ಟಿಹೆಚ್ ಓ ಆತ್ಮಹತ್ಯೆ ಪ್ರಕರಣ: ಸಿಇಓ ಪರ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ ಪಿಡಿಓಗಳು…

ಮೈಸೂರು,ಆ,24,2020(www.justkannada.in):  ನಂಜನಗೂಡು ಟಿಎಚ್ಓ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿ.ಪಂ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಅವರ ವರ್ಗಾವಣೆಯನ್ನ ರದ್ದು ಮಾಡಬೇಕು ಎಂದು ಕೋರಿ ಪಿಡಿಓಗಳು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.jk-logo-justkannada-logo

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಪಂ‌ ಸಿಇಓ ಪ್ರಶಾಂತ್  ಕುಮಾರ್ ಮಿಶ್ರಾ ಅವರನ್ನ ವರ್ಗಾವಣೆ ಮಾಡಲಾಗಿದ್ದು ಈ ಹಿನ್ನೆಲೆ  ವರ್ಗಾವಣೆಯನ್ನ ರದ್ಧು ಮಾಡುವಂತೆ  ಮೈಸೂರು ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಗೆ ಪಿಡಿಓ ಸಂಘದ ಜಿಲ್ಲಾಧ್ಯಕ್ಷ ಮಾಯಪ್ಪ ನೇತೃತ್ವದಲ್ಲಿ ಪಿಡಿಓಗಳು ಮನವಿ ಸಲ್ಲಿಸಿದ್ದಾರೆ.

ಮಿಶ್ರಾ ಅವರ ವರ್ಗಾವಣೆ ರದ್ದು ಮಾಡಬೇಕು. ದೂರಿನಲ್ಲಿ ಮಿಶ್ರಾ ಅವರ ಒಬ್ಬರ ಹೆಸರನ್ನು ಸೇರಿಸಲಾಗಿದೆ. ಇದರಲ್ಲಿ ಬೇರೆಯ ಹುನ್ನಾರವಿದೆ.  ಇದನ್ನ ಕೂಲಂಕಷವಾಗಿ ತನಿಖೆ ಮಾಡಬೇಕು. ಈ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಪ್ರಾದೇಶಿಕ ಆಯುಕ್ತರಿಗೆ ಪಿಡಿಓ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಾಯಪ್ಪ ಮನವಿ ಮಾಡಿದರು.tho-suicide-case-pdos-appealed-regional-commissioner-ceo-transfer

ಮೇಲಾಧಿಕಾರಿ ವಿರುದ್ದ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾದ ಆರೋಗ್ಯಾಧಿಕಾರಿ ನಾಗೇಂದ್ರ ಪರ ಮುಷ್ಕರ ನಡೆಸಿದ್ದ ವೈದ್ಯರು  ಮೈಸೂರು ಜಿ.ಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದರು. ನಂತರ ಸರ್ಕಾರ ಸಿಇಒ ಪ್ರಶಾಂತ್ ಕುಮಾರ್ ಅವರನ್ನ ವರ್ಗಾವಣೆ ಮಾಡಿತ್ತು.

Key words: THO- suicide case-PDO’s- appealed – Regional Commissioner – CEO-transfer