ಮೈಸೂರಿನಲ್ಲಿ ಎರಡು ದಿನಗಳ ‘ಇ-ಕನ್ನಡ ಕಮ್ಮಟ’ ಕಾರ್ಯಕ್ರಮಕ್ಕೆ ಚಾಲನೆ…

ಮೈಸೂರು,ಡಿ,30,2019(www.justkannada.in): ಕನ್ಮಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಇ ಆಡಳಿತ ಇಲಾಖೆ ವತಿಯಿಂದ ಮೈಸೂರಿನಲ್ಲಿ ಆಯೋಜಿಸಿರುವ ಇ-ಕನ್ನಡ ಕಮ್ಮಟ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಆಡಳಿತ ತರಬೇತಿ ಸಂಸ್ಥೆಯ ಚಾಣಕ್ಯ ಸಭಾಂಗಣದಲ್ಲಿ ಕಾರ್ಯಗಾರ ಎರಡು ದಿನಗಳ ಕಾಲ ಇ-ಕನ್ನಡ ಕಮ್ಮಟ ಕಾರ್ಯಕ್ರಮ  ಆಯೋಜನೆ ಮಾಡಲಾಗಿದೆ. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಚಾಲನೆ ನೀಡಿದರು.

ಚಾಲನೆ ನೀಡಿದ ಬಳಿಕ ಮಾತನಾಡಿದ ಟಿ.ಎಸ್ ನಾಗಾಭರಣ, ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳ ಭರಾಟೆಯಲ್ಲಿ ಕನ್ನಡತನವನ್ನು ಉಳಿಸಿಕೊಳ್ಳುವುದು ಸಾಧನೆ. ಇ-ಕನ್ನಡ, ನಿಘಂಟು ಮತ್ತು ಕನ್ನಡ ತಂತ್ರಜ್ಞಾನ ಈ ಮೂರು ಮಾನದಂಡಗಳ ಕರಡು ಕ್ರಿಯಾಯೋಜನೆಯನ್ನು ರೂಪಿಸಿ ಸರ್ಕಾರಕ್ಕೆ ಸಲ್ಲಿಸುವುದೆ ಇ-ಕಮ್ಮಟದ ಆಶಯ ಎಂದು ತಿಳಿಸಿದರು.

Key words: two day e-Kannada kammata- program –Mysore-TS Nagabarana