ಸಿದ್ದರಾಮಯ್ಯ ಗಾರು, ಈ ವರದಿಗಳನ್ನ ವಸಿ ಓದುವಿರಾ?.. ಪ್ರತಾಪ್ ಟಾಂಗ್

ಬೆಂಗಳೂರು, ಜೂನ್ 09, 2021 (www.justkannada.in): ರೋಹಿಣಿ‌ ಸಿಂಧೂರಿ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಪ್ರತಾಪಸಿಂಹ ಟಾಂಗ್ ನೀಡಿದ್ದಾರೆ.

ಟ್ವಿಟ್ಟರ್’ನಲ್ಲಿ ಸಿದ್ದರಾಮಯ್ಯಗೆ  ಪ್ರತಾಪ್ ಸಿಂಗ್ ತಿರುಗೇಟು ನೀಡಿದ್ದು, ಸಿದ್ದು ಸಿಎಂ ಆಗಿದ್ದಾಗ ಮೈಸೂರು ಡಿಸಿಯಾಗಿದ್ದ ಸಿ ಸಿಖಾ ವರ್ಗಾವಣೆ ವಿಚಾರ ಪ್ರಸ್ತಾಪಿಸಿ , ತೆಲುಗು ಮಿಶ್ರಿತ ಕನ್ನಡದಲ್ಲಿ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಗಾರು, ಈ ವರದಿಗಳನ್ನ ವಸಿ ಓದುವಿರಾ?! ಅಂದಹಾಗೆ, ನೀವು ಮುಖ್ಯಮಂತ್ರಿಯಾಗಿದ್ದಾಗ ನಿಮ್ಮ ಶಿಷ್ಯ ಮರಿಗೌಡ ಡಿಸಿ ಶಿಖಾರನ್ನು ಅವಾಚ್ಯ ಪದಗಳಿಂದ ಸಾರ್ವಜನಿಕವಾಗಿ ನಿಂದಿಸಿದ್ರು. ಆಗ ಶಿಷ್ಯನಿಗೆ ಬುದ್ಧಿ ಹೇಳುವುದು ಬಿಟ್ಟು ಶಿಖಾರನ್ನೇ ನೀವು ಎತ್ತಂಗಡಿ ಮಾಡಿದ್ದು ಮರೆತುಹೋಯಿತೇ? ಎಂದು ಪ್ರಶ್ನಿಸಿದ್ದಾರೆ.

key words : pratap-simha-talk-about-siddaramaiah