ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ವೇಳೆ ಇಬ್ಬರು ಕಾರ್ಮಿಕರು ಸಾವು…

ಕಲ್ಬುರ್ಗಿ,ಜನವರಿ,28,2021(www.justkannada.in):  ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಇಳಿದಿದ್ದ ವೇಳೆ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಕಲ್ಬುರ್ಗಿಯಲ್ಲಿ ನಡೆದಿದೆ.jk

ಕಲ್ಬುರ್ಗಿಯ ಕೈಲಾಶ್ ನಗರದಲ್ಲಿ ಈ ಘಟನೆ ನಡೆದಿದೆ. ಲಾಲ್ ಅಹ್ಮದ್(25),ರಷೀದ್(30) ಮೃತಪಟ್ಟವರು. ಮತ್ತೋರ್ವ ರಾಜು ಎಂಬವವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.  ಒಳಚರಂಡಿ ಕಟ್ಟಿಕೊಂಡಿದ್ದ ಹಿನ್ನೆಲೆಯಲ್ಲಿ ಅದನ್ನ ಸ್ವಚ್ಛಗೊಳಿಸಲು ಮ್ಯಾನ್ ಹೋಲ್ ಗೆ ಇಳಿದಿದ್ದರು.Two –workers- death-manhole- cleanup-kalburgi

ಲಾಲ್ ಅಹ್ಮದ್, ,ರಷೀದ್, ಹಾಗೂ ರಾಜು 18 ಅಡಿ ಆಳದಲ್ಲಿ ಇಳಿದು ಕೆಲಸ ಮಾಡುತ್ತಿದ್ದರು. ಈ ವೇಳೆ ಉಸಿರುಗಟ್ಟಿ ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೆ ಜಲಮಂಡಳಿ ನಿರ್ಲಕ್ಷ್ಯಕಾರಣ ಎಂಬ ಆರೋಪ ಕೇಳಿ ಬಂದಿದೆ.

Key words: Two –workers- death-manhole- cleanup-kalburgi