‘ಯುವರತ್ನ’ ಪ್ರಚಾರ ಶುರು: ಇಂದಿನಿಂದ ಅಪ್ಪು ಉತ್ತರ ಕರ್ನಾಟಕ ಪ್ರವಾಸ

ಬೆಂಗಳೂರು, ಮಾರ್ಚ್ 21, 2021 (www.justkannada.in): ಇಂದಿನಿಂದ ಮೂರು-ನಾಲ್ಕು ದಿನಗಳ ಕಾಲ ಯುವರತ್ನ ತಂಡ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ. ಇದರ ಭಾಗವಾಗಿ ಇಂದು ಕಲಬುರಗಿಗೆ ಅಪ್ಪು ಆಗಮಿಸಲಿದ್ದಾರೆ.

ಯುವರತ್ನ ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿರುವ ಪುನೀತ್ ರಾಜಕುಮಾರ್ ಉತ್ತರ ಕರ್ನಾಟಕದ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ.

ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್, ನಟರಾದ ಡಾಲಿ ಧನಂಜಯ್, ರವಿಶಂಕರ್ ಗೌಡ ಸೇರಿದಂತೆ ಚಿತ್ರತಂಡದ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.