ಅಪ್ಪುಗಾಗಿ ಮಿನಿ ಸ್ಮಾರಕ ನಿರ್ಮಿಸಿದ ಬಾಗಲಕೋಟೆ ಜಿಲ್ಲೆಯ ಫ್ಯಾನ್ಸ್

ಬೆಂಗಳೂರು, ಡಿಸೆಂಬರ್ 16, 2021 (www.justkannada.in): ಪುನೀತ್​ ರಾಜ್​ಕುಮಾರ್​ಗಾಗಿ ಅವರ ಅಭಿಮಾನಿಗಳು ಮಿನಿ ಸ್ಮಾರಕ ನಿರ್ಮಿಸಿದ್ದು, ಅಪ್ಪು ಮೇಲಿನ ಅಭಿಮಾನದಿಂದ ಗ್ರಾಮಸ್ಥರು ವಿಶೇಷ ಕಾರ್ಯ ಮಾಡಿದ್ದಾರೆ.

ಹೌದು. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹೊಸೂರು ಗ್ರಾಮದ ಅಭಿಮಾನಿಗಳು ಅಪ್ಪುಗಾಗಿ ಮಿನಿ ಸ್ಮಾರಕ ನಿರ್ಮಾಣ ಮಾಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ಬಗ್ಗೆ ಜನರು ಇಟ್ಟುಕೊಂಡಂತಹ ಪ್ರೀತಿ ಅಪಾರವಾಗಿದ್ದು, ಇಲ್ಲಿನ ಗ್ರಾಮಸ್ಥರು ಮಾರುಕಟ್ಟೆಗೂ ಅಪ್ಪು ಹೆಸರು ನಾಮಕರಣ ಮಾಡಿದ್ದಾರೆ. ಈ ಮೂಲಕ ಹಲವಾರು ರೀತಿಯಲ್ಲಿ ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸುತ್ತಿದ್ದಾರೆ.