ಐಪಿಎಲ್’ಗೂ ಧೋನಿ ವಿದಾಯ ಹೇಳೋ ಸಮಯ ಬಂದಿದೆಯಾ?

ಬೆಂಗಳೂರು, ಮೇ 28, 2021 (www.justkannada.in): ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಶೀಘ್ರದಲ್ಲೇ ಚೆನ್ನೈಗೆ ವಿದಾಯ ಹೇಳಲಿದ್ದಾರಾ?

ಇಂತಹದೊಂದು ಭವಿಷ್ಯ ನುಡಿದಿದ್ದಾರೆ ಭಾರತದ ಮಾಜಿ ಆರಂಭಿಕ ಮತ್ತು ಪ್ರಮುಖ ನಿರೂಪಕ ಆಕಾಶ್ ಚೋಪ್ರಾ.

ಧೋನಿ ಬ್ಯಾಟ್‌ನಿಂದ ಯಾವುದೇ ರನ್ ಬರುತ್ತಿಲ್ಲ. ಇತ್ತೀಚಿನ 7 ಐಪಿಎಲ್ ಪಂದ್ಯಗಳಲ್ಲಿ ಅವರು ಕೇವಲ 38 ರನ್ ಗಳಿಸಿದ್ದಾರೆ. ಈಗ ಧೋನಿ ನಿವೃತ್ತಿಯ ಮಾತು ವೇಗವಾಗುತ್ತಿದೆ. ಇದಕ್ಕೆ ಆಕಾಶ್ ಚೋಪ್ರ ದನಿಗೂಡಿಸಿದ್ದಾರೆ.

ಧೋನಿ ಮುಂದಿನ ದಿನಗಳಲ್ಲಿ ಚೆನ್ನೈಗೆ ವಿದಾಯ ಹೇಳಲಿದ್ದಾರೆ, ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ರೀತಿಯ ಭವಿಷ್ಯ ನುಡಿದ್ದಿದ್ದಾರೆ.