ಪತ್ತೇದಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ರಮೇಶ್ ಅರವಿಂದ್ ಸಿದ್ಧತೆ

ಬೆಂಗಳೂರು, ಮೇ 13, 2019 (www.justkannada.in): ನಟ ರಮೇಶ್ ಅರವಿಂದ್ ಈಗ ಪತ್ತೇದಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ತಯಾರಾಗುತ್ತಿದ್ದಾರೆ.

ಅಭಿಮಾನಿಗಳ ನಿರೀಕ್ಷೆಯಂತೆ ರಮೇಶ್ ರಣಗಿರಿ ರಹಸ್ಯವನ್ನು ಬೇಧಿಸುವ ಡಿಟೆಕ್ಟೀವ್​ ಆಗಿ ನಟಿಸಿದ್ದಾರೆ.

ಅವರ ಅಭಿನಯದ ‘ಶಿವಾಜಿ ಸೂರತ್ಕಲ್​- ದ ಕೇಸ್​ ಆಫ್​ ರಣಗಿರಿ ರಹಸ್ಯ’ ಸಿನಿಮಾದಲ್ಲಿ ರಮೇಶ್​ ಅರವಿಂದ್​ ಜತೆ ‘ರಂಗಿತರಂಗ’ ಖ್ಯಾತಿಯ ನಟಿ ರಾಧಿಕಾ ನಾರಾಯಣ್​ ಹಾಗೂ ಆರೋಹಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.