ಈ ಸಂದರ್ಭದಲ್ಲಿ ಪಠ್ಯ ಕೈಬಿಡಲು ಆಗಲ್ಲ: ದೇವನೂರು ಮಹದೇವರಿಗೆ ಮನವರಿಕೆ ಮಾಡ್ತೇವೆ- ಸಚಿವ ಬಿ.ಸಿ ನಾಗೇಶ್.

 

ಮೈಸೂರು,ಮೇ,25,2022(www.justkannada.in): ಪಠ್ಯ ಪುಸ್ತಕದಲ್ಲಿ ತಮ್ಮ ಪಠ್ಯ ಕೈ ಬಿಡುವಂತೆ ಸಾಹಿತಿ ದೇವನೂರ ಮಹದೇವ ಅವರು ಪತ್ರ ಬರೆದು ಮನವಿ ಮಾಡಿರುವ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಬಿ.ಸಿ ನಾಗೇಶ್, ದೇವನೂರು ಮಹದೇವ ಮೊದಲೇ ಹೇಳಿದ್ದರೇ ಚರ್ಚಿಸಬಹುದಿತ್ತು. ಈಗಾಗಲೇ ಪಠ್ಯ ಮುದ್ರಣವಾಗಿದೆ ಅದು ಮಕ್ಕಳ ಕೈ ಸೇರಲಿದೆ.  ಈ ಸಂದರ್ಭಧಲ್ಲಿ ಪಠ್ಯ ತೆಗೆಯಲು ಆಗಲ್ಲ ಇದನ್ನ ಮನವರಿಕೆ ಮಾಡುತ್ತೇವೆ. ದೇವನೂರ ಮಹದೇವ ಅವರಿಗೆ  ತಾತ್ವಿಕ ಭಿನ್ನತೆ ಇರಬಹುದು ನಮಗಿಲ್ಲ  ಇದನ್ನ ಮಾತನಾಡಿ ಬಗೆಹರಿಸುತ್ತೇವೆ ಎಂದರು.

ಮಹದೇವ ಹೇಳುತ್ತಿರುವುದು ಸತ್ಯದ ಮಾತು. ನಾವು ಎಲ್ಲವನ್ನೂ ಬದಲಾವಣೆ ಮಾಡಿದ್ದೇವೆ . ಹಿಂದಿನಿಂದಲೂ ಬ್ರಿಟೀಷರ ಫಠ್ಯವೇ ಇತ್ತು.   ನಾವು ಬಂದ ಮೇಲೆ ರಾಷ್ಟ್ರೀಯತೆ ಪಠ್ಯ ಸೇರಿಸಿದ್ದೇವೆ.  ಪರಿವರ್ತನೆ ಅನ್ನೋದು ಜಗದ ನಿಯಮ ಎಂದು ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ.

Key words: text -cannot –dropped- Devanur Mahadev –  Minister- BC Nagesh.