ಸಾರಿಗೆ ನೌಕರರ ಮುಷ್ಕರಕ್ಕೆ ಸರ್ಕಾರ ಸೆಡ್ಡು: ನಿವೃತ್ತ ಸಿಬ್ಬಂದಿ ಕರೆಸಿ ಬಸ್ ಚಾಲನೆಗೆ ನಿರ್ಧಾರ..  

 ಬೆಂಗಳೂರು,ಏಪ್ರಿಲ್,8,2021(www.justkannada.in): 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಹೂಡಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಸರ್ಕಾರ ಸೆಡ್ಡು ಹೊಡೆದಿದ್ದು  ನಿವೃತ್ತ ಸಿಬ್ಬಂದಿ ಕರೆಸಿ ಬಸ್ ಚಾಲನೆಗೆ ತೀರ್ಮಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.Illegally,Sand,carrying,Truck,Seized,arrest,driver

ಈ ಸಂಬಂಧ 62 ವರ್ಷ ಮಿರದ  ನಿವೃತ್ತ ಸಿಬ್ಬಂದಿಗೆ ಸಾರಿಗೆ ಇಲಾಖೆ ಕರೆ ಕೊಟ್ಟಿದೆ. ಚಾಲಕರಿಗೆ 800 ರೂ, ನಿರ್ವಾಹಕರಿಗೆ 700 ರೂ ಗೌರವಧನ ಫಿಕ್ಸ್ ಮಾಡಲಾಗಿದ್ದು,  ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನಿಯೋಜನೆ ಮಾಡಲು ಸರ್ಕಾರ ಮುಂದಾಗಿದೆ.transport -workers – strike- Government-decision –retired- staff -run - bus.       

.ಈ ಸಂಬಂಧ ಕೆಎಸ್ ಆರ್ ಟಿಸಿ ಎಂಡಿ ಶಿವಯೋಗಿ ಕಳಸದ್  ಅವರು ಅಧಿಸೂಚನೆ ಹೊರಡಿಸಿದ್ದಾರೆ ಎನ್ನಲಾಗಿದೆ.  ನಿವೃತ್ತ ಚಾಲಕ ಮತ್ತು ನಿವೃತ್ತ ನಿರ್ವಾಹಕರಿಗೆ ನಾಲ್ಕು ನಿಗಮಗಳು ಆಹ್ವಾನ ನೀಡಿವೆ ಎನ್ನಲಾಗಿದೆ. ಈ ಮೂಲಕ ಸರ್ಕಾರ ಸಾರಿಗೆ ನೌಕರರ ಮುಷ್ಕರಕ್ಕೆ ಸೆಡ್ಡು ಹೊಡೆದಿದೆ.

Key words: transport -workers – strike- Government-decision –retired- staff -run – bus.