ಮೈಸೂರಿನಲ್ಲಿ ಗ್ರಾಪಂ ಸದಸ್ಯನಿಂದ ಪತ್ನಿ ಹತ್ಯೆ : ಆರೋಪಿ ಪರಾರಿ

ಮೈಸೂರು,ನವೆಂಬರ್,15,2020(www.justkannada.in) : ದೀಪಾವಳಿ ಹಬ್ಬದ ದಿನದಂದೇ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ಪತ್ನಿ ಹತ್ಯೆ ಮಾಡಿ ಸೂತಕ ವಾತಾವರಣ ಸೃಷ್ಠಿಸಿದ್ದಾನೆ.

kannada-journalist-media-fourth-estate-under-loss

ಜಿಲ್ಲೆಯ ತಿ.ನರಸೀಪುರ ತಾಲೂಕಿನ ದೊಡ್ಡ ಮುಲಗೋಡು ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ಹಬ್ಬದ ದಿನದಂದೇ ಪತ್ನಿ ಹತ್ಯೆ ಮಾಡಿದ್ದಾನೆ.

ದೊಡ್ಡಮುಲಗೋಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶಾಂತಮ್ಮ (22) ಕೊಲೆಯಾದ ಮಹಿಳೆ. ಪತ್ನಿಯನ್ನು ಕೊಲೆಗೈದು ಬಳಿಕ ಸೀಮೆಎಣ್ಣೆ ಸುರಿದು ಶವವನ್ನು ಸುಟ್ಟು ಹಾಕಿ ಬಳಿಕ ಆರೋಪಿ ಪರಾರಿಯಾಗಿದ್ದಾನೆ.

ಸ್ಥಳಕ್ಕಾಗಮಿಸಿರುವ ಬನ್ನೂರು ಠಾಣೆ ಪೊಲಿಸರು ಪರಿಶೀಲನೆ ನಡೆಸಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

key words :Mysore-Wife-murdered-gramapanchayath-member-accused-fled