ಅತಿ ಶೀಘ್ರದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕೃತಿ ಸಿನಿಮಾ ರೂಪದಲ್ಲಿ ತೆರೆಗೆ 

ಬೆಂಗಳೂರು,ನವೆಂಬರ್,16,2020(www.justkannada.in) ; ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಒಂದಾದ ಮೂಕನ ಮಕ್ಕಳು ಕೃತಿ ಸಿನಿಮಾ ರೂಪದಲ್ಲಿ ಸಿದ್ಧಗೊಂಡಿದ್ದು, ಅತಿ ಶೀಘ್ರದಲ್ಲಿ ತೆರೆಮೇಲೆ ಬರಲಿದೆ.kannada-journalist-media-fourth-estate-under-loss

ಕರಿಗಿರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಜ್ಜಾಗುತ್ತಿರುವ ಚಿತ್ರಕ್ಕೆ ಪವಿತ್ರಾ ಕ್ರಿಷ್ ಗೌರಿಬಿದನೂರು ನಿರ್ಮಾಪಕಿ. ರಂಗಭೂಮಿ ಕಲಾವಿದರಾದ ಹಾಗೂ ಈ ಹಿಂದೆ ಶಂಭೋ ಮಹಾದೇವ ಸಿನಿಮಾ ನಿರ್ದೇಶಿಸಿದ್ದ ಮೈಸೂರು ಮಂಜು ಸದ್ಯ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗೂ ಸಹ ನಿರ್ದೇಶನವನ್ನು ಮಂಜು ಕ್ರಿಷ್ ಗೌರಿಬಿದನೂರು ಮಾಡಿದ್ದಾರೆ.

ಭಾವನಾತ್ಮಕ ಸಂಕೋಲೆಯ ಕಥಾಹಂದರವುಳ್ಳ ಈ ಸಿನಿಮಾ

ಪರಿಸರದಲ್ಲಿ ನಡೆಯುವ ಭಾವನಾತ್ಮಕ ಸಂಕೋಲೆಯ ಕಥಾಹಂದರವುಳ್ಳ ಈ ಸಿನಿಮಾದಲ್ಲಿ, ಮೊದಲ ಬಾರಿಗೆ ವಿಶೇಷ ಚೇತನನ ಪಾತ್ರದಲ್ಲಿ ಮಂಜು ಕ್ರಿಷ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ನಾಗರಾಜ ಶೆಟ್ಟಿ ಮಳಗಿ ಛಾಯಾಗ್ರಹಣವಿದ್ದು, ಗಣೇಶ್ ಭಟ್ ಸಂಗೀತ ಸಂಯೋಜನೆಯಿದೆ. ಜೊತೆಗೆ, ಸಿನಿಮಾದ ಸಂಕಲವನ್ನು ಸಂಜೀವ ರೆಡ್ಡಿ ಮಾಡಿದ್ದಾರೆ.

ಅಮರಿಕದ ಎರಡು ಇಂಟರ್ ನ್ಯಾಷನಲ್ ಫೆಸ್ಟಿವಲ್ ಗೆ ಈ ಚಿತ್ರ ಆಯ್ಕೆ

ಈಗಾಗಲೇ, ಮೂಕನ ಮಕ್ಕಳು ಕೊಲ್ಕತ್ತ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಂಡು ಉತ್ತಮ ಚಿತ್ರವೆಂಬ ಖ್ಯಾತಿ ಪಡೆದಿದೆ. ಇದಲ್ಲದೆ, ಅಮರಿಕದ ಎರಡು ಇಂಟರ್ ನ್ಯಾಷನಲ್ ಫೆಸ್ಟಿವಲ್ ಗೆ ಈ ಚಿತ್ರ ಆಯ್ಕೆಯಾಗಿದೆ. ಜೊತೆಗೆ ಪನೋರಮಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಸಜ್ಜಾಗಿದೆ.

ಚಿತ್ರಕ್ಕೆ ಚಿತ್ರರಂಗದ ಹಲವರಿಂದ ಬಹಳಷ್ಟು ಮೆಚ್ಚುಗೆ 

ಚಿತ್ರರಂಗದ ಹಲವರಿಂದ ಬಹಳಷ್ಟು ಮೆಚ್ಚುಗೆ ಪಡೆದಿರುವ ಈ ಚಿತ್ರ ಮುಂದಿನ ವರ್ಷ ತೆರೆಗೆ ಬರುವ ಸಿದ್ಧತೆಯಲ್ಲಿದೆ. ಮಾಸ್ತಿ ಅವರ ಮೂಕನ ಮಕ್ಕಳು ಕೃತಿ ಬಹಳಷ್ಟು ಜನಪ್ರಿಯತೆಯನ್ನು ಪಡೆದಿತ್ತು. ಅದೇ ರೀತಿ ಸಿನಿಮಾ ಕೂಡ ಪ್ರಸಿದ್ಧತೆಯನ್ನು ಪಡೆಯುತ್ತದೆಯೇ ಎಂದು ಕಾದು ನೋಡಬೇಕಿದೆ.

Very,soon,Mosti Venkatesha Iyengar,Book,Cinema,screen

key words ; Very-soon-Mosti Venkatesha Iyengar-Book-Cinema-screen