ಚುನಾವಣೆ ಬಳಿಕ ಟೋಲ್ ಶುಲ್ಕ ಬದಲಾಗುತ್ತೆ: ಜನರ ಬಳಿ ಸುಲಿಗೆಗೆ ಬಿಜೆಪಿ ಸರ್ಕಾರಕ್ಕೆ ಹೊರಟಿದೆ-ಎಂ.ಲಕ್ಷ್ಮಣ್ ವಾಗ್ದಾಳಿ.

ಮೈಸೂರು,ಫೆಬ್ರವರಿ,28,2023(www.justkannada.in): ಚುನಾವಣೆ ಬಳಿಕ ಟೋಲ್ ಶುಲ್ಕ ಬದಲಾಗುತ್ತೆ ಜನರ ಬಳಿ ಸುಲಿಗೆಗೆ ಬಿಜೆಪಿ ಸರ್ಕಾರಕ್ಕೆ ಹೊರಟಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ಹೈವೇ ಟೋಲ್ ವಿಚಾರ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಇಂದಿನಿಂದ ಟೋಲ್ ಸಂಗ್ರಹ ಆಗಬೇಕಿತ್ತು. ನಿನ್ನೆ ರಾತ್ರಿ ಸಡನ್ ಆಗಿ ಆ ಆದೇಶವನ್ನ ವಾಪಸ್ ಪಡೆದಿದ್ದಾರೆ. ಎಕ್ಸ್ ಪ್ರೆಸ್ ಹೈವೇ, ನ್ಯಾಷನಲ್ ಹೈವೇ, ಸ್ಟೇಟ್ ಹೈವೇಗೆ ಬೇರೆ ಬೇರೆ ಟೋಲ್ ಇರತ್ತೆ. ಈಗ ಅವರು ಮಾಡಿರುವ ಟೋಲ್ ಶುಲ್ಕ 165 ರೂಪಾಯಿ, ಇದು ತಾತ್ಕಾಲಿಕ.ಚುನಾವಣೆ ನಂತರ ಇದು ಬದಲಾಗತ್ತೆ ಎಂದರು.

ಜುಲೈ ತಿಂಗಳಿನಿಂದ ಒಂದು ಕಡೆಯಿಂದ 465ರೂ ಎರಡು ಕಡೆಯಿಂದ 900 ರೂಪಾಯಿ ಅಷ್ಟು ಟೋಲ್ ಆಗತ್ತೆ. ನಮ್ಮ ಜನರನ್ನು ಸುಲಿಗೆ ಮಾಡಲು ಬಿಜೆಪಿ ಸರ್ಕಾರಕ್ಕೆ ಹೊರಟಿದೆ. ಎಕ್ಸ್ ಪ್ರೆಸ್ ವೇ ಉದ್ಘಾಟನೆ ಮಾಡಲು ಮೋದಿ ಬರ್ತಾರೆ. ಕಪ್ಪು ಬಟ್ಟೆ ತೋರಿಸುವ ಮೂಲಕ ನಾವು ನಮ್ಮ ಪ್ರತಿಭಟನೆ ಮಾಡುತ್ತೇವೆ. ಎಕ್ಸ್ಪ್ರೆಸ್ ಹೈವೆಗೆ ನಮ್ಮ ವಿರೋಧವಿಲ್ಲ , ಹೆಚ್ಚಿನ ರೀತಿಯ ಟೋಲ್ ಹಾಗೂ ಸರ್ವಿಸ್ ರಸ್ತೆ ಇಲ್ಲದಿರುವುದು ಮಂಡ್ಯ ರಾಮನಗರ ಚನ್ನಪಟ್ಟಣ ಜನರಿಗೆ ಅನ್ಯಾಯ ಮಾಡಿದ್ದೀರಿ.  ಅಂಡರ್ ಪಾಸ್ ಇಲ್ಲ, ಜಮೀನು ಕೊಟ್ಟ  ಜನರಿಗೆ ಅನ್ಯಾಯ ಮಾಡಿದ್ದೀರಿ. ಆದ್ದರಿಂದ ಟೋಲ್ ಸಂಗ್ರಹ ಯಾವ ಉದ್ದೇಶದಿಂದ ಮಾಡಿದ್ದೀರಿ ತಿಳಿಸಿ ಎಂದು  ಎಂ. ಲಕ್ಷ್ಮಣ್ ಪ್ರಶ್ನಿಸಿದರು.

ಆರ್ ಎಸ್ಎಸ್ ಮತ್ತು ತಾಲಿಬಾನ್ ಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ.

ಬಿಜೆಪಿಗರು ಮೈ ಮರೆತರೆ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಎಂ.ಲಕ್ಷ್ಮಣ್, ಆರ್ ಎಸ್ಎಸ್ ಮಹಿಳೆಯರ ವಿರುದ್ಧವಾಗಿದೆ. ಆರ್ ಎಸ್ಎಸ್ ನವರು ಯಾರು ಮದುವೆಯಾಗಿಲ್ಲ ಆದರೆ ಎಲ್ಲ ವ್ಯವಸ್ಥೆಯನ್ನ ಮಾಡಿಕೊಂಡಿರುತ್ತಾರೆ. ತಾಲಿಬಾನ್ ಗಳು ಸಹ ಇದೆ ಮಾದರಿಯಲ್ಲಿವೆ. ಆರ್ ಎಸ್ಎಸ್ ನವರು ಕೋಮುಗಲಭೆ ಸೃಷ್ಟಿಸಿ ರಕ್ತಪಾತ ನೋಡಲು ಇಷ್ಟ ಪಡುತ್ತಾರೆ. ಆರ್ ಎಸ್ಎಸ್ ನವರಿಗೆ ರಾಷ್ಟ್ರಧ್ವಜ ಬೇಕಾಗಿಲ್ಲ. ಆರ್ ಎಸ್ಎಸ್ ಮತ್ತು ತಾಲಿಬಾನ್ ಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. 2024ರಲ್ಲಿ ನಿಮಗೆ ಸೋಲಾಗುತ್ತೆ ಎಂದು ಗೊತ್ತಾಗಿದೆ. ಆಗಾಗಿ ಸ್ವತಃ ನೀವೇ 2024ರ ಚುನಾವಣೆ ನನ್ನ ಕೊನೆ ಚುನಾವಣೆ ಎಂದು ಹೇಳಿಕೆ ಕೊಟ್ಟಿದ್ದೀರಾ ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್  ಟೀಕಿಸಿದರು.

Key words toll fee –mysore-bangalore-highway-will -change -M. Laxman