ನನಗೆ ಮತದಾರರೇ ದೇವರು: ಉಸಿರು ಇರುವವರೆಗೂ ಕ್ಷೇತ್ರ ಬಿಟ್ಟು ಹೋಗಲ್ಲ-ಸಚಿವ ನಾರಾಯಣಗೌಡ ಭಾವುಕ.

ಮಂಡ್ಯ,ಮಾರ್ಚ್,8,2023(www.justkannada.in): ನನಗೆ ಮತದಾರರೇ ದೇವರು. ಕ್ಷೇತ್ರದ ಮತದಾರರೇ ನನ್ನ ತಂದೆ ತಾಯಿಂದಿರು.  ಉಸಿರು ಇರುವವರೆಗೂ ಕ್ಷೇತ್ರ ಬಿಟ್ಟು ಹೋಗಲ್ಲ ಎಂದು ಸಚಿವ ನಾರಾಯಣಗೌಡ ತಿಳಿಸಿದ್ದಾರೆ.

ಬೂಕನಕೆರೆಯಲ್ಲಿ ಸಭೆಯೊಂದರಲ್ಲಿ ಭಾವುಕರಾಗಿ ಮಾತನಾಡಿದ ಸಚಿವ ನಾರಾಯಣಗೌಡ, ಮತದಾರರಿಗೆ ಅನ್ಯಾಯ ಮಾಡಿದ್ರೆ ಭಗವಂತ ಬಿಡಲ್ಲ. ಕ್ಷೇತ್ರದ ಮತದಾರರೇ ನನ್ನ ತಂದೆ ತಾಯಿ.  ನೀವು ಆಶೀರ್ವಾದ ಮಾಡಿದರೇ ಚುನಾವಣೆಗೆ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೇ ನಿಮ್ಮ ಸೇವೆ ಮಾಡಿಕೊಂಡು ಇರುತ್ತೇನೆ. ನಿನ್ನಮ್ಮ ಬಿಟ್ಟು ಎಲ್ಲೂ ಹೋಗಲ್ಲ ಎಂದರು.

ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆಂಬ ವದಂತಿಗೆ ನಿನ್ನೆ ಸ್ಪಷ್ಟನೆ ನೀಡಿದ್ದ ಸಚಿವ ನಾರಾಯಣಗೌಡ, ಬಿಜೆಪಿ ಪಕ್ಷ ಬಿಡುವುದಿಲ್ಲ ಎಂದಿದ್ದರು. ಇದೀಗ ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿ ಸಭೆ ನಡೆಸುತ್ತಿದ್ದು ಸಚಿವ ನಾರಾಯಣಗೌಡರ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ.

Key words:  voters -God-Minister -Narayana Gowda –emotional-KR Pete