ಟೀಂ ಇಂಡಿಯಾಗೆ ಮತ್ತೊಂದು ಅಘಾತ: ಭುವನೇಶ್ವರ್ ಕುಮಾರ್ ಗಾಯಾಳು !

ಲಂಡನ್, ಜೂನ್ 17, 2019 (www.justkannada.in): ಶಿಖರ್ ಧವನ್ ನಂತರ ಭಾರತದ ಬೌಲರ್ ಭುವನೇಶ್ವರ್ ಕುಮಾರ್ ಪಂದ್ಯದಿಂದ ಹೊರ ನಡೆದಿದ್ದಾರೆ.

ಆಟದ ಮಧ್ಯಯೇ ಭುವನೇಶ್ವರ್ ಕುಮಾರ್ ಮೈದಾನದಿಂದ ಹೊರ ಹೋಗಿದ್ದರು. ಕಾಲು ಜಾರಿ ಬಿದ್ದ ಕಾರಣ ಭುವನೇಶ್ವರ್ ಕುಮಾರ್ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ.

ಅವ್ರಿಗೆ ವಿಶ್ರಾಂತಿ ಅಗತ್ಯವಿದ್ದು, 2-3 ಪಂದ್ಯಗಳಿಗೆ ಭುವನೇಶ್ವರ್ ಕುಮಾರ್ ಅಲಭ್ಯರಾಗಲಿದ್ದಾರೆಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.