ನಾಳೆ ಬೆಳಿಗ್ಗೆಯೇ ದಾಳಿ ನಡೆದ್ರೂ ಹೆದರಲ್ಲ: ಇಡಿ, ಐಟಿ ಯಾವುದೇ ತನಿಖೆಗೂ ನಾನು ಸಿದ್ಧ- ಹೆಚ್.ವಿಶ್ವನಾಥ್ ಗೆ ಮಾಜಿ ಸಚಿವ  ಸಾ.ರಾ ಮಹೇಶ್ ತಿರುಗೇಟು…

kannada t-shirts

ಮೈಸೂರು,ಸೆ,23,2019(www.justkannada.in): ನಾವು ಜಮಿನ್ದಾರು. ನಮ್ಮದು ಶ್ರೀಮಂತ ಕುಟುಂಬ. ನಾನು ಇಲ್ಲಿ ಎಲ್ಲೋ ಫಿಲಂ ಮಾಡಿಲ್ಲ. ಯಾರ ಮನೆಯ ಎಂಜಲು ತೊಳೆದಿಲ್ಲ. ರಾಮದಾಸ್ ಮನೆಯಲ್ಲಿ ಚಡ್ಡಿ ಒಗೆದಿಲ್ಲ ಎಂದು ವಾಗ್ದಾಳಿ ನಡೆಸಿದ್ದ ಅನರ್ಹ ಶಾಸಕ ಹೆಚ್.ವಿಶ್ವನಾಥ್ ವಿರುದ್ದ ಮಾಜಿ ಸಚಿವ ಸಾ.ರಾ ಮಹೇಶ್ ಇಂದು ಹರಿ ಹಾಯ್ದಿದ್ದಾರೆ.

ತಮ್ಮ ವಿರುದ್ದ ಅಕ್ರಮ ಆಸ್ತಿ ಸಪಾದನೆ ಆರೋಪ ವಿಚಾರ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಮಾಜಿ ಸಚಿವ  ಸಾ.ರಾ.ಮಹೇಶ್, ಇಡಿ, ಐಟಿ ಯಾವುದೇ ತನಿಖೆಗೂ ನಾನು ಸಿದ್ಧ. ವರ್ಷದಿಂದ ವರ್ಷಕ್ಕೆ ನನ್ನ ಆಸ್ತಿ ಕರಗುತ್ತಿದೆ. ಕನಕಪುರ ಪುಟ್ಟರಾಜು ಸೇರಿದಂತೆ ಎಲ್ಲೆಡೆ ದಾಳಿ ಆಯ್ತು. ನಾನು ಶುದ್ಧ ಇರೋದ್ರಿಂದ ನನ್ನ ಮೇಲೆ ದಾಳಿ ಆಗಿಲ್ಲ. ನಾಳೆ ಬೆಳಿಗ್ಗೆಯೇ ದಾಳಿ ನಡೆದರೂ ನಾನು  ಹೆದರೋದಿಲ್ಲ ಎಂದು  ಹೇಳಿದರು.

ಹಾಗೆಯೇ   ನಿಮ್ಮ‌ ಅಪ್ಪನಿಗೆ ನಾಲ್ಕು ಎಕರೆ ಜಮೀನಿತ್ತು. ನಮ್ಮ ತಂದೆ ಉಪನ್ಯಾಸಕ ಸಂಸ್ಕಾರ ಕಲಿಸಿ ಕೊಟ್ಟಿದ್ದಾರೆ.  ನಾವು ಬಾಯಿ ಬಿಟ್ಟರೆ ಇನ್ನೂ ಕೆಟ್ಟದಾಗಿ ಮಾತನಾಡಬಲ್ಲೆ. ನಿಮಗೆ ಮನಸಾಕ್ಷಿ ಇಲ್ವ.  937 ಕೋಟಿ ಹಣವನ್ನು ನಾನು ಕ್ಷೇತ್ರಕ್ಕೆ ತಂದಿದ್ದೇನೆ. ಈಗಲೂ ನಿಮ್ಮ ಹಿರಿತನಕ್ಕೆ ಬೆಲೆ ಕೊಟ್ಟು ಬಹುವಚನದಲ್ಲಿ ಮಾತನಾಡುತ್ತಿದ್ದೇನೆ. ರಾಮ್‌ದಾಸ್ ಹಾಗೂ ನನ್ನ ಸ್ನೇಹ ಎಂತಹದು ಎಂಬುದು ಎಲ್ಲರಿಗೂ ಗೊತ್ತು. ನೀವು ವಕೀಲರಾಗಿದ್ದಾಗ ನಿಮ್ಮ ಬಳಿ ಬಂದ ವಿಧವೆಯ ಗತಿ ಏನಾಯ್ತು ಎಂಬುದು ಗೊತ್ತು. ನನ್ನ ಮೇಲಿನ ಯಾವುದೇ ಆರೋಪವನ್ನು ಸಾಭೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇಲ್ಲ ನೀವು ಬಹಿರಂಗ ಕ್ಷಮೆ ಕೇಳಿ ಎಂದು ಹೆಚ್.ವಿಶ್ವನಾಥ್ ಗೆ ಸಾ.ರಾ ಮಹೇಶ್ ಸವಾಲು ಹಾಕಿದರು.

Key words:  mysore-ready –any- investigation-sa.ra  Mahesh -H. Vishwanath -allegation

website developers in mysore