“ಸಿಡಿ ಪ್ರಕರಣ, ಉದ್ಯಮಿಯೊಬ್ಬರ ಮನೆಯ ಮೇಲೆ ವಿಶೇಷ ತನಿಖಾ ತಂಡ(ಎಸ್‌ಐಟಿ ) ದಾಳಿ”

ಬೆಂಗಳೂರು,ಮಾರ್ಚ್,21,2021(www.justkannada.in)  : ರಮೇಶ್ ಜಾರಕಿಹೊಳೀ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಬೆಂಗಳೂರಿನ ಜೆಪಿ ನಗರದಲ್ಲಿರುವ ಉದ್ಯಮಿ ಶಿವಕುಮಾರ್ ಮನೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.

jk

ಸುಮಾರು ಎರಡು ಗಂಟೆಗಳ ಕಾಲ ಅವರ ಮನೆಯಲ್ಲಿ ಹುಡುಕಾಡಿದರು ಮತ್ತು ಅವರು ಮನೆಯಲ್ಲಿ ಇಲ್ಲದ ಕಾರಣ ಕುಟುಂಬ ಸದಸ್ಯರನ್ನು ಪ್ರಶ್ನಿಸಿದರು. ಆತ 10 ದಿನಗಳ ಹಿಂದೆ ನಗರ ಬಿಟ್ಟು ಹೋಗಿದ್ದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಶಂಕಿತರು ಆತನೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಅವರು ಬೆಂಬಲವನ್ನು ನೀಡಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ ಎಂದು ಎಸ್‌ಐಟಿ ಅಧಿಕಾರಿಗಳು ಆರೋಪಿಸಿದ್ದಾರೆ.

ತಂಡವು ಸಿಸಿಟಿವಿ ಕ್ಯಾಮೆರಾಗಳ ಡಿಜಿಟಲ್ ವಿಡಿಯೋ ರೆಕಾರ್ಡರ್ (ಡಿವಿಆರ್) ಸಂಗ್ರಹಿಸಿದೆ. ವರದಿಯ ಪ್ರಕಾರ, ಉದ್ಯಮಿಯು ನಗರದಿಂದ ಹೊರಡುವ ಮೊದಲು ಶಂಕಿತರಿಗೆ ಹಣಕಾಸಿನ ನೆರವು ನೀಡಿದ್ದ. ಶಂಕಿತರು ತಮ್ಮ ನೆಲೆಯನ್ನು ಬದಲಾಯಿಸುತ್ತಿದ್ದಾರೆ ಮತ್ತು ಅವರ ಮೊಬೈಲ್ ಫೋನ್ ಬಳಸುತ್ತಿಲ್ಲವಾದ್ದರಿಂದ, ಎಸ್‌ಐಟಿ ಟ್ರ್ಯಾಕಿಂಗ್‌ ಗೆ ಸವಾಲಾಗಿದೆ ಎಂದು ಹೇಳಿದ್ದಾರೆ.

CD case,home,entrepreneur,Special,Investigation,Team (SIT),attack

ಸಿಡಿಯಲ್ಲಿರುವ ಮಹಿಳೆ ಸಹ ಶಂಕಿತರೊಂದಿಗಿದ್ದಾರೆ ಎಂದು ಅನುಮಾನಿಸಲಾಗಿದೆ ಮತ್ತು ಅವರ ಚಲನವಲನಗಳನ್ನು ಪತ್ತೆಹಚ್ಚಲು ನೆರೆಯ ರಾಜ್ಯಗಳ ಪೊಲೀಸರ ನೆರವು ಕೋರಲಾಗಿದೆ ಎಂದು ತಿಳಿದು ಬಂದಿದೆ.

key words : CD case-home-entrepreneur-Special-Investigation-Team (SIT)-attack