ಮಾಗಿ ಉತ್ಸವಕ್ಕೆ ಸಜ್ಜಾಗಿದೆ ಅರಮನೆ ನಗರಿ ಮೈಸೂರು ! ಅರಮನೆ ಆವರಣದಲ್ಲಿ ಅರಳುತ್ತಿದೆ ಪುಷ್ಪ ಉದ್ಯಾನ !

ಮೈಸೂರು, ಡಿಸೆಂಬರ್ 21, 2019 (www.justkannada.in): ಸಾಂಸ್ಕೃತಿಕ‌ ನಗರಿ ಮೈಸೂರಿನಲ್ಲಿ ಮಾಗಿ ಉತ್ಸವಕ್ಕೆ ಭರದ ಸಿದ್ದತೆ ನಡೆದಿದೆ.

ಮಾಗಿ ಉತ್ಸವದ ಪ್ರಮುಖ ಆಕರ್ಷಣೆ ಫಲಪುಷ್ಪ ಪ್ರದರ್ಶನಕ್ಕೆ ಭರದ ಸಿದ್ದತೆ ನಡೆದಿದ್ದು, ಜಿಲ್ಲಾಡಳಿತ ಹಾಗೂ ಅರಮನೆ ಮಂಡಳಿಯಿಂದ ಸಿದ್ದತೆ ಸಾಗಿದೆ. ಅರಮನೆ ಅಂಗಳದಲ್ಲಿ ಅರಳುತ್ತಿದೆ ಪುಷ್ಪ ಉದ್ಯಾನವನ.

ಇದಕ್ಕಾಗಿ 25 ಸಾವಿರ ಹೂವಿನ ಕುಂದ ಬಳಕೆ ಮಾಡಲಾಗಿದೆ. ಚಂದ್ರಯಾನ 2, ಬೆಂಗಳೂರು ಅರಮನೆ, ಮೈಸೂರಿನ ಹಳೆಯ ಮರದ ಅರಮನೆ ಈ ಭಾರಿಯ ಪ್ರಮುಖ ಆಕರ್ಷಣೆಯಾಗಿದೆ.

ಜನಾಕರ್ಷಕ ಕೇಂದ್ರವಾಗಿ ರೂಪುಗೊಳ್ಳುತ್ತಿದೆ ಫಲಪುಷ್ಪ ಪ್ರದರ್ಶನ. ಈ ಕುರಿತು ನಮ್ಮ ಪ್ರತಿನಿಧ ಮಹದೇವ ಸ್ವಾಮಿ ಕುರ್ಣೇಗಾಲ ನಡೆಸಿರೊ ವಾಕ್ ಥ್ರೂ ಇಲ್ಲಿದೆ.