ನಾನು ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಜವಾಬ್ದಾರಿ ಕೊಟ್ರೆ ನಿಭಾಯಿಸುತ್ತೇನೆ – ಸಂಸದ ಜಿ.ಎಂ ಸಿದ್ಧೇಶ್ವರ್ .

ದಾವಣಗೆರೆ,ಜುಲೈ,3,2021(www.justkannada.in):  ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದ್ದು ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ಜಿ.ಎಂ ಸಿದ್ಧೇಶ್ವರ್, ನನ್ನ ಪ್ರಕಾರ ಯುವಕರಿಗೆ ಸ್ಥಾನ ನೀಡಿದ್ದರೇ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.jk

ಈ ಕುರಿತು ದಾವಣಗೆರೆಯಲ್ಲಿ ಮಾತನಾಡಿದ ಸಂಸದ ಜಿ.ಎಂ ಸಿದ್ಧೇಶ್ವರ್, ನಾನು ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆದ್ರೆ ಜವಾಬ್ದಾರಿ ಕೊಟ್ರೆ ನಿಭಾಯಿಸುತ್ತೇನೆ. ದಾವಣಗೆರೆಯಲ್ಲಿ ನನ್ನ ಪ್ರಕಾರ ಯುವಕರಿಗೆ ಸ್ಥಾನ ನೀಡಿದ್ದರೇ ಉತ್ತಮ.  ಸಚಿವ ಸ್ಥಾನ  ನೀಡುವುದು ಪ್ರಧಾನಿಗೆ ಬಿಟ್ಟ ವಿಚಾರ. ಅವರು ಯಾರಿಗೆ ಬೇಕಾದರೂ ಸಚಿವ ಸ್ಥಾನ ನೀಡಬಹುದು ಎಂದರು.

Key words: Union –Cabinet-minister-position-MP -G, M Siddheshwar