ಆಯುಧಪೂಜೆ ಮತ್ತು ವಿಜಯದಶಮಿ ಹಿನ್ನೆಲೆ: ದೇವರಾಜ ಮಾರುಕಟ್ಟೆ ಹೂವಿನ ವ್ಯಾಪಾರ ಬೇರೆಡೆಗೆ ಸ್ಥಳಾಂತರ…

kannada t-shirts

ಮೈಸೂರು,ಅಕ್ಟೋಬರ್,21,2020(www.justkannada.in): ಕೊರೋನಾ ಹಿನ್ನೆಲೆ ಆಯುಧ ಪೂಜೆ ಮತ್ತು ವಿಜಯದಶಮಿದಲ್ಲಿ ಹೆಚ್ಚಿನ ಜನಸಂದಣಿ ಸೇರುವುದನ್ನ ನಿಯಂತ್ರಿಸಲು ನಗರದ ದೇವರಾಜ ಮಾರುಕಟ್ಟೆ ಹೂವಿನ ವ್ಯಾಪಾರವನ್ನು ಜೆ.ಕೆ ಮೈದಾನಕ್ಕೆ ಸ್ಥಳಾಂತರಿಸಿ ಮೈಸೂರು ಮಹಾನಗರ ಪಾಲಿಕೆ ಆದೇಶಿಸಿದೆ.Vijayadashami-ayudha pooja-mysore- Devaraja Market -Flower market- shift

ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ವೇಳೆ ಹೂ ಹಣ್ಣು ಕೊಳ್ಳಲು ಜನರು ಹೆಚ್ಚಾಗಿ ಆಗಮಿಸುತ್ತಾರೆ. ಇದರಿಂದಾಗಿ ಕೊರೋನಾ ಹೆಚ್ಚಾಗಿ ಹರಡುವ ಸಾಧ್ಯತೆ ಇದ್ದು,  ಹೀಗಾಗಿ ಅಕ್ಟೋಬರ್ 23, 24 ಮತ್ತು 25 ಮೂರು ದಿನಗಳ ಕಾಲ  ದೇವರಾಜ ಮಾರುಕಟ್ಟೆಯ ಹೂವಿನ ವ್ಯಾಪಾರವನ್ನ ಜೆ.ಕೆ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.Vijayadashami-ayudha pooja-mysore- Devaraja Market -Flower market- shift

ಜನ ಸಂದಣಿ ಮತ್ತು ಕೋವಿಡ್ ತಡೆಗಟ್ಟುವ ಸಲುವಾಗಿ ದೇವರಾಜ ಮಾರುಕಟ್ಟೆಯ ಹೂವಿನ ವ್ಯಾಪಾರವನ್ನು ನಗರ ಜೆ.ಕೆ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಮಾಹಿತಿ ನೀಡಿದೆ. ಹಬ್ಬಕ್ಕೆ ಹೂವಿನ ಖರೀದಿಗಾಗಿ ಹೆಚ್ಚಿನ ಜನ ಆಗಮಿಸುವುದರಿಂದ ಹೂವಿನ ಮಾರುಕಟ್ಟೆ ಸ್ಥಳಾಂತರ ಮಾಡಲಾಗಿದೆ.

Key words: Vijayadashami-ayudha pooja-mysore- Devaraja Market -Flower market- shift

 

website developers in mysore