ಕಾಲಿಕವಾಗಿ ನೀಗಿಸಿದೆ.

ಕಲಬುರಗಿ ಜಿಲ್ಲೆಯು ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಜೊತೆ ಗಡಿ ಹೊಂದಿರುವುದರಿಂದ  ಸಾರ್ವಜನಿಕರು‌ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗುವುದರಿಂದ ‌ಹೆಚ್ಚಿನ ಪ್ರಮಾಣದಲ್ಲಿ ರೆಮಿಡಿಸಿವರ್ ಪೂರೈಕೆ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ‌ಸಲ್ಲಿಸಲು ಜಿಲ್ಲಾಡಳಿತ ಸಜ್ಜಾಗಿದೆ.

ಕಲ್ಬುರ್ಗಿ ಜಿಲ್ಲೆಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮುರುಗೇಶ್ ನಿರಾಣಿ ಅವರು ಸರಕಾರದ ಮಟ್ಟದಲ್ಲಿ ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿದ್ದಾರೆ. ಶುಕ್ರವಾರದಿಂದ ಎರಡು ದಿನಗಳ ಜಿಲ್ಲಾ ಪ್ರವಾಸ ಮಾಡಿದ್ದ ಸಚಿವ ಮುರುಗೇಶ್ ನಿರಾಣಿ, ಅಫಜಲಪುರ, ಚಿಂಚೋಳಿ ಹಾಗೂ ಕಲಬುರಗಿ ಸೇರಿದಂತೆ ವಿವಿಧ. ಅಸ್ಪತ್ರೆಗಳಿಗೆ ಭೇಟಿ ಕೊಟ್ಟು ಖುದ್ದು ವಸ್ತುಸ್ಥಿತಿ ಅರಿಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು.

ಸ್ವತಃ ಸಚಿವರೇ ಜಿಲ್ಲೆಯಲ್ಲಿರುವ ಒಟ್ಟು ಸಕ್ರಿಯ ಪ್ರಕರಣಗಳು, ಗುಣಮುಖರಾಗಿ  ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವವರು, ಹಾಸಿಗೆ ವ್ಯವಸ್ಥೆ, ಐಸಿಯು ಬೆಡ್ , ಸಾಮಾನ್ಯ ಬೆಡ್ ,ಆಕ್ಸಿಜನ್ ಲಭ್ಯತೆ, ಲಸಿಕೆ ಪ್ರಮಾಣ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಪಡೆದಿದ್ದರು.

ನಂತರ ಜಿಲ್ಲೆಯ ಜನಪ್ರತಿನಿಧಿಗಳು, ಹಾಗೂ ವಿವಿಧ ಇಲಾಖೆಯ ಅಧಿಕಾರಗಳ ಜೊತೆ ನಿರಂತರವಾಗಿ ಸರಣಿ ಸಭೆಗಳನ್ನು ನಡೆಸಿ ಕೋವಿಡ್ -19 ಸೋಂಕು ನಿಯಂತ್ರಣಕ್ಕಾಗಿ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು.

ಸಚಿವರ ಸೂಚನೆಯಂತೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಇತರೆ ಇಲಾಖೆಯ ಅಧಿಕಾರಿಗಳು ಜಿಲ್ಲೆಯ  ವಸ್ತುಸ್ಥಿತಿಯನ್ನು ವರದಿ ರೂಪದಲ್ಲಿ ಸರಕಾರಕ್ಕೆ ನೀಡಿದ್ದರು. ಇದೆಲ್ಲದರ ಒಟ್ಟು ಪರಿಣಾಮ ಜಿಲ್ಲೆಗೆ  ಬೇಡಿಕೆಯ ಆರು ಪಟ್ಟು ರೆಮಿಡಿಸಿವರ್ ಲಸಿಕೆ ಲಭಿಸಿದೆ.

ಸಿಲಿಂಡರ್ ಘಟಕ ಆರಂಭ…

ಕಲ್ಯಾಣ ಕರ್ನಾಟಕದ ಕೇಂದ್ರ ಬಿಂದು ಕಲಬುರಗಿ ಜಿಲ್ಲೆಗೆ 400 ಸಿಲಿಂಡರ್ ಸಾಮಾರ್ಥ್ಯದ ಘಟಕ ಸದ್ಯದಲ್ಲೇ ಆರಂಭವಾಗಲಿದೆ. ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ ( ಡಿ.ಆರ್ ಡಿಒ) ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ( ಎನ್ ಹೆಚ್ ಎಐ ) ಸಹಭಾಗಿತ್ವದಲ್ಲಿ ಇನ್ನು ಹತ್ತು ದಿನದೊಳಗೆ ಈ ಘಟಕ ಕಾರ್ಯರಂಭ ಮಾಡಲಿದೆ.

ಘಟಕ ಆರಂಭಕ್ಕೆ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯು ‌ ಫ್ಯಾಬ್ರೀಕೇಷನ್ ತಂತ್ರಜ್ಞಾನದ ನೆರವು ನೀಡಿದರೆ, ಹೆದ್ದಾರಿ ಪ್ರಾಧಿಕಾರ ಘಟಕದ ಕಾಮಗಾರಿಯನ್ನು ನಡೆಸಲಿದೆ. ಈಗಾಗಲೇ ಎರಡು ಸಂಸ್ಥೆಯ ಅಧಿಕಾರಿಗಳ ಜೊತೆ ಸಚಿವ ನಿರಾಣಿ ಅವರು ಮಾತುಕತೆ ನಡೆಸಿದ್ದು, ಹತ್ತು ದಿನದಲ್ಲಿ ಘಟಕ ಪ್ರಾರಂಭಕ್ಕೆ ಜಿಲ್ಲಾಡಳಿತ ಸಕಲ‌ ಸಿದ್ಧತೆಗಳನ್ನು ಕೈಗೊಂಡಿದೆ. Remedicivir -vaccine - Kalaburagi district-minister-murugesh nirani

ಈ ಕುರಿತು ಮಾತನಾಡಿರುವ ಸಚಿವ ಮುರುಗೇಶ್ ನಿರಾಣಿ, ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ನಿರೀಕ್ಷೆಗೂ ಮೀರಿದ ಸಹಕಾರ ಸಿಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು,  ಜಿಲ್ಲಾಡಳಿತವು ಆಹೋರಾತ್ರಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದು,  ಇದಕ್ಕಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

Key words: Remedicivir -vaccine – Kalaburagi district-minister-murugesh nirani